Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ಸ್ವ ಚಿಕಿತ್ಸೆಯ ಅಡ್ಡ ಪರಿಣಾಮದ ಬಗ್ಗೆ ತಿಳಿದಿದೆಯೇ?
ಸ್ವಲ್ಪ ಮೈ ಬಿಸಿಯಾದರೆ, ತಲೆ ನೋವು ಶೀತ, ಕೆಮ್ಮು ಕಾಣಿಸಿಕೊಂಡರೆ ಈ ಚಿಕ್ಕ-ಪುಟ್ಟ ಕಾಯಿಲೆಗೆಲ್ಲಾ ಯಾರು ವೈದ್ಯರ ಹತ್ತಿರ ಹೋಗುತ್ತಾರೆ? ಎಂದು ಸ್ವಚಿಕಿತ್ಸೆ ಮಾಡಿಕೊಳ್ಳುವವರೇ ಹೆಚ್ಚು. ವೈದ್ಯರ ಸಲಹೆ ಪಡೆಯದೆ ವಿಟಮಿನ್ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳಬಾರದು, ಆದರೆ ಯಾರೂ ಇದರ ಬಗ್ಗೆ ಚಿಂತಿಸುವುದೇ ಇಲ್ಲ.
ತಲೆನೋವು ಕಾಣಿಸಿಕೊಂಡಾಗ ತಲೆನೋವಿನ ಮಾತ್ರೆ ನುಂಗಿದರೆ ಸ್ವಲ್ಪ ಹೊತ್ತಿಗೆಲ್ಲಾ ಕಮ್ಮಿಯಾಗುತ್ತದೆ, ಮತ್ತೆ ನಾವು ನಮ್ಮ ಕೆಲಸದತ್ತ ಗಮನ ಕೊಡುತ್ತೇವೆ, ಸ್ವಲ್ಪ ದಿನ ಬಿಟ್ಟು ತಲೆ ನೋವು ಕಾಣಿಸಿಕೊಂಡರೆ ಮತ್ತೆ ಮಾತ್ರೆ ನುಂಗುತ್ತೇವೆ. ಇದೇ ರೀತಿ ಎಲ್ಲಾ ಚಿಕ್ಕ ಪುಟ್ಟ ಕಾಯಿಲೆಗಳು ಕಾಣಿಸಿಕೊಂಡಾಗಲೂ ಮಾಡುತ್ತೇವೆ. ಈ ರೀತಿಯ ಸ್ವಚಿಕಿತ್ಸೆಯಿಂದ ಎಂತಹ ಅಪಾಯ ಉಂಟಾಗುವುದೆಂದು ನಿಮಗೆ ಗೊತ್ತೇ? ಸ್ವ ಚಿಕಿತ್ಸೆಯ ಅಡ್ಡ ಪರಿಣಾಮದ ಬಗ್ಗೆ ತಿಳಿಯಲು ಮುಂದೆ ಓದಿ:

ಕಾಯಿಲೆ ಏನೆಂದು ತಿಳಿಯುವುದಿಲ್ಲ
ಕೆಲವೊಮ್ಮೆ ಕಾಯಿಲೆ ಏನೆಂದು ತಿಳಿಯುವುದಿಲ್ಲ, ಕೊನೆಗೆ ಕಾಯಿಲೆ ತುಂಬಾ ಅಧಿಕವಾದಾಗ ವೈದ್ಯರ ಬಳಿ ಹೋದಾಗ ತಿಳಿಯುತ್ತದೆ. ಯಾವುದೇ ಕಾಯಿಲೆ ಇರಲಿ ಮೊದಲಿಗೆ ಗುರುತಿಸಿದರೆ ಗುಣ ಪಡಿಸುವುದು ಸುಲಭ ಹಾಗೂ ತಗುಲುವ ವೆಚ್ಛ ಕೂಡ ಕಡಿಮೆ ಅನ್ನುವುದನ್ನು ಮರೆಯದಿರಿ. ಆದ್ದರಿಂದ ಯಾವುದೇ ಕಾಯಿಲೆ ಆದರೂ ನಿರ್ಲಕ್ಷ್ಯ ಮಾಡಬೇಡಿ.

ಸರಿಯಾದ ಪ್ರಮಾಣದ ಡೋಸೇಜ್ ಗೊತ್ತಾಗುವುದಿಲ್ಲ
ಡೋಸೇಜ್ ನಲ್ಲಿ ವ್ಯತ್ಯಾಸವಾದರೆ ಶರೀರದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಡೋಸೇಜ್ ಜಾಸ್ತಿಯಾದರೆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಸರಿಯಾದ ಪ್ರಮಾಣದ ಡೋಸೇಜ್ ತೆಗೆದುಕೊಳ್ಳಲು ವೈದ್ಯರ ಸಲಹೆ ಮೇರೆಗಷ್ಟೇ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು.

ಚಟವಾಗಿ ಬಿಡುತ್ತದೆ
ಕೆಲವರಿಗೆ ಸ್ವಚಿಕಿತ್ಸೆ ಒಂದು ಚಟವಾಗಿ ಬಿಡುತ್ತದೆ. ಹೇಗೆಂದರೆ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವ ಚಟವಿರುತ್ತದೆ. ಕೆಲವೊಮ್ಮೆ ಸ್ವಚಿಕಿತ್ಸೆ ಮಾಡಿ, ವೈದ್ಯರು ನೀಡುವ ಔಷಧಿಗೆ ನಮ್ಮ ದೇಹ ಪ್ರತಿಸ್ಪಂದಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.

ವ್ಯತಿರಿಕ್ತ ಪರಿಣಾಮ ಬೀರಬಹುದು
ಕೆಲವೊಮ್ಮೆ ಒಂದು ಕಾಯಿಲೆಯನ್ನು ಗುಣ ಪಡಿಸಲು ತೆಗೆದುಕೊಂಡ ಔಷಧಿ ಮತ್ತೊಂದು ಸಮಸ್ಯೆ ಇರಬಹುದು. ಕೆಲವೊಂದು ಔಷಧಿಯನ್ನು ತೆಗೆದುಕೊಳ್ಳುವಾಗ ಕೆಲವೊಂದು ಆಹಾರಗಳನ್ನು ತಿನ್ನಬಾರದು. ಮತ್ತೆ ಒಬ್ಬರಿಗೆ ಜ್ವರ ಅಂತ ಔಷಧಿಯನ್ನು ಮನೆಯಲ್ಲಿ ಮತ್ತೊಬ್ಬರಿಗೆ ಜ್ವರ ಕಾಣಿಸಿದಾಗ ಕೊಡಬೇಡಿ. ಅಡ್ಡ ಪರಿಣಾಮ ಉಂಟಾಗಬಹುದು.

ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆ ಇರುವವರು
ಇವರಂತೂ ಯಾವುದೇ ಔಷಧಿಯನ್ನು ವೈದ್ಯರ ಸಲಹೆಯಿಲ್ಲದೆ ಸ್ವಚಿಕಿತ್ಸೆ ಮಾಡುವ ಸಾಹಸ ಮಾಡದಿರುವುದು ಒಳ್ಳೆಯದು.

ಗರ್ಭಿಣಿಯರು
ಗರ್ಭಿಣಿಯರು ವಾಂತಿ, ತಲೆ ನೋವು ಹೀಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಔಷಧಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ವಿಟಮಿನ್ ಮಾತ್ರೆಗಳು
ವಿಟಮಿನ್ ಮಾತ್ರೆಗಳು ಆರೋಗ್ಯಕರವಾದರೂ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳಬೇಡಿ. ಏಕೆಂದರೆ ದೇಹದಲ್ಲಿ ವಿಟಮಿನ್ ಅಂಶ ಅಧಿಕವಾದರೂ ತೊಂದರೆಗಳು ಕಾಣಿಸಿಕೊಳ್ಳುವುದು.



Click it and Unblock the Notifications











