Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ದೀಪಾವಳಿಯಲ್ಲಿ ಹಬ್ಬದ ಅಡುಗೆ ಸವಿಯಿರಿ: ಬಳಿಕ ಈ ಡಿಟಾಕ್ಸ್ ಮಾಡಿದರೆ ಸಾಕು ಮೈ ತೂಕ ಹೆಚ್ಚಲ್ಲ
ದೀಪಾವಳಿ ಹಬ್ಬ, ವರ್ಷಕ್ಕೊಮ್ಮೆ ಬರುವ ಹಬ್ಬ ಈ ಹಬ್ಬದ ಸಮಯದಲ್ಲಿ ಡಯಟ್ ಹೆಸರಿನಲ್ಲಿ ಹಬ್ಬದ ಅಡುಗೆ ಸವಿಯದಿರುವ ತಪ್ಪು ಮಾಡಬೇಡಿ. ವರ್ಷಕ್ಕೊಮ್ಮೆ ಬರುವ ಹಬ್ಬದ ಸಂಭ್ರಮ ಖುಷಿ ಖುಷಿಯಿಂದ ಸವಿಯಿರಿ, ಆದರೆ ನಂತರ ಬಾಡಿ ಡಿಟಾಕ್ಸ್ ಮಾಡಿದರೆ ಮೈ ತೂಕ ಹೆಚ್ಚಾಗಲ್ಲ.
ಆರೋಗ್ಯ ಸಮಸ್ಯೆ ಕಾಡಲ್ಲ, ಆದರೆ ಮಧುಮೇಹಿಗಳು ಮಾತ್ರ ಜಾಗ್ರತೆವಹಿಸಬೇಕು. ದೀಪಾವಳಿಗೆ ಸಿಹಿಯನ್ನು ತುಂಬಾನೇ ಮಿತಿಯಲ್ಲಿ ಸೇವಿಸಿ. ಹಬ್ಬದ ಸಮಯದಲ್ಲಿ ಆರೋಗ್ಯ ಕಾಪಾಡಲು ಕೆಲ ಸೂತ್ರಗಳು:

ನಿಂಬೆ ನೀರು
ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಕಶ್ಮಲ ಹೊರ ಹಾಕಲು ಸಹಕಾರಿಯಾಗಿದೆ. ತಿಂದ ಆಹಾರ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ. ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಸಾಕಷ್ಟು ನೀರು ಕುಡಿಯಿರಿ
ಹಬ್ಬದ ದಿನಗಳಲ್ಲಿ ತುಂಬಾ ನೀರು ಕುಡಿಯುವುದರಿಂದ ಆಹಾರ ಸೇವನೆ ತುಂಬಾ ಮಾಡಲು ಸಾಧ್ಯವಾಗಲ್ಲ, ಈ ರೀತಿ ಕೂಡ ನಿಯಂತ್ರಣ ಮಾಡಬಹುದು. ಆಹಾರ ಸೇವನೆಯ ನಂತರ ಒಂದು ಲೋಟ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ.
ಲೆಮನ್ ಟೀ ಅಥವಾ ಗ್ರೀನ್ ಟೀ
ಗ್ರೀನ್ ಟೀ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು. ಗ್ರೀನ್ ಟೀ ದಿನದಲ್ಲಿ 1-2 ಬಾರಿ ಸೇವಿಸಿ. ಈ ಟೀ ಕುಡಿಯುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ.
ಹಬ್ಬ ಕಳೆದ ಮೇಲೆ ಕ್ಯಾಲೋರಿ ಆಹಾರಗಳಿಗೆ ಬ್ರೇಕ್ ಹಾಕಿ, ನಾರಿನಂಶದ ಆಹಾರದ ಕಡೆಗೆ ಗಮನಹರಿಸಿ
ನಾರಿನಂಶ ಅಧಿಕವಿರುವ ಹಣ್ಣು-ತರಕಾರಿಗಳನ್ನು ಸೇವಿಸಿ. ಓಟ್ಸ್, ರಾಗಿ, ನವಣೆ, ಅಗಸೆ ಬೀಜ, ತರಕಾರಿಗಳು, ಚಿಯಾ ಸೀಡ್ಸ್ ಈ ಬಗೆಯ ಆಹಾರಗಳನ್ನು ಸೇವಿಸಿ. ಈ ಬಗೆಯ ಆಹಾರಕ್ರಮ ತೂಕ ನಿಯಂತ್ರಣಕ್ಕೆ ತುಂಬಾ ಸಹಕಾರಿ.
ಪ್ರೋಬಯೋಟಿಕ್ ಆಹಾರ ಸೇವಿಸಿ
ಪ್ರೋಬಯೋಟಿಕ್ ಆಹಾರ ಸೇವಿಸಿ, ಬೆರ್ರಿ ಹಣ್ಣುಗಳನ್ನು ಸೇವಿಸಿ, ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ದಿನಾ ಒಂದು ಬೌಲ್ ಮೊಸರು ಸೇವಿಸಿ.
ತರಕಾರಿ ಸೇವಿಸಿ
ಕ್ಯಾರೆಟ್, ಬೀಟ್ರೂಟ್, ಸೆಲೆರಿ ಈ ಬಗೆಯ ಆಹಾರಗಳ ಜ್ಯೂಸ್ ಮಾಡಿ ಕುಡಿಯಿರಿ. ಹಾಗಾಲಕಾಯಿ,ಪಾಲಾಕ್ ಜ್ಯೂಸ್ ಕೂಡ ಒಳ್ಳೆಯದು.
ವರ್ಕೌಟ್ ಮಾಡಿ
ಹಬ್ಬದ ದಿನಗಳಲ್ಲಿ ವರ್ಕೌಟ್ ಅಂತ ಗಮನ ನೀಡುವವರು ತುಂಬಾ ಕಡಿಮೆ, ಆದರೆ ವರ್ಕೌಟ್ ಆದ ಮಾರನೇಯ ದಿನದಿಂದಲೇ ವರ್ಕೌಟ್ ಮಾಡಿ, ಎಷ್ಟು ಬೆವರು ಸುರಿಸುತ್ತೀರೋ ನಿಮ್ಮ ಆರೋಗ್ಯಕ್ಕೆ ಒಳ್ಳೆಯಯ.
ಸಕ್ಕರೆಗೆ ಗುಡ್ ಬೈ ಹೇಳಿ
ದೀಪಾವಳಿಗೆ ಸಿಹ ತಿಂಡಿ ಸವಿಯಿರಿ, ಆದರೆ ಅದಾದ ಬಳಿಕ ಸಕ್ಕರೆಗೆ ಸಂಪೂರ್ಣ ಗುಡ್ ಬೈ ಹೇಳಿ, ಸಕ್ಕರೆಯನ್ನು ದೂರವಿಟ್ಟರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
ದೀಪಾವಳಿ ಬಳಿಕ ಈ ಬಗೆಯ ಆಹಾರಗಳನ್ನು ಕಟ್ ಮಾಡಿ
ಸಿಹಿ ತಿಂಡಿಗಳು: ಯಾವುದೇ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ. ಸಕ್ಕೆಯಂಶದ ಆಹಾರ ಉರಿಯೂತದ ಸಮಸ್ಯೆ, ಲಿವರ್ ಸಮಸ್ಯೆ ಉಂಟಾಗುವುದು ಈ ಬಗ್ಗೆ ಜಾಗ್ರತೆವಹಿಸಿ.
ಕರಿದ ಪದಾರ್ಥಗಳನ್ನು ಸೇವಿಸಬೇಡಿ: ಈ ಬಗೆಯ ಆಹಾರಗಳಿಂದ ದೂರವಿರಿ, ಇಲ್ಲದಿದ್ದರೆ ಹೊಟ್ಟೆ ಉಬ್ಬುವಿಕೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತೂಕ ಹೆಚ್ಚಾಗುವುದು.ಈ ಬಗೆಯ ಸಮಸ್ಯೆ ತಡೆಗಟ್ಟಲು ಆಹಾರಕ್ರಮದ ಕಡೆಗೆ ಗಮನಹರಿಸಿ.
ಹೆಚ್ಚು ಕಾರ್ಬ್ಸ್ ಸೇವಿಸಬೇಡಿ: ಕಾರ್ಬ್ಸ್ ಹೆಚ್ಚಾದರೆ ಕಿಡ್ನಿಗೆ ತೊಂದರೆ ಉಂಟಾಗುತ್ತದೆ. ಸಂಸ್ಕರಿಸಿದ ಆಹಾರದಿಂದ ದೂರವಿರಿ
ಸೋಡಿಯಂ ಇರುವ ಆಹಾರ ಸೇವಿಸಬೇಡಿ: ಸೋಡಿಯಂ ಇರುವ ಆಹಾರ ದೇಹದಲ್ಲಿನ ನೀರಿನಂಶ ಹೀರಿಕೊಳ್ಳುತ್ತದೆ, ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮದ್ಯ ಈ ಬಗೆಯ ಆಹಾರ ಸೇವಿಸಬೇಡಿ
ಈ ರೀತಿ ಆಹಾರಕ್ರಮ ಪಾಲಿಸಿದರೆ ನೀವು ಆರೋಗ್ಯಕರ ಮೈ ತೂಕ ಕಾಪಾಡಿಕೊಳ್ಳಬಹುದು, ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
