Just In
Don't Miss
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋರೆಕಾಯಿಯಲ್ಲಿದೆ ಅನೇಕ ಆರೋಗ್ಯಕರ ಗುಣಗಳು
ಸೋರೆಕಾಯಿ ಅಧಿಕ ನೀರಿನಂಶ ಹೊಂದಿರುವ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಕೆಲವು ನಿರ್ಧಿಷ್ಟ ಕಾಯಿಲೆಗಳನ್ನು ಹೋಗಲಾಡಿಸಲು ಸೋರೆಕಾಯಿಯಯನ್ನು ಮದ್ದಾಗಿ ಉಪಯೋಗಿಸುತ್ತಾರೆ.
ಸೋರೆಕಾಯಿ ಸೂಪ್ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದರಿಂದ ಮೈ ಬೊಜ್ಜು ಕಡಿಮೆ ಮಾಡುವವರು ಈ ಸೂಪ್ ಕುಡಿಯುವುದು ಒಳ್ಳೆಯದು. ಸೋರೆಕಾಯಿಯಲ್ಲಿರುವ ಇತರ ಪ್ರಮುಖ ಪ್ರಯೋಜನಗಳನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:
ಅಜೀರ್ಣ ಸಮಸ್ಯೆ ಹೋಗಲಾಡಿಸುತ್ತದೆ
ಕೆಲವೊಮ್ಮೆ ಮಿತಿ ಮೀರಿ ತಿಂದು ಬಿಡುತ್ತೇವೆ. ಹೀಗೆ ತಿಂದಾಗ ಅಜೀರ್ಣ ಸಮಸ್ಯೆ ಉಂಟಾದರೆ ಅದನ್ನು ಹೋಗಲಾಡಿಸಲು ಸೋರೆಕಾಯಿಯ ಸೂಪ್ ಕುಡಿದರೆ ಸಾಕು.
ಇನ್ಸುಲಿನ್ ನ ಸಮತೋಲನಕ್ಕೆ
ಇನ್ಸುಲಿನ್ ಅನ್ನು ಸಮತೋಲನದಲ್ಲಿಡುವಲ್ಲಿ ಸೋರೆಕಾಯಿ ತುಂಬಾ ಪ್ರಯೋಜನಕಾರಿ. ಮಧುಮೇಹಿಗಳು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬಹುದು.
ದೇಹದ ಉಷ್ಣತೆ ಹೆಚ್ಚಾದಾಗ
ಜ್ವರ ಬಂದಾಗ ದೇಹದ ಉಷ್ಣತೆ ಹೆಚ್ವಾಗುವುದು. ಹೆಚ್ಚಾದ ಮೈ ಉಷ್ಣತೆ ಸೋರೆಕಾಯಿ ಸೂಪ್ ಕುಡಿದರೆ ಕಡಿಮೆಯಾಗುವುದು.
ಮೈತೂಕ ಕಮ್ಮಿ ಮಾಡಲು
ಮೈ ತೂಕ ಕಮ್ಮಿ ಮಾಡ ಬಯಸುವವರು ದಿನಾ ಎರಡು ಕಪ್ ಸೋರೆಕಾಯಿ ಸೂಪ್ ಕುಡಿದರೆ ಮೈ ತೂಕ ಬೇಗನೆ ಕಮ್ಮಿಯಾಗುವುದು.
ಲಿವರ್ ನ ಆರೋಗ್ಯಕ್ಕೆ
ಲಿವರ್ ನ ಆರೋಗ್ಯ ಹೆಚ್ಚಿಸುವ ಗುಣ ಸೋರೆಕಾಯಿಯಲ್ಲಿದೆ. ಇದು ಹೊಟ್ಟೆಯಲ್ಲಿ ಉರಿ, ಲಿವರ್ ನ ತೊಂದರೆ ಮುಂತಾದ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಡಯಾಲಿಸಿಸ್ ಮಾಡಿಸುವವರಿಗೆ ಉತ್ತಮ ಆಹಾರ
ಡಯಾಲಿಸಿಸ್ ಮಾಡಿಸುವವರು ಈ ಖಾದ್ಯವನ್ನು ತಿಂದರೆ ದೇಹಕ್ಕೆ ಶಕ್ತಿಯನ್ನು ನೀಡಿ, ಸುಸ್ತನ್ನು ನಿವಾರಿಸುತ್ತದೆ.
ಬೇಧಿ ಹೋಗಲಾಡಿಸುತ್ತದೆ
ಬೇಧಿ ಕಾಣಿಸಿದರೆ ಸೋರೆಕಾಯಿಯನ್ನು ರುಬ್ಬಿ, ಅದನ್ನು ಜ್ಯೂಸ್ ಮಾಡಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಬೇಧಿ ನಿಂತ ಮೇಲೂ 3 ದಿನ ಈ ಜ್ಯೂಸ್ ಕುಡಿಯಿರಿ. ಇದರಿಂದ ಬೇಧಿ ಸಂಪೂರ್ಣವಾಗಿ ನಿಂತು ಹೋಗುತ್ತದೆ, ಸುಸ್ತೂ ಕಡಿಮೆಯಾಗುವುದು.
ನಿದ್ರಾಹೀನತೆ
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮಲಗುವ ಒಂದು ಗಂಟೆ ಮೊದಲು ಕುಡಿಯಿರಿ. ಇದು ನಿಮಗೆ ಸುಖ ನಿದ್ದೆ ಬರುವಂತೆ ಮಾಡುತ್ತದೆ.
ಮಲಬದ್ಧತೆ
ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಇದು ಸಹಕಾರಿಯಾಗಿದೆ. ಇದರಲ್ಲಿ ನೀರಿನಂಶ ಮತ್ತು ನಾರಿನಂಶ ಅಧಿಕವಿರುವುದರಿಂದ ಇದನ್ನು ತಿಂದರೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.
ಮೂತ್ರ ಉರಿ ತಡೆಗಟ್ಟುತ್ತದೆ
ಮೂತ್ರ ಉರಿ ಸಮಸ್ಯೆಯನ್ನು ಹೋಗಲಾಡಿಸಲು ಸೋರೆಕಾಯಿಯನ್ನು ಬೇಯಿಸಿ ತಿಂದರೆ ಸಾಕು. ಇದರ ಜ್ಯೂಸ್ ಕೂಡ ತುಂಬಾ ಪರಿಣಾಮಕಾರಿ.