Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಖಾರಗಳನ್ನು ತಿನ್ನದಿದ್ದರೆ ಆರೋಗ್ಯಕ್ಕೆ ನಷ್ಟ
ಊಟಕ್ಕೆ ಸ್ವಲ್ಪ ಖಾರವಿದ್ದರೆ ಮಾತ್ರ ಊಟ ರುಚಿಸುವುದು. ಆದರೆ ಕೆಲವರು ಖಾರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ತುಂಬಾ ಖಾರ ತಿಂದರೆ ಹೊಟ್ಟೆ ಉರಿ ಕಾಣಿಸಿಕೊಳ್ಳುವುದು. ಆದರೆ ದೇಹದ ಆರೋಗ್ಯಕ್ಕೆ ಸ್ವಲ್ಪವಾದರೂ ಖಾರ ತಿನ್ನಬೇಕು! ಯಾವ ಬಗೆಯ ಖಾರದ ಸಾಮಾಗ್ರಿಗಳು ಆರೋಗ್ಯಕ್ಕೆ ಒಳ್ಳೆಯದು ಮತ್ತು ಅದು ಏಕೆ ಒಳ್ಳೆಯದು ಎಂಬ ಅಂಶಗಳನ್ನು ಇಲ್ಲಿ ನೀಡಲಾಗಿದೆ ನೋಡಿ:

ದೊಡ್ಡ ಮೆಣಸಿನ ಕಾಯಿ: ಕೆಂಪು ಮೆಣಸಿನ ಕಾಯಿ antioxidants ಗುಣವನ್ನು ಹೊಂದಿದ್ದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುವುದರ ಜೊತೆಗೆ ಡಯಾರಿಯಾ ರೋಗದ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ. ಆಹಾರ ವಿಷಮಯವಾದರೆ (ಫುಟ್ ಪಾಯಿಷನ್) ದೊಡ್ಡ ಮೆಣಸಿನ ಕಾಯಿ ತಿನ್ನುವುದು ಒಳ್ಳೆಯದು.
ಅರಿಶಿಣ: ಯಾವುದೇ ಆಹಾರವಾಗಿರಲಿ ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿದರೆ ಆಹಾರದ ರುಚಿ ಹೆಚ್ಚಾಗುವುದು. ಇದು ಆಹಾರದ ರುಚಿಯಷ್ಟೇ ಅಲ್ಲ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಗಂಟಲಿನಲ್ಲಿ ಕೆರತ ಉಂಟಾದರೆ ಬಿಸಿ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಸಾಕು ಕೂಡಲೇ ನಿವಾರಣೆ ಆಗುವುದು. ಗಾಯಗಳು ಉಂಟಾದರೆ ಬೇಗನೆ ಒಣಗಲು, ಜೀರ್ಣಕ್ರಿಯೆ ಸುಲಭವಾಗಿ ಆಗಲು, ದೇಹದಲ್ಲಿರುವ ಕಷ್ಮಲಗಳನ್ನು ತೆಗೆದು ಹಾಕಲು ಅರಿಶಿಣ ಸಹಾಯ ಮಾಡುತ್ತದೆ. ಅರಿಶಿಣ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ.
ಬೆಳ್ಳುಳ್ಳಿ: ಹೊಟ್ಟೆಗೆ ಏನಾದರೂ ಸೋಂಕು ತಾಗಿದ್ದರೆ ಬೆಳ್ಳುಳ್ಳಿ ತಿಂದರೆ ಗುಣಮುಖವಾಗುವುದು. ಇದನ್ನು ಟೀಯಲ್ಲಿ ಹಾಕಿ ಕುಡಿದರೆ ತಲೆ ನೋವು ತಕ್ಷಣ ಕಡಿಮೆಯಾಗುತ್ತದೆ. ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಖಿನ್ನತೆಯನ್ನು ಹೋಗಲಾಡಿಸುವಲ್ಲಿ ಬೆಳ್ಳುಳ್ಳಿ ಸಹಕರಿಯಾಗಿದೆ.
ಕೆಂಪು ಮೆಣಸಿನ ಕಾಯಿ: ದೇಹದಲ್ಲಿರುವ ಕಷ್ಮಲಗಳನ್ನು ಹೋಗಲಾಡಿಸುವಲ್ಲಿ ಕೆಂಪು ಮೆಣಸಿನಕಾಯಿ ತುಂಬಾ ಸಹಕಾರಿಯಾಗಿದೆ.
ಚಕ್ಕೆ: ಚಕ್ಕೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ. ಅಜೀರ್ಣ ಸಮಸ್ಯೆ ಇದ್ದರೆ ಟೀಗೆ ಚಕ್ಕೆ ಹಾಕಿ ಕುಡಿದರೆ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಲ್ಲು ನೋವು ಉಂಟಾದರೆ ಚಕ್ಕೆ ಪುಡಿ ಮಾಡಿ ಸ್ವಲ್ಪ ಹೊತ್ತು ಹಲ್ಲಿನಲ್ಲಿಟ್ಟರೆ ನೋವು ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications