Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಆಪ್ತಸಲಹೆ: ಸಂಬಂಧ ಮುರಿದು ಹೋದರೆ ಹೀಗೆ ಮಾಡಿ

* ಒಂಟಿಯಾಗಿರಬೇಡಿ. ಹೊರಗಡೆ ಸುತ್ತಾಡಲು ಹೋಗಿ. ಸ್ನೇಹಿತರನ್ನು ಭೇಟಿಯಾಗಿ. ಮುಚ್ಚುಮರೆಯಿಲ್ಲದೇ ಎಲ್ಲಾ ಹೇಳಿಕೊಳ್ಳಿ. ಹಗುರಾಗಿ.
* ಹೊರಗಡೆ ಪಾರ್ಟಿಗೆ ಹೋಗಿ. ಜೀವನವೇ ಮುಗಿದು ಹೋದಂತೆ ಕೊರಗದಿರಿ. ಸಂಬಂಧ ಮುರಿದಾಕ್ಷಣ ನಿಮ್ಮ ಬದುಕಿನ ಬೆಳಕೆಲ್ಲವೂ ಅಂತ್ಯವಾದಂತೆ ಭಾವಿಸದಿರಿ. ಇಂತಹ ಕ್ಷಣದಲ್ಲಿ ಧೂಮಪಾನ ಮತ್ತು ಕುಡಿತಗಳಿಗೆ ಬಲಿಯಾಗಬೇಡಿ. ಕಾಲಕ್ಕೆ ಎಲ್ಲವನ್ನು ಮರೆಸುವ ಶಕ್ತಿಯಿದೆ. ಅಲ್ಲಿವರೆಗೆ ಕಾಯಿರಿ.
* ಶಾಪಿಂಗ್ ಗೆ ಹೋಗಿ. ಇದು ಮಹಿಳೆಯರಿಗೆ ಹೆಚ್ಚು ಸೂಕ್ತ. ಹೊಸ ಬಟ್ಟೆ ಖರೀದಿಸಿರಿ.
* ಸುಮ್ಮನೆ ಬಟ್ಟೆ ಬದಲಾಯಿಸಿ. ಹೇರ್ ಸ್ಟೈಲ್ ಬದಲಾಯಿಸಿ ನೋಡಿ. ನಿಮ್ಮನ್ನು ನೀವು ವಿಭಿನ್ನ ರೂಪದಲ್ಲಿ ನೋಡಿಕೊಳ್ಳಿ. ಮನಸ್ಸಿನಲ್ಲಿಯೇ ಬಿಟ್ಟುಹೋದವರಿಗೆ ದಿಕ್ಕಾರ ಹೇಳಿ.
* ನೋವಿನ, ರೋಮಾಂಟಿಕ್ ಹಾಡುಗಳನ್ನು ಕೇಳದಿರಿ. ಇಂತಹ ಹಾಡುಗಳು ಭಾವನಾತ್ಮಕವಾಗಿ ನಿಮ್ಮನ್ನು ಹೆಚ್ಚು ಘಾಸಿಗೊಳಿಸುತ್ತವೆ.
* ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಂದರೆ ಈಜುವುದು, ಆಟವಾಡುವುದು ಇತ್ಯಾದಿ. ಸುಮ್ಮನೆ ಕುಳಿತು ಧೇನಿಸಲು ಸಮಯವಿಲ್ಲದಂತೆ ನೋಡಿಕೊಳ್ಳಿ. ಕೆಲಸವಿಲ್ಲದ ತಲೆ ಪಿಶಾಚಿಗಳ ಗೂಡಾಗುತ್ತದೆ. ಕಳೆದು ಹೋದ ಪ್ರೀತಿಯನ್ನು ಇತರ ಚಟುವಟಿಕೆಗಳಲ್ಲಿ ಮರೆಯಿರಿ.
* ಆರೋಗ್ಯಕರ ಫ್ಲರ್ಟ್ ಮಾಡಿ. ಇದು ಪುರುಷರಿಗೆ ಹೆಚ್ಚು ಉಪಯುಕ್ತ. ಪ್ರಿಯತಮೆ ಕೈಬಿಟ್ಟು ಹೋದ ಸಂದರ್ಭದಲ್ಲಿ ಆತ್ಮೀಯ ಗೆಳತಿಯರೊಂದಿಗೆ ಕಳೆಯಬಹುದು.
* ಅವನು/ಅವಳು ಬಿಟ್ಟು ಹೋದರೇನಂತೆ. ಬದುಕು ಇನ್ನೂ ಇದೆ. ಪ್ರೀತಿಸೋ ಅಪ್ಪ ಅಮ್ಮ, ಆತ್ಮೀಯರನ್ನು ನೆನಪಿಸಿಕೊಳ್ಳಿ.
* ನಿಮ್ಮನ್ನು ನೀವು ಪ್ರೀತಿಸಿ. ಪ್ರೀತಿ ಹಾಳಾಗಲು ನೀವೇ ಕಾರಣವೆಂದು ಕೊರಗಬೇಡಿ. ಕಳೆದುಹೋದ ಕ್ಷಣಕ್ಕೆ ಚಿಂತಿಸಿ ಏನೂ ಪ್ರಯೋಜನ.
* ಹೆತ್ತವರೊಂದಿಗೆ ಹೃದಯಬಿಚ್ಚಿ ಮಾತನಾಡಬಹುದು. ಅಳುವುದನ್ನು, ಕೊರಗುವುದನ್ನು ನಿಲ್ಲಿಸಿ. ಭಗ್ನಹೃದಯದಲ್ಲಿ ನೋವು ಮರೆಯಾಗಲಿ. ಹೊಸ ಹಕ್ಕಿ ಕೂಗಲಿ. ಮನಸ್ಸು ಹಗುರವಾಗಿಸಲು ಪ್ರಯತ್ನಿಸಿ. ಸಂಬಂಧ ಮುರಿದು ಹೋದವರಿಗೆ ದಿಕ್ಕಾರ ಹಾಕಿ ಬದುಕಿ ತೋರಿಸಿ. ಆಲ್ ದಿ ಬೆಸ್ಟ್.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications