Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹವಾಮಾನದ ಬದಲಾವಣೆ, ಆರೋಗ್ಯದ ಆರೈಕೆ ಹೀಗಿರಲಿ
ಋತುಗಳು ಬದಲಾಗುತ್ತಿದ್ದಂತೆಯೇ ಹವಾಮಾನದಲ್ಲಿಯೂ ಕೆಲವಾರು ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ಚಳಿಗಾಲದಿಂದ ಬೇಸಿಗೆ ಬರುವ ವೇಳೆಯಲ್ಲಿ ಸೆಖೆ ಇದ್ದರೂ ಹಲವರು ಶೀತ ಕೆಮ್ಮು ಗಂಟಲಕೆರೆತ ಮೊದಲಾದವುಗಳಿಂದ ಬಳಲುತ್ತಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸುತ್ತಮುತ್ತ ಇರುವ ಮರಗಳಲ್ಲಿ ಹೂವುಗಳಲ್ಲಿರುವ ಪರಾಗ ಗಾಳಿಗೆ ಬಿಡುಗಡೆಯಾಗುವುದು. ಇವು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುವ ಕಾರಣ ಶ್ವಾಸದ ಮೂಲಕ ದೇಹ ಸೇರುತ್ತವೆ. ದೇಹ ಈ ಕಣಗಳನ್ನು ಹೊರಹಾಕಲೆಂದೇ ಜೀವರಕ್ಷಣಾ ವ್ಯವಸ್ಥೆಗಳಾದ ಶೀತ ಜ್ವರ ಗಂಟಲಕೆರೆತ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತದೆ.
ನಿಜವಾಗಿ ನೋಡಬೇಕೆಂದರೆ ಈ ಶೀತ ಜ್ವರಗಳು ಕಾಯಿಲೆಯೇ ಅಲ್ಲ. ಬದಲಿಗೆ ಈ ಕಣಗಳ ಅಥವಾ ಇತರ ವೈರಸ್ಸು ರೋಗಾಣುಗಳ ಧಾಳಿಗೆ ಶರೀರದ ರೋಗ ನಿರೋಧಕ ವ್ಯವಸ್ಥೆ ಕಂಡುಕೊಂಡ ಕ್ರಮ. ಇದಕ್ಕೆ ಅಲೋಪಥಿಯ ಮಾತ್ರೆಗಳನ್ನು ನುಂಗಿ ಆ ಕ್ಷಣಕ್ಕೆ ಇದರ ತೊಂದರೆ ಕಡಿಮೆ ಮಾಡಿಕೊಂಡರೂ ಇದರ ಹಲವು ಅಡ್ಡ ಪರಿಣಾಮಗಳು ಮುಂದಿನ ದಿನಗಳಲ್ಲಿ ಬಾಧಿಸಬಹುದು. ಆದ್ದರಿಂದ ಇಂತಹ ತೊಂದರೆಗೆ ಮನೆಮದ್ದೇ ಹೆಚ್ಚು ಸೂಕ್ತ. ಇದು ಕೊಂಚ ನಿಧಾನವಾದರೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಕಾರಣ ಸುರಕ್ಷಿತವೂ ಆಗಿದೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ....
1) ಒಂದು ಲೋಟ ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಕಿ ಗಂಟಲಲ್ಲಿ ಗಳಗಳ ಮಾಡಬೇಕು. ಇದು ಗಂಟಲ ಕೆರೆತದಿಂದ ಮುಕ್ತಿ ನೀಡುತ್ತದೆ.
2) ಸತತವಾಗಿ ಸ್ವಲ್ಪ ಸ್ವಲ್ಪವಾಗಿ ಬಿಸಿನೀರು ಕುಡಿಯುತ್ತಿರುವುದು. ಬದಲಿಗೆ ಆಗಾಗ ಬಿಸಿ ಕಾಫಿ, ಟೀ ಸಹಾ ಕುಡಿಯಬಹುದು, ಒಟ್ಟಾರೆ ಬಿಸಿಯಾದ ದ್ರವ ಘಂಟೆಗೆ ಮೂರು ನಾಲ್ಕು ಬಾರಿಯಾದರೂ ಹೋಗುತ್ತಲೇ ಇರಬೇಕು. ಇದರಿಂದ ಬ್ಯಾಕ್ಟೀರಿಯಾಗಳಿಗೆ ಉಸಿರಾಡಲೂ ಅವಕಾಶ ನೀಡದಂತೆ ಸದೆಬಡಿಯಬಹುದು.

3) ಕೊಂಚ ಬಿಸಿನೀರಿಗೆ ಚಿಟಿಕೆ ಅರಿಶಿನ ಪುಡಿ, ಶುಂಠಿಯ ಒಣ ಪುಡಿ ಮತ್ತು ಚಿಕ್ಕಚಮಚದಷ್ಟು ಜೇನು ಸೇರಿಸಿ ಕುಡಿಯುತ್ತಿರುವ ಮೂಲಕ ಕೆಮ್ಮು, ಮೈ ಕೈ ನೋವು, ಶೀತ ಮತ್ತು ತಲೆನೋವು ಕಡಿಮೆಯಾಗುತ್ತದೆ.
4) ಸತತವಾಗಿ ಮೂಗು ಸೋರುತ್ತಿದ್ದರೆ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಹಬೆಯನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಸಿರಾಟದ ಮೂಲಕ ಸೇವಿಸಬೇಕು. ಈ ನೀರಿಗೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿದರೆ ಇನ್ನೂ ಉತ್ತಮ. ಇದರಿಂದ ಕಟ್ಟಿಕೊಂಡಿದ್ದ ಮೂಗು ತಕ್ಷಣ ತೆರೆಯಬಹುದು.
5) ಟೀ ಕುದಿಸುವಾಗ ಇದರಲ್ಲಿ ಕೆಲವು ತುಳಸಿ ಎಲೆಗಳನ್ನು ಮತ್ತು ಚಿಕ್ಕ ಶುಂಠಿಯ ತುಂಡನ್ನು ಜಜ್ಜಿ ಮತ್ತು ಕೆಲವು ಕಾಳುಮೆಣಸಿನ ಕಾಳುಗಳನ್ನು ಹಾಕಿ ಬೇಯಿಸಬೇಕು. ಈ ಟೀ ಸೇವನೆಯಿಂದ ಶೀತ ಮತ್ತು ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ.
6) ಶೀತ ಮತ್ತು ಕೆಮ್ಮು ಸತತವಾಗಿ ಬಾಧಿಸುತ್ತಿದ್ದರೆ ನಿಯಮಿತವಾಗಿ ಚ್ಯವನಪ್ರಾಶ ಅಥವಾ ನೆಲ್ಲಿಕಾಯಿಯಿಂದ ತಯಾರಿಸಲಾದ ಆಮ್ಲಾ ಮುರಬ್ಬಾ ಎಂಬ ಆಯುರ್ವೇದೀಯ ಔಷಧಗಳನ್ನು ಸೇವಿಸಬೇಕು. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.
7) ಒಂದು ವೇಳೆ ಉಪ್ಪುನೀರಿನ ಗಳಗಳದಿಂದ ಗಂಟಲ ಕೆರೆತ ಕಡಿಮೆಯಾಗದಿದ್ದಲ್ಲಿ ಒಂದು ಲೋಟ ಬಿಸಿನೀರಿಗೆ ಅರ್ಧ ಚಮಚದಷ್ಟು ತುಪ್ಪ, ಮತ್ತು ಕೊಂಚ ಉಪ್ಪು ಸೇರಿಸಿ ಬಿಸಿಬಿಸಿಯಾಗಿಯೇ ಕುಡಿಯಬೇಕು. ಇದರಿಂದ ಗಂಟಲ ಕೆರೆತ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
8) ಮೈಕೈ ನೋವು ಹೆಚ್ಚಾಗಿದ್ದರೆ ನೀವು ಸ್ನಾನ ಮಾಡುವ ಬಿಸಿನೀರಿನ ಬಕೆಟ್ಟಿನಲ್ಲಿ ಕೆಲವು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಸ್ನಾನ ಮಾಡಬೇಕು ಇದರಿಂದ ಮೈಕೈನೋವು ಬೇಗನೇ ಕಡಿಮೆಯಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ರಾತ್ರಿಯೂಟದ ಮುನ್ನ ಸ್ನಾನ ಮಾಡಿ ಊಟದ ಬಳಿಕ ಕಷಾಯ ಕುಡಿದು ಮಲಗಿದರೆ ಬೆಳೆಗ್ಗೆದ್ದಾಗ ಮೈಕೈ ನೋವು ಕಡಿಮೆಯಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


