Latest Updates
-
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು?
ಪ್ರಕೃತಿಯ ನಂಟಿನಿಂದ ಹೆಚ್ಚುವ ಆರೋಗ್ಯ!

ವ್ಯಾಯಾಮ ಮಾಡಿದರೆ ಆರೋಗ್ಯ ಹೆಚ್ಚುತ್ತದೆ ನಿಜ ಆದರೆ ಅದೇ ವ್ಯಾಯಾಮವನ್ನು ಹಸಿರು ವನಗಳ ನಡುವೆ ಅಥವಾ ಪಾರ್ಕಿನಲ್ಲಿ ಮಾಡಿದರೆ ಉತ್ತಮವಾದ ಪ್ರಯೋಜನ ಕಾಣಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ:
ಕಣ್ಣಿನ ದೃಷ್ಟಿಗೆ ಒಳ್ಳೆಯದು: ಹುಲ್ಲಿನ ಮೇಲೆ ಬರೀಗಾಲಿನಲ್ಲಿ ನಡೆದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಶೂ ಧರಿಸಬಾರದು. ಬರಿಗಾಲಿನಲ್ಲಿ ನಡೆದರೆ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ಮುಂಜಾನೆ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದು ಒಳ್ಳೆಯದು.
ಒತ್ತಡನ್ನು ಕಡಿಮೆ ಮಾಡುತ್ತದೆ: ರೋಡ್ ನಲ್ಲಿ ನಡೆದರೆ ಅದೇ ಕಟ್ಟಡ, ಗಾಡಿ, ಹಾರ್ನ್ ಶಬ್ದ. ಅದರ ಬದಲು ಪಾರ್ಕಿಗೆ ಹೋದರೆ ಅಲ್ಲಿಯ ಹಸಿರು ಮನಸ್ಸಿಗೆ ಮುದ ನೀಡುತ್ತದೆ. ತೋಟದಲ್ಲಿ ಅಡ್ಡಾಡಿದರೆ ಪ್ರಕೃತಿ ಸೌಂದರ್ಯ ನೋಡುತ್ತಾ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ: ಗಿಡಗಳು ತಮ್ಮನ್ನು ಕೀಟಗಳು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು 'phytoncides' ಎಂಬ ಅಂಶವನ್ನು ಹೊರಹಾಕುತ್ತವೆ. ತೋಟದ ನಡುವೆ ಅಥವಾ ಗಿಡಗಳ ನಡುವೆ ನಡೆದಾಗ ಇದು ನಮ್ಮ ದೇಹ ಸೇರುತ್ತದೆ. ಇವುಗಳು ದೇಹದಲ್ಲಿರುವ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ ಗಿಡಗಳ ನಡುವೆ ಅರ್ಧ ಗಂಟೆ ನಡೆದರೆ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು.
ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದು: ಹಸಿರು ಗಿಡಗಳ ನಡುವೆ ನಡೆಯುತ್ತಿದ್ದರೆ ಮನಸ್ಸಿನಲ್ಲಿ ಏನೇ ದುಃಖ, ಒತ್ತಡವಿದ್ದರೂ ಅವುಗಳು ಮರೆತು ಹೋಗುತ್ತವೆ, ಹೂ ಅರಳಿ ನಿಂತಿರುವ ಮರಗಳನ್ನು ನೋಡಿದಾಗ ಮನಸ್ಸು ಅದರ ಸೌಂದರ್ಯ ಸವಿಯುವುದರಲ್ಲಿಯೇ ಮಗ್ನವಾಗುತ್ತದೆ. ಆದ್ದರಿಂದಲೇ ರೋಗಿಗಳನ್ನು ಹಸಿರು ಪರಿಸರಕ್ಕೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಕೂರಿಸಲು ವೈದ್ಯರು ಸಲಹೆ ನೀಡುತ್ತಾರೆ. ಖಿನ್ನತೆಯಿಂದ ಬಳಲುವವರನ್ನು ಹಸಿರು ಗಿಡಗಳ ನಡುವೆ ಪ್ರದಿ ದಿನ ಅರ್ಧ ಗಂಟೆ ನಡೆಯುವ ವ್ಯಾಯಾಮ ಮಾಡಿಸಿದರೆ ಅವರು ಖಿನ್ನತೆಯಿಂದ ಹೊರಬರಲು ಸಹಾಯವಾಗುತ್ತದೆ.
ಅಷ್ಟೇ ಏಕೆ ಕೆಲಸ, ಮನೆ ಎಂಬ ಜಂಜಾಟದ ಬದುಕು ಸಾಕಾದಾಗ ಕೆಲಸಕ್ಕೆ 2-3 ಬ್ರೇಕ್ ಹಾಕಿ ಪ್ರಕೃತಿ ತಾಣಗಳಿಗೆ ಹೋಗಿ ಬಂದರೆ ಮನಸ್ಸಿಗೆ ನವ ಚೈತನ್ಯ ತುಂಬುತ್ತದೆಯಲ್ಲವೇ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











