Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಬೇರಿನಲ್ಲಿ ಬೆಳೆಯುವ ಈ ತರಕಾರಿಗಳ ವಿಶೇಷತೆ ಏನು?
ನಾವು ಹೆಚ್ಚಿನ ತರಕಾರಿಗಳನ್ನು ಅದರ ಪ್ರಾಮುಖ್ಯತೆ ಅರಿಯದೆ ತಿನ್ನುತ್ತೇವೆ, ನಮಗೆ ಇಷ್ಟವಿಲ್ಲದ ತರಕಾರಿಯನ್ನು ತಿನ್ನದೆ ಕೆಲವೊಂದನ್ನು ದೂರವಿಡುತ್ತೇವೆ. ತರಕಾರಿಗಳಲ್ಲಿ 2 ವಿಧ. 1. ಭೂಮಿಯ ಕೆಳಗೆ ಬೆಳೆಯುವ ತರಕಾರಿ 2. ಭೂಮಿಯ ಮೇಲೆ ಬೆಳೆಯುವ ತರಕಾರಿ.
ಜೈನ್ ಧರ್ಮದವರು ಭೂಮಿಯ ಕೆಳಗೆ ಬೆಳೆದ ತರಕಾರಿಗಳನ್ನು ತಿನ್ನುವುದಿಲ್ಲ. ಅದಕ್ಕೆ ಕಾರಣ ಭೂಮಿಯ ಕೆಳಗೆ ಬೇರುಗಳಲ್ಲಿ ಬೆಳೆದ ತರಕಾರಿಯನ್ನು ಅದರ ಗಿಡವನ್ನು ಕಿತ್ತು ಆ ತರಕಾರಿಗಳನ್ನು ಕೀಳುತ್ತಾರೆ. ಹೀಗೆ ಮಾಡಿದಾಗ ಆ ಗಿಡ ಸಂಪೂರ್ಣವಾಗಿ ಸತ್ತು ಹೋಗುತ್ತದೆ, ಅದೇ ಭೂಮಿಯ ಮೇಲೆ ಬೆಳೆಯುವ ತರಕಾರಿಗಳನ್ನು ಮಾತ್ರ ಕೀಳುತ್ತೇವೆ. ಗಿಡ ಹಾಗೇ ಇರುತ್ತದೆ. ಆದ್ದರಿಂದಲೇ ಅಹಿಂಸೆ ತತ್ವ ಪಾಲಿಸುವವ ಜೈನ್ ಧರ್ಮದವರು ಭೂಮಿಯ ಕೆಳಗೆ ಬೆಳೆದ ತರಕಾರಿಗಳನ್ನು ತಿನ್ನುವುದಿಲ್ಲ.
ಎರಡು ಬಗೆಯ ತರಕಾರಿ ತಿನ್ನುವವರು ಬೇರಿನಲ್ಲಿ ಬೆಳೆಯುವ ತರಕಾರಿಗಳನ್ನು ದೂರ ಮಾಡಬೇಡಿ. ಏಕೆಂದರೆ ಇವುಗಳಲ್ಲಿ ಖನಿಜಾಂಶ, ಪೋಷಕಾಂಶ ಅಧಿಕವಾಗಿರುತ್ತದೆ. ಇಲ್ಲಿ ನಾವು ಭೂಮಿ ಕೆಳಗೆ ಬೆಳೆಯುವ ತರಕಾರಿಗಳಲ್ಲಿ ಯಾವೆಲ್ಲಾ ಪೋಷಕಾಂಶಗಳಿರುತ್ತದೆ ಎಂದು ಮಾಹಿತಿ ನೀಡಿದ್ದೇವೆ ನೋಡಿ:

ಬೀಟ್ ರೂಟ್
ಅನಿಮೀಯಾ ಅಥವಾ ರಕ್ತ ಹೀನತೆ ಸಮಸ್ಯೆ ಬೀಟ್ ರೂಟ್ ತಿಂದರೆ ಉಂಟಾಗುವುದಿಲ್ಲ. ಇದರಲ್ಲಿರುವ ಬೀಟಾ ಕೆರೋಟಿನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೂಕೋಲು
ಇದನ್ನು ತಿಂದರೆ ಹೃದಯಕ್ಕೆ ತುಂಬಾ ಒಳ್ಳೆಯದು, ಎದೆ ಉರಿ, ಹೊಟ್ಟೆ ಉರಿ ಸಮಸ್ಯೆ ಇರುವವರು ಇದನ್ನು ತಿನ್ನುವುದು ತುಂಬಾ ಒಳ್ಳೆಯದು.

ಆಲೂಗಡ್ಡೆ
ಹೆಚ್ಚಿನವರು ಆಲೂಗಡ್ಡೆ ಒಳ್ಳೆಯದಲ್ಲ ಎಂದು ಅದನ್ನು ತಿನ್ನುವುದಿಲ್ಲ. ಇದನ್ನು ಸಿಪ್ಪೆ ಸಹಿತ ತಿಂದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಈರುಳ್ಳಿ
ಇದರಲ್ಲಿ ಸತುವಿನಂಶ ಅಧಿಕವಾಗಿದೆ, ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ಮೂಲಂಗಿ
ಮೂಲವ್ಯಾಧಿಯಂತಹ ಕಾಯಿಲೆಯನ್ನು ಗುಣ ಪಡಿಸುವ ಸಾಮರ್ಥ್ಯ ಮೂಲಂಗಿಗೆ ಇದೆ. ಇದರ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೆಳ್ಳುಳ್ಳಿ
ಇದರಲ್ಲಿರುವ ಅಲಿಸಿನ್ (allicin) ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.

ಗುಡ್ಡ ಸೋಂಪಿನ ಗಿಡ
ಇದರಲ್ಲಿ ಫೋಲೆಟ್ ಅಂಶ ಅಧಿಕವಾಗಿದೆ. ಇದು ನರಗಳು ತನ್ನ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಶುಂಠಿ
ಶುಂಠಿ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿದೆ. ಪ್ರತಿನಿತ್ಯ ಅಡುಗೆಗೆ ಬಳಸಿದರೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

ಕ್ಯಾರೆಟ್
ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸಿಹಿ ಗೆಣಸು
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೂ ಒಳ್ಳೆಯದಲ್ಲ, ಅದೇ ರೀತಿ ಕಮ್ಮಿಯಾದರೂ ಪಾರ್ಶ್ವವಾಯು ಬರುವುದು. ದೇಹದಲ್ಲಿ ಸಕ್ಕರೆಯಂಶ ಕಡಿಮೆ ಇರುವವರು ಸಿಹಿ ಗೆಣಸು ತಿಂದರೆ ಸಕ್ಕರೆಯಂಶವನ್ನು ಕಡಿಮೆ ಪ್ರಮಾಣದಲ್ಲಿಡಬಹುದು. ಇದರಲ್ಲಿರುವ ವಿಟಮಿನ್ ಬಿ ನಮ್ಮ ದೇಹದಲ್ಲಿ ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡುತ್ತದೆ.

ಗೆಡ್ಡೆ ಗೆಣಸು
ಕೆಸ, ಹುತ್ತರಿ ಗೆಣಸು (ಮುಳ್ಳು ಗೆಣಸು), ಗೆಣಸು ಇವೆಲ್ಲಾ ಕೂಡ ಹೇರಳವಾದ ಖನಿಜಾಂಶ ಹೊಂದಿರುವ ತರಕಾರಿಯಾಗಿದೆ.



Click it and Unblock the Notifications