Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಶುಕ್ರಾಣು ವೃದ್ಧಿಗೆ ನಸುಗುನ್ನಿ ಗಿಡಮೂಲಿಕೆಯ ಪರಿಹಾರ..! ಈ ಗಿಡದ ಬೀಜದ ಮಹತ್ವ ಗೊತ್ತಾ?
ನಮ್ಮೆಲ್ಲಾ ಅನಾರೋಗ್ಯಕ್ಕೂ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆಯಂತು ಇದೆ. ನಮ್ಮ ನಡುವೆ ಇರುವ ಹಲವು ಗಿಡಮೂಲಿಕೆಗಳೇ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಅದರಲ್ಲೂ ಕೆಲವೊಂದು ಎಂತಹ ಗಭೀರ ಸ್ವರೂಪದ ಅನಾರೋಗ್ಯ ಸಮಸ್ಯೆಯಾಗಿದ್ದರೂ ಕೂಡ ಅಲ್ಲಿ ಪರಿಹಾರವಂತೂ ಇದ್ದೇ ಇದೆ. ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಗಿಡಮೂಲಿಕೆ ಚಿಕಿತ್ಸೆ ಇಂದಿಗೂ ಪ್ರಸ್ತುತ ಎನಿಸಿದೆ.
ಹಾಗೆ ನಾವಿಂದು ಈ ನಸುಗುನ್ನಿ ಎನ್ನುವ ಒಂದು ಗಿಡಮೂಲಿಕೆಯ ಉಪಯೋಗ ಹಾಗು ಅದನ್ನು ಯಾವ ಯಾವ ರೀತಿಯ ಚಿಕಿತ್ಸೆಗೆ ಬಳಸಲಾಗುತ್ತಿದೆ ಎಂಬ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ನಸುಗುನ್ನಿ ಎಂಬ ಗಿಡಮೂಲಿಕೆಯನ್ನ ಔಷಧಿಯ ಉದ್ದೇಶದಿಂದಲೇ ಬೆಳೆಯುತ್ತಾರೆ. ಹತ್ತಾರು ಔಷಧಿ ತಯಾರಿಕಾ ಕಂಪನಿಗಳಿಗೆ ಈ ಗಿಡಮೂಲಿಕೆಯನ್ನು ಮಾರಾಟ ಮಾಡಲಾಗುತ್ತದೆ.

ಈಗ ಈ ನಸುಗುನ್ನಿ ಗಿಡಮೂಲಿಕೆ ವಾಣಿಜ್ಯ ಉದ್ದೇಶದಿಂದಲೂ ರೈತರು ಬೆಳೆಯುತ್ತಾರೆ. ಇದು ನಿಮ್ಮ ಹೊಲದಲ್ಲಿ ಕೀಟನಾಶಕವಾಗಿ, ಇಲಿಗಳ ಕಾಟದಿಂದಲೂ ಬೆಳೆಗಳ ಉಳಿಸುವ ಶಕ್ತಿ ಹೊಂದಿದೆ. ಈ ಮೊದಲು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎರಡು ವಿಶೇಷ ತಳಿಗಳನ್ನು ಅಭಿವೃದ್ಧಿ ಪಡಿಸಿತ್ತು, ಇದನ್ನು ರೈತರು ಬೆಳೆಯಲು ಶಿಫಾರಸ್ಸು ಸಹ ಮಾಡಲಾಗಿತ್ತು.
ನಸುಗುನ್ನಿ ವಿಸ್ತರಣೆಯಾದಂತೆ ಸಾವಯವ ಇಂಗಾಲದ ಅಂಶ ಜಾಸ್ತಿಯಾಗಿದೆ. ಜತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಕೂಡ ಹೆಚ್ಚಿದ್ದು ಮಣ್ಣಿನ ಫಲವತ್ತತೆ ಹೆಚ್ಚಳವಾಗುತ್ತದೆ. ಇದರಿಂದ ರೈತರು ಈ ನಸುಗುನ್ನಿಯನ್ನು ತೆಂಗಿನ ತೋಟದಲ್ಲಿ ಹಾಕಿ ಇಳುವಳಿ ಹೆಚ್ಚಾಗಿರುವ ಇದಾಹರಣೆ ನೊಡಬಹುದು, ಆದ್ರೆ ನಾವಿಂದು ಈ ನಸುಗುನ್ನಿಯ ಆರೋಗ್ಯಕರ ಅಂಶಗಳೇನು? ಯಾವೆಲ್ಲಾ ಚಿಕಿತ್ಸೆಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ದಾತು ಪುಷ್ಟಿಗೆ ಸಹಕಾರಿ
ಈ ನಸುಗುನ್ನಿ ಗಿಡದಲ್ಲಿ ಕಾಯಿ ಬೆಳೆದು ಅದರಲ್ಲಿ ಕಪ್ಪು ಬಣ್ಣದ ಬೀಜಗಳು ಬಿಡುತ್ತವೆ, ಈ ಬೀಜಗಳು ದಾತು ಪುಷ್ಟಿಗೆ ಸಹಕಾರಿಯಾಗಿದೆ. ಅಂದರೆ ಪುರುಷರಲ್ಲಿನ ಶುಕ್ರಾಣುಗಳ ಸಂಖ್ಯೆ ಹೆಚ್ಚಳಕ್ಕೆ ಇದು ಬಹಳ ಉಪಕಾರಿಯಂತೆ, ಇದು ವಿವಿಧ ನರ ದೌರ್ಬಲ್ಯ ಸಮಸ್ಯೆ, ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ಕಾಯಿ ಆಗಿದೆ. ಇದರಿಂದ ಹಲವು ಔಷಧಿಗಳ ನೀಡುತ್ತಾರೆ.
ಹಾವು ಕಡಿತ, ಮಂಡಿ ನೋವಿಗೆ ಇದೇ ಪರಿಹಾರ
ಈ ನಸುಗುನ್ನಿ ಬೀಜದಿಂದ ಮಾಡಲಾದ ಪದಾರ್ಥವು ಹಾವು ಕಚ್ಚುವಿಕೆಯಿಂದ ನಂಜು ಉಂಟಾಗದಂತೆ ತಡೆಯುತ್ತದೆ. ಹಾಗೆ ಮಂಡಿ ನೋವಿಗೆ ಶಾಶ್ವತ ಪರಿಹಾರ ನೀಡುತ್ತದೆ. ಈ ನಸಗುನ್ನಿ ಚೂರ್ಣವು ವಾತ, ಪಿತ್ತವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದನ್ನು ಹಾಲಿನ ಜೊತೆಗೆ ಬೆರೆಸಿ ಕುಡಿಯಲಾಗುತ್ತದೆ.
ನಸುಗುನ್ನಿ ಪೌಡರ್ ಮಾಡುವುದು ಹೇಗೆ?
ಮೊದಲು ಈ ನಸುಗುನ್ನಿ ಪೌಡರ್ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ ಮನೆಯಲ್ಲಿ ನಾವು ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಮೊದಲು ಈ ನಸುಗುನ್ನಿ ಬೀಜವನ್ನು ತೆಗೆದುಕೊಳ್ಳಬೇಕು. ಈ ಗಿಡವನ್ನು ಬರಿಗೈನಿಂದ ಮುಟ್ಟಿದ್ದರೆ ಸುಮಾರು 24 ಗಂಟೆಗಳ ಕಾಲ ತುರಿಕೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಗಿಡದ ಬೀಜವನ್ನು ಬಹಳ ಜಾಗರುಕತೆಯಿಂದ ತೆಗೆಯಬೇಕು. ಈ ಬೀಜವನ್ನು ಮನೆಗೆ ತಂದು ಹಾಲಿನ ಜೊತೆ ಹಾಕಿ ಚೆನ್ನಾಗಿ ಬೇಯಿಸಬೇಕು. ಹಲವು ಗಂಟೆ ಬೇಯಿಸಿದ ಬಳಿಕ ಈ ಬೀಜವನ್ನಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿಸಿದ ಬಳಿಕ ಈ ಬೀಜವನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಇದು ಸುಲಭವಾಗಿ ಪುಡಿಯಾಗುತ್ತದೆ. ಬಳಿಕ ಈ ಪುಡಿಯನ್ನು ಬಿಸಿ ಹಾಲಿನ ಜೊತೆ ಹಾಕಿಕೊಂಡು ನಿತ್ಯ ಸೇವಿಸಬೇಕು, ಇದು ನಿಮ್ಮ ದೇಹದಲ್ಲಿ ಶುಕ್ರಾಣುಗಳ ಹೆಚ್ಚಳಕ್ಕೆ ಕಾರಣವಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications