Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ವಿಶ್ವ ಹೃದಯ ದಿನ: ನಮ್ಮ ಪುಟ್ಟ ಹೃದಯ ಆರೋಗ್ಯವಾಗಿಡಲು ನಾವಿದನ್ನು ಮಾಡಲೇಬೇಕು
ಅಕ್ಟೋಬರ್ 29ನ್ನು ವಿಶ್ವ ಹೃದಯ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ ಕೆಲವು ವರ್ಷಗಳ ಹಿಂದೆ ಈ ಹೃದಯಾಘಾತ ಎಂಬುವುದು ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿತ್ತು, ಅದರೆ ಈ ಕೊರೊನಾ ಬಳಿಕ ತುಂಬಾ ಚಿಕ್ಕ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ.
ದೈಹಿಕವಾಗಿ ಫಿಟ್ ಆಗಿರುವವರು, ಚಿಕ್ಕ ಮಕ್ಕಳಿಗೆ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಕೇಳುವಾಗ ಎಲ್ಲರಿಗೂ ಒಂದು ಶಾಕ್ ಆಗುತ್ತೆ. ಹಾಗಾಗಿ ಈ ಹೃದಯದ ಆರೋಗ್ಯದ ಕಡೆಗೆ ಪ್ರಾಯ ವ್ಯತ್ಯಾಸವಿಲ್ಲದೆ ಎಲ್ಲರೂ ಜಾಗ್ರತೆವಹಿಸಬೇಕು.

ಹೃದಯದ ಅತಿ ದೊಡ್ಡ ಶತ್ರು ಮಾನಸಿಕ ಒತ್ತಡ (ಸ್ಟ್ರೆಸ್)
ಯಾರನ್ನೇ ಕೇಳಿ ಅಯ್ಯೋ ಸ್ಟ್ರೆಸ್ ...ತುಂಬಾ ವರ್ಕ್ ಪ್ರೆಷರ್ ಎಂದು ಹೇಳುವವರೇ...ಮಕ್ಕಳಾದರೆ ಅವರಿಗೆ 100ಕ್ಕೆ 100 ಮಾರ್ಕ್ಸ್ ತೆಗೆಯುವ ಒತ್ತಡ... ಈ ಬಹುತೇಕರು ದಿನ ನಿತ್ಯ ಒತ್ತಡದ ಬದುಕು ನಡೆಸುತ್ತಾ ಇದ್ದಾರೆ, ಈ ಮಾನಸಿಕ ಒತ್ತಡ ಎಂಬುವುದು ಹೃದಯದ ಬಹುದೊಡ್ಡ ಶತ್ರು.
ಇತ್ತೀಚೆಗೆ 26 ವರ್ಷದ ಉದ್ಯೋಗಿಯೊಬ್ಬರು ಅತಿಯಾದ ಕೆಲಸ ಒತ್ತಡದಿಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದರು, ಆ ಸುದ್ದಿ ದೇಶದಲ್ಲಿಯೇ ದೊಡ್ಡ ಸುದ್ದಿ ಮಾಡಿತು. ಯಾವುದೇ ಕೆಲಸವಾಗಿರಲಿ ಅದರಲ್ಲಿ ಅದರದ್ದೇ ಆದ ಮಾನಸಿಕ ಒತ್ತಡವಿರುತ್ತದೆ, ನಾವು ಒತ್ತಡಕ್ಕೆ ಹೆದರಬಾರದು, ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ ಎಂದು ನೋಡಬೇಕು.
ಮಾನಸಿಕ ಒತ್ತಡ ಕಡಿಮೆ ಮಾಡಲು ಈ ಟೆಕ್ನಿಕ್ ಸಹಕಾರಿ
ವಿಶ್ರಾಂತಿ
ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ವಿಶ್ರಾಂತಿ ತುಂಬಾನೇ ಮುಖ್ಯ. ದೀರ್ಘ ಉಸಿರು ತೆಗೆದು ಬಿಡಿ, ಇದು ನಿಮ್ಮ ಆಯಾಸವನ್ನು ಕಡಿಮೆ ಮಾಡುತ್ತದೆ. ಒಂದು ಕಡೆ ಸಮಧಾನವಾಗಿ ಕೂತು 5 ನಿಮಿಷ ಉಸಿರಾಟದ ವ್ಯಾಯಾಮ ಪ್ರಾಕ್ಟೀಸ್ ಮಾಡಿ ನಿಮ್ಮಲ್ಲಿದ್ದ ಆತಂಕ, ಉದ್ವೇಗ ಹೀಗೆ ಏನೇ ಇದ್ದರೂ ಮನಸ್ಸು ಶಾಂತವಾಗುತ್ತದೆ, ಉದ್ವೇಗ ಕಡಿಮೆಯಾಗುವುದು.
ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ
ಈಗ ಇರುವ ಜೀವನಶೈಲಿಗೆ ವ್ಯಾಯಾಮ ತುಂಬಾನೇ ಮುಖ್ಯವಾಗಿದೆ, ದಿನದಲ್ಲಿ 45 ನಿಮಿಷ ನಿಮಗಾಗಿ ಮೀಸಲಿಡಿ. ವ್ಯಾಯಾಮ , ಯೋಗ, ಧ್ಯಾನ ಮಾಡಿ, ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ದಿನಾ ಧ್ಯಾನ ಅಭ್ಯಾಸ ಮಾಡುವವರು ಯಾವುದೇ ವಿಷಯವಾಗಲಿ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ. ಇನ್ನು ವ್ಯಾಯಾಮ ದೈಹಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ನೀವು ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ತೂಕ ನಿಯಂತ್ರಣದಲದಲಿರುತ್ತದೆ. ಇದೆರಡೂ ಹೃದಯದ ಆರೋಗ್ಯಕ್ಕೆ ತುಂಬಾನೇ ಮುಖ್ಯ.
ರಕ್ತದೊತ್ತಡ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿ
ಅತ್ಯಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾಗುತ್ತದೆ, ಹಾಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿಡಬೇಕು. ವ್ಯಾಯಾಮ, ಆಹಾರಕ್ರಮ, ಧ್ಯಾನ ಇವೆಲ್ಲಾ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಆಹಾರಶೈಲಿ ಕಡೆಗೆ ಗಮನ ನೀಡಿ
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತೇ ಇದೆ, ಆರೋಗ್ಯಕರ ಆಹಾರ ಹೃದಯದ ಆರೋಗ್ಯ ಕಾಪಾಡುವುದು ಮಾತ್ರವಲ್ಲ, ಒಟ್ಟು ಮೊತ್ತ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ನಿದ್ದೆ ತುಂಬಾನೇ ಮುಖ್ಯ
ಆರೋಗ್ಯಕ್ಕೆ ಕನಿಷ್ಠ 6 ಗಂಟೆ ಗಾಢ ನಿದ್ದೆ ಅವಶ್ಯಕ. ನಿದ್ದೆ ಕಡಿಮೆಯಾದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಗಾಗಿ ಪ್ರತಿ ದಿನ ಒಂದೇ ಸಮಯಕ್ಕೆ ಮಲಗಿ. ತಡ ರಾತ್ರಿ ಮಲಗುವುದು ತುಂಬಾ ಲೇಟ್ ಏಳುವುದು ಈ ಬಗೆಯ ಅಭ್ಯಾಸಗಳು ಅರೋಗ್ಯಕ್ಕೆ ಒಳ್ಳೆಯದಲ್ಲ.
ಜೀವನಶೈಲಿಯಲ್ಲಿ ಈ ಬದಲಾವಣೆಯಾದರೆ ಆ ಪುಟ್ಟ ಹೃದಯ ತುಂಬಾ ಚೆನ್ನಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications