Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಪ್ರಕೃತಿಯ ನಂಟಿನಿಂದ ಹೆಚ್ಚುವ ಆರೋಗ್ಯ!

ವ್ಯಾಯಾಮ ಮಾಡಿದರೆ ಆರೋಗ್ಯ ಹೆಚ್ಚುತ್ತದೆ ನಿಜ ಆದರೆ ಅದೇ ವ್ಯಾಯಾಮವನ್ನು ಹಸಿರು ವನಗಳ ನಡುವೆ ಅಥವಾ ಪಾರ್ಕಿನಲ್ಲಿ ಮಾಡಿದರೆ ಉತ್ತಮವಾದ ಪ್ರಯೋಜನ ಕಾಣಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ:
ಕಣ್ಣಿನ ದೃಷ್ಟಿಗೆ ಒಳ್ಳೆಯದು: ಹುಲ್ಲಿನ ಮೇಲೆ ಬರೀಗಾಲಿನಲ್ಲಿ ನಡೆದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಶೂ ಧರಿಸಬಾರದು. ಬರಿಗಾಲಿನಲ್ಲಿ ನಡೆದರೆ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ಮುಂಜಾನೆ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದು ಒಳ್ಳೆಯದು.
ಒತ್ತಡನ್ನು ಕಡಿಮೆ ಮಾಡುತ್ತದೆ: ರೋಡ್ ನಲ್ಲಿ ನಡೆದರೆ ಅದೇ ಕಟ್ಟಡ, ಗಾಡಿ, ಹಾರ್ನ್ ಶಬ್ದ. ಅದರ ಬದಲು ಪಾರ್ಕಿಗೆ ಹೋದರೆ ಅಲ್ಲಿಯ ಹಸಿರು ಮನಸ್ಸಿಗೆ ಮುದ ನೀಡುತ್ತದೆ. ತೋಟದಲ್ಲಿ ಅಡ್ಡಾಡಿದರೆ ಪ್ರಕೃತಿ ಸೌಂದರ್ಯ ನೋಡುತ್ತಾ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ: ಗಿಡಗಳು ತಮ್ಮನ್ನು ಕೀಟಗಳು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು 'phytoncides' ಎಂಬ ಅಂಶವನ್ನು ಹೊರಹಾಕುತ್ತವೆ. ತೋಟದ ನಡುವೆ ಅಥವಾ ಗಿಡಗಳ ನಡುವೆ ನಡೆದಾಗ ಇದು ನಮ್ಮ ದೇಹ ಸೇರುತ್ತದೆ. ಇವುಗಳು ದೇಹದಲ್ಲಿರುವ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ ಗಿಡಗಳ ನಡುವೆ ಅರ್ಧ ಗಂಟೆ ನಡೆದರೆ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು.
ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದು: ಹಸಿರು ಗಿಡಗಳ ನಡುವೆ ನಡೆಯುತ್ತಿದ್ದರೆ ಮನಸ್ಸಿನಲ್ಲಿ ಏನೇ ದುಃಖ, ಒತ್ತಡವಿದ್ದರೂ ಅವುಗಳು ಮರೆತು ಹೋಗುತ್ತವೆ, ಹೂ ಅರಳಿ ನಿಂತಿರುವ ಮರಗಳನ್ನು ನೋಡಿದಾಗ ಮನಸ್ಸು ಅದರ ಸೌಂದರ್ಯ ಸವಿಯುವುದರಲ್ಲಿಯೇ ಮಗ್ನವಾಗುತ್ತದೆ. ಆದ್ದರಿಂದಲೇ ರೋಗಿಗಳನ್ನು ಹಸಿರು ಪರಿಸರಕ್ಕೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಕೂರಿಸಲು ವೈದ್ಯರು ಸಲಹೆ ನೀಡುತ್ತಾರೆ. ಖಿನ್ನತೆಯಿಂದ ಬಳಲುವವರನ್ನು ಹಸಿರು ಗಿಡಗಳ ನಡುವೆ ಪ್ರದಿ ದಿನ ಅರ್ಧ ಗಂಟೆ ನಡೆಯುವ ವ್ಯಾಯಾಮ ಮಾಡಿಸಿದರೆ ಅವರು ಖಿನ್ನತೆಯಿಂದ ಹೊರಬರಲು ಸಹಾಯವಾಗುತ್ತದೆ.
ಅಷ್ಟೇ ಏಕೆ ಕೆಲಸ, ಮನೆ ಎಂಬ ಜಂಜಾಟದ ಬದುಕು ಸಾಕಾದಾಗ ಕೆಲಸಕ್ಕೆ 2-3 ಬ್ರೇಕ್ ಹಾಕಿ ಪ್ರಕೃತಿ ತಾಣಗಳಿಗೆ ಹೋಗಿ ಬಂದರೆ ಮನಸ್ಸಿಗೆ ನವ ಚೈತನ್ಯ ತುಂಬುತ್ತದೆಯಲ್ಲವೇ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications