Just In
Don't Miss
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Movies Bhagyalakshmi: ಶ್ರೇಷ್ಠಾ-ತಾಂಡವ್ ಮದುವೆಗೆ ಕುಸುಮಾ ಹಾರೈಕೆ; ಸತ್ಯ ಗೊತ್ತಾದ್ರೆ ಐತೆ ಮಾರಿ ಹಬ್ಬ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಟ್ಟ ಗಾಯಗಳಾದಾಗ ಪ್ರಥಮ ಚಿಕಿತ್ಸೆ ಹೀಗಿರಲಿ
ತಣ್ಣೀರು ಹಾಕುವುದು: ಸಣ್ಣ ಪುಟ್ಟ ಸುಟ್ಟಗಾಯಗಳಾದರೂ ಕೂಡ ಪ್ರಥಮ ಚಿಕಿತ್ಸೆಯಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ ತಣ್ಣೀರನ್ನು ಹಾಕುವುದು. ಉರಿ ಸ್ವಲ್ಪ ಕಡಿಮೆಯಾಗುವವರೆಗೆ ನೀರು ಹಾಕಬೇಕು. ಮೈ ಸುಟ್ಟುಕೊಂಡಿದ್ದರೆ ಸುಟ್ಟ ಬಟ್ಟೆಗಳನ್ನು ಮೈಯಿಂದ ಹಾಗೇ ಎಳೆದು ತೆಗೆಯಬಾರದು. ಬಟ್ಟೆ ಎಳೆದು ತೆಗೆದದರೆ ಬಟ್ಟೆ ಜೊತೆ ಚರ್ಮ ಕೂಡ ಕಿತ್ತುಕೊಂಡು ಬರುತ್ತದೆ. ಅದರ ಬದಲು ಮೈಗೆ ತುಂಬಾ ನೀರು ಹಾಕಬೇಕು.
ಟೂತ್ ಪೇಸ್ಟ್: ಟೂತ್ ಪೇಸ್ಟ್ಯನ್ನು ಹಲ್ಲುಜ್ಜಲು ಅಷ್ಟೆ ಅಲ್ಲ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಬಳಸಬಹುದು. ಸುಟ್ಟಗಾಯಾಗಳಾದಾಗ ಟೂತ್ ಪೇಸ್ಟ್ ಹಚ್ಚಿದರೆ ಅದು ಗಾಯ ಗುಳ್ಳೆಗಳಾಗುವುದನ್ನು ತಡೆಯುತ್ತದೆ. ಅಲ್ಲದೆ ಗಾಯದ ಉರಿ ಕೂಡ ಕಡಿಮೆಯಾಗುತ್ತದೆ.
ಲೋಷನ್: ಸುಟ್ಟಗಾಯಾಗಳಾದಾಗ ಯಾವುದೇ ರೀತಿಯ ಲೋಷನ್ ಹಚ್ಚಬಾರದು. ಈ ರೀತಿ ಹಚ್ಚಿದರೆ ಗಾಯ ಮತ್ತಷ್ಟು ಹೆಚ್ಚಾಗುವುದು. ಸುಟ್ಟಗಾಯಾಗಳಾದಾಗ ಬ್ಯಾಂಡೇಜ್ ಸುತ್ತುವುದು ಕೂಡ ಒಳ್ಳೆಯದಲ್ಲ. ಸುಟ್ಟ ಗಾಯಗಳು ಗಾಳಿಗೆ ತೆರೆದುಕೊಂಡಿದ್ದರೆ ಚರ್ಮಕ್ಕೆ ಉಸಿರಾಟಕ್ಕೆ ಅನುಕೂಲವಾಗುತ್ತದೆ.
ಗಾಬರಿ ಬೀಳುವುದು:ಆಕಸ್ಮಿಕ ಬೆಂಕಿ ಕಾಣಿಸಿಕೊಂಡರೆ ಗಾಬರಿ ಬೀಳುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗುವುದು. ಬೆಂಕಿ ಮೈಹಚ್ಚಿಕೊಂಡಾಗ ಓಡಾಡಿದರೆ ಅಕ್ಕಪಕ್ಕದಲ್ಲಿ ಬೆಂಕಿ ಹರಡಿ, ಬೆಂಕಿ ಕೆಡುವುದರ ಬದಲು ಮತ್ತಷ್ಟು ಹೆಚ್ಚಾಗುವುದು. ಈ ಸಮಯದಲ್ಲಿ ನೆಲದಲ್ಲಿ ಮಲಗಿ ಹೊರಳಾಡಬೇಕು. ನಂತರ ಸಹಾಯಕ್ಕಾಗಿ ಕೂಗಿ, ಸಹಾಯ ಮಾಡಲು ಬಂದವರು ನೀರು ಅಥವಾ ಬ್ಲಾಂಕೆಟ್ ಹಾಕಿ ಬೆಂಕಿಯನ್ನು ನಂದಿಸುವಂತೆ ಹೇಳಿ. ಅವರು ಅವಸರದಿಂದ ಬಟ್ಟೆ ಎಳೆದರೆ ಚರ್ಮ ಕಿತ್ತು ಗಾಯದೊಡ್ಡದಾಗುವ ಸಾಧ್ಯತೆ ಹೆಚ್ಚು.
ವೈದ್ಯರನ್ನು ಸಂಪರ್ಕಿಸುವುದು: ನಂತರ ಸುಟ್ಟಗಾಯವಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಆಸ್ಪತ್ರೆಗೆ ಕೊಂಡೊಯ್ಯುವಾಗ ಬಟ್ಟೆಯೆಲ್ಲಾ ಸುತ್ತಿಕೊಂಡು ಕೊಂಡೊಯ್ಯಬೇಡಿ. ಚರ್ಮಕ್ಕೆ ಗಾಳಿಯಾಡುವಂತೆ ಇದ್ದರೆ ಉರಿ ಸ್ವಲ್ಪ ಕಡಿಮೆಯಾಗುವುದು.