Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಎದೆಯಲ್ಲಿ ಉಂಟಾಗುವ ದಟ್ಟಣೆಯನ್ನು ಹೀಗೆ ತಿಳಿಗೊಳಿಸಿ
ದೇಹದ ಪ್ರತಿಯೊಂದು ಅಂಗದ ಆರೈಕೆಯು ತುಂಬಾ ಮುಖ್ಯ. ನಾವು ಒಂದು ಅಂಗವನ್ನು ಕಡೆಗಣಿಸಿದರೂ ಅದರಿಂದ ಸಮಸ್ಯೆಗಳು ಆರಂಭವಾಗುತ್ತದೆ. ಇದಕ್ಕಾಗಿಯೇ ಯೋಗ ಮತ್ತು ವ್ಯಾಯಾಮ ಮಾಡಿದರೆ ಪ್ರತಿಯೊಂದು ಅಂಗಗಳು ಸರಿಯಾಗಿ ಇರುತ್ತದೆ.
ಶ್ವಾಸಕೋಶದಲ್ಲಿ ಕಫ ತುಂಬಿಕೊಳ್ಳುವ ಕಾರಣದಿಂದಾಗಿ ಎದೆಯಲ್ಲಿ ದಟ್ಟನೆ ಉಂಟಾಗಬಹುದು. ಇದರಿಂದ ಎದೆಯ ಭಾಗ ಭಾರವಾಗಿರುವ ಅನುಭವವಾಗಬಹುದು. ಸಣ್ಣ ಮಟ್ಟದ ಎದೆ ನೋವು, ಕಫ, ಉಸಿರಾಟದ ಸಮಸ್ಯೆ, ಕಿರಿಕಿರಿ ಮತ್ತು ಆಯಾಸ ಎದೆ ದಟ್ಟನೆಯ ಅಥವಾ ಎದೆ ಕಂಜೆಷನ್ನ ಕೆಲವೊಂದು ಲಕ್ಷಣಗಳಾಗಿವೆ. ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!
ಸಾಮಾನ್ಯವಾಗಿ ಕಾಡುವಂತಹ ಶೀತದಿಂದಾಗಿಯೂ ಈ ಸಮಸ್ಯೆಯಾಗಬಹುದು. ಜ್ವರ, ಕ್ಷಯರೋಗ, ಅಸ್ತಮಾ, ಗಂಟಲ ಊತ, ನಿಮ್ಯೋನಿಯಾದಂತಹ ಕೆಲವೊಂದು ಸೋಂಕುಗಳು ಇದಕ್ಕೆ ಕಾರಣವಾಗಿರಬಹುದು. ಕೆಲವೊಮ್ಮೆ ಈ ಲೇಖನದಲ್ಲಿ ನೀಡಿರುವಂತಹ ಮನೆಮದ್ದುಗಳು ಕೆಲಸ ಮಾಡಬಹುದು.
ಆದರೆ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ. ಸರಿಯಾಗಿ ನಿದ್ರೆ ಮಾಡಿದರೆ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಬೆಡ್ ರೂಮ್ ನಲ್ಲಿ ಧೂಳು ಇಲ್ಲದಂತೆ ನೋಡಿಕೊಳ್ಳಿ. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡಿಕೊಳ್ಳಿ. ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡಿ....

ಉಪ್ಪು + ಬಿಸಿ ನೀರು
ಒಂದು ಚಿಟಿಕೆ ಉಪ್ಪನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಇದು ಲೋಳೆ ನಿವಾರಣೆ ಮಾಡಿ ಕಿರಿಕಿರಿ ಕಡಿಮೆ ಮಾಡುತ್ತದೆ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ಬಿಸಿ ನೀರಿಗೆ ಅರಿಶಿನ ಹಾಕಿ ಕುಡಿಯಿರಿ
ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಒಂದು ಲೋಟ ಬಿಸಿ ನೀರಿಗೆ ಅರಿಶಿನ ಹಾಕಿ ಕುಡಿಯಿರಿ. ಆದರೆ ಆಸಿಡಿಟಿ, ಪಿತ್ತಗಲ್ಲು ಮತ್ತು ಅಲ್ಸರ್ ಇರುವವರು ಇದನ್ನು ಸೇವಿಸಬೇಡಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಈರುಳ್ಳಿ ರಸ

ಆವಿಗೆ ಮುಖವೊಡ್ಡಿ
ಎದೆ ದಟ್ಟನೆ ನಿವಾರಣೆ ಮಾಡಲು ಬಿಸಿನೀರಿಗೆ ಆವಿಗೆ ಮುಖವೊಡ್ಡಿ ಸ್ವಲ್ಪ ಮಟ್ಟಿನ ಪರಿಹಾರ ಪಡೆಯಬಹುದು. ಕೆಲವು ಹನಿ ನೀಲಗಿರಿ ತೈಲವನ್ನು ಬಿಸಿ ನೀರಿಗೆ ಹಾಗಿ ಅದರ ಆವಿಯನ್ನು ಮೂಗಿನ ಮೂಲಕ ಮೇಲೆ ಎಳೆದುಕೊಳ್ಳಿ. ಮಕ್ಕಳು, ಗರ್ಭಿಣಿ ಮಹಿಳೆಯರು ಮತ್ತು ರಕ್ತದೊತ್ತಡ ಇರುವವರು ಇದನ್ನು ಪ್ರಯತ್ನಿಸಲೇಬಾರದು.

ಜೇನಿನೊಂದಿಗೆ ನಿಂಬೆರಸ.....
ಜೇನಿನೊಂದಿಗೆ ನಿಂಬೆರಸವನ್ನು ಹಾಕಿ ಕುಡಿದರೆ ಪರಿಹಾರ ಸಿಗುವುದು. ವಿಟಮಿನ್ ಸಿ ಲೋಳೆಯನ್ನು ತೆಗೆಯುವುದು ಮತ್ತು ಜೇನು ಕಫವನ್ನು ನಿಯಂತ್ರಿಸುವುದು.

ಬಿಸಿ ನೀರಿನಲ್ಲಿ ಅದ್ದಿಕೊಂಡ ಬಟ್ಟೆ
ಬಿಸಿ ನೀರಿನಲ್ಲಿ ಅದ್ದಿಕೊಂಡ ಬಟ್ಟೆಯನ್ನು ಎದೆಯ ಮೇಲಿಟ್ಟರೆ ಅದರಲ್ಲಿನ ಬಿಸಿ ಎದೆ ದಟ್ಟನೆಯನ್ನು ಕಡಿಮೆ ಮಾಡುವುದು.

ಶುಂಠಿ ಚಹಾ...
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಮತ್ತು ಇದು ಎದೆ ದಟ್ಟನೆ ನಿವಾರಣೆ ಮಾಡುತ್ತದೆ. ಶುಂಠಿಯಲ್ಲಿರುವ ಕೆಲವೊಂದು ಅಂಶಗಳು ಲೋಳೆ ಸ್ರವಿಸದಂತೆ ನೋಡಿಕೊಳ್ಳುತ್ತದೆ. ಹಾಲು ಹಾಕದೆ ಶುಂಠಿ ಹಾಕಿದ ಚಹಾ ಕುಡಿದು ನೋಡಿ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!



Click it and Unblock the Notifications