Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಕಣ್ಣಿಗೆ ಲೇಸರ್ ಸರ್ಜರಿ ಸುರಕ್ಷತವೇ?

ವಿಜ್ಞಾನ ಬೆಳದಂತೆ ಸೌಲಭ್ಯಗಳು ಬೆಳೆದಿದೆ. ಲೇಸರ್ ಚಿಕಿತ್ಸೆ, ಲೆನ್ಸ್ ಮುಂತಾದ ಸೌಲಭ್ಯಗಳಿವೆ. ಆದರೆ ಇವುಗಳು ಒಳಿತಿನ ಜೊತೆ, ಅಡ್ಡ ಪರಿಣಾಮವನ್ನೂ ಬೀರಬಹುದು. 2012ರ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂಧ್ರಾರವರೆಗೆ ಶೂಟಿಂಗ್ ನಲ್ಲಿ ಪರಾಜಯವಾಗಲೂ ಅವರಿಗೆ ನಡೆಸಿದ್ದ ಲೇಸರ್ ಲೆನ್ಸ್ ಸರ್ಜರಿ ಕೂಡ ಒಂದು ಕಾರಣ ಎಂದು ಹೇಳಲಾಗುತ್ತದೆ. ಕಣ್ಣಿಗೆ ಲೇಸರ್ ಚಿಕಿತ್ಸೆಯಿಂದ ಕಣ್ಣಿನ ದಷ್ಟಿ ಹೆಚ್ಚಾಗುವ ಬದಲು ಕೆಲವೊಮ್ಮೆ ಅಡ್ಡಪರಿಣಾಮ ಉಂಟಾಗಿ ದೃಷ್ಟಿ ದೋಷ ಕಡಿಮೆಯಾಗಬಹುದು. ಈ ರೀತಿ ಅಡ್ಡ ಪರಿಣಾಮ ಉಂಟಾಗಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.
ಚಿಕಿತ್ಸೆ ಯಾವಾಗ ಮಾಡಿಸಬೇಕು?
ಸೃಷ್ಟಿ ದೋಷ -7ಕ್ಕಿಂತ ಕಡಿಮೆ ಇದ್ದರೆ ಮಾತ್ರ ಈ ರೀತಿಯ ಲೇಸರ್ ಚಿಕಿತ್ಸೆ ಮಾಡಿಸಬಹುದು. ಕನ್ನಡಕ ಇಲ್ಲದೆ ನೋಡಲು ಸಾಧ್ಯವಿವೇ ಇಲ್ಲ ಎಂಬ ಪರಿಸ್ಥಿತಿಯಿದ್ದರೆ ಈ ರೀತಿಯ ಸರ್ಜರಿಯಿಂದ ಪ್ರಯೋಜನ ಪಡೆಯಬಹುದು. ಚಿಕ್ಕ ಪುಟ್ಟ ಕಣ್ಣಿನ ದೋಷವಿದ್ದರೆ ಕನ್ನಡಕ ಧರಿಸುವುದೇ ಒಳ್ಳೆಯದು. ಏಕೆಂದರೆ ಲೇಸರ್ ಚಿಕಿತ್ಸೆ ಮಾಡಿಸಿದರೆ , ಒಂದು ವೇಳೆ ಈ ಚಿಕಿತ್ಸೆಯಿಂದ ಅಡ್ಡ ಪರಿಣಾಮ ಉಂಟಾದರೆ ನಷ್ಟ ಪರಿಹಾರ ಕೂಡ ಸಿಗುವುದಿಲ್ಲ.
ಕಣ್ಣು ಒಣಗುವುದು: ಲೇಸರ್ ಚಿಕಿತ್ಸೆ ಮಾಡಿಸಿದರೆ ದೃಷ್ಟಿ ಮಂಜಾಗುವುದು. ಇದರಿಂದ ಕಣ್ಣಿನಲ್ಲಿರುವ ನೈಸರ್ಗಿಕವಾದ ತೇವಾಂಶ ಕಡಿಮೆಯಾಗುವುದು.
ಕಣ್ಣಿಗೆ ಲೇಸರ್ ಚಿಕಿತ್ಸೆ ಮಾಡಿಸುವ ಮೊದಲು ಕನ್ನಡಕದ ಮುಖಾಂತರ ವಸ್ತುಗಳನ್ನು ನೋಡುತ್ತಿರುತ್ತೇವೆ.ಆದರೆ ಲೇಸರ್ ಚಿಕಿತ್ಸೆ ನಂತರ ಇದ್ದಕ್ಕಿದ್ದ ಹಾಗೆ 20:20 ದೃಷ್ಟಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ಅಭಿನವ್ ಬಿಂಧ್ರಾಗೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಡಾ. ಆಸ್ಲೇ ಥಾಮಸ್ ಜಾಕಬ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ಲೇಸರ್ ಚಿಕಿತ್ಸೆಗೆ ಮಾಡಿದರೆ ಕಣ್ಣಿನ ಮೇಕಪ್ ಮಾಡಲು ಸಾಧ್ಯವಿಲ್ಲ. ಲೇಸರ್ ಚಿಕಿತ್ಸೆಯಲ್ಲಿ ಏನಾದರೂ ದೋಷ ಆಗಿದ್ದರೆ ದೃಷ್ಟಿ ಹೆಚ್ಚಾಗುವ ಬದಲು ಮತ್ತಷ್ಟು ಕಡಿಮೆಯಾಗುತ್ತದೆ. ಕಣ್ಣಿನಲ್ಲಿ ಏನೋ ಬಿದ್ದಂತೆ ಅನುಭವವಾಗುತ್ತದೆ, ವಸ್ತುಗಳನ್ನು ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಲೇಸರ್ ಚಿಕಿತ್ಸೆ ಮಾಡುವುದಾದರೆ ತುಂಬಾ ಪರಿಣಿತಿಯನ್ನು ಪಡೆದ ವೈದ್ಯರ ಹತ್ತಿರ ಲೇಸರ್ ಚಿಕಿತ್ಸೆ ಮಾಡಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











