Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿಯಲ್ಲಿ ಹಬ್ಬದ ಅಡುಗೆ ಸವಿಯಿರಿ: ಬಳಿಕ ಈ ಡಿಟಾಕ್ಸ್ ಮಾಡಿದರೆ ಸಾಕು ಮೈ ತೂಕ ಹೆಚ್ಚಲ್ಲ
ದೀಪಾವಳಿ ಹಬ್ಬ, ವರ್ಷಕ್ಕೊಮ್ಮೆ ಬರುವ ಹಬ್ಬ ಈ ಹಬ್ಬದ ಸಮಯದಲ್ಲಿ ಡಯಟ್ ಹೆಸರಿನಲ್ಲಿ ಹಬ್ಬದ ಅಡುಗೆ ಸವಿಯದಿರುವ ತಪ್ಪು ಮಾಡಬೇಡಿ. ವರ್ಷಕ್ಕೊಮ್ಮೆ ಬರುವ ಹಬ್ಬದ ಸಂಭ್ರಮ ಖುಷಿ ಖುಷಿಯಿಂದ ಸವಿಯಿರಿ, ಆದರೆ ನಂತರ ಬಾಡಿ ಡಿಟಾಕ್ಸ್ ಮಾಡಿದರೆ ಮೈ ತೂಕ ಹೆಚ್ಚಾಗಲ್ಲ.
ಆರೋಗ್ಯ ಸಮಸ್ಯೆ ಕಾಡಲ್ಲ, ಆದರೆ ಮಧುಮೇಹಿಗಳು ಮಾತ್ರ ಜಾಗ್ರತೆವಹಿಸಬೇಕು. ದೀಪಾವಳಿಗೆ ಸಿಹಿಯನ್ನು ತುಂಬಾನೇ ಮಿತಿಯಲ್ಲಿ ಸೇವಿಸಿ. ಹಬ್ಬದ ಸಮಯದಲ್ಲಿ ಆರೋಗ್ಯ ಕಾಪಾಡಲು ಕೆಲ ಸೂತ್ರಗಳು:

ನಿಂಬೆ ನೀರು
ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಕಶ್ಮಲ ಹೊರ ಹಾಕಲು ಸಹಕಾರಿಯಾಗಿದೆ. ತಿಂದ ಆಹಾರ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ. ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಸಾಕಷ್ಟು ನೀರು ಕುಡಿಯಿರಿ
ಹಬ್ಬದ ದಿನಗಳಲ್ಲಿ ತುಂಬಾ ನೀರು ಕುಡಿಯುವುದರಿಂದ ಆಹಾರ ಸೇವನೆ ತುಂಬಾ ಮಾಡಲು ಸಾಧ್ಯವಾಗಲ್ಲ, ಈ ರೀತಿ ಕೂಡ ನಿಯಂತ್ರಣ ಮಾಡಬಹುದು. ಆಹಾರ ಸೇವನೆಯ ನಂತರ ಒಂದು ಲೋಟ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ.
ಲೆಮನ್ ಟೀ ಅಥವಾ ಗ್ರೀನ್ ಟೀ
ಗ್ರೀನ್ ಟೀ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು. ಗ್ರೀನ್ ಟೀ ದಿನದಲ್ಲಿ 1-2 ಬಾರಿ ಸೇವಿಸಿ. ಈ ಟೀ ಕುಡಿಯುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ.
ಹಬ್ಬ ಕಳೆದ ಮೇಲೆ ಕ್ಯಾಲೋರಿ ಆಹಾರಗಳಿಗೆ ಬ್ರೇಕ್ ಹಾಕಿ, ನಾರಿನಂಶದ ಆಹಾರದ ಕಡೆಗೆ ಗಮನಹರಿಸಿ
ನಾರಿನಂಶ ಅಧಿಕವಿರುವ ಹಣ್ಣು-ತರಕಾರಿಗಳನ್ನು ಸೇವಿಸಿ. ಓಟ್ಸ್, ರಾಗಿ, ನವಣೆ, ಅಗಸೆ ಬೀಜ, ತರಕಾರಿಗಳು, ಚಿಯಾ ಸೀಡ್ಸ್ ಈ ಬಗೆಯ ಆಹಾರಗಳನ್ನು ಸೇವಿಸಿ. ಈ ಬಗೆಯ ಆಹಾರಕ್ರಮ ತೂಕ ನಿಯಂತ್ರಣಕ್ಕೆ ತುಂಬಾ ಸಹಕಾರಿ.
ಪ್ರೋಬಯೋಟಿಕ್ ಆಹಾರ ಸೇವಿಸಿ
ಪ್ರೋಬಯೋಟಿಕ್ ಆಹಾರ ಸೇವಿಸಿ, ಬೆರ್ರಿ ಹಣ್ಣುಗಳನ್ನು ಸೇವಿಸಿ, ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ದಿನಾ ಒಂದು ಬೌಲ್ ಮೊಸರು ಸೇವಿಸಿ.
ತರಕಾರಿ ಸೇವಿಸಿ
ಕ್ಯಾರೆಟ್, ಬೀಟ್ರೂಟ್, ಸೆಲೆರಿ ಈ ಬಗೆಯ ಆಹಾರಗಳ ಜ್ಯೂಸ್ ಮಾಡಿ ಕುಡಿಯಿರಿ. ಹಾಗಾಲಕಾಯಿ,ಪಾಲಾಕ್ ಜ್ಯೂಸ್ ಕೂಡ ಒಳ್ಳೆಯದು.
ವರ್ಕೌಟ್ ಮಾಡಿ
ಹಬ್ಬದ ದಿನಗಳಲ್ಲಿ ವರ್ಕೌಟ್ ಅಂತ ಗಮನ ನೀಡುವವರು ತುಂಬಾ ಕಡಿಮೆ, ಆದರೆ ವರ್ಕೌಟ್ ಆದ ಮಾರನೇಯ ದಿನದಿಂದಲೇ ವರ್ಕೌಟ್ ಮಾಡಿ, ಎಷ್ಟು ಬೆವರು ಸುರಿಸುತ್ತೀರೋ ನಿಮ್ಮ ಆರೋಗ್ಯಕ್ಕೆ ಒಳ್ಳೆಯಯ.
ಸಕ್ಕರೆಗೆ ಗುಡ್ ಬೈ ಹೇಳಿ
ದೀಪಾವಳಿಗೆ ಸಿಹ ತಿಂಡಿ ಸವಿಯಿರಿ, ಆದರೆ ಅದಾದ ಬಳಿಕ ಸಕ್ಕರೆಗೆ ಸಂಪೂರ್ಣ ಗುಡ್ ಬೈ ಹೇಳಿ, ಸಕ್ಕರೆಯನ್ನು ದೂರವಿಟ್ಟರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
ದೀಪಾವಳಿ ಬಳಿಕ ಈ ಬಗೆಯ ಆಹಾರಗಳನ್ನು ಕಟ್ ಮಾಡಿ
ಸಿಹಿ ತಿಂಡಿಗಳು: ಯಾವುದೇ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ. ಸಕ್ಕೆಯಂಶದ ಆಹಾರ ಉರಿಯೂತದ ಸಮಸ್ಯೆ, ಲಿವರ್ ಸಮಸ್ಯೆ ಉಂಟಾಗುವುದು ಈ ಬಗ್ಗೆ ಜಾಗ್ರತೆವಹಿಸಿ.
ಕರಿದ ಪದಾರ್ಥಗಳನ್ನು ಸೇವಿಸಬೇಡಿ: ಈ ಬಗೆಯ ಆಹಾರಗಳಿಂದ ದೂರವಿರಿ, ಇಲ್ಲದಿದ್ದರೆ ಹೊಟ್ಟೆ ಉಬ್ಬುವಿಕೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತೂಕ ಹೆಚ್ಚಾಗುವುದು.ಈ ಬಗೆಯ ಸಮಸ್ಯೆ ತಡೆಗಟ್ಟಲು ಆಹಾರಕ್ರಮದ ಕಡೆಗೆ ಗಮನಹರಿಸಿ.
ಹೆಚ್ಚು ಕಾರ್ಬ್ಸ್ ಸೇವಿಸಬೇಡಿ: ಕಾರ್ಬ್ಸ್ ಹೆಚ್ಚಾದರೆ ಕಿಡ್ನಿಗೆ ತೊಂದರೆ ಉಂಟಾಗುತ್ತದೆ. ಸಂಸ್ಕರಿಸಿದ ಆಹಾರದಿಂದ ದೂರವಿರಿ
ಸೋಡಿಯಂ ಇರುವ ಆಹಾರ ಸೇವಿಸಬೇಡಿ: ಸೋಡಿಯಂ ಇರುವ ಆಹಾರ ದೇಹದಲ್ಲಿನ ನೀರಿನಂಶ ಹೀರಿಕೊಳ್ಳುತ್ತದೆ, ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮದ್ಯ ಈ ಬಗೆಯ ಆಹಾರ ಸೇವಿಸಬೇಡಿ
ಈ ರೀತಿ ಆಹಾರಕ್ರಮ ಪಾಲಿಸಿದರೆ ನೀವು ಆರೋಗ್ಯಕರ ಮೈ ತೂಕ ಕಾಪಾಡಿಕೊಳ್ಳಬಹುದು, ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications