Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಪುರುಷರಿಗಾಗಿ 8 ಶಕ್ತಿವರ್ಧಕ ಆಹಾರಗಳು
ಮನೆಯಲ್ಲಿ ಪುರುಷರಿಗೆ ಬೇರೆ ಅಡುಗೆ, ಮಹಿಳೆಯರಿಗೆ ಬೇರೆ ಅಡುಗೆ ಅಂತ ಮಾಡುವುದಿಲ್ಲ. ಮಾಡಿರುವ ಅಡುಗೆಯಲ್ಲಿ ತಮಗೆ ಬೇಕಾದ ಪ್ರಮಾಣದಷ್ಟು ಆಹಾರವನ್ನು ತಿನ್ನುತ್ತೇವೆ ಹೊರತು ಬಾಡಿ ಬಿಲ್ಡರ್ ಹೊರತು ಪಡಿಸಿ ಪ್ರತ್ಯೇಕ ಡಯಟ್ ಮಾಡುವವರು ತುಂಬಾ ಕಡಿಮೆ.
ಪುರುಷರ ದೇಹಕ್ಕೆ, ಮಹಿಳೆಯರ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಹಾಗೂ ಖನಿಜಾಂಶಗಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಮಹಿಳೆಯರಿಗೆ ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಅಧಿಕವಾಗಿ ಬೇಕಾಗಿರುವುದರಿಂದ ಅಂತಹ ಆಹಾರಗಳನ್ನು ತಿಂದರೆ ಒಳ್ಳೆಯದು , ಪುರುಷರಿಗೆ ಸತುವಿನಂಶ ಮತ್ತು ಪ್ರೊಟೀನ್ ಹೆಚ್ಚಿರುವ ಆಹಾರಗಳ ಸೇವನೆ ಅತ್ಯಗತ್ಯ. ಇಲ್ಲದಿದ್ದರೆ ನಿಶ್ಯಕ್ತಿ ಸಮಸ್ಯೆ ಕಾಡುವುದು.
ಪುರುಷರು ತಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಿದರೆ ದೇಹದ ಶಕ್ತಿ ವೃದ್ಧಿಸುವುದು:

ಮೊಟ್ಟೆ
ಇದರಲ್ಲಿ ಪ್ರೊಟೀನ್, ಸತು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇರುವುದರಿಂದ ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು.

ಸಾವಕ್ಕಿ
ಅನ್ನ, ಗೋಧಿಗೆ ಬದಲು ಸಾವಕ್ಕಿ ಬಳಸಿದರೆ ದೇಹಕ್ಕೆ ಅಗತ್ಯವಾದ ಪ್ರೊಟೀನ್ ದೊರೆಯುವುದು, ಇದು ದೇಹದಲ್ಲಿ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.

ಮೃದ್ವಂಗಿಗಳು
ಸಮುದ್ರಾಹಾರಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಅದರಲ್ಲೂ ಮೃದ್ವಂಗಿಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಮೃದ್ವಂಗಿಗಳಲ್ಲಿ ಸತುವಿನಂಶ ಮಾತ್ರವಲ್ಲ ಇತರ ಖನಿಜಾಂಶಗಳು ಕೂಡ ಇರುವುದರಿಂದ ಇದು ಆರೋಗ್ಯವನ್ನು ವೃದ್ಧಿಸುತ್ತದೆ.

ಬಾದಾಮಿ
ಬಾದಾಮಿ ಕೂಡ ಶಕ್ತಿ ವರ್ಧಕ ಆಹಾರವಾಗಿದ್ದು, ಇದನ್ನು ಮಹಿಳೆಯರು, ಪುರುಷರು, ಮಕ್ಕಳು ಎನ್ನುವ ಬೇಧವಿಲ್ಲದೆ ಎಲ್ಲರೂ ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ನೇರಳೆ ಹಣ್ಣು
ಕೆಲವೊಮ್ಮೆ ನಮ್ಮಆಲೋಚನಾ ಶಕ್ತಿ ಕುಂದಿದಂತೆ ಅನಿಸುವುದು. ಏಕಾಗ್ರತೆ ಕಡಿಮೆಯಾಗುವುದು, ಇದಕ್ಕೆ ಮಿದುಳಿನ ನರಗಳು ಬಳಲಿರುವುದು ಕೂಡ ಒಂದು ಕಾರಣ. ನೇರಳೆ ಹಣ್ಣಿಗೆ ಮಿದುಳಿನ ನರವನ್ನು ಚುರುಕುಗೊಳಿಸುವ ಸಾಮರ್ಥ್ಯ ಹೊಂದಿದೆ ಅನ್ನುವುದು ಗೊತ್ತಿದೆಯೇ?

ಸಿಹಿ ಗೆಣಸು
ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾದರೆ ತಲೆ ಸುತ್ತು ಕಂಡು ಬರುವುದು. ಈ ರೀತಿಯ ಸಮಸ್ಯೆ ಕಾಣಿಸಿದಾಗ ಕಾರ್ಬೋಹೈಡ್ರೇಟ್ ತಿನ್ನುವುದು ಒಳ್ಳೆಯದು. ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುದರಿಂದ ಇದನ್ನು ತಿಂದರೆ ರಕ್ತದಲ್ಲಿ ಕಡಿಮೆಯಾದ ಸಕ್ಕರೆಯಂಶವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗುವುದು.

ಮೀನು
ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ದೇಹಕ್ಕೆ ಅವಶ್ಯಕವಾದ ಕೊಬ್ಬಿನಂಶವಾಗಿದೆ. ಮಾಂಸಾಹಾರಿಗಳು ತಮ್ಮ ಆಹಾರಕ್ರಮದಲ್ಲಿ ಮೀನನ್ನು ಸೇರಿಸುವುದು ಒಳ್ಳೆಯದು.

ಕಾಫಿ
ಕಾಫಿ ಕುಡಿಯುವುದರ ಬಗ್ಗೆ ಅನೇಕ ವಾದ, ಪ್ರತಿವಾದಗಳಿವೆ. ಮಿತವಾಗಿ ಕಾಫಿ ಕುಡಿಯುವುದರಿಂದ ದೇಹದಲ್ಲಿ ಲವಲವಿಕೆ ತುಂಬುವುದು ಅನ್ನುವ ಅಂಶವನ್ನು ಅಲ್ಲಗಳೆಯುವಂತಿಲ್ಲ.



Click it and Unblock the Notifications