Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರಾಂಕೈಟಿಸ್ಗೆ (ಶ್ವಾಸನಾಳದ ಒಳಪೊರೆಯ ಉರಿಯೂತ) ಮನೆಮದ್ದು
ಬ್ರಾಂಕೈಟಿಸ್ ಎನ್ನುವುದು ಶ್ವಾಸನಾಳದ ಒಳಪೊರೆಯ ಉರಿಯೂತದ ಸಮಸ್ಯೆಯಾಗಿದೆ. ಈ ಶ್ವಾಸನಾಳದ ಉರಿಯೂತದ ಸಮಸ್ಯೆ ಸಾಮಾನ್ಯ ಶೀತ, ಕೆಮ್ಮಿನಿಂದ ಪ್ರಾರಂಭವಾಗಿ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುವುದು.

ಶೀತ, ಮೂಗು ಕಟ್ಟುವುದು, ವಿಪರೀತ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇದು ಈ ರೋಗದ ಲಕ್ಷಣವಾಗಿದೆ.
ಬ್ರಾಂಕೈಟಿಸ್ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿ ಮನೆಯಲ್ಲಿಯೇ ಕೆಲ ಮನೆಮದ್ದು ಮಾಡುವ ಗುಣಪಡಿಸಬಹುದು. ಕೇವಲ ಒಂದು ವಾರದಲ್ಲಿ ರೋಗ ಲಕ್ಷಣಗಳು ಇಲ್ಲವಾಗುವುದು. ಮನೆಮದ್ದು ಮಾಡಿಯೂ ಸಮಸ್ಯೆ ಕಡಿಮೆಯಾಗದಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ, ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.
ಇಲ್ಲಿ ಬ್ರಾಂಕೈಟಿಸ್ಗೆ ಯಾವ ಮನೆಮದ್ದು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದೇವೆ ನೋಡಿ:

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಅಂಶವಿರುತ್ತದೆ, ಇದು ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ. Pharmacognosy Review ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಬ್ರಾಂಕೈಟಿಸ್ಗೆ ಬೆಳ್ಳುಳ್ಳಿ ಪರಿಣಾಮಕಾರಿ ಎಂದು ಹೇಳಿದೆ.
- ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಿ
- ಆಹಾರದಲ್ಲಿ ಸೇರಿಸಿ.

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಬಿಸಿ ನೀರಿಗೆ 1 ಚಮಚ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ, ಈ ರೀತಿ ದಿನದಲ್ಲಿ 4-5 ಬಾರಿ ಮಾಡುತ್ತಾ ಇರಿ, ಹೆಚ್ಚು ಮಾಡಿದರೆ ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ಬೇಗನೆ ಸಮಸ್ಯೆ ಕಡಿಮೆಯಾಗುವುದು.

ಶುಂಠಿ
ಬ್ರಾಂಕೈಟಿಸ್ಗೆ ಶುಂಠಿ ಕೂಡ ಪರಿಣಾಮಕಾರಿ ಎಂಬುವುದು ಅಧ್ಯಯನಗಳು ಹೇಳಿವೆ. ಶುಂಠಿಯಲ್ಲಿ ಜಿಂಜರೋಲ್ ಅಂಶವಿದ್ದು ಇದು ಗಂಟಲಿನಲ್ಲಿರುವ ಸೋಂಕು ನಿವಾರಣೆ ಮಾಡುತ್ತದೆ. ಶುಂಠಿ ಟೀ ಮಾಡಿ ಕುಡಿಯುವುದು, ಶುಂಠಿ ರಸ ತೆಗೆದು ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಒಳ್ಳೆಯದು.

ಹಬೆ ತೆಗೆದುಕೊಳ್ಳುವುದು
ಬಿಸಿ ಹಬೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿದ ಸಮಸ್ಯೆ ಇಲ್ಲವಾಗುವುದು. ಬಿಸಿ ನೀರಿಗೆ ಸ್ವಲ್ಪ ಅರಿಶಿಣ ಪುಡಿ, ಬೆಳ್ಳುಳ್ಳಿ ಹಾಕಿ ಕುದಿಸಿ ನಂತರ ಹಬೆ ತೆಗೆದುಕೊಳ್ಳಿ. 10 ನಿಮಿಷ ಹಬೆ ತೆಗೆದುಕೊಳ್ಳಿ. ಈ ರೀತಿ ಬೆಳಗ್ಗೆ-ಸಂಜೆ ಮಾಡಿದರೆ ಬೇಗನೆ ಕಡಿಮೆಯಾಗುವುದು.

ಜೇನು ಮತ್ತು ನಿಂಬೆರಸ
ಬಿಸಿ ನೀರಿಗೆ ಜೇನು ಮತ್ತು ನಿಂಬೆರಸ ಹಾಕಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಅಲ್ಲದೆ ಕೆಮ್ಮು ಕಡಿಮೆಯಾಗುವುದು. ಈ ರೀತಿ ದಿನದಲ್ಲಿ 3 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುವುದು.

ನೀಲಗಿರಿ ಎಣ್ಣೆ
ಬಿಸಿ ನೀರನ್ನು ಕುದಿಸಿ ಅದಕ್ಕೆ 10 ಹನಿ ನೀಲಗಿರಿ ಎಣ್ಣೆ ಹಾಕಿ ಹಬೆ ತೆಗೆದುಕೊಂಡರೂ ಮೂಗು ಕಟ್ಟುವುದು ಕಡಿಮೆಯಾಗುವುದು, ಉಸಿರಾಟಕ್ಕೆ ಸಹಾಯವಾಗುತ್ತದೆ. ಇದನ್ನು ಕಡಿಮೆಯಾಗುವವರೆಗೆ ದಿನದಲ್ಲಿ 3 ಬಾರಿ ಮಾಡಿ.

ಟೀ ಟ್ರೀ ಆಯಿಲ್
ಒಂದು ಗ್ಲಾಸ್ನಲ್ಲಿ ನೀರನ್ನು ಕುದಿಸಿ ಅದಕ್ಕೆ ಟೀ ಟ್ರೀ ಆಯಿಲ್ ಹಾಕಿ ಅದರ ಹಬೆ ತೆಗೆದುಕೊಂಡರೂ ಮೂಗು ಕಟ್ಟುವುದು ಕಡಿಮೆಯಾಗುವುದು. ಟೀ ಟ್ರೀ ಎಣ್ಣೆಗೆ ಉರಿಯೂತ ಕಡಿಮೆ ಮಾಡುವ, ಬ್ಯಾಕ್ಟಿರಿಯಾ ನಾಶ ಮಾಡುವ ಗುಣವಿದೆ ಎಂದು ಅಧ್ಯಯನಗಳು ಹೇಳಿವೆ.

ಸಾಕಷ್ಟು ನೀರು ಕುಡಿಯಿರಿ
ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ. ದಿನದಲ್ಲಿ 12 ಲೋಟ ನೀರು ಕುಡಿಯಿರಿ ನೀರಿಗೆ ನಿಂಬೆರಸ ಅಥವಾ ಜೇನು ಹಾಕಿ ಕುಡಿಯಬಹುದು. ಅರಿಶಿಣ ಹಾಕಿ ಕುಡಿಯಬಹುದು.

ಬಿಸಿ ಬಿಸಿಯಾದ ಸೂಪ್ ಕುಡಿಯಿರಿ
ವೆಜ್ ಅಥವಾ ಚಿಕನ್ ಸೂಪ್ ಮಾಡಿ ಬಿಸಿ ಬಿಸಿಯಾಗಿ ಕುಡಿಯಿರಿ. ಇದು ಗಂಟಲು ಕೆರೆತ ಬೇಗನೆ ಕಡಿಮೆ ಮಾಡುತ್ತದೆ ಹಾಗೂ ಮೈ ಕೈ ನೋವು, ಸುಸ್ತು ಕಡಿಮೆಮಾಡುತ್ತದೆ.

ಅರಿಶಿಣ
ಆಹಾರದಲ್ಲಿ ಅರಿಶಿಣವನ್ನು ಬಳಸಿ, ಹಾಲು ಅಥವಾ ನೀರಿಗೆ ಅರಿಶಿಣ ಹಾಕಿ ಕುಡಿಯಿರಿ. ಇದರಿಂದ ಗಂಟಲಿನಲ್ಲಿ ಕೆರೆತ ಕಡಿಮೆಯಾಗುವುದು.

ಜೀವನಶೈಲಿ ಹೀಗಿರಲಿ
ಸರಿಯಾಗಿ ನಿದ್ದೆ ಮಾಡಿ
ಧೂಮಮಾನ ಮಾಡಬೇಡಿ
ಆರೋಗ್ಯಕರ ಆಹಾರ ಸೇವಿಸಿ.



Click it and Unblock the Notifications
