Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ 5 ಆಹಾರಗಳನ್ನು ತಿಂದ ತಕ್ಷಣವೇ ನೀರು ಕುಡಿದರೆ ಖಂಡಿತ ಒಳ್ಳೆಯದಲ್ಲ!
ಕೆಲವೊಂದು ಆಹಾರಗಳನ್ನು ಸೇವಿಸಿದಾಗ ತಿಂದ ತಕ್ಷಣ ನೀರು ಕುಡಿಯಬಾರದು, ಹಾಗೆ ಮಾಡಿದರೆ ಹೊಟ್ಟೆ ಉಬ್ಬಿದಂತಾಗುವುದು, ಗ್ಯಾಸ್ ಸಮಸ್ಯೆ, ಅಜೀರ್ಣೀ ಬಗೆಯ ಸಮಸ್ಯೆ ಕಂಡು ಬರುವುದು.
ಆದ್ದರಿಂದ ಕೆಲವೊಂದು ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು. ನಮಗೆ ಗೊತ್ತಿದ್ದು-ಗೊತ್ತಿಲ್ಲದೆ ಈ ತಪ್ಪು ಮಾಡುತ್ತಿರುತ್ತೇವೆ, ಅದರಲ್ಲೂ ಇಲ್ಲಿ ನೀಡಿರುವ ಆಹಾರಗಳ ಜೊತೆಗೆ ನಾವು ಆಹಾರವನ್ನು ಸೇವಿಸಿಯೇ ಸೇವಿಸುತ್ತೇವೆ, ಇನ್ನು ಮುಂದೆ ಆ ತಪ್ಪುಗಳನ್ನು ಮಾಡದಿರಿ
ಈ ಆಹಾರಗಳು ಆರೋಗ್ಯಕರವಾದ ಆಹಾರವೇ ಆಗಿದ್ದರೂ ನೀರು ಹಾಗೂ ಈ ಆಹಾರವನ್ನು ಜೊತೆಯಾಗಿ ಸೇವಿಸಿದರೆ ಖಂಡಿತ ಆರೋಗ್ಯ ಸಮಸ್ಯೆ ಉಂಟಾಗುವುದು:

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ನಾರಿನಂಶವಿದೆ. ಇದರ ಜೊತೆಗೆ ನೀರು ಕೂಡ ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುವುದು, ಜೀರ್ಣಕ್ರಿಯೆ ತುಂಬಾ ನಿಧಾನವಾಗುವುದು, ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆನೋವು ಈ ಬಗೆಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಬಿಡಿ, ಇದುವೇ ನಿಮ್ಮಲ್ಲಿ ಅಸ್ವಸ್ಥಕ್ಕೆ ಕಾರಣವಾಗಬಹುದು.
ಮೊಸರು
ಮೊಸರು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಪ್ರೊಬಯೋಟಿಕ್ ಅಂಶವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಆದರೆ ಮೊಸರು ತಿಂದ ತಕ್ಷಣ ನೀರು ಕುಡಿದರೆ ಅದರಲ್ಲಿರುವ ಪ್ರೊಬಯೋಟಿಕ್ ಅಂಶ ವ್ಯರ್ಥವಾಗುವುದು. ಆದರೆ ಆಹಾರ ಸೇವಿಸುವಾಗ ಮೊಸರು ಸೇವಿಸಿ, ತಕ್ಷಣವೇ ನೀರು ಕುಡಿಯಬೇಡಿ, ಮೊಸರು ಸೇವಿಸಿ ಕನಿಷ್ಠ ಅರ್ಧ ಗಂಟೆಯಾದರೂ ಗ್ಯಾಪ್ ನೀಡಿ, ಹೀಗೆ ಮಾಡುವುದರಿಂದ ಮೊಸರಿನಲ್ಲಿರುವ ಪ್ರೀಬಯೋಟಿಕ್ ನಿಮ್ಮ ದೇಹವನ್ನು ಸೇರುವುದು. ಪ್ರೀಬಯೋಟಿಕ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ದ್ರಾಕ್ಷಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ನಿರಿನಂಶ ಕೂಡ ಇರುತ್ತದೆ, ಆದ್ದರಿಂದ ಇವುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಕಾದ ಅಗ್ಯತವಿಲ್ಲ. ಒಂದು ವೇಳೆ ಸಿಟ್ರಸ್ ಹಣ್ಣುಗಳನ್ನು ತಿಂದಾಗ ಅದರ ಜೊತೆಗೆ ನೀರು ಕುಡಿದರೆ ಇದರಿಂದ ತೊಂದರೆ ಉಂಟಾಗುವುದು. ನೀವು ಈ ಹಣ್ಣುಗಳನ್ನು ತಿಂದಾದ ಮೇಲೆ ಕನಿಷ್ಠ ಒಂದು ಗಂಟೆಯ ನಂತರ ನೀರು ಕುಡಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನೀವು ಹಣ್ಣುಗಳನ್ನು ಆಹಾರ ತಿಂದ ತಕ್ಷಣವೇ ಸೇವಿಸಿಬೇಡಿ, ಕನಿಷ್ಠ ಒಂದು ಗಂಟೆ ಬಿಟ್ಟು ತಿಂದರೆ ಹಣ್ಣಿನಲ್ಲಿರುವ ಪೋಷಕಾಂಶ ನಿಮ್ಮ ದೇಹವನ್ನು ಸೇರುವುದು
ಅನ್ನ
ಅನ್ನ ತಿನ್ನುವಾಗ ಅದರ ಜೊತೆಗೆ ನೀರು ಕುಡಿಯುವ ಅಭ್ಯಾಸ ತುಂಬಾ ಜನರಿಗಿದೆ, ಆದರೆ ಇದು ಆರೋಗ್ಯಕರವಾದ ಅಭ್ಯಾಸವಿಲ್ಲ, ನೀವು ಆಹಾರ ಸೇವಿಸಿದ ಮೇಲೆ ಕನಿಷ್ಠ 15 ನಿಮಿಷವಾದರೂ ಗ್ಯಾಪ್ ನೀಡಿ, ನಂತರವಷ್ಟೇ ನೀರು ಕುಡಿದರೆ ಒಳ್ಳೆಯದು. ಅನ್ನದ ಆಹಾರ ಯಾವುದೇ ಆಗಿರಲಿ ಪಲಾವ್, ಚಿತ್ರಾನ್, ಪುಳಿಯೊಗರೆ ಹೀಗೆ ಯಾವುದೇ ಬಗೆಯ ಆಹಾರವಾಗಲಿ ನೀವು ಅವುಗಳ ಜೊತೆಗೆ ನೀರು ಸೇವಿಸಬೇಡಿ. ಆಹಾರ ತಿಂದ ಮೇಲೆ ಸ್ವಲ್ಪ ಹೊತ್ತು ನೀರು ಕುಡಿಯಿರಿ.
ಮಸಾಲೆ ಪದಾರ್ಥ
ನಾವು ಸ್ವಲ್ಪ ಖಾರವಾದರೆ ನೀರು ಕುಡಿಯುತ್ತೇವೆ, ಆದರೆ ಮಸಾಲೆ ಹಾಕಿದ ಆಹಾರ ಸೇವಿಸುವಾಗ ಜೊತೆ-ಜೊತೆಯಲ್ಲಿಯೇ ನೀರು ಕುಡಿಯಬಾರದು. ನೀವು ಖಾರ ಅನಿಸಿ ನೀರು ಕುಡಿದಾಗ ಉರಿ ಸ್ವಲ್ಪ ಹೆಚ್ಚಾಗುವುದು. ಈ ರೀತಿ ಖಾರ ಅನಿಸಿದಾಗ ನೀವು ಮೊಸರು ಅಥವಾ ಹಾಲು ಸೇವಿಸಿ. ಖಾರ ಅನಿಸಿದಾಗ ನೀರು ಕುಡಿದರೆ ನಾಲಗೆಯಲ್ಲಿ ಖಾರ ಹೆಚ್ಚಾಗುವುದು.
ಕೊನೆಯದಾಗಿ
ಈ ಮೇಲಿನ ಆಹಾರಗಳನ್ನು ತಿಂದ ತಕ್ಷಣವೇ ನೀರು ಕುಡಿಯಬೇಡಿ, ಬಾಳೆಹಣ್ಣು, ಮೊಸರು, ಹಣ್ಣುಗಳನ್ನು ತಿಂದಾಗ ನೀರು ಕುಡಿಯಬೇಕೆನಿಸುವುದಿಲ್ಲ, ಸ್ವಲ್ಪ ಹೊತ್ತು ಕಾಯಬಹುದು, ಅದ್ದರಿಂದ ಅಯ್ಯೋ ನೀರು ಕುಡಿದಿಲ್ಲವೆಂದರೆ ಗಂಟಲು ಕಟ್ಟುತ್ತೆ ಎಂಬ ಆತಂಕ ಬೇಡ ನಿಮಗೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications