Latest Updates
-
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ?
ಅತಿಬಲ ಹೂವಿನ ಬಗ್ಗೆ ನಿಮಗೆ ಗೊತ್ತಾ? ಇದರ ಉಪಯೋಗ ಕೇಳಿದರೆ ಅಚ್ಚರಿಯಾಗುತ್ತೆ..!
ನಮ್ಮ ದೈನಂದಿನ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎನಿಸಿದೆ. ಏಕೆಂದರೆ ನಾವಿಂದು ಒಂದಲ್ಲಾ ಒಂದು ವೈರಸ್ಗಳು, ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತೇಎ. ನೀರು, ಆಹಾರ, ಪ್ರಾಣಿಗಳು ಹೀಗೆ ಎಲ್ಲಾ ರೀತಿಯಿಂದಲೂ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತಲೇ ಇದೆ.
ಇದಕ್ಕೆ ಸುಲಭವಾಗಿ ನಾವು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಕೊಂಡರೆ ಹಲವು ಸಣ್ಣ ಪುಟ್ಟ ಕಾಯಿಲೆಗಳಿಂದ ಪಾರಾಗಬಹುದು. ಹಾಗೆಯೇ ಗಿಡ ಮೂಲಿಕೆಗಳ ಔಷಧಿ ತೆಗೆದುಕೊಳ್ಳುವುದು ಸಹ ಇಂತಹ ಹತ್ತು ಹಲವು ಸಮಸ್ಯೆಗಳನ್ನು ದೂರ ಮಾಡಲಿದೆ. ಆಯುರ್ವೇದ ಸಂಸ್ಕೃತಿಯಲ್ಲಿ ಹಲವು ರೀತಿಯ ಗಿಡಮೂಲಿಕೆ ಔಷಧಿಗಳ ಹೇಳಲಾಗಿದೆ. ಇವು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿವೆ.

ಇನ್ನು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಗಿಡಮೂಲಿಕೆ ಔಷಧಿಯಾಗಿರುವ ಅತಿಬಲ ಗಿಡದ ಕುರಿತು ನಾವಿಂದು ತಿಳಿದುಕೊಳ್ಳೋಣ. ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಅನೇಕ ಗಿಡಮೂಲಿಕೆಗಳ ಬಳಕೆ ಹಿಂದಿನಿಂದಲೂ ಇದೆ. ಆಯುರ್ವೇದದ ಪ್ರಕಾರ, ಶೀತ ಮತ್ತು ಕೆಮ್ಮಿನ ಪರಿಣಾಮಗಳನ್ನು ತೆಗೆದುಹಾಕುವಲ್ಲಿ ಅತಿಬಲ ಹೂವುಗಳು ಸಹಾಯಕವಾಗಿವೆ. ಅತಿಬಲ ರಸ ಮತ್ತು ಪುಡಿ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ.
ಅಬುಟಿಲಾನ್ ಇಂಡಿಕಮ್ ಎಂದು ಕರೆಯಲ್ಪಡುವ ಅತಿಬಲ ಒಂದು ಔಷಧೀಯ ಸಸ್ಯವಾಗಿದೆ. ಇದನ್ನು ಯಾವ ರೋಗಗಳ ನಿವಾರಣೆಗೆ ಬಳಸಲಾಗುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
ಉರಿಯೂತ ಕಡಿಮೆ ಮಾಡುತ್ತೆ
ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಉರಿಯೂತ ಹೆಚ್ಚಾಗಿರುತ್ತದೆ. ಈ ವೇಳೆ ಈ ಅತಿಬಲ ಎಲೆಯ ರಸವನ್ನು ಸೇವಿಸುವುದು ಉರಿಯೂತ ಹಾಗೂ ಶೀತ, ಕೆಮ್ಮು ನಿವಾರಣೆಗೆ ಸಹಾಯ ಮಾಡಲಿದೆ.
ಒಣ ಕೆಮ್ಮಿಗೆ ಪರಿಹಾರ
ಒಣ ಕೆಮ್ಮನ್ನು ಕಡಿಮೆ ಮಾಡಲು ಅತಿಬಲ ಹೂವುಗಳು ಪ್ರಯೋಜನಕಾರಿ. ಉಸಿರಾಟದ ಸೋಂಕು ಉಂಟಾದಾಗ ಒಣ ಕೆಮ್ಮು ಸಂಭವಿಸಬಹುದು. ೀಓ ವೇಳೆ ಅತಿಬಲ ಹೂವಿನ ರಸವನ್ನು ಜೇನು ತುಪ್ಪದ ಜೊತೆ ಚೆನ್ನಾಗಿ ಕಲಸಿ ಕುಡಿದರೆ ಒಂದು ದಿನದಲ್ಲಿ ಒಣ ಕೆಮ್ಮು ನಿವಾರಣೆಯಾಗುತ್ತದೆ.
ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು
ಅತಿಬಲ ಬ್ಯಾಕ್ಟೀರಿಯಾ ಮತ್ತು ವೈರಸ್ ವಿರೋಧಿ ಲಕ್ಷಣಗಳ ಹೊಂದಿದೆ. ಶೀತ ಮತ್ತು ಕೆಮ್ಮಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಹಾಗೆ ಗಂಟಲು ನೋವು ನಿವಾರಣೆಗೂ ಇದು ಸಹಕಾರಿಯಾಗಿದೆ.
ಶ್ವಾಸನಾಳದ ಸೆಳೆತಗಳ ನಿವಾರಣೆ
ಅತಿಬಲದಲ್ಲಿ ಕಂಡುಬರುವ ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳು ಶ್ವಾಸನಾಳದ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿರಂತರ ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಕೆಲವರು ಕೆಮ್ಮಿನ ಜೊತೆಗೆ ಗಂಟಲಿನಲ್ಲಿ ನೋವು ಮತ್ತು ಚುಚ್ಚುವ ಸಂವೇದನೆಯನ್ನು ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಅಟಿಬಾಲಾವನ್ನು ಬಳಸಬಹುದು.
ಅತಿಬಲ ಟೀ
ಅತಿಬಲದ ಹೂವುಗಳಿಂದ ಟೀ ಮಾಡಿ ಸವಿಯುತ್ತಾರೆ. ಇದು ನಿಮ್ಮ ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಉಸಿರಾಟಕ್ಕೆ ಬಹಳ ಉಪಯುಕ್ತ. ಹಾಗೆ ಇದು ಡಯಾಬಿಟಿಸ್ಗೂ ಕೂಡ ಉತ್ತಮ ದ್ರಾವಣವಾಗಿದೆ. ಅತಿಬಲದ ಒಣಗಿದ ಹೂವುಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ. ಅರ್ಧದಷ್ಟು ನೀರು ಆವಿಯಾಗುವಂತೆ ಮಾಡಿ, ಅದನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಸೇವಿಸಿ. ತಣ್ಣಗಾದ ನಂತರ ನೀವು ಈ ಕಷಾಯವನ್ನು ಸಹ ಕುಡಿಯಬಹುದು.
ಅತಿಬಲ ಹೂವಿನ ಔಷಧ ಯಾವುದೇ ಅಂಗಡಿಯಲ್ಲಿ ಸುಲಭವಾಗಿ ದೊರೆಯುತ್ತದೆ. ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತದ ಸಂದರ್ಭದಲ್ಲಿ ನೀವು ಈ ಪರಿಹಾರವನ್ನು ಬಳಸಬಹುದು. ಕೆಲವರು ನಿರಂತರ ಕೆಮ್ಮಿನಿಂದ ಗಂಟಲು ನೋವಿನಿಂದ ಬಳಲುತ್ತಿದ್ದಾರೆ. ಇದನ್ನು ತಪ್ಪಿಸಲು, ನೀವು ಮೇಲೆ ತಿಳಿಸಿದ ಆಯುರ್ವೇದ ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











