Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉರಿ ಬಿಸಿಲು: ಈ 5 ಆಹಾರ ಸೇವಿಸಬೇಡಿ, ದೇಹ ತಂಪಾಗಿಸಲು ಈ 10 ಆಹಾರ ದಿನನಿತ್ಯ ಬಳಸಿ
ಈ ವರ್ಷ ಬೇಸಿಗೆ ಉಳಿದೆಲ್ಲಾ ಬೇಸಿಗೆಯಂತಲ್ಲ, ಬಿರು ಬಿಸಿಲು.... ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ತುಂಬಾನೇ ಇದೆ. ಸಂಜೆಯಾದರೆ ಬಿಸಿ ಗಾಳಿ ಕಡಿಮೆಯಾಗಿರಲ್ಲ. ಅಬ್ಬಾ ಎಂಥ ಸೆಕೆ ಎಂದು ಹೇಳುವವರೇ ಎಲ್ಲರೂ.... ಇಂಥ ಬೇಸಿಗೆ ಇರುವವರು ಮಕ್ಕಳು-ದೊಡ್ಡವರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.

ನಿಮ್ಮ ಆರೋಗ್ಯವನ್ನು ಕಾಪಾಡಲು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ನೀವು ದೇಹವನ್ನು ತಂಪಾಗಿಸುವ ಆಹಾರ ಸೇವಿಸಬೇಕು, ಆದರೆ ಈ ಆಹಾರ ಸೇವಿಸಲೇಬೇಡಿ...
1. ಜಂಕ್ ಫುಡ್, ಕರಿದ ಪದಾರ್ಥ
ಈ ಆಹಾರಗಳನ್ನು ತಿನ್ನಲು ಖುಷಿಯಾಗುವುದು, ಆದರೆ ಇಷ್ಟೊಂದು ಉರಿ ಬೇಸಿಗೆ ಇರುವಾಗ ಈ ಬಗೆಯ ಆಹಾರ ಸೇವಿಸಬೇಡಿ, ಅಲ್ಲದೆ ಈ ಬಗೆಯ ಆಹಾರಗಳು ಆರೋಗ್ಯಕ್ಕೂ ಒಳ್ಳೆಯದಲ್ಲ, ಈ ಸಮಯದಲ್ಲಿ ಸೇವಿಸಿದರೆ ಅಜೀರ್ಣ, ಹೊಟ್ಟೆ ಉಬ್ಬುವುದು, ವಾಂತಿ ಈ ಬಗೆಯ ಸಮಸ್ಯೆ ಕಂಡು ಬರುವುದು.
2. ಉಪ್ಪಿನಕಾಯಿ ಬಳಸಬೇಡಿ
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಚೆಂದ ಆದರೆ ಈಗ ಉಷ್ಣಾಂಶ ಅಧಿಕವಿರುವುದರಿಂದ ಉಪ್ಪಿನಕಾಯಿ ಬಳಸದಿದ್ದರೆ ಒಳ್ಳೆಯದು. ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಸುಸ್ತು ಉಂಟಾಗುವುದು.
3. ತುಂಬಾನೇ ಡ್ರೈ ಫ್ರೂಟ್ಸ್ ಸೇವಿಸಬೇಡಿ
ಡ್ರೈ ಫ್ರೂಟ್ಸ್ ತುಂಬಾ ಒಳ್ಳೆಯದು. ಆದರೆ ಬೇಸಿಗೆಯಲ್ಲಿ ಇದನ್ನು ಕಡಿಮೆ ಸೇವಿಸಿ, ಬದಲಿಗೆ ತಾಜಾ ಹಣ್ಣುಗಳನ್ನು ಸೇವಿಸಿ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ಮೈ ಉಷ್ಣಾಂಶ ಹೆಚ್ಚಾಗುವುದು, ಆದ್ದರಿಂದ ಡ್ರೈ ಫ್ರೂಟ್ಸ್ ಬಳಸದಿದ್ದರೆ ಒಳ್ಳೆಯದು.
4. ಹೆಚ್ಚು ಕಾಫಿ ಕುಡಿಯಬೇಡಿ
ಕೆಲವರಿಗೆ 4-5 ಲೋಟ ಅಥವಾ ಅದಕ್ಕಿಂತ ಹೆಚ್ಚು ಕಾಫಿ ಕುಡಿಯುವ ಅಭ್ಯಾಸವಿರುತ್ತದೆ, ಆದರೆ ಈ ಬೇಸಿಗೆಯಲ್ಲಿ ಆ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. ನೀವು ಒಂದು ಅಥವಾ ಎರಡು ಲೋಟ ಕಾಫಿ ಕುಡಿದರೆ ಒಳ್ಳೆಯದು.
5. ಸೋಡಾ, ತಂಪು ಪಾನೀಯ ಸೇವಿಸಬೇಡಿ
ಈ ಉರಿ ಬಿಸಿಲಿಗೆ ಸೋಡಾ ಕುಡಿಯಬೇಕು, ತಂಪು ಪಾನೀಯ ಕುಡಿಯಬೇಕು ಎಂದನಿಸುವುದು, ಆದರೆ ಇವುಗಳನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಈ ಆಹಾರಗಳನ್ನು ಪ್ರತಿನಿತ್ಯ ಬಳಸಿ
ಕಲ್ಲಂಗಡಿ ಹಣ್ಣು ತುಂಬಾ ಒಳ್ಳೆಯದು, ಇದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.
ಕರ್ಬೂಜ
ಈ ಹಣ್ಣು ತುಂಬಾನೇ ತಂಪು, ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಾಪಾಡಲು ತುಂಬಾನೇ ಸಹಕಾರಿ.
ಸೌತೆಕಾಯಿ
ಸೌತೆಕಾಯಿ ತಿನ್ನುವುದರಿಂದ ಮೈಯಲ್ಲಿ ಸೆಕೆಯಿಂದ ಬೊಬ್ಬೆ ಏಳುವುದನ್ನು ತಡೆಗಟ್ಟಬಹುದು.
ಪುದೀನಾ
ಪುದೀನಾ ಟೂ ಕುಡಿಯಿರಿ, ನಿಂಬು ಪಾನೀಯ ಮಾಡಿ ಅದರಲ್ಲಿ ಪುದೀನಾ ಹಾಕಿ ಕುಡಿಯಬಹುದು. ಇದು ದೇಹವನ್ನು ತಂಪಾಗಿಡಲು ಸಹಕಾರಿ.
ಮಾಂಸಾಹಾರಕ್ಕಿಂತ ತರಕಾರಿ ಹೆಚ್ಚಾಗಿ ಬಳಸಿ
ಈ ಬೇಸಿಗೆಯಲ್ಲಿ ಮಾಂಸಾಹಾರ ತಿಂದರೆ ಜೀರ್ಣಕ್ರಿಯೆ ಕಷ್ಟವಾಗುವುದು, ತರಕಾರಿ ಸೇವಿಸಿ ಮಲ ಬದ್ಧತೆ ಸಮಸ್ಯೆ ತಡೆಗಟ್ಟಬಹುದು.
ಎಳನೀರು
ದಿನಾ ಒಂದು ಎಳನೀರು ಕುಡಿಯುವುದು ತುಂಬಾನೇ ಒಳ್ಳೆಯದು. ಎಳನೀರು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದು, ಎಲೆಕ್ಟ್ರೋಲೈಟ್ಸ್ ಕಾಪಾಡಲು ಸಹಕಾರಿ.
ಮೆಂತೆ
ಒಂದು ಚಮಚ ಮೆಂತೆಯನ್ನು ನೀರಿಗೆ ನೆನೆಹಾಕಿ ಆ ನೀರನ್ನು ಬೆಳಗ್ಗೆ ಕುಡಿಯಿರಿ. ಮಧುಮೇಹ ನಿಯಂತ್ರಿಸಲು ಕೂಡ ಮೆಂತೆ ಸಹಕಾರಿ.
ಕಾಮಕಸ್ತೂರಿ
ಕಾಮಕಸ್ತೂರಿ ಕೂಡ ದೇಹವನ್ನು ತಂಪಾಗಿ ಇಡುತ್ತದೆ. ಜ್ಯೂಸ್ಗೆಲ್ಲಾ ಕಾಮ ಕಸ್ತೂರಿ ಹಾಕಿ ಕುಡಿಯಿರಿ.
ಜೀರಿಗೆ, ಸೋಂಪು: ಸೋಂಪು ಅಥವಾ ಜೀರಿಗೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಿರಿ. ಅಡುಗೆಗೆ ಇವುಗಳನ್ನು ಬಳಸಿ.
ಮಜ್ಜಿಗೆ: ದಿನಾ ಮಜ್ಜಿಗೆ ಸೇವಿಸಿ, ಇದು ದೇಹವನ್ನು ತಂಪಾಗಿಡುತ್ತದೆ, ಮಧ್ಯಾಹ್ನ ಪ್ರತಿದಿನ ಮಜ್ಜಿಗೆ ಸೇವಿಸಿ, ಇದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗದಂತೆ ನೋಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications