Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸುಟ್ಟ ಗಾಯಗಳಾದಾಗ ಪ್ರಥಮ ಚಿಕಿತ್ಸೆ ಹೀಗಿರಲಿ

ತಣ್ಣೀರು ಹಾಕುವುದು: ಸಣ್ಣ ಪುಟ್ಟ ಸುಟ್ಟಗಾಯಗಳಾದರೂ ಕೂಡ ಪ್ರಥಮ ಚಿಕಿತ್ಸೆಯಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ ತಣ್ಣೀರನ್ನು ಹಾಕುವುದು. ಉರಿ ಸ್ವಲ್ಪ ಕಡಿಮೆಯಾಗುವವರೆಗೆ ನೀರು ಹಾಕಬೇಕು. ಮೈ ಸುಟ್ಟುಕೊಂಡಿದ್ದರೆ ಸುಟ್ಟ ಬಟ್ಟೆಗಳನ್ನು ಮೈಯಿಂದ ಹಾಗೇ ಎಳೆದು ತೆಗೆಯಬಾರದು. ಬಟ್ಟೆ ಎಳೆದು ತೆಗೆದದರೆ ಬಟ್ಟೆ ಜೊತೆ ಚರ್ಮ ಕೂಡ ಕಿತ್ತುಕೊಂಡು ಬರುತ್ತದೆ. ಅದರ ಬದಲು ಮೈಗೆ ತುಂಬಾ ನೀರು ಹಾಕಬೇಕು.
ಟೂತ್ ಪೇಸ್ಟ್: ಟೂತ್ ಪೇಸ್ಟ್ಯನ್ನು ಹಲ್ಲುಜ್ಜಲು ಅಷ್ಟೆ ಅಲ್ಲ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಬಳಸಬಹುದು. ಸುಟ್ಟಗಾಯಾಗಳಾದಾಗ ಟೂತ್ ಪೇಸ್ಟ್ ಹಚ್ಚಿದರೆ ಅದು ಗಾಯ ಗುಳ್ಳೆಗಳಾಗುವುದನ್ನು ತಡೆಯುತ್ತದೆ. ಅಲ್ಲದೆ ಗಾಯದ ಉರಿ ಕೂಡ ಕಡಿಮೆಯಾಗುತ್ತದೆ.
ಲೋಷನ್: ಸುಟ್ಟಗಾಯಾಗಳಾದಾಗ ಯಾವುದೇ ರೀತಿಯ ಲೋಷನ್ ಹಚ್ಚಬಾರದು. ಈ ರೀತಿ ಹಚ್ಚಿದರೆ ಗಾಯ ಮತ್ತಷ್ಟು ಹೆಚ್ಚಾಗುವುದು. ಸುಟ್ಟಗಾಯಾಗಳಾದಾಗ ಬ್ಯಾಂಡೇಜ್ ಸುತ್ತುವುದು ಕೂಡ ಒಳ್ಳೆಯದಲ್ಲ. ಸುಟ್ಟ ಗಾಯಗಳು ಗಾಳಿಗೆ ತೆರೆದುಕೊಂಡಿದ್ದರೆ ಚರ್ಮಕ್ಕೆ ಉಸಿರಾಟಕ್ಕೆ ಅನುಕೂಲವಾಗುತ್ತದೆ.
ಗಾಬರಿ ಬೀಳುವುದು:ಆಕಸ್ಮಿಕ ಬೆಂಕಿ ಕಾಣಿಸಿಕೊಂಡರೆ ಗಾಬರಿ ಬೀಳುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗುವುದು. ಬೆಂಕಿ ಮೈಹಚ್ಚಿಕೊಂಡಾಗ ಓಡಾಡಿದರೆ ಅಕ್ಕಪಕ್ಕದಲ್ಲಿ ಬೆಂಕಿ ಹರಡಿ, ಬೆಂಕಿ ಕೆಡುವುದರ ಬದಲು ಮತ್ತಷ್ಟು ಹೆಚ್ಚಾಗುವುದು. ಈ ಸಮಯದಲ್ಲಿ ನೆಲದಲ್ಲಿ ಮಲಗಿ ಹೊರಳಾಡಬೇಕು. ನಂತರ ಸಹಾಯಕ್ಕಾಗಿ ಕೂಗಿ, ಸಹಾಯ ಮಾಡಲು ಬಂದವರು ನೀರು ಅಥವಾ ಬ್ಲಾಂಕೆಟ್ ಹಾಕಿ ಬೆಂಕಿಯನ್ನು ನಂದಿಸುವಂತೆ ಹೇಳಿ. ಅವರು ಅವಸರದಿಂದ ಬಟ್ಟೆ ಎಳೆದರೆ ಚರ್ಮ ಕಿತ್ತು ಗಾಯದೊಡ್ಡದಾಗುವ ಸಾಧ್ಯತೆ ಹೆಚ್ಚು.
ವೈದ್ಯರನ್ನು ಸಂಪರ್ಕಿಸುವುದು: ನಂತರ ಸುಟ್ಟಗಾಯವಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಆಸ್ಪತ್ರೆಗೆ ಕೊಂಡೊಯ್ಯುವಾಗ ಬಟ್ಟೆಯೆಲ್ಲಾ ಸುತ್ತಿಕೊಂಡು ಕೊಂಡೊಯ್ಯಬೇಡಿ. ಚರ್ಮಕ್ಕೆ ಗಾಳಿಯಾಡುವಂತೆ ಇದ್ದರೆ ಉರಿ ಸ್ವಲ್ಪ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
