ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ

ಇಂದು (ಸೆಪ್ಟೆಂಬರ್ 15) ಮಹಾರಾಷ್ಟ್ರಾದ್ಯಂತ 1.5 ದಿನದ ಗಣೇಶ ವಿಸರ್ಜನೆಗೆ ಸಾಲುಗಳು ಆರಂಭವಾಗಿವೆ. ಭಾರಿ ಮಳೆ ಮತ್ತು ಜನಸಂದಣಿಯಿಂದಾಗಿ ಜಾರಿ ಬೀಳುವುದು ಹಾಗೂ ಬೆನ್ನು ನೋವು ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ನಿಮ್ಮ ಸುರಕ್ಷತೆಗಾಗಿ ಇಲ್ಲಿದೆ ಸರಳ ಸಲಹೆ. ವಿಸರ್ಜನೆಗೆ ತೆರಳುವ ಮುನ್ನ ವಾರ್ಮ್-ಅಪ್, ಮೂರ್ತಿಯನ್ನು ಸುರಕ್ಷಿತವಾಗಿ ಎತ್ತುವ ವಿಧಾನ ಮತ್ತು ಪಾದಗಳ ಆರೈಕೆಗೆ ಆದ್ಯತೆ ನೀಡಿ. ಇನ್ನು ಹಿರಿಯ ನಾಗರಿಕರು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವ ಭಕ್ತರು ಮೂರ್ತಿ ಎತ್ತುವುದನ್ನು ತಪ್ಪಿಸಿ, ಬದಲಿಗೆ ಇತರೆ ಸಹಾಯದ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಒಳಿತು.

ಕ್ಯೂನಲ್ಲಿ ನಿಲ್ಲುವ ಮುನ್ನ ಕೇವಲ ಹತ್ತು ನಿಮಿಷ ಈ ವ್ಯಾಯಾಮಗಳಿಗೆ ಸಮಯ ಕೊಡಿ. ಮೊದಲು ಎರಡು ನಿಮಿಷ ಆಂಕಲ್ ಸರ್ಕಲ್ಸ್ ಮತ್ತು ಕಾಫ್ ರೈಸಸ್ ಮಾಡಿ. ನಂತರ ಮೂರು ನಿಮಿಷ ಲಘುವಾಗಿ ಮಂಡಿ ಮಡಚುವುದು ಮತ್ತು ಸೊಂಟವನ್ನು ಬಾಗಿಸುವ ಅಭ್ಯಾಸ ಮಾಡಿ. ಇನ್ನು ಮೂರು ನಿಮಿಷ ಶೋಲ್ಡರ್ ರೋಲ್ಸ್ ಹಾಗೂ ಕ್ಯಾಟ್-ಕ್ಯಾಮಲ್ ವ್ಯಾಯಾಮದ ಮೂಲಕ ಬೆನ್ನುಮೂಳೆಯನ್ನು ಸಡಿಲಗೊಳಿಸಿ. ಕೊನೆಯಲ್ಲಿ ಮೂಗಿನ ಮೂಲಕ ಆಳವಾಗಿ ಉಸಿರಾಡಿ ಪ್ರಾಣಾಯಾಮ ಮಾಡಿ. ಇದರಿಂದ ದೇಹಕ್ಕೆ ಚೈತನ್ಯ ಸಿಗಬೇಕೇ ಹೊರತು ಆಯಾಸವಾಗಬಾರದು.

Ganesh Visarjan Safety Tips 2026: How to Prevent Back Pain and Injuries While Carrying the Idol

1.5 ದಿನದ ಗಣೇಶ ವಿಸರ್ಜನೆ: ಮೂರ್ತಿ ಎತ್ತುವಾಗ ಬೆನ್ನು ನೋವು ಬಾರದಂತೆ ಹೀಗೆ ಮಾಡಿ

ಸೂಟ್‌ಕೇಸ್‌ಗಿಂತ ದೊಡ್ಡದಿರುವ ಗಣೇಶನ ಮೂರ್ತಿಯನ್ನು ಹೊರಲು ಕನಿಷ್ಠ 2 ರಿಂದ 4 ಜನರ ಅಗತ್ಯವಿರುತ್ತದೆ. ವಿಗ್ರಹವನ್ನು ಎತ್ತಲು, ನಿಲ್ಲಿಸಲು ಅಥವಾ ತಿರುಗಿಸಲು ಸೂಚನೆ ನೀಡಲು ಒಬ್ಬರನ್ನು ಮುಖಂಡರನ್ನಾಗಿ ಮಾಡಿ. ಮೂರ್ತಿ ಎತ್ತುವಾಗ ಮೊಣಕಾಲು ಮಡಚಿ ಸ್ಕ್ವಾಟ್ ಮಾಡಿ, ಬೆನ್ನು ನೇರವಾಗಿಟ್ಟುಕೊಂಡು ವಿಗ್ರಹವನ್ನು ದೇಹಕ್ಕೆ ಹತ್ತಿರವಾಗಿ ಹಿಡಿದುಕೊಳ್ಳಿ. ಕೈಗಳನ್ನು ಒಣಗಿಸಿಕೊಂಡು, ಕೇವಲ ಬೆರಳುಗಳಿಂದ ಹಿಡಿಯುವ ಬದಲು ಅಂಗೈ ಬಳಸಿ ಭದ್ರವಾಗಿ ಹಿಡಿಯಿರಿ. ಮೆಟ್ಟಿಲು ಅಥವಾ ಕಲ್ಲುಗಳನ್ನು ಇಳಿಯುವಾಗ ಪಕ್ಕಕ್ಕೆ ತಿರುಗಿ (ಸೈಡ್‌ವೇಸ್) ಇಳಿಯಿರಿ. ಎಂದರೆ ಮೊದಲು ಕಾಲನ್ನು ಕೆಳಗಿಟ್ಟು ನಂತರ ಹೆಜ್ಜೆ ಇಡಿ. ಗಣಪತಿ ಬಪ್ಪ ಮೋರ್ಯಾ ಎನ್ನುವ ಜಯಘೋಷಗಳೊಂದಿಗೆ ಉಸಿರಾಟದ ಲಯ ಕಾಯ್ದುಕೊಳ್ಳಿ. ಪ್ರತಿ 5 ನಿಮಿಷಕ್ಕೊಮ್ಮೆ ಸಣ್ಣ ಬ್ರೇಕ್ ತೆಗೆದುಕೊಳ್ಳಿ.

ಮಳೆಯಲ್ಲಿ ಗಣೇಶ ವಿಸರ್ಜನೆ: ಪಾದಗಳ ಸುರಕ್ಷತೆ ಮತ್ತು ಕ್ಯೂನಲ್ಲಿ ಅನುಸರಿಸಬೇಕಾದ ನಿಯಮಗಳು

ರಬ್ಬರ್ ಸೋಲ್ ಮತ್ತು ಉತ್ತಮ ಗ್ರಿಪ್ ಇರುವ ಶೂಗಳನ್ನು ಧರಿಸಿ, ಸವೆದುಹೋದ ಚಪ್ಪಲಿಗಳನ್ನು ಬಳಸಬೇಡಿ. ಕೈಗಳನ್ನು ಮತ್ತು ಹಿಡಿಕೆಗಳನ್ನು ಒರೆಸಿಕೊಳ್ಳಲು ಸಣ್ಣ ಟವೆಲ್ ಜೊತೆಯಲ್ಲಿಟ್ಟುಕೊಳ್ಳಿ. ಬ್ಯಾಂಡೇಜ್, ಪೆಟ್ರೋಲಿಯಂ ಜೆಲ್ಲಿ, ಕಾಟನ್ ಸಾಕ್ಸ್ ಮತ್ತು ಆಲ್ಕೋಹಾಲ್ ವೈಪ್ಸ್‌ಗಳಿರುವ ಬ್ಲಿಸ್ಟರ್ ಕಿಟ್ (ಗಾಯದ ಕಿಟ್) ಜೊತೆಗಿರಲಿ. ಕಾಲ್ಬೆರಳ ಉಗುರುಗಳನ್ನು ಸಣ್ಣಗೆ ಕತ್ತರಿಸಿ ಹಾಗೂ ಚರ್ಮ ಉಜ್ಜುವ ಜಾಗಗಳಿಗೆ ಜೆಲ್ಲಿ ಹಚ್ಚಿ. ಮೂರ್ತಿ ಎತ್ತುವ ಮುನ್ನ ಭಾರಿ ಊಟ ಮಾಡಬೇಡಿ, ಆದರೆ ಸತತವಾಗಿ ನೀರು ಕುಡಿಯುತ್ತಿರಿ. ನಿಮ್ಮ ಮೊಬೈಲ್ ಫೋನ್‌ಗಳನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಸುರಕ್ಷಿತವಾಗಿಡಿ.

ವಿಸರ್ಜನೆಯ ನಂತರದ ವಿಶ್ರಾಂತಿ ಮತ್ತು ಅಪಾಯಕಾರಿ ಲಕ್ಷಣಗಳ ಕಡೆ ಗಮನವಿರಲಿ

ವಿಸರ್ಜನೆ ಮುಗಿದ ನಂತರ ಕನಿಷ್ಠ ಏಳು ನಿಮಿಷ ವಿಶ್ರಾಂತಿಗೆ ನೀಡಿ. ಕಾಲುಗಳನ್ನು ಕೊಂಚ ಎತ್ತರದಲ್ಲಿಟ್ಟು ಕಾಫ್ ಹಾಗೂ ಹ್ಯಾಮ್‌ಸ್ಟ್ರಿಂಗ್ ಸ್ಟ್ರೆಚ್ ಮಾಡಿ, ಎದೆಯ ಭಾಗವನ್ನು ಸಡಿಲಗೊಳಿಸಿ. ಲಘುವಾಗಿ ಬೆನ್ನಿನ ಭಾಗವನ್ನು ತಿರುಗಿಸುತ್ತಾ ನಿಧಾನವಾಗಿ ಹೊಟ್ಟೆಯಿಂದ ಉಸಿರಾಡಿ. ಒಂದು ವೇಳೆ ಎದೆ ನೋವು, ತಲೆತಿರುಗುವಿಕೆ, ವಿಪರೀತ ಉಸಿರಾಟದ ತೊಂದರೆ ಅಥವಾ ಕುತ್ತಿಗೆ, ದವಡೆ, ತೋಳುಗಳಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣವೇ ವಿಗ್ರಹ ಹೊರುವುದನ್ನು ನಿಲ್ಲಿಸಿ. ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿದ್ದರೆ, ಅಧಿಕ ರಕ್ತದೊತ್ತಡ (BP) ಅಥವಾ ಜ್ವರವಿದ್ದರೆ ಇಂದು ಮೂರ್ತಿಯನ್ನು ಹೊರಬೇಡಿ. ಬದಲಿಗೆ ದಾರಿ ತೋರಿಸುವುದು, ಉತ್ಸಾಹ ತುಂಬುವುದು ಮತ್ತು ನೀರು ನೀಡುವುದರಲ್ಲಿ ಸಹಾಯ ಮಾಡಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Tuesday, September 15, 2026, 7:53 [IST]
X
Desktop Bottom Promotion