Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಸಕ್ಕರೆ ತಿನ್ನದವರಿಗೂ, ಬರಬಹುದು ಸಕ್ಕರೆ ಕಾಯಿಲೆ!
ವಿಶ್ವದಲ್ಲಿ 1/3 ಭಾಗದಷ್ಟು ಜನರು ಮಧುಮೇಹ ರೋಗದಿಂದ ನರಳುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಮಗೂ ಮಧುಮೇಹ ಬರಬಹುದೇ ಎಂಬ ಆತಂಕ ಹೆಚ್ಚಿನವರಲ್ಲಿದೆ. ನಮ್ಮ ಆಧುನಿಕ ಜೀವನ ಶೈಲಿ ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಅಲ್ಲದೆ ಇದರ ಬಗ್ಗೆ ನಮ್ಮಲ್ಲಿರುವ ಅನೇಕ ತಪ್ಪು ಕಲ್ಪನೆಗಳು ಕೂಡ ಮಧುಮೇಹ ಹೆಚ್ಚಾಗುತ್ತಿರಲು ಒಂದು ಕಾರಣವೆಂದು ಹೇಳಬಹುದು. ಈ ತಪ್ಪುಕಲ್ಪನೆಯಿಂದ ಹೊರಬರದೆ ಮಧುಮೇಹ ಬರದಂತೆ ಮುನ್ನೆಚ್ಚರಿಕೆಯಿಂದ ಇರಲು ಸಾಧ್ಯವಿಲ್ಲ.
ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಕೆಳಗಿನ ತಪ್ಪು ಕಲ್ಪನೆಯಿಂದ ದೂರವಿದ್ದರೆ ಮಾತ್ರ ಸಾಧ್ಯ.

ನಾನು ಸಿಹಿ ತಿನ್ನುವುದಿಲ್ಲ, ಆದ್ದರಿಂದ ಮಧುಮೇಹವಿರಲಿಲ್ಲ
ಮಧುಮೇಹ ಜೀವನ ಶೈಲಿಯಿಂದ ಬರುವ ಕಲೆಯಾಗಿದೆ. ಸಕ್ಕರೆ ತಿನ್ನುವುದಕ್ಕೆ, ಮಧುಮೇಹಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಮಧುಮೇಹ ಬಂದ ಮೇಲೆ ಸಕ್ಕರೆ ತಿನ್ನಬಾರದಷ್ಟೇ. ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರಗಳಿಂದ ದೂರವಿರಬೇಕು.

ಡಾಕ್ಟರ್ ಇನ್ಸುಲಿನ್ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ, ಮಧುಮೇಹದ ಕೊನೆಯ ಹಂತದಲ್ಲಿದ್ದೇನೆ
ಮಧುಮೇಹಕ್ಕೆ ಕ್ಯಾನ್ಸರ್ ಗೆ ಇರುವಂತೆ ಮೊದಲು ಹಂತ, ಕೊನೆಯ ಹಂತ ಅಂತ ಇರುವುದಿಲ್ಲ. ದೇಹದಲ್ಲಿರುವ ಸಕ್ಕರೆಯಂಶದಲ್ಲಿ ಮಾತ್ರ ಹೆಚ್ಚು, ಕಡಿಮೆಯಾಗುವ ಸಾಧ್ಯತೆ ಇದೆ. ಇನ್ಸುಲಿನ್ ತೆಗದುಕೊಂಡರೆ ಇತರರಂತೆ ಆರೋಗ್ಯವಂತರಾಗಿ ಇರಬಹುದು.

ನಾನು ಮಧುಮೇಹಿ, ಆದ್ದರಿಂದ ಕಾರ್ಬೋಹೈಟ್ರೇಟ್ ಇರುವ ಆಹಾರ ತಿನ್ನಲೇಬಾರದು
ಕಾರ್ಬೋಹೈಡ್ರೇಟ್ ನಮ್ಮ ದೇಹಕ್ಕೆ ಅವಶ್ಯಕವಾದ ಇಂಧನ. ಸ್ವಲ್ಪ ಕಾರ್ಬೋಹೈಟ್ರೇಟ್ ಇರುವ ಆಹಾರ ತಿನ್ನಬೇಕು. ವ್ಯಾಯಾಮ, ಯೋಗ ಮಾಡಿದರೆ ಸಾಕು ಆರೋಗ್ಯವಾಗಿಯೇ ಇರಬಹುದು.

ಸಿಹಿ ಇರುವ ಎಲ್ಲಾ ಆಹಾರಗಳಿಂದ ದೂರವಿರಬೇಕು
ಮಧುಮೇಹ ಇರುವವರು ಎಲ್ಲಾ ಸಿಹಿ ಆಹಾರಗಳಿಂದ ದೂರವಿರಬೇಕಾಗಿಲ್ಲ. ಸಿಹಿ ಕುಂಬಳಕಾಯಿ,ದ್ರಾಕ್ಷಿ, ದಾಳಿಂಬೆ, ಸ್ಟ್ರಾಬೆರಿ, ಸಿಹಿ ಗೆಣಸು ಈ ರೀತಿಯ ಆಹಾರಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಇವುಗಳನ್ನು ತಿನ್ನಬಹುದು.

ಮಧುಮೇಹಿಗಳು ಪಥ್ಯ ಊಟ ಮಾಡಬೇಕು
ಹಾಗೇನು ಇಲ್ಲ, ನೈಸರ್ಗಿಕವಾದ ಸಿಹಿ ಪದಾರ್ಥಗಳನ್ನು, ಜೇನನ್ನು ಆಹಾರದಲ್ಲಿ ಸೇರಿಸಿ ಬಾಯಿ ರುಚಿಯನ್ನು ಹೆಚ್ಚಿಸಬಹುದು.

ನನ್ನ ಕುಟುಂಬದಲ್ಲಿ ಯಾರಿಗೂ ಮಧುಮೇಹವಿಲ್ಲ, ಆದ್ದರಿಂದ ನಾನು ಸುರಕ್ಷಿತ
ಮಧುಮೇಹ ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಾಗಿದ್ದರೂ , ಮನೆಯಲ್ಲಿ ಯಾರಿಗೆ ಇಲ್ಲದಿದ್ದರೆ ನಿಮಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿನಿತ್ಯ ವ್ಯಾಯಾಮ ಮಾಡದಿದ್ದರೆ, ಒತ್ತಡದ ಜೀವನ ನಡೆಸುತ್ತಿದ್ದರೆ, ಅನಾರೋಗ್ಯಕರ ಜೀವನ ಶೈಲಿ ಇವುಗಳಿಂದ ಕೂಡ ಮಧುಮೇಹ ಬರಬಹುದು.

ನನಗೆ ಒಬೆಸಿಟಿ ಇಲ್ಲ, ಆದ್ದರಿಂದ ಒಬೆಸಿಟಿ ಬರುವುದಿಲ್ಲ
ಒಬೆಸಿಟಿ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು, ಹಾಗಂತ ಒಬೆಸಿಟಿ ಬರುವುದೇ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಮಧುಮೇಹ ಬಂದರೆ ತುಂಬಾ ತೆಳ್ಳಗಾಗುವಿರಿ. ಆದ್ದರಿಂದ ಆರೋಗ್ಯದ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಮಕ್ಕಳಿಗೆ ಟೈಪ್ 2 ಮಧುಮೇಹಬರುವುದಿಲ್ಲ
ಚಿಕ್ಕಮಕ್ಕಳಿಗೆ ಟೈಪ್ 1 ಮಧುಮೇಹ ಬರಬಹುದು, ಆದರೆ ಟೈಪ್ 2 ಮಧುಮೇಹ ಒಬೆಸಿಟಿ ಹಾಗೂ ಅಧಿಕ ಕುರುಕಲು ತಿಂಡಿ ತಿನ್ನುವ ಮಕ್ಕಳಿಗೆ ಬರಬಹುದು.

ಗರ್ಭಿಣಿಯಲ್ಲಿ ಮಧುಮೇಹ ಬಂದರೆ ತಾತ್ಕಲಿಕವಷ್ಟೇ
ಗರ್ಭಿಣಿಯಲ್ಲಿ ಮಧುಮೇಹ ಬಂದರೆ ಹೆರಿಗೆಯ ನಂತರ ಹೋಗುತ್ತದೆ ಅನ್ನುವುದು ನಿಜ. ಆದರೆ ಇದರಿಂದ ಹೆರಿಗೆಯ ಸಮಯದಲ್ಲಿ ತೊಂದರೆ ಉಂಟಾಗಬಹುದು. ಇಂತಹವರಿಗೆ ಟೈಪ್ 2 ಮಧುಮೇಹ ಬರಬಹುದು ಎಚ್ಚರಿಕೆವಹಿಸುವುದು ಒಳ್ಳೆಯದು.

ನಾನು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ, ಆದ್ದರಿಂದ ಏನು ಬೇಕಾದರೂ ತಿನ್ನಬಹುದು
ಇನ್ಸುಲಿನ್ ತೆಗೆದುಕೊಂಡರೂ ಆಹಾರಕ್ರಮದ ಬಗ್ಗೆ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ಇನ್ಸುಲಿನ್ ತೆಗೆದಿದ್ದಕ್ಕೆ ಪ್ರಯೋಜನ ದೊರೆಯುವುದಿಲ್ಲ.



Click it and Unblock the Notifications