For Quick Alerts
ALLOW NOTIFICATIONS  
For Daily Alerts

ಯಶಸ್ವಿಯಾದ ಡಾ. ಗಿರಿಧರ್ ಕಜೆಯವರ ಆಯುರ್ವೇದ ಔಷಧಿ : ಗುಣಮುಖರಾದ ಕೊರೊನಾ ಸೋಂಕಿತರು

|

ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್‌ ಎಲ್ಲೆಡೆ ಮರಣ ಮೃದಂಗ ಭಾರಿಸುತ್ತಿದೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣದಲ್ಲಿದ್ದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನದಲ್ಲಿ ಸಾವಿರದ ಗಡಿ ದಾಟುತ್ತಿರುವುದು ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.

Dr Giridhar Kaje Ayurveda Medicine Cured Corona Patient

ಇದೀಗ 3-4 ದಿನಗಳಿಂದ ಒಂದು ಶುಭ ಸುದ್ದಿ ಕೇಳಿ ಬರುತ್ತಿದೆ, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಗಿರಿಧರ್‌ ಕಜೆಯವರು ಆಯುರ್ವೇದ ಔಷಧ ನೀಡುವ ಮೂಲಕ ಕೊರೊನಾ ಸೋಂಕಿತರನ್ನು ಗುಣ ಪಡಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಔಷಧಿ ನೀಡಿ ತಮ್ಮ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

23-65 ವರ್ಷದವರೆಗಿನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

23-65 ವರ್ಷದವರೆಗಿನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ಡಾ. ಗಿರಿಧರ್ ಕಜೆಯವರು 23 ವರ್ಷದವರಿಂದ ಹಿಡಿದು 65ವರ್ಷದವರರೆಗಿನ ಕೊರೊನಾ ಸೋಂಕಿತರಲ್ಲಿ ತಮ್ಮ ಔಷಧ ಪ್ರಯೋಗ ಮಾಡಿದ್ದರು. ಇವರು ಹೃದ್ರೋಗ, ಕ್ಷಯ ರೋಗ, ಮಧುಮೇಹ ಸಮಸ್ಯೆ ಇರುವ ಕೊರೊನಾ ಸೋಂಕಿತರಿಗೂ ಔಷಧಿ ನೀಡಿದ್ದರು. ಇವರು ಔಷಧಿ ನೀಡಿದ 10 ದಿನ ಒಳಗಾಗಿ ರೋಗಿಗಳು ಗುಣಮುಖರಾಗಿದ್ದಾರೆ.

ಕ್ಲಿನಿಕಲಿ ಟ್ರಯಲ್‌ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ಪಡೆದು ನಡೆಸಿದ ಅಧ್ಯಯನ

ಕ್ಲಿನಿಕಲಿ ಟ್ರಯಲ್‌ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ಪಡೆದು ನಡೆಸಿದ ಅಧ್ಯಯನ

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಮ್ಮ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಸಂಸ್ಥೆಯಾದ ಕ್ಲಿನಿಕಲಿ ಟ್ರಯಲ್‌ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ನೀಡಿತ್ತು. ಕಜೆಯವರು ಜೂ.7ರಿಂದ 25ರವರೆಗೆ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದರು.

 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದರು

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದರು

"ಮಹಾಮಾರಿ ಕೊರೊನಾವನ್ನು ಆಯುರ್ವೇದಿಕ್ ಔಷಧದಿಂದ ಗುಣಪಡಿಸಬಹುದಾಗಿದ್ದು, ನಾನು ಸಂಶೋಧಿಸಿರುವ ಔಷಧದಿಂದ ಇದನ್ನು ಗುಣಪಡಿಸಬಲ್ಲೆ" ಎಂದು ದಾಖಲೆಗಳ ಸಮೇತ ಪತ್ರದಲ್ಲಿ ಉಲ್ಲೇಖಿಸಿದ್ದರು. ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿವೆ, ಆ ಆಧಾರ ಮೇಲೆ ತಾನು ಸಮಶೋಧಿಸಿರುವ ಭೌಮ್ಯ, ಸಾಥ್ಮ್ಯ ಔಷಧಗಳು ಕೋವಿಡ್‌-19 ಗುಣಪಡಿಸಲು ಶಕ್ತವಾಗಿದೆ ಎಂದು ಡಾ. ಕಜೆ ಹೇಳಿದ್ದರು.

ಇದೀಗ ಔಷಧ ಪ್ರಯೋಗ ಉತ್ತಮ ಫಲಿತಾಂಶ ನೀಡಿದೆ.

ಭೌಮ್ಯ, ಸಾಥ್ಮ್ಯ ಔಷಧದ ಪ್ರಯೋಜನಗಳು

ಭೌಮ್ಯ, ಸಾಥ್ಮ್ಯ ಔಷಧದ ಪ್ರಯೋಜನಗಳು

  • ಆ್ಯಂಟಿ ವೈರಲ್ ಗುಣಮಾತ್ರ ಹೊಂದಿರದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ಕೋವಿಡ್‌-19 ರೋಗ ಗುಣಪಡಿಸುತ್ತದೆ
  • ರೋಗಿಗಳು ಬೇಗ ಗುಣ ಮುಖರಾಗುವಂತೆ ಮಾಡುತ್ತದೆ
  • ರೋಗ ಸ್ಥಿತಿ ಗಂಭೀರವಾಗುವುದನ್ನು ತಡೆಗ್ಟಟುತ್ತದೆ
  • ರೋಗಿಗಳು ಮರಣವೊಂದುವ ಸಂಖ್ಯೆ ತಗ್ಗಿಸುತ್ತದೆ
  • ಈ ಔಷಧ ರೋಗಿಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.
  • ಕೊರೊನಾ ಸೋಂಕು ಹೆಚ್ಚುವುದನ್ನು ತಡೆಬಹುದು ಎಂದ ವೈದ್ಯರು

    ಕೊರೊನಾ ಸೋಂಕು ಹೆಚ್ಚುವುದನ್ನು ತಡೆಬಹುದು ಎಂದ ವೈದ್ಯರು

    ಇವರ ಸಂಶೋಧನೆಯ ಈ ಆಯುರ್ವೇದ ಔಷಧಿಗೆ 90ರೂ ನಿಂದ 180 ರೂ ಇದ್ದು, ಇದನ್ನು ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರಿಗೆ ನೀಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಡಾ. ಗಿರಿಧರ್‌ ಕಜೆ ಹೇಳಿದ್ದಾರೆ.

    ಈ ಆಯುರ್ವೇದ ಔಷಧ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸೂಚನೆ

    ಈ ಆಯುರ್ವೇದ ಔಷಧ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸೂಚನೆ

    ಈ ಔಷಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜೀವ್‌ ಗಾಂಧಿ ವಿವಿ ಕುಲಪತಿಗೆ ವರದಿ ನೀಡುವಂತೆ ಸೂಚಿಸಲಾಗಿದೆ..

    ಈ ಔಷಧ ಹೆಚ್ಚಿನ ಕೊರೊನಾ ಸೋಂಕಿತರನ್ನು ಗುಣಮುಖವಾಗುವಂತೆ ಮಾಡಲಿ ಎಂಬುದೇ ಎಲ್ಲರ ಆಶಯವಾಗಿದೆ, ಆಲ್‌ ದಿ ಬೆಸ್ಟ್ ಸರ್...

English summary

Dr Giridhar Kaje Says 10 COVID-19 Patients Cured Using Ayurveda in Clinical Trial

Dr giridhar kaje ayurveda medicine cured corona patient, 9 patient cured within 10 days, karnataka Government approvered for further clinical study, Read on,
Story first published: Thursday, July 2, 2020, 15:46 [IST]
X
Desktop Bottom Promotion