Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಆಪ್ತಸಲಹೆ: ಸಂಬಂಧ ಮುರಿದು ಹೋದರೆ ಹೀಗೆ ಮಾಡಿ

* ಒಂಟಿಯಾಗಿರಬೇಡಿ. ಹೊರಗಡೆ ಸುತ್ತಾಡಲು ಹೋಗಿ. ಸ್ನೇಹಿತರನ್ನು ಭೇಟಿಯಾಗಿ. ಮುಚ್ಚುಮರೆಯಿಲ್ಲದೇ ಎಲ್ಲಾ ಹೇಳಿಕೊಳ್ಳಿ. ಹಗುರಾಗಿ.
* ಹೊರಗಡೆ ಪಾರ್ಟಿಗೆ ಹೋಗಿ. ಜೀವನವೇ ಮುಗಿದು ಹೋದಂತೆ ಕೊರಗದಿರಿ. ಸಂಬಂಧ ಮುರಿದಾಕ್ಷಣ ನಿಮ್ಮ ಬದುಕಿನ ಬೆಳಕೆಲ್ಲವೂ ಅಂತ್ಯವಾದಂತೆ ಭಾವಿಸದಿರಿ. ಇಂತಹ ಕ್ಷಣದಲ್ಲಿ ಧೂಮಪಾನ ಮತ್ತು ಕುಡಿತಗಳಿಗೆ ಬಲಿಯಾಗಬೇಡಿ. ಕಾಲಕ್ಕೆ ಎಲ್ಲವನ್ನು ಮರೆಸುವ ಶಕ್ತಿಯಿದೆ. ಅಲ್ಲಿವರೆಗೆ ಕಾಯಿರಿ.
* ಶಾಪಿಂಗ್ ಗೆ ಹೋಗಿ. ಇದು ಮಹಿಳೆಯರಿಗೆ ಹೆಚ್ಚು ಸೂಕ್ತ. ಹೊಸ ಬಟ್ಟೆ ಖರೀದಿಸಿರಿ.
* ಸುಮ್ಮನೆ ಬಟ್ಟೆ ಬದಲಾಯಿಸಿ. ಹೇರ್ ಸ್ಟೈಲ್ ಬದಲಾಯಿಸಿ ನೋಡಿ. ನಿಮ್ಮನ್ನು ನೀವು ವಿಭಿನ್ನ ರೂಪದಲ್ಲಿ ನೋಡಿಕೊಳ್ಳಿ. ಮನಸ್ಸಿನಲ್ಲಿಯೇ ಬಿಟ್ಟುಹೋದವರಿಗೆ ದಿಕ್ಕಾರ ಹೇಳಿ.
* ನೋವಿನ, ರೋಮಾಂಟಿಕ್ ಹಾಡುಗಳನ್ನು ಕೇಳದಿರಿ. ಇಂತಹ ಹಾಡುಗಳು ಭಾವನಾತ್ಮಕವಾಗಿ ನಿಮ್ಮನ್ನು ಹೆಚ್ಚು ಘಾಸಿಗೊಳಿಸುತ್ತವೆ.
* ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಂದರೆ ಈಜುವುದು, ಆಟವಾಡುವುದು ಇತ್ಯಾದಿ. ಸುಮ್ಮನೆ ಕುಳಿತು ಧೇನಿಸಲು ಸಮಯವಿಲ್ಲದಂತೆ ನೋಡಿಕೊಳ್ಳಿ. ಕೆಲಸವಿಲ್ಲದ ತಲೆ ಪಿಶಾಚಿಗಳ ಗೂಡಾಗುತ್ತದೆ. ಕಳೆದು ಹೋದ ಪ್ರೀತಿಯನ್ನು ಇತರ ಚಟುವಟಿಕೆಗಳಲ್ಲಿ ಮರೆಯಿರಿ.
* ಆರೋಗ್ಯಕರ ಫ್ಲರ್ಟ್ ಮಾಡಿ. ಇದು ಪುರುಷರಿಗೆ ಹೆಚ್ಚು ಉಪಯುಕ್ತ. ಪ್ರಿಯತಮೆ ಕೈಬಿಟ್ಟು ಹೋದ ಸಂದರ್ಭದಲ್ಲಿ ಆತ್ಮೀಯ ಗೆಳತಿಯರೊಂದಿಗೆ ಕಳೆಯಬಹುದು.
* ಅವನು/ಅವಳು ಬಿಟ್ಟು ಹೋದರೇನಂತೆ. ಬದುಕು ಇನ್ನೂ ಇದೆ. ಪ್ರೀತಿಸೋ ಅಪ್ಪ ಅಮ್ಮ, ಆತ್ಮೀಯರನ್ನು ನೆನಪಿಸಿಕೊಳ್ಳಿ.
* ನಿಮ್ಮನ್ನು ನೀವು ಪ್ರೀತಿಸಿ. ಪ್ರೀತಿ ಹಾಳಾಗಲು ನೀವೇ ಕಾರಣವೆಂದು ಕೊರಗಬೇಡಿ. ಕಳೆದುಹೋದ ಕ್ಷಣಕ್ಕೆ ಚಿಂತಿಸಿ ಏನೂ ಪ್ರಯೋಜನ.
* ಹೆತ್ತವರೊಂದಿಗೆ ಹೃದಯಬಿಚ್ಚಿ ಮಾತನಾಡಬಹುದು. ಅಳುವುದನ್ನು, ಕೊರಗುವುದನ್ನು ನಿಲ್ಲಿಸಿ. ಭಗ್ನಹೃದಯದಲ್ಲಿ ನೋವು ಮರೆಯಾಗಲಿ. ಹೊಸ ಹಕ್ಕಿ ಕೂಗಲಿ. ಮನಸ್ಸು ಹಗುರವಾಗಿಸಲು ಪ್ರಯತ್ನಿಸಿ. ಸಂಬಂಧ ಮುರಿದು ಹೋದವರಿಗೆ ದಿಕ್ಕಾರ ಹಾಕಿ ಬದುಕಿ ತೋರಿಸಿ. ಆಲ್ ದಿ ಬೆಸ್ಟ್.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications