Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಕ್ಯಾನ್ಸರ್ ತಡೆಯಲು ಮುನ್ನೆಚ್ಚರಿಕೆ ಕ್ರಮಗಳು!
ಪೋಲಿಯೋ ಬರದಂತೆ ತಡೆಯಲು ಚುಚ್ಚುಮದ್ದು ಇರುವಾಗೆ ಕ್ಯಾನ್ಸರ್ ಬರದಂತೆ ತಡೆಯಲು ಯಾವುದೇ ಚುಚ್ಚು ಮದ್ದಿಲ್ಲ. ಕ್ಯಾನ್ಸರ್ ಗೆ ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವವರೆಗೆ ಯಾರಿಗೆ ಬೇಕಾದರೂ ಬರಬಹುದು. ಕ್ಯಾನ್ಸರ್ ಬಂದ ಮೇಲೆ ಧೂಮಪಾನದಿಂದ ಕ್ಯಾನ್ಸರ್ ಬಂತು, ಹೊಟ್ಟೆಯಲ್ಲಿ ಗಡ್ಡೆ ಬಂದು ಕ್ಯಾನ್ಸರ್ ಉಂಟಾಗಿದೆ, ರಕ್ತ ಶುದ್ಧವಿಲ್ಲದೆ ಕ್ಯಾನ್ಸರ್ ಉಂಟಾಗಿದೆ ಹೀಗೆ ನಾನಾ ಕಾರಣಗಳನ್ನು ವೈದ್ಯರು ಹೇಳುತ್ತಾರೆ.
ಕ್ಯಾನ್ಸರ್ ಬರುವುದನ್ನು ತಡೆಯಲು ಮುಂಜಾಗ್ರತೆ ಕ್ರಮವಾಗಿ ಯಾವುದೇ ಚುಚ್ಚು ಮದ್ದು ಇಲ್ಲದಿದ್ದರೂ, ಕೆಲವು antioxidants ಆಹಾರಗಳಿವೆ. ಅವು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವುದರಲ್ಲಿ ಸಹಾಯ ಮಾಡುತ್ತದೆ. ನಮ್ಮ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು.
ಕ್ಯಾನ್ಸರ್ ಬಂದು ಕಷ್ಟ ಪಡುವ ಬದಲು, ಕ್ಯಾನ್ಸರ್ ಬರದಂತೆ ನಮ್ಮ ಕೈಯಲ್ಲಾಗುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲವೇ? ನನ್ನ ಮಾತು ನಿಮಗೂ ಸರಿಯೆನಿಸಿದರೆ ಮುಂದೆ ಓದಿ:

ಸಕ್ಕರೆಯಂಶ ಕಡಿಮೆ ತಿನ್ನಿ
ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಕಣಗಳಿರುತ್ತದೆ. ಅದಕ್ಕೆ ಬೂಸ್ಟ್ ನೀಡುವ ಆಹಾರ ತಿಂದರೆ ಕ್ಯಾನ್ಸರ್ ಕಣಗಳು ವೃದ್ಧಿಸಲಾರಂಭಿಸುತ್ತದೆ. ಶರ್ಕರ ಪದಾರ್ಥಗಳನ್ನು, ಸಿಹಿಯನ್ನು ಮಿತಿಯಲ್ಲಿ ತಿಂದರೆ ಯಾವುದೇ ಅಪಾಯವಿಲ್ಲ.

ಧೂಮಪಾನ
ಧೂಮಪಾನ ಚಟ ಕಲಿಯುವಾಗ ಖುಷಿ ಕೊಟ್ಟರೂ ನಂತರ ನಾನಾ ಆರೋಗ್ಯಕರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಲ್ಲೊಂದು ಶ್ವಾಸಕೋಶದ ಕ್ಯಾನ್ಸರ್.

ಗ್ರೀನ್ ಟೀ
ಗ್ರೀನ್ ಟೀಯಲ್ಲಿ antioxidants ಅಧಿಕವಿರುವುದರಿಂದ ಇವು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

ಮಿತಿಮೀರಿದ ಮದ್ಯಪಾನ
ಮಿತಿ ಮೀರಿದ ಮದ್ಯಪಾನದಿಂದ ಆರೋಗ್ಯ ಮಾತ್ರವಲ್ಲ, ಮನಸ್ಸಿನ ನೆಮ್ಮದಿ, ಮನೆಯವರ ನೆಮ್ಮದಿಯನ್ನು ಹಾಳು ಮಾಡುವುದು. ಮದ್ಯಪಾನ ಮಿತಿವಾಗಿ ಮಾಡಿದರೆ ಆರೋಗ್ಯಕರ, ಮಿತಿಮೀರಿದರೆ ಸರ್ವನಾಶ.

ಕೆಂಪು ಮಾಂಸ ತುಂಬಾ ತಿನ್ನದಿರುವುದು ಒಳ್ಳೆಯದು
ಕೆಂಪು ಮಾಂಸ ತಿನ್ನುವವರು ಮಿತಿಯಲ್ಲಿ ತಿಂದರೆ ಒಳ್ಳೆಯದು. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ.

ಮೀನು
ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮೀನನ್ನು ಫ್ರೈ ಮಾಡಿ ತಿನ್ನುವ ಬದಲು ಸಾರು ಮಾಡಿ ತಿಂದರೆ ಒಳ್ಳೆಯದು.

ಕೆಂಪು ದುಂಡು ಮೆಣಸು ಒಳ್ಳೆಯದು
ಕೆಂಪು ದುಂಡು ಮೆಣಸನ್ನು ಕ್ಯಾನ್ಸರ್ ರೋಗಿಗಳಿಗೆ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ, ಇದರಲ್ಲಿ ಲೈಕೋಪೆನೆ ಕ್ಯಾನ್ಸರ್ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.

ಮೊಬೈಲ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿ
ತಂತ್ರಜ್ಞಾನ ನಮ್ಮನ್ನು ಬೆಳೆಸುವಂತೆ ಅವುಗಳನ್ನು ಉಪಯೋಗಿಸಬೇಕು. ತುಂಬಾ ಹೊತ್ತು ಫೋನ್ ನಲ್ಲಿ ಮಾತನಾಡಿದರೆ ಮೆದುಳು ಕ್ಯಾನ್ಸರ್, ಕಿವುಡುತನ ಮುಂತಾದ ತೊಂದರೆ ಕಾಣಿಸಿಕೊಳ್ಳಬಹುದು.

ಬೆಳ್ಳುಳ್ಳಿ ತಿನ್ನುವುದು ತುಂಬಾ ಒಳ್ಳೆಯದು
ಬೆಳ್ಳುಳ್ಳಿ ಎಲ್ಲಾ ರೀತಿಯಲ್ಲೂ ಆರೋಗ್ಯಕರ. ಇದು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿ, ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

ಕೃತಕ ಆಹಾರದಿಂದ ದೂರವಿರಿ
ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರಗಳನ್ನು ತಿನ್ನಿ. ಮಾತ್ರೆಗಳನ್ನು ತಿನ್ನುವ ಬದಲು ಅವುಗಳಿರುವ ಆಹಾರಗಳನ್ನು ತಿನ್ನಿ.

ಮೈ ಬೆವರುವುದು ಒಳ್ಳೆಯದು
ಆಫೀಸ್ ನಲ್ಲಿ ಕುಳಿತು ಕೆಲಸ ಮಾಡುವವರಿಗೆ ಮೈ ಬೆವರುವುದು ಕಡಿಮೆ. ಇಂಥವರು ವ್ಯಾಯಾಮ ಮಾಡುವುದು ಅವಶ್ಯಕ. ವ್ಯಾಯಾಮ ಮಾಡುವುದರಿಂದ ದಿನಾಪೂರ್ತಿ ಲವಲವಿಕೆಯಿಂದ ಇರುವುದರ ಜೊತೆಗೆ ಅನೇಕ ಕಾಯಿಲೆಗಳು ನಿಮ್ಮಿಂದ ದೂರವಿರುವುದು.

ಕಡಿಮೆ ಗುಣ ಮಟ್ಟದ ಪ್ಲಾಸ್ಟಿಕ್ ಡಬ್ಬ ಬಳಸಬೇಡಿ
ನೀರು ಕುಡಿಯುವ ಬಾಟಲಿ, ಊಟದ ಡಬ್ಬ, ಆಹಾರ ಸಂಗ್ರಹಿಸುವ ಪ್ಲಾಸ್ಟಿಕ್ ಡಬ್ಬಗಳು ಗುಣ ಮಟ್ಟದಾಗಿರಲಿ. ಪ್ಲಾಸ್ಟಿಕ್ ಕ್ಕಿಂತ ಸ್ಟೀಲ್, ಗಾಜಿನ ಪಾತ್ರೆಗಳು ಒಳ್ಳೆಯದು.

ಪಪ್ಪಾಯಿ
ಪಪ್ಪಾಯಿ ಕೂಡ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಇತ್ತೀಚಿಗೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಇದರಲ್ಲಿ ಲೈಕೋಪೆನೆ ಅಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ತಪಾಸಣೆ
ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕೆಂದೇನು ಇಲ್ಲ. ಕಾಯಿಲೆ ಇಲ್ಲದಿದ್ದರೂ ಅಪರೂಪಕ್ಕೆ ವೈದ್ಯರನ್ನು ಕಂಡು ದೇಹ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಕೆಲ ಕಾಯಿಲೆಗಳು ಆರಂಭಿಕ ಹಂತದಲ್ಲಿ ಇರುವ ಕಾಯಿಲೆಗಳನ್ನು ತಿಳಿಯಲು ಈ ತಪಾಸಣೆ ನೆರವಿಗೆ ಬರುವುದು.

ಹಾನಿಕಾರಕ ಕಿರಣಗಳಿಂದ ದೂರವಿರಿ
ಸೂರ್ಯನ ನೇರಳಾತೀತ ಕಿರಣಗಳು, ಮೈಕ್ರೋವೇವ್ ನ ಕಿರಣಗಳು, ಮೊಬೈಲ್ ಪೋನ್ ಹೊರಸುಸುವ ಕಿರಣಗಳು ಕ್ಯಾನ್ಸರ್ ಕಣಗಳನ್ನು ವೃದ್ಧಿಸುತ್ತದೆ. ಆದ್ದರಿಂದ ಇಂತಹ ಕಿರಣಗಳಿಂದ ದೂರವಿರಲು ಪ್ರಯತ್ನಿಸಿ.



Click it and Unblock the Notifications











