Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಧೂಮಪಾನ ತ್ಯಜಿಸಿದರೆ ಅನಾನುಕೂಲ ಕೂಡ ಇದೆ!
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ, ಇದು ಶಾಸನ ವಿಧಿಸಿದ ಎಚ್ಚರಿಕೆ ಎಂದು ತಿಳಿದಿದ್ದರೂ, ಧೂಮಪಾನ ಬಿಡಲಾಗದ ಮತ್ತು ಬಿಡಿಸಲಾಗದ ಚಟ. ಒತ್ತಡದಲ್ಲಿರುವ ಮನುಷ್ಯ ಹೆಚ್ಚಾಗಿ ಧೂಮಪಾನದ ದಾಸನಾಗುತ್ತಾನೆ. ಬಹಳಷ್ಟು ಮಂದಿ ಈ ಸಿಗರೇಟು ಮತ್ತು ಹೊಗೆಸೊಪ್ಪಿನ ಚಟದಿಂದ ಹೊರಬರಲು ವಿಭಿನ್ನ ಪ್ರಯತ್ನ ನಡೆಸಿದರೂ ಅದರಲ್ಲಿ ಯಶಸ್ಸು ಕಂಡವರು ಅಪರೂಪ ಎನ್ನಬಹುದು.
ಧೂಮಪಾನಕ್ಕೆ ವಿದಾಯ ಹೇಳುವುದು ಆರೋಗ್ಯದ ಮತ್ತು ಆರ್ಥಿಕ ದೃಷ್ಟಿಯಿಂದ ಉತ್ತಮ. ಸಿಗರೇಟು ಬಿಟ್ಟರೆ ಆಗುವ ಅನುಕೂಲ ಮತ್ತು ಅನಾನುಕೂಲವನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಧೂಮಪಾನ ತ್ಯಜಿಸಿದರೆ ಆಗುವ ಉಪಯೋಗಗಳು

1.ರಕ್ತದೊತ್ತಡ ಕಡಿಮೆ ಮಾಡುತ್ತೆ
ತೀರಾ ಹೆಚ್ಚಳವಾಗಿರುವ ರಕ್ತದೊತ್ತಡದ ಮಟ್ಟವನ್ನು ಸಾಮಾನ್ಯ ಮಟ್ಟಕ್ಕೆ ಇಪ್ಪತ್ತು ನಿಮಿಷದಲ್ಲಿ ಇಳಿಸುತ್ತದೆ.

2.ಕಾರ್ಬನ್ ಮೊನೊಕ್ಷೈಡ್
ರಕ್ತದ ಕಾರ್ಬನ್ ಮೊನೊಕ್ಷೈಡ್ ಅಂಶವು ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಎಂಟು ಗಂಟೆಗಳ ಅವಧಿಯಲ್ಲಿ ಇಳಿಯುತ್ತದೆ.

3.ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿ
ಎರಡು ದಿನದದಲ್ಲಿ ದೇಹದಲ್ಲಿರುವ ಹೊಗೆಸೊಪ್ಪಿನ ಅಂಶವು ಸಂಪೂರ್ಣ ಬಿಟ್ಟು, ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿ ಸಾಮಾನ್ಯ ಮಟ್ಟಕ್ಕೆ ಬರುತ್ತದೆ.

4.ಉತ್ಸಾಹ ವೃದ್ದಿಯಾಗುವುದು
ನಾಲ್ಕು ದಿನದಲ್ಲಿ ದೇಹದ ಶ್ವಾಸನಳಿಕೆಗೆ ಸಂಬಂಧ ಪಟ್ಟ ಟ್ಯೂಬ್ ಗಳು ಸಡಿಲವಾಗಿ ಉತ್ಸಾಹ ವೃದ್ದಿಯಾಗುತ್ತದೆ.

5.ರಕ್ತ ಪರಿಚಲನೆ
ಎರಡು ವಾರದಲ್ಲಿ ರಕ್ತಾಭಿಸರಣೆ ಉತ್ತಮವಾಗಿ ಮುಂದಿನ ಹತ್ತು ವಾರದಲ್ಲಿ ಇನ್ನಷ್ಟು ವೃದ್ದಿಯಾಗುತ್ತದೆ.

6.ಶ್ವಾಸಕೋಸದ ಸಾಮರ್ಥ್ಯ ಹೆಚ್ಚುವುದು
ಒಂಬತ್ತು ವಾರದಲ್ಲಿ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳು ಕಮ್ಮಿಯಾಗಿ ಶ್ವಾಸಕೋಸದ ಸಾಮರ್ಥ್ಯ ಶೇ. ಹತ್ತರಷ್ಟು ವೃದ್ದಿಯಾಗುತ್ತದೆ.

7.ಆರೋಗ್ಯವಂತ ಹೃದಯ
ಐದು ವರ್ಷದಲ್ಲಿ ಹೃದಯ ಮತ್ತು ಶ್ವಾಸಕೋಸ ಧೂಮಪಾನ ಮಾಡದೇ ಇದ್ದವರ ದೇಹದ ಸ್ಥಿತಿಯಂತೆ ಕೆಲಸ ಮಾಡಲಾರಂಭಿಸುತ್ತದೆ. ಹಾಗಾಗಿ ಹೃದಯಾಘಾತ ಮತ್ತು ಶ್ವಾಸಕೋಸದ ಕ್ಯಾನ್ಸರ್ ಕಮ್ಮಿಯಾಗಬಹುದು.

1.ಧೂಮಪಾನ ಬಿಟ್ಟರೆ ಆಗುವ ಅನಾನುಕೂಲಗಳು
ಧೂಮಪಾನ ತ್ಯಜಿಸಿದರೆ ಮುಖ್ಯವಾಗಿ ದೇಹಕ್ಕಾಗುವ ಶೀಘ್ರ ಬದಲಾವಣೆಯಿಂದಾಗಿ ಕೆಲವು ಅನಾನುಕೂಲಗಳು ಆಗುವ ಸಾಧ್ಯತೆಯಿದೆ. ಈ ಲಕ್ಷಣಗಳು ಕೆಲವೊಮ್ಮೆ ಕೆಲವೇ ಸಮಯದಲ್ಲಿ ತೊಂದರೆ ತರಬಹುದು.

2.ಅನುಭವಿಸ ಬಹುದಾದ ಬದಲಾವಣೆಗಳು
ಧೂಮಪಾನ ಬಿಟ್ಟರೆ ಹುಳಿಯಾಗುವಿಕೆ, ಅಜೀರ್ಣ ಮತ್ತು ಎದೆಯುರಿ ಮುಂತಾದವು ಕೂಡಲೇ ಬರುವ ಸಾಧ್ಯತೆಯಿದೆ. ಇದರ ಜೊತೆಗೆ ವಾಯು, ಅತಿಭೇಧಿ, ಹೊಟ್ಟೆಕಟ್ಟಿಸುವುದು ಮತ್ತು ವಾಕರಿಕೆ ಬರುವ ಸಾಧ್ಯತೆಯಿದೆ.

3.ಉಸಿರಾಟದ ಬದಲಾವಣೆ
ಧೂಮಪಾನದಿಂದ ದೇಹದೊಳಗೆ ಹೊಗೆ ತುಂಬದೇ ಇರುವುದರಿಂದ ಉಸಿರಾಟದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬಹುದು. ಇದರಿಂದ ಸೈನಸ್, ಶೀತ, ಗಂಟಲು ಕೊರೆತ ಮತ್ತು ಧ್ವನಿ ಗಡಸಾಗುವುದು ಮುಂತಾದ ಬದಲಾವಣೆಯನ್ನು ಕಾಣಬಹುದು.

4.ರಕ್ತಾಭಿಸರಣೆಯಲ್ಲಿ ಬದಲಾವಣೆ
ಹೃದಯಕ್ಕೆ ಅತಿಯಾದ ರಕ್ತದೊತ್ತಡ ಇಲ್ಲದಿರುವುದರಿಂದ, ಸಮತೋಲನದ ರಕ್ತ ಸಂಚಲನವಿರುವುದರಿಂದ ಕೆಲವೊಂದು ತಾತ್ಕಾಲಿಕ ಸೈಡ್ ಎಫೆಕ್ಟ್ ಇರುವ ಸಾಧ್ಯತೆಯಿದೆ. ಪ್ರಮುಖವಾಗಿ ಬೆರಳುಗಳು, ದೇಹದ ಅಂಗಾಂಗಳು ಗಟ್ಟಿಯಾಗುವ ಸಾಧ್ಯತೆಯಿದೆ.

5.ಮಾನಸಿಕವಾಗಿ ಆಗಬಹುದಾದ ಬದಲಾವಣೆಗಳು
ಹೊಗೆಸೊಪ್ಪು ದೇಹಕ್ಕೆ ಮಾರಿಯಾಗಿರುವುದರಿಂದ ಮತ್ತು ಇದರಿಂದ ಹೃದಯ ವೀಕ್ ಆಗುವ ಸಾಧ್ಯತೆಯಿದೆ. ಮತ್ತು ಹೃದಯ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಕೆಲಸ ನಿರ್ವಹಿಸಲು ಆರಂಭಿಸುವುದರಿಂದ ಉಲ್ಲಾಸ ಇಲ್ಲದೇ ಇರುವುದು, ಜಿಗುಟುತನ ಬರುವ ಸಾಧ್ಯತೆಯಿದೆ.

6.ದುಃಸ್ವಪ್ನ
ನಿದ್ರೆಯ ಸಮಯದಲ್ಲಿ ಬದಲಾಗುವ ಸಾಧ್ಯತೆ ಇರುವುದರಿಂದ ಮತ್ತು ಅಗಾಗ ಬರುವ ದುಃಸ್ವಪ್ನ ಬರಬಹುದಾಗಿದೆ. ಧೂಮಪಾನದಿಂದ ಒತ್ತಡ ಕಮ್ಮಿಯಾಗುತ್ತದೆ ಎನ್ನುವ ನಂಬಿಕೆ ಧೂಮಪಾನಿಗಳಲ್ಲಿ ಇರುತ್ತದೆ. ಹಾಗಾಗಿ ಧೂಮಪಾನ ಬಿಡುವುದು ಕೆಲವೊಮ್ಮೆ ಕಿರಿಕಿರಿಯಾಗುವ ಸಾಧ್ಯತೆಗಳಿರುತ್ತದೆ.
ಆದರೆ ಎಲ್ಲದಕ್ಕೂ ಮೇಲಾಗಿ ಧೂಮಪಾನ ಬಿಡುವ ನಿರ್ಧಾರ ನಿಮ್ಮ ಜೀವವನ್ನು ಉಳಿಸುತ್ತದೆ. ದೇಹವು ಧೂಮಪಾನ ರಹಿತ ಜೀವನಕ್ಕೆ ಒಗ್ಗಲು ಕೆಲವು ಕಾಲ ತೆಗೆದುಕೊಂಡರೂ, ಕೆಲವೊಂದು ಸೈಡ್ ಎಫೆಕ್ಟ್ ಇದ್ದರೂ ಧೂಮಪಾನ ತ್ಯಜಿಸುವುದು ಉತ್ತಮ. ಆರೋಗ್ಯಕರ ಜೀವನವು ಬೇಕಾದಲ್ಲಿ ಧೂಮಪಾನ ರಹಿತ ಜೀವನ ನಡೆಸುವುದು ಉತ್ತಮ.



Click it and Unblock the Notifications