Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಬ್ರಾಂಕೈಟಿಸ್ಗೆ (ಶ್ವಾಸನಾಳದ ಒಳಪೊರೆಯ ಉರಿಯೂತ) ಮನೆಮದ್ದು
ಬ್ರಾಂಕೈಟಿಸ್ ಎನ್ನುವುದು ಶ್ವಾಸನಾಳದ ಒಳಪೊರೆಯ ಉರಿಯೂತದ ಸಮಸ್ಯೆಯಾಗಿದೆ. ಈ ಶ್ವಾಸನಾಳದ ಉರಿಯೂತದ ಸಮಸ್ಯೆ ಸಾಮಾನ್ಯ ಶೀತ, ಕೆಮ್ಮಿನಿಂದ ಪ್ರಾರಂಭವಾಗಿ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುವುದು.

ಶೀತ, ಮೂಗು ಕಟ್ಟುವುದು, ವಿಪರೀತ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇದು ಈ ರೋಗದ ಲಕ್ಷಣವಾಗಿದೆ.
ಬ್ರಾಂಕೈಟಿಸ್ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿ ಮನೆಯಲ್ಲಿಯೇ ಕೆಲ ಮನೆಮದ್ದು ಮಾಡುವ ಗುಣಪಡಿಸಬಹುದು. ಕೇವಲ ಒಂದು ವಾರದಲ್ಲಿ ರೋಗ ಲಕ್ಷಣಗಳು ಇಲ್ಲವಾಗುವುದು. ಮನೆಮದ್ದು ಮಾಡಿಯೂ ಸಮಸ್ಯೆ ಕಡಿಮೆಯಾಗದಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ, ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.
ಇಲ್ಲಿ ಬ್ರಾಂಕೈಟಿಸ್ಗೆ ಯಾವ ಮನೆಮದ್ದು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದೇವೆ ನೋಡಿ:

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಅಂಶವಿರುತ್ತದೆ, ಇದು ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ. Pharmacognosy Review ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಬ್ರಾಂಕೈಟಿಸ್ಗೆ ಬೆಳ್ಳುಳ್ಳಿ ಪರಿಣಾಮಕಾರಿ ಎಂದು ಹೇಳಿದೆ.
- ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಿ
- ಆಹಾರದಲ್ಲಿ ಸೇರಿಸಿ.

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಬಿಸಿ ನೀರಿಗೆ 1 ಚಮಚ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ, ಈ ರೀತಿ ದಿನದಲ್ಲಿ 4-5 ಬಾರಿ ಮಾಡುತ್ತಾ ಇರಿ, ಹೆಚ್ಚು ಮಾಡಿದರೆ ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ಬೇಗನೆ ಸಮಸ್ಯೆ ಕಡಿಮೆಯಾಗುವುದು.

ಶುಂಠಿ
ಬ್ರಾಂಕೈಟಿಸ್ಗೆ ಶುಂಠಿ ಕೂಡ ಪರಿಣಾಮಕಾರಿ ಎಂಬುವುದು ಅಧ್ಯಯನಗಳು ಹೇಳಿವೆ. ಶುಂಠಿಯಲ್ಲಿ ಜಿಂಜರೋಲ್ ಅಂಶವಿದ್ದು ಇದು ಗಂಟಲಿನಲ್ಲಿರುವ ಸೋಂಕು ನಿವಾರಣೆ ಮಾಡುತ್ತದೆ. ಶುಂಠಿ ಟೀ ಮಾಡಿ ಕುಡಿಯುವುದು, ಶುಂಠಿ ರಸ ತೆಗೆದು ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಒಳ್ಳೆಯದು.

ಹಬೆ ತೆಗೆದುಕೊಳ್ಳುವುದು
ಬಿಸಿ ಹಬೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿದ ಸಮಸ್ಯೆ ಇಲ್ಲವಾಗುವುದು. ಬಿಸಿ ನೀರಿಗೆ ಸ್ವಲ್ಪ ಅರಿಶಿಣ ಪುಡಿ, ಬೆಳ್ಳುಳ್ಳಿ ಹಾಕಿ ಕುದಿಸಿ ನಂತರ ಹಬೆ ತೆಗೆದುಕೊಳ್ಳಿ. 10 ನಿಮಿಷ ಹಬೆ ತೆಗೆದುಕೊಳ್ಳಿ. ಈ ರೀತಿ ಬೆಳಗ್ಗೆ-ಸಂಜೆ ಮಾಡಿದರೆ ಬೇಗನೆ ಕಡಿಮೆಯಾಗುವುದು.

ಜೇನು ಮತ್ತು ನಿಂಬೆರಸ
ಬಿಸಿ ನೀರಿಗೆ ಜೇನು ಮತ್ತು ನಿಂಬೆರಸ ಹಾಕಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಅಲ್ಲದೆ ಕೆಮ್ಮು ಕಡಿಮೆಯಾಗುವುದು. ಈ ರೀತಿ ದಿನದಲ್ಲಿ 3 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುವುದು.

ನೀಲಗಿರಿ ಎಣ್ಣೆ
ಬಿಸಿ ನೀರನ್ನು ಕುದಿಸಿ ಅದಕ್ಕೆ 10 ಹನಿ ನೀಲಗಿರಿ ಎಣ್ಣೆ ಹಾಕಿ ಹಬೆ ತೆಗೆದುಕೊಂಡರೂ ಮೂಗು ಕಟ್ಟುವುದು ಕಡಿಮೆಯಾಗುವುದು, ಉಸಿರಾಟಕ್ಕೆ ಸಹಾಯವಾಗುತ್ತದೆ. ಇದನ್ನು ಕಡಿಮೆಯಾಗುವವರೆಗೆ ದಿನದಲ್ಲಿ 3 ಬಾರಿ ಮಾಡಿ.

ಟೀ ಟ್ರೀ ಆಯಿಲ್
ಒಂದು ಗ್ಲಾಸ್ನಲ್ಲಿ ನೀರನ್ನು ಕುದಿಸಿ ಅದಕ್ಕೆ ಟೀ ಟ್ರೀ ಆಯಿಲ್ ಹಾಕಿ ಅದರ ಹಬೆ ತೆಗೆದುಕೊಂಡರೂ ಮೂಗು ಕಟ್ಟುವುದು ಕಡಿಮೆಯಾಗುವುದು. ಟೀ ಟ್ರೀ ಎಣ್ಣೆಗೆ ಉರಿಯೂತ ಕಡಿಮೆ ಮಾಡುವ, ಬ್ಯಾಕ್ಟಿರಿಯಾ ನಾಶ ಮಾಡುವ ಗುಣವಿದೆ ಎಂದು ಅಧ್ಯಯನಗಳು ಹೇಳಿವೆ.

ಸಾಕಷ್ಟು ನೀರು ಕುಡಿಯಿರಿ
ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ. ದಿನದಲ್ಲಿ 12 ಲೋಟ ನೀರು ಕುಡಿಯಿರಿ ನೀರಿಗೆ ನಿಂಬೆರಸ ಅಥವಾ ಜೇನು ಹಾಕಿ ಕುಡಿಯಬಹುದು. ಅರಿಶಿಣ ಹಾಕಿ ಕುಡಿಯಬಹುದು.

ಬಿಸಿ ಬಿಸಿಯಾದ ಸೂಪ್ ಕುಡಿಯಿರಿ
ವೆಜ್ ಅಥವಾ ಚಿಕನ್ ಸೂಪ್ ಮಾಡಿ ಬಿಸಿ ಬಿಸಿಯಾಗಿ ಕುಡಿಯಿರಿ. ಇದು ಗಂಟಲು ಕೆರೆತ ಬೇಗನೆ ಕಡಿಮೆ ಮಾಡುತ್ತದೆ ಹಾಗೂ ಮೈ ಕೈ ನೋವು, ಸುಸ್ತು ಕಡಿಮೆಮಾಡುತ್ತದೆ.

ಅರಿಶಿಣ
ಆಹಾರದಲ್ಲಿ ಅರಿಶಿಣವನ್ನು ಬಳಸಿ, ಹಾಲು ಅಥವಾ ನೀರಿಗೆ ಅರಿಶಿಣ ಹಾಕಿ ಕುಡಿಯಿರಿ. ಇದರಿಂದ ಗಂಟಲಿನಲ್ಲಿ ಕೆರೆತ ಕಡಿಮೆಯಾಗುವುದು.

ಜೀವನಶೈಲಿ ಹೀಗಿರಲಿ
ಸರಿಯಾಗಿ ನಿದ್ದೆ ಮಾಡಿ
ಧೂಮಮಾನ ಮಾಡಬೇಡಿ
ಆರೋಗ್ಯಕರ ಆಹಾರ ಸೇವಿಸಿ.



Click it and Unblock the Notifications