Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಏನಿದು ದಂತ ಕ್ಷಯ ಸಮಸ್ಯೆ? ಇದಕ್ಕೆ ಪರಿಹಾರವೇನು?
ಹಲ್ಲು ನೋವು ಎಂದರೆ ಅದನ್ನು ತಡೆದುಕೊಳ್ಳುವುದು ತುಂಬಾ ಕಷ್ಟ. ಹಲ್ಲು ನೋವಿದ್ದರೆ ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಾಗಲ್ಲ. ಹಲ್ಲುನೋವಿಗೆ ಪ್ರಮುಖ ಕಾರಣ ದಂತಕ್ಷಯ. ಈ ದಂತಕ್ಷಯ ಬರುವುದು ದಂತಗಳ ಮೇಲಿನ ಕವಚ ನಿರ್ನಾಮವಾದಾಗ. ದಂತಕ್ಷಯವನ್ನು ಹಲ್ಲಿನ ಸವೆತ ಅಥವಾ ಹಲ್ಲಿನ ಕುಳಿಗಳು ಎಂದೂ ಕರೆಯುತ್ತೇವೆ, ದಂತಕವಚದಲ್ಲಿ ಶೇಖರಣೆಯಾಗುವಂತಹ ಬ್ಯಾಕ್ಟೀರಿಯಾಗಳಿಂದಾಗಿ ದಂತಕ್ಷಯವು ಉಂಟಾಗುತ್ತದೆ. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ
ದಂತಗಳ ಪದರಗಳಲ್ಲಿ ಶೇಖರಣೆಯಾಗುವ ಕೆಲವೊಂದು ಸೂಕ್ಷ್ಮಾಣು ಜೀವಿಗಳು ಹಲ್ಲುಗಳಲ್ಲಿನ ಖನಿಜಾಂಶಗಳು ನಿರ್ನಾಮ ಮಾಡುವಂತಹ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಜೀವಂತವಾಗಿರುಂತ ಸೂಕ್ಷ್ಮಾಣುಜೀವಿಗಳು. ಇವುಗಳು ತಮಗೆ ಬೇಕಾಗಿರುವ ಆಹಾರವನ್ನು ನಾವು ತಿನ್ನುವಂತಹ ಆಹಾರದಲ್ಲಿರುವ ಸಕ್ಕರೆಯಂಶದಿಂದ ಪಡೆಯುತ್ತದೆ.

ಸಕ್ಕರೆ ಇರುವಂತಹ ಆಹಾರವನ್ನು ತಿಂದಾಗ ಸೂಕ್ಷ್ಮಾಣುಜೀವಿಗಳು ಆಮ್ಲವನ್ನು ಬಿಡುಗಡೆ ಮಾಡಿ ಹಲ್ಲಿನ ಪದರದ ಮೇಲೆ ದಾಳಿ ಮಾಡುತ್ತದೆ ಮತ್ತು ಇದರಿಂದ ದಂತಕ್ಷಯ ಕಾಡುತ್ತದೆ. ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ತಮ್ಮ ಪ್ರಮುಖ ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. ಸಕ್ಕರೆಯನ್ನು ಸಂಸ್ಕರಿಸಲು ಬಳಸುವಂತಹ ಕೆಲವೊಂದು ತ್ಯಾಜ್ಯಗಳು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲುಗಳಲ್ಲಿನ ಖನಿಜಾಂಶವನ್ನು ನಿರ್ನಾಮ ಮಾಡಿ ದಂತಕ್ಷಯಕ್ಕೆ ಕಾರಣವಾಗುತ್ತದೆ. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ
ಹಲ್ಲುಗಳ ಪದರಗಳನ್ನು ನಾಶ ಮಾಡಲು ಇದಕ್ಕೆ ಹಲವಾರು ಗಂಟೆಗಳು ಬೇಕಾಗುತ್ತದೆ. ಮನೆಯಲ್ಲಿ ಅಥವಾ ಹಲ್ಲಿನ ವೈದ್ಯರ ಬಳಿ ಹೋದಾಗ ಫ್ಲೋರೈಡ್ ಅನ್ನು ಬಳಸುವುದರಿಂದ ಹಲ್ಲುಗಳನ್ನು ಸರಿಪಡಿಸಲು ನೆರವಾಗುವುದು. ದಂತಕ್ಷಯಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಅದರಿಂದ ಮುಂದೆ ಹೆಚ್ಚಿನ ಹಾನಿಯಾಗಬಹುದು.
ಹಲ್ಲಿನ ಕವಚವು ತುಂಡಾದ ಬಳಿಕ ಹಲ್ಲುಗಲನ್ನು ಸರಿಪಡಿಸಲು ಸಾಧ್ಯವಿಲ್ಲ. ದಂತಕುಳಿಯನ್ನು ದಂತವೈದ್ಯರು ಸ್ವಚ್ಛಗೊಳಿಸಿ ಸರಿಪಡಿಸಬೇಕು. ದಂತಕುಳಿಗೆ ಚಿಕಿತ್ಸೆ ನೀಡದೆ ಇದ್ದರೆ ಹಲ್ಲಿನ ಬುಡಕ್ಕೆ ಬಂದು ನರ ಹಾಗೂ ರಕ್ತನಾಳಗಳಿಗೆ ತೊಂದರೆ ಉಂಟು ಮಾಡಬಹುದು. ಈ ಭಾಗದಲ್ಲಿ ಬಾವು ಅಥವಾ ಗುಳ್ಳೆಗಳು ಕಾಣಿಸಿಕೊಳ್ಳಬಹುದು.
ಆಹಾರ ತಿಂದ ಬಳಿಕ ಬಾಯಿ ಮುಕ್ಕಳಿಸಿಕೊಳ್ಳುವುದು ಅಥವಾ ಹಲ್ಲುಜ್ಜುವುದರಿಂದ ದಂತಕ್ಷಯವನ್ನು ತಡೆಯಬಹುದು. ಹಲ್ಲುಜ್ಜಲು ಮತ್ತು ಬಾಯಿ ಮುಕ್ಕಲಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಿ. ಬ್ರಷ್ ತಲುಪದೆ ಇರುವ ಸ್ಥಳಗಳಲ್ಲಿ ಬ್ಯಾಕ್ಟೀರಿಯಾ ವಾಸಿಸುತ್ತದೆ. ಇದಕ್ಕಾಗಿ ಸರಿಯಾಗಿ ಬಾಯಿ ಮುಕ್ಕಳಿಸಿಕೊಳ್ಳಿ. ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು
ದಂತಕ್ಷಯವು ಸಾಮಾನ್ಯವಾದ ಸಮಸ್ಯೆಯಾಗಿದೆ. ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸಿಕೊಳ್ಳುವುದರೊಂದಿಗೆ ಆಗಾಗ ಹಲ್ಲಿನ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿ ಸ್ವಚ್ಛ ಮಾಡಿಕೊಂಡರೆ ಒಳ್ಳೆಯದು. ಕ್ಯಾಂಡಿ, ಬಿಸ್ಕಿಟ್, ಸೋಡಾ ಮತ್ತು ಸಿಹಿ ತಂಪುಪಾನೀಯಗಳನ್ನು ಕಡೆಗಣಿಸಿ. ನೀವು ಇವುಗಳನ್ನು ಸೇವಿಸಿದರೂ ತಕ್ಷಣ ಬಾಯಿ ತೊಳೆಯಿರಿ. ಏನೇ ತಿಂದರೂ ಬಾಯಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












