Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಕಾಲಿಗೆ ಬೆಳ್ಳುಳ್ಳಿ ಲವಂಗ ಉಜ್ಜಿದ ಪ್ರಿಯಾಂಕಾ ಚೋಪ್ರಾ.! ಯಾಕೆ ಗೊತ್ತಾ?
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯ ಬಳಿಕ ಹೆಚ್ಚಾಗಿ ಸಿನಿಮಾಗಳಿಂದ ಸುದ್ದಿಯಾಗುತ್ತಿಲ್ಲ. ಬದಲಿಗೆ ಅವರ ಲೈಫ್ಸ್ಟೈಲ್, ಡ್ರೆಸ್, ಪತಿಯ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಾರೆ. ಆದ್ರೆ ಮಗುವಿನ ತಾಯಿಯಾಗಿದ್ದರೂ ಆಕೆಯ ಸೌಂದರ್ಯ ಹಾಗೆಯೇ ಇದೆ. ಈಗಲೂ ಬಾಲಿವುಡ್ ಸಿನಿಮಾದಲ್ಲಿ ಆಕೆಗೆ ಬಹುಬೇಡಿಕೆ ಅಂತು ಇದ್ದೇ ಇದೆ.
ಈಗಲೂ ಹಲವು ಪ್ರಮುಖ ಪಾತ್ರಗಳಲ್ಲಿ ಆಕೆ ನಟಿಸುತ್ತಿದ್ದಾಳೆ. ಈಗ ತಮ್ಮ ಮುಂದಿನ ಸಿನಿಮಾ ದಿ ಬ್ಲಫ್ ಇನ್ ಆಸ್ಟ್ರೇಲಿಯಾ ಚಿತ್ರೀಕರಣದಲ್ಲಿದ್ದಾರೆ. ಈ ವೇಳೆ ಪತಿ ನಿಕ್ ಜೋನಾಸ್, ಮಗಳು ಮಾಲ್ಟಿ ಮೇರಿ ಜೊತೆ ಎಂಜಾಯ್ ಮಾಡುತ್ತಿದ್ಧಾರೆ. ಆಕೆಗೀಗ 41 ವರ್ಷವಾಗಿದ್ದರೂ ಹಿರೋಯಿನ್ ಆಗಿ ನಟಿಸಲು ಸೈ ಎನ್ನುವಂತೆ ಫಿಟ್ನೆಸ್ ಹಾಗೂ ಸೌಂದರ್ಯ ಕಾಪಾಡಿಕೊಂಡಿದ್ದಾರೆ.

ಆದ್ರೆ ಅವರು ಸಿನಿಮಾ ಸೆಟ್ನಲ್ಲಿ ತಮ್ಮ ಕಾಲುಗಳಿಗೆ ಬೆಳ್ಳುಳ್ಳಿಗಳ ಉಜ್ಜುತ್ತಿರುವ ವಿಡಿಯೋ ವೈರಲ್ ಆಗಿದೆ. ಚಿತ್ರೀಕರಣದ ಸಮಯದಲ್ಲಿ ಪ್ರಿಯಾಂಕಾಗೆ ಉಂಟಾದ ನೋವಿನ ಕುರಿತು ಮಾಹಿತಿ ಹಂಚಿಕೊಳ್ಳುತ್ತಾ ಬೆಳ್ಳುಳ್ಳಿ ಹಾಗೂ ಲವಂಗವನ್ನು ಆಕೆಯ ಪಾದಗಳಿಗೆ ಬಲವಾಗಿ ಉಜ್ಜಿಕೊಳ್ಳುತ್ತಿರುವುದು ನೋಡಬಹುದು.
ಆದರೆ ಈ ವಿಡಿಯೋ ನೋಡಿದ ಮಂದಿ ಈ ರೀತಿ ಬೆಳ್ಳುಳ್ಳಿ ಲವಂಗವನ್ನು ಏಕೆ ಉಜ್ಜಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನಿಸುತ್ತಿದ್ದಾರೆ. ಆದರೆ ಈ ಬೆಳ್ಳುಳ್ಳಿ ಹಾಗೂ ಲವಂಗ ಆರೋಗ್ಯದ ದೃಷ್ಟಿಯಿಂದ ತುಂಬಾನೆ ಉತ್ತಮವಾದ ಸಂಯುಕ್ತವಾಗಿದೆ.
ಪ್ರಿಯಾಂಕಾ ಪಾದಗಳಿಗೆ ಬೆಳ್ಳುಳ್ಳಿ ಉಜ್ಜುತ್ತಿರುವುದೇಕೆ?
ಬೆಳ್ಳುಳ್ಳಿಯ ಲವಂಗವನ್ನು ಕತ್ತರಿಸಿದಾಗ ಅಥವಾ ಪುಡಿಮಾಡಿದಾಗ ಅಲಿನ್ ಅನ್ನು ಅಲಿನೇಸ್, ಕಿಣ್ವದೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಈ ಸಂಪರ್ಕವು ಅಲಿಸಿನ್ ಎಂಬ ಹೊಸ ಸಂಯುಕ್ತವನ್ನು ಸೃಷ್ಟಿಸುತ್ತದೆ. ಆದ್ದರಿಂದ, ಬೆಳ್ಳುಳ್ಳಿಯನ್ನು ಒಬ್ಬರ ಪಾದಗಳ ಮೇಲೆ ಉಜ್ಜಿದಾಗ, ಅದು ರಕ್ತಪ್ರವಾಹಕ್ಕೆ ಪ್ರವೇಶಿಸಲು ಅಲಿಸಿನ್ ಚರ್ಮವನ್ನು ಭೇದಿಸುತ್ತದೆ. ವೆರಿವೆಲ್ ಹೆಲ್ತ್ ವರದಿಯ ಪ್ರಕಾರ, ಅಲಿಸಿನ್ ಕೆಲವು ಕ್ಯಾನ್ಸರ್ಗಳನ್ನು ತಡೆಯಲು ಸಹಾಯ ಮಾಡುತ್ತದೆ, ರಕ್ತದಲ್ಲಿ ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ವ್ಯಾಯಾಮದ ನಂತರ ಸ್ನಾಯುವಿನ ಚೇತರಿಕೆಗೆ ಸಹಾಯ ಮಾಡುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಬೆಳ್ಳುಳ್ಳಿಯು ಉರಿಯೂತದ ಗುಣಲಕ್ಷಣಗಳ ಜೊತೆಗೆ ಅಪಾರವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಕೀಲುಗಳು ಮತ್ತು ಸ್ನಾಯುಗಳಲ್ಲಿನ ನೋವಿದ್ದರೆ ಈ ಎರಡು ಸಂಯುಕ್ತಗಳನ್ನು ಹಾಕಿ ಉಜ್ಜಬೇಕಂತೆ. ಇದೇ ಪ್ರಕಾರವಾಗಿ ನಟಿ ಪ್ರಿಯಾಂಕಾ ಚೋಪ್ರಾ ಸಹ ಮನೆ ಮದ್ದು ಮಾಡಿದ್ದಾರೆ. ಕಾಲಿನಲ್ಲಿ ಅವರಿಗೆ ನೋವು ಕಾಣಿಸಿಕೊಂಡ ಬಳಿಕ ಈ ರೀತಿಯ ಮದ್ದು ಮಾಡಿದ್ದಾರೆ.
ಮುಖದಲ್ಲಿ ಮೊಡವೆಗಳಾಗಿದ್ದರೂ ಸಹ ಬೆಳ್ಳುಳ್ಳಿ ಲವಂಗವನ್ನು ಉಜ್ಜುವುದರಿಂದ ಹಂತ ಹಂತವಾಗಿ ಕಡಿಮೆ ಮಾಡಬಹುದು. ಕೆಲವು ವ್ಯಕ್ತಿಗಳಿಗೆ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಅಲರ್ಜಿಕಾರಕವಾಗಿದ್ದು ಗಾಯದ ಮೇಲೆ ಹಚ್ಚಿನ ಕೊಂಚ ಹೊತ್ತಿನಲ್ಲಿಯೇ ಉರಿಯಲು ಪ್ರಾರಂಭಿಸುತ್ತದೆ. ಹೀಗಾಗರೆ ಬೆಳ್ಳುಳ್ಳಿಯ ಬದಲು ಅರಿಶಿನ ಪುಡಿಯ ಲೇಪನವನ್ನು ಹಚ್ಚಿ ಹಾಗೂ ದಿನಕ್ಕೊಂದು ಲೋಟ ಬಿಸಿ ಹಾಲಿನಲ್ಲಿ ಅರಿಶಿನ ಪುಡಿ ಬೆರೆಸಿ ಕುಡಿಯಿರಿ. ಈ ವಿಧಾನದಿಂದಲೂ ಗಾಯ ಶೀಘ್ರವಾಗಿ ಮಾಗುತ್ತದೆ.
ನಿಮ್ಮ ದೇಹದಲ್ಲಿ ಯಾವುದಾದರು ಗಾಯಗಳಿದ್ದರೆ ಶೀಘ್ರವಾಗಿ ಮಾಗಿಸಲು ಬೆಳ್ಳುಳ್ಳಿ ಸಹಕಾರಿಯಾಗಿದೆ. ಸೋಂಕನ್ನು ತಡೆಯುವ ಮೂಲಕ ಗಾಯ ಒಣಗುವ ಗತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಈ ಮೂಲಕವೂ ಗಾಯ ಮಾಗಿಸುವ ಗತಿ ಹೆಚ್ಚುತ್ತದೆ. ಹೀಗಾಗಿ ಬೆಳ್ಳುಳ್ಳಿಯಿಂದ ಬಹಳ ಪ್ರಯೋಜನವಿರುವ ಕಾರಣ ನಿಮ್ಮ ಊಟದಲ್ಲಿ ಬೆಳ್ಳುಳ್ಳಿ ಸೇರಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











