Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಆಫೀಸ್ ಚೇರ್ನಲ್ಲಿ ಹೆಚ್ಚು ಸಮಯ ಕೂತಷ್ಟೂ ಸಾವು ಶೆ 16ರಷ್ಟು ಸಮೀಸುತ್ತದೆಯಂತೆ!
ಕೆಲಸ ಕೆಲಸ ಅಂತ ಓಡುತ್ತಲೇ ಇದ್ದೇವೆ, ಈ ಓಟದಲ್ಲಿ ನಮ್ಮಲ್ಲಿ ಎಷ್ಟೋ ಜನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇನ್ನು 10-12 ಗಂಟೆ ಆಫೀಸ್ ಚೇರ್ನಲ್ಲಿ ಕಾಲ ಕಳೆಯುವವರು ತುಂಬಾನೇ ಇದ್ದಾರೆ, ಏನು ಮಾಡುವುದು ವರ್ಕ್ ಫ್ರೆಷರ್, ಟಾರ್ಗೆಟ್, ಇಷ್ಟು ದುಡಿದಿಲ್ಲ ಎಂದರೆ ಕೆಲಸ ಹೋಗುತ್ತೆ
ಹೀಗೆ ನಾನಾ ಉತ್ತರಗಳು ಸಿಗುತ್ತೆ, ಆದರೆ ಆಫೀಸ್ಗೆ ಚೇರ್ನಲ್ಲಿ ಹೆಚ್ಚು ಹೊತ್ತು ಕೂರುವುದರಿಂದ ನಮ್ಮ ಪ್ರಾಣವೇ ಬೇಗ ಹೋಗುತ್ತೆ ಎಂದು ಅಧ್ಯಯನಗಳು ಹೇಳುತ್ತಿವೆ.

ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ಅತ್ಯಧಿಕ ರಕ್ತದೊತ್ತಡ, ಮೈ ತೂಕ ಹೆಚ್ಚಾಗುವುದು, ಅನಾರೋಗ್ಯಕರ ಕೊಲೆಸ್ಟ್ರಾಲ್ ಹೀಗೆ ಅನೇಕ ಕಾಯಿಲೆಗಳು ಬರುವುದು. ಚಯಪಚಯ ಕ್ರಿಯೆಗೂ ನಾವು ತುಂಬಾ ಹೊತ್ತು ಕೂರುವುದಕ್ಕೂ ಸಂಬಂಧವಿದೆ, ತುಂಬಾ ಹೊತ್ತು ಕೂರುವುದರಿಂದ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು.
ತುಂಬಾ ಹೊತ್ತು ಒಂದೇ ಕಡೆ ಕೂರುವುದರ ಬಗ್ಗೆ ಆರೋಗ್ಯ ತಜ್ಞರು ಹೇಳುವುದೇನು?
* ಮೈ ತೂಕ ಹೆಚ್ಚಾಗಿ ಬೊಜ್ಜು ಬರುವುದು: ದೈಹಿಕ ಚಟುವಟಿಕೆ ಕಡಿಮೆಯಾಗಿ ಒಂದೇ ಕಡೆ ಕೂರುವುದರಿಂದ ಮೈ ಬೊಜ್ಜು ಬರುವುದು. ಮೈ ಬೊಜ್ಜು ಹೆಚ್ಚಾದರೆ ಮಧುಮೇಹ, ಹೃದಯಾಘಾತ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು:
ದೈಹಿಕ ಚಟುವಟಿಕೆ ಕಡಿಮೆಯಾದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಇದರಿಂದ ನರಗಳಿಗೆ ಸಂಬಂಧಿಸಿದ ತೊಂದರೆ ಉಂಟಾಗುವುದು, ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು, ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ.
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚುವುದು: ರಕ್ತದೊತ್ತಡ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ, ಅತ್ಯಧಿಕ ರಕ್ತದೊತ್ತಡದಿಂದ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ಬರಬಹುದು.
ಮಧುಮೇಹ: ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಜೀವನಶೈಲಿ, ನಮ್ಮ ಹಿರಿಯರಿಗೆ ಹೋಲಿಸಿದರೆ ಜೀವನಶೈಲಿ ಬದಲಾಗಿದೆ, ದೈಹಿಕ ಚಟುವಟಿಕೆ, ವ್ಯಾಯಾಮ ಕಡಿಮೆಯಾಗುವುದರಿಂದ ಈ ರೀತಿ ಮಧುಮೇಹ ಸಮಸ್ಯೆ ಹೆಚ್ಚಾಗುವುದು. ಅಲ್ಲದೆ ಮಧುಮೇಹ ಸಮಸ್ಯೆ ಹೆಚ್ಚಾಗಲು ಅತ್ಯಧಿಕ ಮಾನಸಿಕ ಒತ್ತಡ ಹೆಚ್ಚಾಗುವುದು, ಆಫೀಸ್ ಚೇರ್ನಲ್ಲಿ ಎಷ್ಟು ಹೊತ್ತು ಕೂರುತ್ತೇವೋ ಅಷ್ಟು ಹೊತ್ತು ಮಾನಸಿಕ ಒತ್ತಡ ಅಧಿಕವಿರುತ್ತದೆ.
ಪುರುಷ ಹಾಗೂ ಮಹಿಳೆಯರಲ್ಲಿ ಇದರ ಪ್ರಭಾವ
ತೂಕದಲ್ಲಿ ವ್ಯತ್ಯಾಸ: ಮಹಿಳೆಯರಲ್ಲಿ ಹಿಂಭಾಗ ಹಾಗೂ ತೊಡೆಯಲ್ಲಿ ಅಧಿಕ ಕೊಬ್ಬಿನಂಶ ಸೇರಿಕೊಂಡರೆ ಪುರುಷರಲ್ಲಿ ಹೊಟ್ಟೆ ಭಾಗದಲ್ಲಿ ಕೊಬ್ಬಿನಂಶ ಹೆಚ್ಚಾಗುವುದು.
ಹಾರ್ಮೋನ್ಗಳ ಬದಲಾವಣೆಯಾಗುವುದು: ಪುರುಷ ಹಾಗೂ ಮಹಿಳೆಯರಲ್ಲಿ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದು, ಮಹಿಳೆಯರಲ್ಲಿ ಪ್ರೀಮೆನೋಪಾಸ್ ಸಮಸ್ಯೆ ಕೂಡ ಕಂಡು ಬರುವುದು.
ಮಾನಸಿಕವಾಗಿಯೂ ಪರಿಣಾಮ ಬೀರುವುದು: ಅತಿಯಾದ ಕೆಲಸ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಸಲಹೆ: ಜೀವನ ಹಾಗೂ ಕೆಲಸವನ್ನು ಬ್ಯಾಲೆನ್ಸ್ ಮಾಡಬೇಕು, ನಾವು ದುಡಿಯುವುದು ನಮಗಾಗಿ ಆದ್ದರಿಂದ ದುಡಿದ ದುಡ್ಡು ಆಸ್ಪತ್ರೆಗೆ ಹಾಕದಂತೆ ಜಾಗ್ರತೆವಹಿಸಿ.
- ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ:
- ತುಂಬಾ ಹೊತ್ತು ಒಂದೇ ಕಡೆ ಕೂರಬೇಡಿ, ಆಗಾಗ ಎದ್ದು ಸ್ವಲ್ಪ ನಡೆಯಿರಿ
- ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ಸಮೀಪದ ಸ್ಥಳಗಳಿಗೆ ಗಾಡಿ ಬಳಿಕೆ ಬದಲಿಗೆ ನಡೆದುಕೊಮಡು ಹೋಗಿ
- ಆಹಾರಕ್ರಮದ ಕಡೆಗೆ ಗಮನಹರಿಸಿ, ಆರೋಗ್ಯಕರ ಆಹಾರ ಸೇವಿಸಿ
- ಧ್ಯಾನ ಮಾಡಿ, ಧ್ಯಾನ ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಲು ಸಹಾಯ ಮಾಡುತ್ತದೆ
- ಎಲ್ಲಕ್ಕಿಂತ ಹೆಚ್ಚಾಗಿ ಅವಧಿಗಿಂತ ಹೆಚ್ಚು ಕೆಲಸ ಮಾಡುವ ಬದಲಿಗೆ ಕೆಲಸವನ್ನು ಅವಧಿಯೊಳಗೆ ಮುಗಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
