Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೇನು, ಶುಂಠಿ, ಲಿಂಬೆಯ ಸಿರಪ್- ಒಂದೆರಡು ದಿನಗಳಲ್ಲಿಯೇ ಕೆಮ್ಮು ಮಂಗಮಾಯ!
ಒಂದು ವೇಳೆ ನಿಮಗೆ ಫ್ಲೂ ಆವರಿಸಿ ಮೈಯೆಲ್ಲಾ ಬಿಸಿಯಾಗಿ ನಡುಗುತ್ತಿದ್ದರೆ ಈ ಲೇಖನ ನಿಮಗಾಗಿಯೇ ಇದೆ. ಏಕೆಂದರೆ ಇಂದು ಫ್ಲೂ, ಕೆಮ್ಮು ಹಾಗೂ ಇತರ ಚಳಿಗಾಲದ ಬೇನೆಗಳಿಂದ ರಕ್ಷಿಸಿಕೊಳ್ಳಲು ಉತ್ತಮವಾದ ಸಿರಪ್ ಒಂದನ್ನು ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಶುಂಠಿ, ಜೇನು ಹಾಗೂ ಲಿಂಬೆಯನ್ನು ಬಳಸಿ ಸುಲಭವಾಗಿ ತಯಾರಿಸಿಕೊಳ್ಳಬಹುದು ಹಾಗೂ ಸುಮಾರು ಮೂರು ವಾರಗಳವರೆಗೆ ಕೆಡದಂತೆ ರಕ್ಷಿಸಿಡಬಹುದು. ಬನ್ನಿ, ಈ ಸಿರಪ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....
ಅಗತ್ಯವಿರುವ ಸಾಮಾಗ್ರಿಗಳು
ಒಂದು ಕಪ್ ಜೇನು
ಎರಡು ಲಿಂಬೆಗಳು
ಎರಡೂವರೆ ಇಂಚಿನಷ್ಟು ಹಸಿಶುಂಠಿ
ಒಂದು ಕಪ್ ನೀರು.
ಸಿದ್ಧತಾ ಸಮಯ: ಹತ್ತು ನಿಮಿಷ
ತಯಾರಿಕಾ ಸಮಯ: ಮೂವತ್ತು ನಿಮಿಷಗಳು.
ವಿಧಾನ
ಹಂತ 1: ಹಸಿಶುಂಠಿಯ ಸಿಪ್ಪೆ ಸುಲಿದು ಚಿಕ್ಕಚಿಕ್ಕ ತುಂಡುಗಳನ್ನಾಗಿಸಿ.
ಹಂತ 2
ಎರಡು ಲಿಂಬೆಗಳನ್ನು ಹಿಂಡಿ ರಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ.ಇದರ ಸಿಪ್ಪೆಯನ್ನು ಚಿಕ್ಕದಾಗಿ ಹೆಚ್ಚಿ. ಸುಮಾರು ಒಂದೂವರೆ ಚಿಕ್ಕ ಚಮಚದಷ್ಟು ತುರಿ ಸಿಕ್ಕಿದರೆ ಸಾಕು.
ಹಂತ 3
ಜೇನಿನ ಹೊರತು ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸುರುವಿ ಈ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ
ಹಂತ 4
ಕುದಿ ಬಂದ ಬಳಿಕ ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. ಬಳಿಕ ಉರಿ ಆರಿಸಿ ಮುಚ್ಚಳ ಮುಚ್ಚಿ ಸುಮಾರು ನಾಲ್ಕೈದು ನಿಮಿಷ ತಣಿಯಲು ಬಿಡಿ.
ಹಂತ 5
ಈಗ ಈ ನೀರನ್ನು ಸೋಸಿ ನೀರನ್ನು ಸಂಗ್ರಹಿಸಿ. ಶುಂಠಿ ಮತ್ತು ಲಿಂಬೆಯ ತುರಿಯನ್ನು ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ.
ಹಂತ 6
ಈಗ ಇನ್ನೊಂದು ಪಾತ್ರೆಯಲ್ಲಿ ಜೇನನ್ನು ಹಾಕಿ ಬಿಸಿಮಾಡಿ. ಅತಿ ಚಿಕ್ಕ ಉರಿಯಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷ ಬಿಸಿ ಮಾಡಿ.ಎಚ್ಚರಿಕೆ: ಜೇನು ಬಿಸಿಯಾಗಬೇಕೇ ವಿನಃ ಗುಳ್ಳೆ ಬರಬಾರದು, ಬಂದರೆ ಇದರ ಔಷಧೀಯ ಗುಣಗಳು ನಷ್ಟವಾಗುತ್ತವೆ.
ಹಂತ 7
ಈಗ ಶುಂಠಿ ಮತ್ತು ಲಿಂಬೆತುರಿ ಮತ್ತು ಲಿಂಬೆಯ ರಸವನ್ನು ಈ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 8
ಮುಂದಿನ ಹತ್ತು ನಿಮಿಷಗಳ ವರೆಗೆ ಚಿಕ್ಕ ಉರಿಯಲ್ಲಿಯೇ ಬಿಸಿಮಾಡುತ್ತಾ ಈ ಮಿಶ್ರಣವನ್ನು ಕಲಕುತ್ತಿರಿ. ಎಲ್ಲಿಯವರೆಗೆ ಅಂದರೆ ಈ ಮಿಶ್ರಣದಿಂದ ಗುಳ್ಳೆಗಳು ಮೂಡಲು ಪ್ರಾರಂಭವಾಗುವವರೆಗೆ.
ಹಂತ 9
ಗುಳ್ಳೆ ಮೂಡಲು ಪ್ರಾರಂಭವಾದ ತಕ್ಷಣ ಉರಿ ಆರಿಸಿ ತಣಿಯಲು ಬಿಡಿ. ಇದು ಉಗುರುಬೆಚ್ಚಗಿರುವಷ್ಟು ತಣ್ಣಗಾದ ಬಳಿಕ ಒಂದು ಗಾಜಿನ ಜಾಡಿಯಲ್ಲಿ ಸಂಗ್ರಹಿಸಿ. ಎಚ್ಚರಿಕೆ: ಗಾಜಿನ ಪಾತ್ರೆಯಲ್ಲಿ ಈ ಬಿಸಿ ಮಿಶ್ರಣವನ್ನು ಹಾಕದಿರಿ. ಏಕೆಂದರೆ ಇದು ಪಾತ್ರೆಯಲ್ಲಿ ಬಿರುಕುಂಟುಮಾಡಬಹುದು. ಪ್ಲಾಸ್ಟಿಕ್ ಜಾಡಿಯಲ್ಲಿಯೂ ಸಂಗ್ರಹಿಸಬೇಡಿ.
ಸಂಗ್ರಹದ ಸೂಚನೆ
ಈ ಜಾಡಿಯನ್ನು ತಣ್ಣಗಿನ ಹಾಗೂ ಸ್ವಚ್ಛ ಸ್ಥಳದಲ್ಲಿ ಸಂಗ್ರಹಿಸಿ. ಈ ಜಾಡಿಯ ಮೇಲೆ ಬಿಸಿಲು ಬೀಳದಂತೆ ರಕ್ಷಿಸಿ. ಗಾಳಿಯಾಡದಂತೆ ಈ ಜಾಡಿಯನ್ನು ಗಟ್ಟಿಯಾಗಿ ಮುಚ್ಚಿ. ಈ ಜಾಡಿಯನ್ನು ಮೂರು ವಾರಗಳವರೆಗೆ ಕೆಡದಂತೆ ರಕ್ಷಿಸಿಡಬಹುದು.
ಬಳಕೆಯ ವಿಧಾನ
ಸೇವನೆಗೂ ಮುನ್ನ ಒಂದು ಚಿಕ್ಕ ಚಮಚದಷ್ಟು ದ್ರಾವಣವನ್ನು ಕೊಂಚವೇ ಬಿಸಿ ಮಾಡಿ ಸೇವಿಸಿ.
ಮುಂದಿನ ಅರ್ಧ ಗಂಟೆಯವರೆಗೆ ನೀರನ್ನು ಕುಡಿಯದಿರಿ.
ಈ ದ್ರಾವಣವನ್ನು ದಿನಕ್ಕೆ ಮೂರು ಬಾರಿಯಂತೆ ಸತತವಾಗಿ ಮೂರು ದಿನಗಳವರೆಗೆ ಸೇವಿಸಿದರೆ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು.
ಈ ದ್ರಾವಣ ಹೇಗೆ ಕೆಲಸ ಮಾಡುತ್ತದೆ?
ಲಿಂಬೆ, ಶುಂಠಿ ಮತ್ತು ಜೇನು, ಈ ಮೂರೂ ಸಾಮಾಗ್ರಿಗಳನ್ನು ಹಲವಾರು ವರ್ಷಗಳಿಂದ ಕೆಮ್ಮು, ಶೀತ ನೆಗಡಿಗಳಿಗೆ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಇದರಲ್ಲಿ ಶುಂಠಿ ಅತಿ ಹೆಚ್ಚು ಪ್ರಬಲವಾಗಿದ್ದು ಇದರ ಉರಿಯೂತ ನಿವಾರಕ ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣಗಳು ಹಲವು ವ್ಯಾಧಿಗಳಿಗೆ ಔಷಧಿಯಾಗಿದೆ.
ಈ ಗುಣವೇ ಶೀತ ಕೆಮ್ಮಿಗೆ ಒಳಗಾಗಿರುವ ಶ್ವಾಸನಾಳಗಳ ಒಳಭಾಗದಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಂದು ಇವು ಉಂಟುಮಾಡಿದ್ದ ಸೋಂಕನ್ನು ನಿವಾರಿಸಿ ಬೇನೆಯನ್ನು ಇಲ್ಲವಾಗಿಸುತ್ತದೆ.ಅಲ್ಲದೇ ಈ ದ್ರಾವಣವನ್ನು ಸೇವಿಸುವ ಮೂಲಕ ಹಸಿವು ಹೆಚ್ಚಿಸುತ್ತದೆ ಹಾಗೂ ಶೀತ ಕೆಮ್ಮನ್ನು ಎದುರಿಸಲು ದೇಹವನ್ನು ಹೆಚ್ಚು ಬಲಯುತವಾಗಿಸಲು ನೆರವಾಗುತ್ತದೆ. ಲಿಂಬೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಒದಗಿಸುತ್ತದೆ. ಈ ಪೋಷಕಾಂಶ ಹೊಸ ರಕ್ತಕಣಗಳ ಉತ್ಪತ್ತಿಗೆ ನೆರವಾಗುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳಲು ನೆರವಾಗುತ್ತದೆ. ಹಾಗೂ ಜೇನು, ಇತರ ಎರಡರಷ್ಟು ಪ್ರಬಲವಲ್ಲದಿದ್ದರೂ ಇವೆರಡೂ ಸಾಮಾಗ್ರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಜೇನಿನ ಸೇವನೆಯಿಂದ ಸೋಂಕೊಗೊಳಗಾಗಿದ್ದ ಗಂಟಲು ಮತ್ತು ಶ್ವಾಸನಾಳಗಳ ಒಳಭಾಗವನ್ನು ಸ್ವಚ್ಛಗೊಳಿಸುವ ಮೂಲಕ ಸೋಂಕು ಇಲ್ಲವಾಗಿಸುತ್ತದೆ.