Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮಹಿಳೆಯರ ಆರೋಗ್ಯ: ಬಿಳುಪು ಹೋಗುವ ಸಮಸ್ಯೆಗೆ ಈ ಮನೆಮದ್ದು ಪರಿಣಾಮಕಾರಿ
ಮಹಿಳೆಯರಲ್ಲಿ ಬಿಳುಪು ಹೋಗುವುದು ಸಹಜ, ಅದರಲ್ಲೂ ಮುಟ್ಟಿನ ಸಮಯದಲ್ಲಿ ಸ್ವಲ್ಪ ಅಧಿಕ ಬಿಳುಪು ಹೋಗಬಹುದು, ಆದರೆ ಪ್ರತಿದಿನ ತುಂಬಾನೇ ಬಿಳುಪು ಹೋಗುವುದು ಅಂದರೆ ಒಳುಡುಪು ಒದ್ದೆಯಾಗುವಷ್ಟು ಬಿಳುಪು ಹೋಗುತ್ತಿದ್ದಾರೆ ನಿರ್ಲಕ್ಷ್ಯ ಮಾಡಲೇಬಾರದು, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಬೇಕು.
ಇನ್ನು ಟೀನೇಜ್ ಹುಡುಗಿಯರಿಗೆ ಈ ರೀತಿ ಬಿಳುಪು ಹೋಗುವುದು. ಈ ರೀತಿ ಬಿಳುಪು ಹೋಗುತ್ತಿದ್ದರೆಈ ಮನೆಮದ್ದು ಟ್ರೈ ಮಾಡಿ, ಆದರೆ ತುಂಬಾನೇ ಬಿಳುಪು ಹೋಗುತ್ತಿದ್ದರೆ ನೀವು ವೈದ್ಯರಿಗೆ ತೋರಿಸಲೇಬೇಕು.
ಬಿಳುಪು ಹೀಗುವ ಸಮಸ್ಯೆಗೆ ಈ ಮನೆಮದ್ದು ಮಾಡಿ ನೋಡಿ:

ಮೆಂತೆ
ಒಂದು ಕಪ್ ನೀರಿಗೆ 1 ಚಮಚ ಮೆಂತೆ ಹಾಕಿ ಕುದಿಸಿ, ಒಂದು ಲೋಟ ನೀರು ಅರ್ಧ ಕೋಟ ಆಗುವವರೆಗೆ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ.
ಬೆಂಡೆಕಾಯಿ ಅಂತೂ ತುಂಬಾ ಒಳ್ಳೆಯದು
ಬಿಳುಪು ಹೋಗುವುದನ್ನು ತಡೆಗಟ್ಟಲು ಬೆಂಡೆಕಾಯಿ ಕೂಡ ತುಂಬಾ ಒಳ್ಳೆಯದು. ಒಂದೆರಡು ಬೆಂಡೆಕಾಯಿ ಕತ್ತರಿಸಿ ನೀರಿಗೆ ಹಾಕಿ ಕುದಿಸಿ, ನಂತರ ಸ್ವಲ್ಪ ಬಿಸಿ ಇರುವಾಗ ಕುಡಿಯಿರಿ, ತುಂಬಾ ತಣ್ಣಗಾದರೆ ಕುಡಿಯುವುದು ಕಷ್ಟ.
ಬಿಳಿ ದಾಸವಾಳದ ಹೂ
ಬಿಲಿ ದಾಸವಾಳದ ಹೂ ತಿನ್ನುವುದು ಅಥವಾ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಬಿಳುಪು ಹೋಗುವುದು ಕಡಿಮೆಯಾಗುವುದು,'
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜ ತುಂಬಾ ತಂಪು ಹಾಗೂ ಬಿಳುಪು ಹೋಗುವುದನ್ನು ತಡೆಗಟ್ಟಲು ಸಹಕಾರಿ. ಕೊತ್ತಂಬರಿ ಬೀಜ ಹಾಕಿ ಬೆಲ್ಲದ ಕಾಫಿ ಮಾಡಿ ಕುಡಿಯಿರಿ.
ನೆಲ್ಲಿಕಾಯಿ
ನೆಲ್ಲಿಕಾಯಿಯ ಪುಡಿ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ ಆರೋಗ್ಯ ವೃದ್ಧಿಸುತ್ತೆ.
ಗಂಜಿ ನೀರು
ಬಿಳುಪು ಹೋಗುವ ಸಮಸ್ಯೆ ಇರುವವರು ಗಂಜಿ ನೀರು ಕುಡಿಯುವುದು ಒಳ್ಳೆಯದು, ಗಂಜಿ ನೀರು ಬಿಳುಪು ಹೋಗುವುದನ್ನು ತಡೆಗಟ್ಟಲು ಸಹಕಾರಿ.
ಸೀಬೆಕಾಯಿ ಎಲೆ
ಬಿಳುಪು ಹೋಗುವುದು, ಜನನೇಂದ್ರೀಯದಲ್ಲಿ ತುರಿಕೆ ಕಂಡು ಬಂದರೆ ಸೀಬೆಕಾಯಿ ಗಿಡದ ಎಳೆಯ ಎಲೆಗಳನ್ನು ಕಿತ್ತು ಅದನ್ನು ನೀರಿನಲ್ಲಿ ಹಾಕಿ ದಿನದಲ್ಲಿ ಎರಡು ಬಾರಿ ಕುದಿಸಿ ಕುಡಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications