Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಸುಟ್ಟ ಗಾಯಗಳಾದಾಗ ಪ್ರಥಮ ಚಿಕಿತ್ಸೆ ಹೀಗಿರಲಿ

ತಣ್ಣೀರು ಹಾಕುವುದು: ಸಣ್ಣ ಪುಟ್ಟ ಸುಟ್ಟಗಾಯಗಳಾದರೂ ಕೂಡ ಪ್ರಥಮ ಚಿಕಿತ್ಸೆಯಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ ತಣ್ಣೀರನ್ನು ಹಾಕುವುದು. ಉರಿ ಸ್ವಲ್ಪ ಕಡಿಮೆಯಾಗುವವರೆಗೆ ನೀರು ಹಾಕಬೇಕು. ಮೈ ಸುಟ್ಟುಕೊಂಡಿದ್ದರೆ ಸುಟ್ಟ ಬಟ್ಟೆಗಳನ್ನು ಮೈಯಿಂದ ಹಾಗೇ ಎಳೆದು ತೆಗೆಯಬಾರದು. ಬಟ್ಟೆ ಎಳೆದು ತೆಗೆದದರೆ ಬಟ್ಟೆ ಜೊತೆ ಚರ್ಮ ಕೂಡ ಕಿತ್ತುಕೊಂಡು ಬರುತ್ತದೆ. ಅದರ ಬದಲು ಮೈಗೆ ತುಂಬಾ ನೀರು ಹಾಕಬೇಕು.
ಟೂತ್ ಪೇಸ್ಟ್: ಟೂತ್ ಪೇಸ್ಟ್ಯನ್ನು ಹಲ್ಲುಜ್ಜಲು ಅಷ್ಟೆ ಅಲ್ಲ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಬಳಸಬಹುದು. ಸುಟ್ಟಗಾಯಾಗಳಾದಾಗ ಟೂತ್ ಪೇಸ್ಟ್ ಹಚ್ಚಿದರೆ ಅದು ಗಾಯ ಗುಳ್ಳೆಗಳಾಗುವುದನ್ನು ತಡೆಯುತ್ತದೆ. ಅಲ್ಲದೆ ಗಾಯದ ಉರಿ ಕೂಡ ಕಡಿಮೆಯಾಗುತ್ತದೆ.
ಲೋಷನ್: ಸುಟ್ಟಗಾಯಾಗಳಾದಾಗ ಯಾವುದೇ ರೀತಿಯ ಲೋಷನ್ ಹಚ್ಚಬಾರದು. ಈ ರೀತಿ ಹಚ್ಚಿದರೆ ಗಾಯ ಮತ್ತಷ್ಟು ಹೆಚ್ಚಾಗುವುದು. ಸುಟ್ಟಗಾಯಾಗಳಾದಾಗ ಬ್ಯಾಂಡೇಜ್ ಸುತ್ತುವುದು ಕೂಡ ಒಳ್ಳೆಯದಲ್ಲ. ಸುಟ್ಟ ಗಾಯಗಳು ಗಾಳಿಗೆ ತೆರೆದುಕೊಂಡಿದ್ದರೆ ಚರ್ಮಕ್ಕೆ ಉಸಿರಾಟಕ್ಕೆ ಅನುಕೂಲವಾಗುತ್ತದೆ.
ಗಾಬರಿ ಬೀಳುವುದು:ಆಕಸ್ಮಿಕ ಬೆಂಕಿ ಕಾಣಿಸಿಕೊಂಡರೆ ಗಾಬರಿ ಬೀಳುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗುವುದು. ಬೆಂಕಿ ಮೈಹಚ್ಚಿಕೊಂಡಾಗ ಓಡಾಡಿದರೆ ಅಕ್ಕಪಕ್ಕದಲ್ಲಿ ಬೆಂಕಿ ಹರಡಿ, ಬೆಂಕಿ ಕೆಡುವುದರ ಬದಲು ಮತ್ತಷ್ಟು ಹೆಚ್ಚಾಗುವುದು. ಈ ಸಮಯದಲ್ಲಿ ನೆಲದಲ್ಲಿ ಮಲಗಿ ಹೊರಳಾಡಬೇಕು. ನಂತರ ಸಹಾಯಕ್ಕಾಗಿ ಕೂಗಿ, ಸಹಾಯ ಮಾಡಲು ಬಂದವರು ನೀರು ಅಥವಾ ಬ್ಲಾಂಕೆಟ್ ಹಾಕಿ ಬೆಂಕಿಯನ್ನು ನಂದಿಸುವಂತೆ ಹೇಳಿ. ಅವರು ಅವಸರದಿಂದ ಬಟ್ಟೆ ಎಳೆದರೆ ಚರ್ಮ ಕಿತ್ತು ಗಾಯದೊಡ್ಡದಾಗುವ ಸಾಧ್ಯತೆ ಹೆಚ್ಚು.
ವೈದ್ಯರನ್ನು ಸಂಪರ್ಕಿಸುವುದು: ನಂತರ ಸುಟ್ಟಗಾಯವಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಆಸ್ಪತ್ರೆಗೆ ಕೊಂಡೊಯ್ಯುವಾಗ ಬಟ್ಟೆಯೆಲ್ಲಾ ಸುತ್ತಿಕೊಂಡು ಕೊಂಡೊಯ್ಯಬೇಡಿ. ಚರ್ಮಕ್ಕೆ ಗಾಳಿಯಾಡುವಂತೆ ಇದ್ದರೆ ಉರಿ ಸ್ವಲ್ಪ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications