Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ?
ನೆನಪಿಡಿ: ಊಟ-ತಿಂಡಿಗೆ ಮೊದಲು ತಿಳಿಯಬೇಕಾದ 15 ಕ್ರಮಗಳು
ಆರೋಗ್ಯ ಮಟ್ಟವು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಪೋಷಕಾಂಶಯುಕ್ತ ಆಹಾರವನ್ನು ಕ್ರಮಬದ್ಧವಾಗಿ ಸೇವಿಸಿದರೆ ಜೀರ್ಣಕ್ರಿಯೆಯೂ ಸರಾಗವಾಗಿ ಆಗುತ್ತದೆ. ಜೊತೆಗೆ ಅಗತ್ಯ ಪೋಷಕಾಂಶವು ದೇಹಕ್ಕೆ ಸಿಗುವುದು. ನಮ್ಮ ಆಹಾರವು ಸಾತ್ವಿಕ ಆಹಾರವಾಗಿದ್ದರೆ ಆರೋಗ್ಯವೂ ಶ್ರೀಮಂತವಾಗಿರುತ್ತದೆ. ಮನಸ್ಸಿಗೆ ಕಂಡ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಆರೋಗ್ಯದಲ್ಲಿ ತೊಡಕುಂಟಾಗುವುದು.
ಕ್ರಮಬದ್ಧವಾದ ಆಹಾರ ಪದ್ಧತಿ ಇಲ್ಲದಿದ್ದರೆ ಹೊಟ್ಟೆ ಉಬ್ಬರ, ಮಲಬದ್ಧತೆ, ಎದೆಯುರಿ ಉಂಟಾಗುವುದು. ಆಯುರ್ವೇದದ ಪ್ರಕಾರ ಕೆಲವು ಪ್ರಮುಖ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ. ಹಾಗಾದರೆ ಆ ಆಹಾರ ವಸ್ತು ಮತ್ತು ಕ್ರಮಗಳು ಯಾವುದು ಎನ್ನುವುದನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ ಮುಂದೆ ಓದಿ....

ನಿಯಮ-1
ಆಹಾರ ಸೇವಿಸುವಾಗ ಒಂದೇ ಸಮನೆ ನುಂಗಬಾರದು. ಆಹಾರವನ್ನು ಸ್ವಲ್ಪ ಸಮಯ ಜಗೆದು ನಂತರ ನುಂಗಬೇಕು. ಇದರಿಂದ ನಾರಿನಂಶ ಹೆಚ್ಚಾಗುವುದಲ್ಲದೆ ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ.

ನಿಯಮ-2
ಟಿವಿ, ಕಂಪ್ಯೂಟರ್ ಅಥವಾ ಮೊಬೈಲ್ಗಳ ಮುಂದೆ ಕುಳಿತು ಊಟ-ತಿಂಡಿ ಮಾಡಬಾರದು. ಊಟ ಮಾಡುವಷ್ಟು ಹೊತ್ತು ಯಾವುದೇ ಚಿಂತೆಯಿಲ್ಲದೆ ಸವಿಯಬೇಕು.

ನಿಯಮ-3
ಊಟ ಮಾಡುವ ಮೊದಲು ತಂಪಾದ ನೀರನ್ನು ಕುಡಿಯಬಾರದು. ಇದು ಜೀರ್ಣಕ್ರಿಯೆಗೆ ಅಡ್ಡಿಯುಂಟುಮಾಡುತ್ತದೆ.

ನಿಯಮ-4
ಊಟ-ತಿಂಡಿಯ ಮುಂಚೆ ತಂಪು ನೀರನ್ನು ಕುಡಿಯಬಾರದು ಇದು ಜೀರ್ಣಕ್ರಿಯೆಗೆ ತೊಂದರೆಯನ್ನುಂಟುಮಾಡುತ್ತದೆ. ಒಣ ಆಹಾರ ಪದಾರ್ಥ ಸೇವಿಸುವಾಗ ಸಾಮಾನ್ಯವಾದ ನೀರನ್ನು ಅರ್ಧ ಕಪ್ ಸೇವಿಸಬಹುದು.

ನಿಯಮ-5
ಪ್ರೀತಿ ಮತ್ತು ಕಾಳಜಿಯಿಂದ ತಯಾರಿಸಿದ ಆಹಾರವು ನಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಅದೇ ಅಸಮಧಾನದಿಂದ ತಯಾರಿಸಿದ ಆಹಾರವು ಅಷ್ಟು ಪೋಷಣೆಯನ್ನು ನೀಡದು ಎಂದು ಆಯುರ್ವೇದ ತಿಳಿಸುತ್ತದೆ.

ನಿಯಮ-6
ಆಹಾರ ಸೇವಿಸುವಾಗ ಶಾಂತ ಮತ್ತು ವಿಶ್ರಾಂತಿಯುತವಾದ ಭಾವನೆ ಇರಬೇಕು. ಇಲ್ಲವಾದರೆ ಆಹಾರ ಸೇವನೆ ಒಂದು ಬಗೆಯ ಕಿರಿಕಿರಿ ಉಂಟುಮಾಡುವುದು.

ನಿಯಮ-7
ಊಟದ ನಂತರ ಸ್ವಲ್ಪ ವಿಶ್ರಾಂತಿಯನ್ನು ಪಡೆಯಬೇಕು. ಒಂದೇ ಸಮನೆ ಕೆಲಸ ಮಾಡಬಾರದು.

ನಿಯಮ-8
ಆಸೆಯಿಂದ ಅತಿಹೆಚ್ಚು ತಿನ್ನಬಾರದು. ಹೊಟ್ಟೆಯ ಮುಕ್ಕಾಲು ಭಾಗ ತುಂಬುವವರೆಗೆ ಮಧ್ಯಮ ವೇಗದಲ್ಲಿ ತಿನ್ನಬೇಕು.

ನಿಯಮ-9
ಒಮ್ಮೆ ಊಟ-ತಿಂಡಿ ಸೇವಿಸಿದ ನಂತರ ಕಡಿಮೆ ಎಂದರೂ 3 ತಾಸುಗಳ ಅಂತರ ಇರಬೇಕು. ಇದು ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ.

ನಿಯಮ-10
ಸೂರ್ಯನ ಪ್ರಕಾಶ ನೆತ್ತಿಯ ಮೇಲೆ ಏರುವ ಸಮಯದಲ್ಲಿ ಜೀರ್ಣಕ್ರಿಯೆಯು ಪ್ರಬಲವಾಗಿರುತ್ತದೆ. ಹಾಗಾಗಿ ಮಧ್ಯಾಹ್ನ ಹೆಚ್ಚು ಊಟ ಮಾಡಬಹುದು. ಅದೇ ರಾತ್ರಿ ಮತ್ತು ಬೆಳಗ್ಗೆ ಲಘು ಆಹಾರವನ್ನು ಸೇವಿಸಬೇಕು.

ನಿಯಮ-11
ಸಾಮಾನ್ಯ ತಾಪಮಾನ(ಕೊಠಡಿಯ ತಾಪಮಾನ)ದಲ್ಲಿ ಎಲ್ಲಾ ಬಗೆಯ ಪಾನೀಯಗಳನ್ನು ಕುಡಿಯಬಹುದು. ಹವಾಮಾನ ಹೆಚ್ಚು ತಂಪಾಗಿರುವಾಗ ತಂಪಾದ ಮಾನೀಯಗಳನ್ನು ಕುಡಿಯಬಾರದು. ಅದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ.

ನಿಯಮ-12
ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಊಟ-ತಿಂಡಿಯನ್ನು ಮಾಡುವ ಹವ್ಯಾಸ ಇರುತ್ತದೆ. ಅಂತಹವರು ಪ್ರತಿಬಾರಿಯೂ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.

ನಿಯಮ-13
ಊಟಕ್ಕೂ ಮೊದಲು ತಾಜಾತನದಿಂದ ಕೂಡಿರುವ ಶುಂಟಿ, ನಿಂಬೆ ಅಥವಾ ದಾಳಿಂಬೆ ಹಣ್ಣುಗಳನ್ನು ಸೇವಿಸಬೇಕು. ಇದು ದೇಹದ ಪಿತ್ತ ಪ್ರಮಾಣವನ್ನು ಸಮತೋಲನದಲ್ಲಿ ಇಡುತ್ತದೆ.

ನಿಯಮ-14
ಊಟದ ಸಮಯದಲ್ಲಿ ಅಥವಾ ಊಟದ ನಂತರ ಮಜ್ಜಿಗೆಯನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಗೆ ಅನುಕೂಲವನ್ನುಂಟು ಮಾಡುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ...
ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ

ನಿಯಮ-15
ಆಯುರ್ವೇದದ ಪ್ರಕಾರ ರಾತ್ರಿ ಊಟವು 8ಗಂಟೆಯ ಒಳಗೆ ಮುಗಿದಿರಬೇಕು. ಮತ್ತು ಸ್ವಲ್ಪ ಪ್ರಮಾಣದಲ್ಲಿರಬೇಕು.



Click it and Unblock the Notifications










