Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ವರ ಶೀತದ ಹುಟ್ಟಡಗಿಸುವ ಪವರ್ ಫುಲ್ ಸೂಪ್...
ಬೇಸಿಗೆಯ ಸಮಯ ಮುಗಿದೆ, ಇನ್ನೇನು ಮಳೆಗಾಲವು ಬಂದು ಮುಂಬಾಗಿಲ ಮುಂದೆ ನಿಂತಿರುವ ಕಾಲ. ಸ್ನೇಹಿತರ ಜೊತೆಗೆ ಅಲ್ಲಿ-ಇಲ್ಲಿ ಸುತ್ತಾಡಬೇಕು ಎಂದು ಮನಸು ಹಾತೊರೆಯುವ ಕಾಲ. ಎಲ್ಲರನ್ನು ಗುಂಪುಕಟ್ಟಿಕೊಂಡು ಒಂದು ಲಾಂಗ್ ಡ್ರೈವ್ ಹೋಗಿ ಬರೋಣ ಎಂದು ಎಷ್ಟು ಬಾರಿ ನೀವು ಹೋಗಿಲ್ಲ. ಹಾಗೆ ಹೋಗಿ ಮನೆಗೆ ಹಿಂತಿರುಗಿದಾಗ ನಿಮಗೆ ಜ್ವರ ಬಂದಿರುವ ದಿನಗಳು ಎಷ್ಟಿಲ್ಲ!
ಅರೆ ಆ ಹಾಳಾದ ಜ್ವರವು ನಿಮ್ಮ ಪ್ರವಾಸದ ಮೋಜು ಮತ್ತು ನೆನಪುಗಳನ್ನೆಲ್ಲಾ ಹಾಳು ಮಾಡಿಬಿಡುತ್ತದೆ. ಇಂತಹ ಅನುಭವ ನಮಗೆ ಎಷ್ಟು ಬಾರಿ ಹಾಗಿಲ್ಲ. ಇಂತಹ ಅನುಭವಕ್ಕೆ ಹೆದರಿಯೇ ಹಲವಾರು ಜನ ಪ್ರವಾಸ ಹೋಗುವುದನ್ನೆ ತಪ್ಪಿಸಿಕೊಳ್ಳುತ್ತಾರೆ. ಕಾಯಿಲೆ ಬಿದ್ದರೆ ಒಂದು ರೀತಿಯ ಬೇಜಾರು, ಕಾಯಿಲೆ ಬರುತ್ತದೆ ಎಂದು ಸ್ನೇಹಿತರ ಜೊತೆಗೆ ಹೋಗಲಿಲ್ಲವಾದರೆ ಅದಕ್ಕೆ ಮತ್ತೊಂದು ರೀತಿಯ ಬೇಸರವನ್ನು ಈ ಸನ್ನಿವೇಶ ನೀಡುತ್ತದೆ. ಕಣ್ಣೀರು ಬರುತ್ತದೆ ಎಂದು ಈರುಳ್ಳಿಯನ್ನು ತಿನ್ನುವುದನ್ನು ಜನ ಬಿಟ್ಟಿದ್ದಾರೆಯೇ? ಹಾಗೆ ಇದೆಲ್ಲ. ವೈರಲ್ ಜ್ವರದಿಂದ ಶೀಘ್ರ ಗುಣಮುಖರಾಗಲು ಒಂದಿಷ್ಟು ಟಿಪ್ಸ್
ಜ್ವರ, ಶೀತ, ವೈರಲ್ ಫ್ಲೂ, ಕೆಮ್ಮು, ಇತ್ಯಾದಿಗಳು ಬಂದಾಗ ಅದನ್ನು ಗುಣಪಡಿಸಲು ನಾವು ಆಂಟಿಬಯೋಟಿಕ್ಗಳ ಮೊರೆ ಹೋಗುವುದು ಸಹಜ. ಏಕೆಂದರೆ ಈ ಸನ್ನಿವೇಶದಲ್ಲಿ ನಿಮಗೆ ಬಂದಿರುವ ರೋಗ ಲಕ್ಷಣಗಳನ್ನು ದೂರ ಮಾಡಲು ಅದರಿಂದ ಮಾತ್ರ ಸಾಧ್ಯ.

ಒಂದು ವೇಳೆ ನಿಮ್ಮ ರೋಗ ನಿರೋಧಕ ಶಕ್ತಿಯು ರೋಗಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಫಲವಾಗದಿದ್ದಲ್ಲಿ, ನೀವು ಆಗಾಗ ಕಾಯಿಲೆ ಬೀಳುತ್ತಲೆ ಇರುತ್ತೀರಿ. ಹಾಗೆ ಕಾಯಿಲೆ ಬಿದ್ದಾಗಲೆಲ್ಲಾ ಪ್ರತಿ ಬಾರಿ ವೈದ್ಯರ ಬಳಿಗೆ ಓಡುವುದು ಎಷ್ಟು ಚೆನ್ನ ಹೇಳಿ.
ಅದರ ಬದಲಿಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿಮ್ಮ ಮನೆಯ ಅಡುಗೆ ಮನೆಗೆ ಹೋಗುವುದು ಉತ್ತಮವಲ್ಲವೇ. ಏಕೆಂದರೆ ಅಲ್ಲಿ ನಿಮ್ಮ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವ ಹಲವಾರು ಅಂಶಗಳು ಇರುತ್ತವೆ.
ಒಂದು ವೇಳೆ ನೀವು ಜ್ವರ, ಶೀತ, ಕೆಮ್ಮು, ವೈರಲ್ ಫ್ಲೂ ಮುಂತಾದವನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳಲು ಬಯಸಿದಲ್ಲಿ, ಶುಂಠಿ, ಬೆಳ್ಳುಳ್ಳಿ ಸೂಪನ್ನು ನೀವು ತಪ್ಪಿಸಿಕೊಳ್ಳುವುದಿಲ್ಲ. ಬನ್ನಿ ಇದನ್ನು ತಯಾರಿಸಲು ಏನು ಬೇಕು ಎಂಬುದನ್ನು ನೋಡೋಣ.
ಇದಕ್ಕೆ ಅಗತ್ಯವಾದ ಪದಾರ್ಥಗಳು:
*ಬೆಳ್ಳುಳ್ಳಿ - 30-40 ತುಂಡುಗಳೂ
*ಶುಂಠಿ - 2 ಕಪ್
*ನಿಂಬೆ ರಸ - 3 ಟೇಬಲ್ ಸ್ಪೂನ್ಗಳು ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು
ಇತ್ತೀಚಿನ ಅಧ್ಯಯನದ ಪ್ರಕಾರ 30-40 ಬೆಳ್ಳುಳ್ಳಿಯ ತುಂಡುಗಳನ್ನು ಹಾಕಿ ಮಾಡಿದ ಸೂಪ್ ಶೀತ, ಫ್ಲೂ ಮತ್ತು ಜ್ವರಕ್ಕೆ ಶೀಘ್ರ ಉಪಶಮನವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.
ಬೆಳ್ಳುಳಿಯಲ್ಲಿ ಅಲ್ಲಿಸಿನ್ ಎಂಬ ಅಂಶವು ಇರುತ್ತದೆ. ಇದು ಫ್ಲೂ ಮೇಲೆ ಆಂಟಿಬಯೋಟಿಕ್ಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ತಿಳಿದು ಬಂದಿದೆ. 40 ತುಂಡು ಬೆಳ್ಳುಳ್ಳಿಯನ್ನು ಜಜ್ಜಿದಾಗ ಅದರಿಂದ ದೊರೆಯುವ ಅಲ್ಲಿಸಿನ್ ನಿಮ್ಮ ದೇಹದಲ್ಲಿ ಫ್ಲೂಕಾರಕ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕುತ್ತದೆ.
ಇದರ ಜೊತೆಗೆ ಶುಂಠಿಯು ಸಹ ಆಂಟಿ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿದ್ದು, ಕಾಯಿಲೆಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಕೊಂದು ಹಾಕುತ್ತದೆ. ಇದರ ಜೊತೆಗೆ ನಿಂಬೆರಸದಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕ ಇದು ನಿಮಗೆ ಕಾಯಿಲೆಗಳು ಬರದಂತೆ ಕಾಪಾಡುತ್ತವೆ.
ಇದನ್ನು ಹೇಗೆ ತಯಾರಿಸುವುದು?
*ಮೇಲೆ ತಿಳಿಸಿರುವ ಪ್ರಮಾಣದಲ್ಲಿ ಬೇಕಾದ ಪದಾರ್ಥಗಳನ್ನು ತೆಗೆದುಕೊಳ್ಳಿ. ಅದನ್ನು ಒಂದು ಬ್ಲೆಂಡರ್ನಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಹೀಟಿಂಗ್ ಪ್ಯಾನ್ ಮೇಲೆ ಸುರಿದುಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ.
*ಆಮೇಲೆ ಕಾಯಿಸುವುದನ್ನು ನಿಲ್ಲಿಸಿ, ಮಿಶ್ರಣವನ್ನು ತಣ್ಣಗಾಗಲು ಐದು ನಿಮಿಷ ಬಿಡಿ.
*ಈಗ ಇದನ್ನು ಚೆನ್ನಾಗಿ ಕಲೆಸಿ, ನಂತರ ಮಿಶ್ರಣವನ್ನು ಬಟ್ಟಲಿಗೆ ಸುರಿಯಿರಿ.
*ಈಗ ಸೂಪ್ ಸೇವಿಸಲು ಸಿದ್ಧವಾಗಿದೆ. ರೋಗ ಲಕ್ಷಣಗಳು ಕಡಿಮೆಯಾಗುವವರೆಗೆ, ಇದನ್ನು ಬೆಳಗ್ಗೆ ಒಂದು ಕಪ್ ಮತ್ತು ಸಂಜೆ ಒಂದು ಕಪ್ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

