Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಡೆಂಗ್ಯೂ ತಡೆಗಟ್ಟಲು ' ಡ್ರೈ ಡೇ' ಅಭಿಯಾನ : ಈ ಅಪಾಯಕಾರಿ ಡೆಂಗ್ಯೂನಿಂದ ಪಾರಾಗಲು ನೀವೇನು ಮಾಡಬೇಕು ?
ಜ್ವರ ಎಂದಾಗ ಜನರಿಗೆ ಆತಂಕ ಉಂಟಾಗುತ್ತಿದೆ. ಕಾರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಗ್ಯೂ ಸಂಖ್ಯೆ. ರಾಜ್ಯದ ಆರೋಗ್ಯ ಇಲಾಖೆಯ ವರದಿ ಪ್ರಕಾರ ಜೂನ್ 28ಕ್ಕೆ ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ 1530 ತಲುಪಿದೆ, ನಿಜವಾಗಲೂ ಇದು ಆತಂಕ ಹುಟ್ಟಿಸುವ ಸಂಖ್ಯೆ ಆಗಿದೆ, ಡೆಂಗ್ಯೂವಿಗೆ 9 ಬಲಿಯಾಗಿದೆ.

ಡೆಂಗ್ಯೂ ತಡೆಗಟ್ಟಲು ಡ್ರೈ ಡೇ ಅಭಿಯಾನ
ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಡ್ರೈ ಡೇ ಅಭಿಯಾನಕ್ಕೆ ಕರೆ ಈಡಿದ್ದಾರೆ. ಏನಿದು ಡ್ರೈ ಡೇ ಎಂದು ನೋಡುವುದಾದರೆ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆವಹಿಸುವುದು. ಬಾಟಲಿಗಳಲ್ಲಿ, ತೆಂಗಿನಕಾಆಯಿ ಚಿಪ್ಪುಗಳಲ್ಲಿ , ಹಳೆಯ ಟೈರ್ಗಳಲ್ಲಿ ಹೀಗೆ ಬಿಸಾಡಿರುವ ವಸ್ತುಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆವಹಿಸುವುದು. ಇದೊಂದು ಚಿಕ್ಕ ಪ್ಲ್ಯಾನ್ ಆದರೂ ಪರಿಣಾಮಕಾರಿಯಾದ ಪ್ಲ್ಯಾನ್ ಹೌದು, ಏಕೆಂದರೆ ಡೆಂಗ್ಯೂ ಹರಡುತ್ತಿರುವುದು ಸೊಳ್ಳೆ ಕಚ್ಚುವುದರಿಂದ. ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತದೆ. ಹೀಗಾಗಿ ಸೊಳ್ಳೆ ತಡೆಗಟ್ಟಲು ಮುಂದಾಗುವುದು ಪ್ರಮುಖ ಹೆಜ್ಜೆಯಾಗಿದೆ, ಹೀಗಾಗಿ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆವಹಿಸಲು ಸಲಹೆ ನೀಡಲಾಗುವುದು.
ಸೊಳ್ಳೆಗಟ್ಟಲು ಏನು ಮಾಡಬೇಕು?
ಡೆಂಗ್ಯೂ ತಡೆಗಟ್ಟಲು ಪರಿಣಾಮಕಾರಿಯಾದ ವಿಧಾನವೆಂದರೆ ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸುವುದು. ಸೊಳ್ಳೆ ಕಚ್ಚದಿರಲು ತುಂಬಾನೇ ಜಾಗ್ರತೆವಹಿಸಿ
ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು
ಮಳೆಗಾಲದಲ್ಲಿ ಸೊಳ್ಳೆ ಅಲ್ಲಲ್ಲಿ ನಿಂತಿರುತ್ತದೆ, ಹೀಗಾಗಿ ಮಳೆಗಾಲದಲ್ಲಿ ಸೊಳ್ಳೆಗಳ ಆಟ ಮಿತಿ ಮೀರುವುದು, ಸೊಳ್ಳೆ ಕಡಿತದಿಂದ ಡೆಂಗ್ಯೂ ಮಾತ್ರವಲ್ಲ ಚಿಕನ್ಗುನ್ಯಾಮ ಮಲೇರಿಯಾ ಕೂಡ ಹರಡುವುದು, ಆದ್ದರಿಂದ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವತ್ತ ಪ್ರಮುಖ ಗಮನಹರಿಸಬೇಕು.
ಬಿಂದಿಗೆ, ಡಬ್ಬ, ಡ್ರಮ್ ಅಂತ ನೀರು ತುಂಬಿಡಬೇಡಿ
ಹೌದು ನೀವು ನೀರನ್ನು ಪಾತ್ರೆಗಳಲ್ಲಿ ತುಂಬಿಟ್ಟು ಅದನ್ನು ಮುಚ್ಚದೆ ಇದ್ದರೆ ಸೊಳ್ಳೆಗಳು ಕೂತು ಮೊಟ್ಟೆ ಹಾಕಿ ಮರಿ ಮಾಡುತ್ತದೆ, ಆದ್ದರಿಂದ ನೀವು ನೀರನ್ನು ತುಂಬಿಡುವ ಪಾತ್ರೆಯನ್ನು ಮುಚ್ಚಿರಬೇಕು. ಇನ್ನು ಸುತ್ತ ಮುತ್ತ ನೀರು ನಿಲ್ಲುವ ವಸ್ತುಗಳನ್ನು ಬಿಸಾಡಬೇಡಿ, ಮಳೆ ನೀರು ಬಿದ್ದು ಹಾಗೇ ನಿಲ್ಲಬಾರದು, ಆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ ಈ ರೀತಿ ಜಾಗ್ರತೆವಹಿಸಿ.
ಸೊಳ್ಳೆ ಕಚ್ಚದಂಥ ಉಡುಪು ಧರಿಸಿ
ಸಡಿಲವಾದ ಮೈ ತುಂಬಾ ಮುಚ್ಚುವ ಬಟ್ಟೆ ಸೊಳ್ಳೆಯಿಂದ ರಕ್ಷಣೆ ನೀಡುತ್ತದೆ. ಇನ್ನು ಕಪ್ಪು ಬಟ್ಟೆ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಆದ್ದರಿಂದ ಕಪ್ಪು ಬಟ್ಟೆ ಧರಿಸಿ ಸಂಜೆ ಹೊತ್ತು ಹೊರಗಡೆ ತಿರುಗಾಡಬೇಡಿ, ಧರಿಸಿದರೂ ಸೊಳ್ಳೆ ಕಚ್ಚದಂಥ ಕ್ರೀಮ್ ಅಥವಾ ಸ್ಪ್ರೇ ಸಿಗುತ್ತೆ, ಅವುಗಳನ್ನು ಬಳಸಿ. ಮಕ್ಕಳಿಗೂ ಅಷ್ಟೇ ಸೊಳ್ಳೆ ಕಚ್ಚದಿರಲು ಪ್ಯಾಂಟ್ ಹಾಗೂ ತುಂಬು ತೋಳಿನ ಉಡುಪು ಹಾಕಿಕೊಡಿ.
ಸೊಳ್ಳೆ ಪರದೆಯನ್ನು ಬಳಸಿ
ಚಿಕ್ಕ ಮಕ್ಕಳನ್ನು ಕಡ್ಡಾಯವಾಗಿ ಸೊಳ್ಳೆ ಪರದೆಯೊಳಗಡೆ ಮಲಗಿಸಿ, ನೀವು ಕೂಡ ಸೊಳ್ಳೆ ಪರದೆಯೊಳಗಡೆ ಮಲಗಿ, ಡೆಂಗ್ಯೂ ಅಧಿಕವಿರುವ ಈ ಸಮಯದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಸುರಕ್ಷತೆ ಕಡೆ ಗಮನಹರಿಸಿ.
ಸಂಜೆ ಹೊತ್ತು ಮಕ್ಕಳನ್ನು ಹೊರಗಡೆ ಬಿಡಬೇಡಿ
ಹೌದು ಬೆಳಗ್ಗೆ ಹಾಗೂ ಸಂಜೆ ಹೊತ್ತು ಮನೆಯಿಂದ ಹೊರಗಡೆ ಆಡಲು ಬಿಡಬೇಡಿ. ಇನ್ನು ಸಮಯದಲ್ಲಿ ಕಿಟಕಿ, ಬಾಗಿಲು ಮುಚ್ಚಿ, ಕಿಟಕಿ ತೆರೆದಿಡುವುದಾದರೆ ಸೊಳ್ಳೆ ಪರದೆ ಇರಬೇಕು.
ಸೊಳ್ಳೆಗಳನ್ನು ಕೊಲ್ಲಲು ಇರುವ ವಸ್ತುಗಳನ್ನು ಬಳಸಿ
ಸೊಳ್ಳೆ ಕಾಯಿಲ್/ ಸೊಳ್ಳೆ ಬತ್ತಿ , ಕೆಲವೊಂದು ಎಣ್ಣೆಗಳ ಸ್ಪ್ರೇ ಉದಾಹರಣೆಗೆ ನೀಲಗಿರಿ ಎಣ್ಣೆ ಇವುಗಳು ಸೊಳ್ಳೆ ತಡೆಗಟ್ಟಲು ಸಹಾಯ ಮಾಡುತ್ತದೆ.
ತುಂಬಾ ಸುವಾಸನೆ ಇರುವ ವಸ್ತುಗಳನ್ನು ಮೈಗೆ ಬಳಸಬೇಡಿ
ಲೋಷನ್, ಶ್ಯಾಂಪೂ, ಕೆಲವೊಂದು ಸುವಾಸನೆ ಎಣ್ಣೆ ಇವೆಲ್ಲವೂ ಸೊಳ್ಳೆಗಳನ್ನು ಆಕರ್ಷಿಸುತ್ತದೆ, ಹಾಗಾಗಿ ಇಂಥ ವಸ್ತುಗಳನ್ನು ಹೊರಗಡೆ ಹೋಗುವಾಗ ಬಳಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











