Latest Updates
-
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ!
ಆಫೀಸ್ ಚೇರ್ನಲ್ಲಿ ಹೆಚ್ಚು ಸಮಯ ಕೂತಷ್ಟೂ ಸಾವು ಶೆ 16ರಷ್ಟು ಸಮೀಸುತ್ತದೆಯಂತೆ!
ಕೆಲಸ ಕೆಲಸ ಅಂತ ಓಡುತ್ತಲೇ ಇದ್ದೇವೆ, ಈ ಓಟದಲ್ಲಿ ನಮ್ಮಲ್ಲಿ ಎಷ್ಟೋ ಜನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇನ್ನು 10-12 ಗಂಟೆ ಆಫೀಸ್ ಚೇರ್ನಲ್ಲಿ ಕಾಲ ಕಳೆಯುವವರು ತುಂಬಾನೇ ಇದ್ದಾರೆ, ಏನು ಮಾಡುವುದು ವರ್ಕ್ ಫ್ರೆಷರ್, ಟಾರ್ಗೆಟ್, ಇಷ್ಟು ದುಡಿದಿಲ್ಲ ಎಂದರೆ ಕೆಲಸ ಹೋಗುತ್ತೆ
ಹೀಗೆ ನಾನಾ ಉತ್ತರಗಳು ಸಿಗುತ್ತೆ, ಆದರೆ ಆಫೀಸ್ಗೆ ಚೇರ್ನಲ್ಲಿ ಹೆಚ್ಚು ಹೊತ್ತು ಕೂರುವುದರಿಂದ ನಮ್ಮ ಪ್ರಾಣವೇ ಬೇಗ ಹೋಗುತ್ತೆ ಎಂದು ಅಧ್ಯಯನಗಳು ಹೇಳುತ್ತಿವೆ.

ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ಅತ್ಯಧಿಕ ರಕ್ತದೊತ್ತಡ, ಮೈ ತೂಕ ಹೆಚ್ಚಾಗುವುದು, ಅನಾರೋಗ್ಯಕರ ಕೊಲೆಸ್ಟ್ರಾಲ್ ಹೀಗೆ ಅನೇಕ ಕಾಯಿಲೆಗಳು ಬರುವುದು. ಚಯಪಚಯ ಕ್ರಿಯೆಗೂ ನಾವು ತುಂಬಾ ಹೊತ್ತು ಕೂರುವುದಕ್ಕೂ ಸಂಬಂಧವಿದೆ, ತುಂಬಾ ಹೊತ್ತು ಕೂರುವುದರಿಂದ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು.
ತುಂಬಾ ಹೊತ್ತು ಒಂದೇ ಕಡೆ ಕೂರುವುದರ ಬಗ್ಗೆ ಆರೋಗ್ಯ ತಜ್ಞರು ಹೇಳುವುದೇನು?
* ಮೈ ತೂಕ ಹೆಚ್ಚಾಗಿ ಬೊಜ್ಜು ಬರುವುದು: ದೈಹಿಕ ಚಟುವಟಿಕೆ ಕಡಿಮೆಯಾಗಿ ಒಂದೇ ಕಡೆ ಕೂರುವುದರಿಂದ ಮೈ ಬೊಜ್ಜು ಬರುವುದು. ಮೈ ಬೊಜ್ಜು ಹೆಚ್ಚಾದರೆ ಮಧುಮೇಹ, ಹೃದಯಾಘಾತ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು:
ದೈಹಿಕ ಚಟುವಟಿಕೆ ಕಡಿಮೆಯಾದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಇದರಿಂದ ನರಗಳಿಗೆ ಸಂಬಂಧಿಸಿದ ತೊಂದರೆ ಉಂಟಾಗುವುದು, ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು, ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ.
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚುವುದು: ರಕ್ತದೊತ್ತಡ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ, ಅತ್ಯಧಿಕ ರಕ್ತದೊತ್ತಡದಿಂದ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ಬರಬಹುದು.
ಮಧುಮೇಹ: ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಜೀವನಶೈಲಿ, ನಮ್ಮ ಹಿರಿಯರಿಗೆ ಹೋಲಿಸಿದರೆ ಜೀವನಶೈಲಿ ಬದಲಾಗಿದೆ, ದೈಹಿಕ ಚಟುವಟಿಕೆ, ವ್ಯಾಯಾಮ ಕಡಿಮೆಯಾಗುವುದರಿಂದ ಈ ರೀತಿ ಮಧುಮೇಹ ಸಮಸ್ಯೆ ಹೆಚ್ಚಾಗುವುದು. ಅಲ್ಲದೆ ಮಧುಮೇಹ ಸಮಸ್ಯೆ ಹೆಚ್ಚಾಗಲು ಅತ್ಯಧಿಕ ಮಾನಸಿಕ ಒತ್ತಡ ಹೆಚ್ಚಾಗುವುದು, ಆಫೀಸ್ ಚೇರ್ನಲ್ಲಿ ಎಷ್ಟು ಹೊತ್ತು ಕೂರುತ್ತೇವೋ ಅಷ್ಟು ಹೊತ್ತು ಮಾನಸಿಕ ಒತ್ತಡ ಅಧಿಕವಿರುತ್ತದೆ.
ಪುರುಷ ಹಾಗೂ ಮಹಿಳೆಯರಲ್ಲಿ ಇದರ ಪ್ರಭಾವ
ತೂಕದಲ್ಲಿ ವ್ಯತ್ಯಾಸ: ಮಹಿಳೆಯರಲ್ಲಿ ಹಿಂಭಾಗ ಹಾಗೂ ತೊಡೆಯಲ್ಲಿ ಅಧಿಕ ಕೊಬ್ಬಿನಂಶ ಸೇರಿಕೊಂಡರೆ ಪುರುಷರಲ್ಲಿ ಹೊಟ್ಟೆ ಭಾಗದಲ್ಲಿ ಕೊಬ್ಬಿನಂಶ ಹೆಚ್ಚಾಗುವುದು.
ಹಾರ್ಮೋನ್ಗಳ ಬದಲಾವಣೆಯಾಗುವುದು: ಪುರುಷ ಹಾಗೂ ಮಹಿಳೆಯರಲ್ಲಿ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದು, ಮಹಿಳೆಯರಲ್ಲಿ ಪ್ರೀಮೆನೋಪಾಸ್ ಸಮಸ್ಯೆ ಕೂಡ ಕಂಡು ಬರುವುದು.
ಮಾನಸಿಕವಾಗಿಯೂ ಪರಿಣಾಮ ಬೀರುವುದು: ಅತಿಯಾದ ಕೆಲಸ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಸಲಹೆ: ಜೀವನ ಹಾಗೂ ಕೆಲಸವನ್ನು ಬ್ಯಾಲೆನ್ಸ್ ಮಾಡಬೇಕು, ನಾವು ದುಡಿಯುವುದು ನಮಗಾಗಿ ಆದ್ದರಿಂದ ದುಡಿದ ದುಡ್ಡು ಆಸ್ಪತ್ರೆಗೆ ಹಾಕದಂತೆ ಜಾಗ್ರತೆವಹಿಸಿ.
- ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ:
- ತುಂಬಾ ಹೊತ್ತು ಒಂದೇ ಕಡೆ ಕೂರಬೇಡಿ, ಆಗಾಗ ಎದ್ದು ಸ್ವಲ್ಪ ನಡೆಯಿರಿ
- ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ಸಮೀಪದ ಸ್ಥಳಗಳಿಗೆ ಗಾಡಿ ಬಳಿಕೆ ಬದಲಿಗೆ ನಡೆದುಕೊಮಡು ಹೋಗಿ
- ಆಹಾರಕ್ರಮದ ಕಡೆಗೆ ಗಮನಹರಿಸಿ, ಆರೋಗ್ಯಕರ ಆಹಾರ ಸೇವಿಸಿ
- ಧ್ಯಾನ ಮಾಡಿ, ಧ್ಯಾನ ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಲು ಸಹಾಯ ಮಾಡುತ್ತದೆ
- ಎಲ್ಲಕ್ಕಿಂತ ಹೆಚ್ಚಾಗಿ ಅವಧಿಗಿಂತ ಹೆಚ್ಚು ಕೆಲಸ ಮಾಡುವ ಬದಲಿಗೆ ಕೆಲಸವನ್ನು ಅವಧಿಯೊಳಗೆ ಮುಗಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications