Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತಿಸಾರ ಕಡಿಮೆಯಾಗಲು ಮನೆಮದ್ದು.! 5 ನಿಮಿಷಕ್ಕೆ ಗುಣವಾಗುತ್ತೆ..!
ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ, ಹೀಗಾಗಿ ಹಲವು ಬಾರಿ ನಾವು ಫುಡ್ ಪಾಯಿಸನ್ ಸೇರಿ ಹಲವು ರೀತಿಯ ಅನಾರೋಗ್ಯಕ್ಕೆ ನಾವು ಒಳಗಾಗುತ್ತಿರುತ್ತೇವೆ. ಅದರಲ್ಲು ಅತಿಸಾರ ಅಥವಾ ಭೇದಿ ಸಹ ಹಲವು ಬಾರಿ ಕಾಡುವ ಸಮಸ್ಯೆಯಾಗಿದೆ. ಪದೇ ಪದೇ ಶೌಚಾಲಯಕ್ಕೆ ಹೋಗುವುದು, ಹೋದರೂ ಮತ್ತೆ ಮತ್ತೆ ಅತಿಸಾರವಾಗುವುದು ನಮ್ಮ ಹೊಟ್ಟೆಯ ಅನಾರೋಗ್ಯದ ಸೂಚಕವಾಗಿದೆ.
ಅದರಲ್ಲೂ ಅತಿಸಾರ ನಿರಂತರವಾಗಿದ್ದರೆ ಸಾವಿಗೂ ಕಾರಣವಾಗುತ್ತದೆ. ಹೀಗಾಗಿ ಒಂದು ದಿನ ಅಥವಾ ಎರಡು ದಿನಕ್ಕಿಂತ ಹಚ್ಚಿನ ಅತಿಸಾರವು ಜೀವಕ್ಕೆ ಹಾನಿ ಮಾಡಬಹುದು ಹೀಗಾಗಿ ಇದಕ್ಕೂ ಅಗತ್ಯ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅದರೆ ಇತ್ತೀಚಿಗೆ ಯಾವ ಕಾರಣಕ್ಕೆ ಅತಿಸಾರ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅಂದಾಜು ಮಾಡಲು ಸಹ ಸಾಧ್ಯವಾಗುವುದಿಲ್ಲ.

ನಿತ್ಯವೂ ಒಂದಲ್ಲಾ ಒಂದು ವೈರಸ್ಗಳಿಗೆ ತುತ್ತಾಗುವ ದಿನಗಳಲ್ಲಿ ಅತಿಸಾರ ಉಂಟಾಗಲು ಕೂಡ ಯಾವುದಾದರು ವೈರಸ್ ಕಾರಣವಾಗಬಹುದು. ಆದ್ರೆ ಹಲವರು ಅತಿಸಾರದಲ್ಲಿ ಮನೆಮದ್ದು ಮಾಡುತ್ತಾರೆ, ಆದ್ರೆ ಸರಿಯಾದ ಮನೆಮದ್ದು ಯಾವುದು ಎಂಬುದು ಅವರಿಗೆ ತಿಳಿದಿರುವುದಿಲ್ಲ.
ಹೀಗಾಗಿ ನಾವಿಂದು ಅತಿಸಾರಕ್ಕೆ ತಕ್ಷಣದಲ್ಲಿ ಮಾಡಬಹುದಾದ ಮನೆಮದ್ದು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಹೆಚ್ಚಾಗಿ ಅತಿಸಾರವಾಗುವುದು ಆಹಾರದಲ್ಲಿ ಬದಲಾವಣೆಯಾದಾಗ, ನೀರಿನಿಂದ, ಹವಾಮಾನ ಬದಲಾವಣೆಯಿಂದಲೂ ಸಂಭವಿಸುತ್ತದೆ. ಆದರೆ ಯಾವ ಮನೆಮದ್ದು ಮಾಡಬೇಕು ಎಂಬುದನ್ನು ನೋಡಿ.
ಬೆಲ್ಲದ ನೀರು
ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಬಿಸಿ ಮಾಡಲು ಇಡಿ. ಬಳಿಕ ಇದಕ್ಕೆ 1 ಸ್ಪೂನ್ ಜಜ್ಜಿದ ಬೆಲ್ಲ ಹಾಕಿ ಕುದಿಸಿಕೊಳ್ಳಿ. ಬೆಲ್ಲ ಚೆನ್ನಾಗಿ ಕರಗಿ ಕುದಿಬರಲು ಬಿಡಿ. ಚೆನ್ನಾಗಿ ಕುದಿಬಂದ ಬಳಿಕ ಈ ನೀರನ್ನು ಇಳಿಸಿಕೊಳ್ಳಿ. ಇದನ್ನು ನೇರವಾಗಿ ಕುಡಿದರೆ ಅತಿಸಾರ ಕಡಿಮೆಯಾಗುತ್ತದೆ.
ಬ್ಲಾಕ್ ಟೀ
ಪಾತ್ರೆಗೆ ಅರ್ಧ ಲೋಟ ನೀರು ಹಾಕಿ ಅದಕ್ಕೆ 1 ಸ್ಪೂನ್ ಟೀ ಪುಡಿ ಹಾಕಿ ಕುದಿಸಿಕೊಳ್ಳಿ. ಕುದಿಬಂದ ಬಳಿಕ ಇದನ್ನು ಜರಡಿ ಹಿಡಿದು ಸೋಸಿಕೊಳ್ಳಿ. ಇದಕ್ಕೆ ಸಕ್ಕರೆ ಹಾಕದೆಯೇ ಅದಕ್ಕೆ ಅರ್ಧ ಸ್ಪೂನ್ ಬೆಣ್ಣೆ ಇದ್ದರೆ ಹಾಕಿಕೊಂಡು ಕುಡಿಯಬೇಕು. ಇದನ್ನು ಮಾಡಿದ ಅರ್ಧ ಗಂಟೆಯಲ್ಲಿ ಅತಿಸಾರ ನಿಲ್ಲುತ್ತದೆ.
ಕೊಡಸಿಗ
ಕೊಡಸಿಗ ಎಂಬ ಹೂ ಬಿಡುವ ಗಿಡವನ್ನು ನೀವು ನೋಡಿರಬಹುದು. ಬಿಳಿ ಬಣ್ಣದ ಮಲ್ಲಿಗೆ ಹೂವಿನಂತೆ ಇರುತ್ತದೆ. ಈ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೇದಿ ಅದನ್ನು ಒಂದು ಸ್ಪೂನ್ ಹಾಗೆಯೇ ಸೇವಿಸಬೇಕು. ಹೀಗೆ ಮಾಡುವುದರಿಂದ ಅತಿಸಾರ ಕ್ಷಣದಲ್ಲಿ ಕಡಿಮೆಯಾಗುತ್ತದೆ. ಈ ಗಿಡದಲ್ಲಿ ಅಂಟು ಅಂಟಾದ ಹಾಲು ಬರುತ್ತದೆ, ಗಿಡದ ಎಲೆ ಮುರಿದಾಗ, ಕಡ್ಡಿ ಮುರಿದಾಗ ಇದರಿಂದ ಬಿಳಿ ಬಣ್ಣದ ಅಂಟಾದ ಹಾಲು ಬರುತ್ತದೆ.
ಕೊತ್ತಂಬರಿ ನೀರು
ಸ್ವಲ್ಪ ಕೊತ್ತಂಬರಿ ಬೀಜ ತೆಗೆದುಕೊಂಡು ಅದಕ್ಕೆ ಜೀರಿಗೆ ಹಾಕಿಕೊಂಡು ಚೆನ್ನಾಗಿ ಜಜ್ಜಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿಗೆ ಹಾಕಿ ಒಂದು ಸುತ್ತು ಹೊಡೆಸಿದರು ಆಗುತ್ತದೆ. ನಂತರ ಇದರ ಪುಡಿಯನ್ನು ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಇಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯುವಾಗ ಈ ಪುಡಿಯನ್ನು ನೀರಿಗೆ ಹಾಕಿ ಕುದಿಯಲು ಬಿಡಿ. ಕುದಿಬಂದ ಬಳಿಕ ಇದಕ್ಕೆ ಒಂದು ಸ್ಪೂನ್ ಕಲ್ಲು ಸಕ್ಕರೆ ಇದ್ದರೆ ಹಾಕಿಕೊಂಡು ಕುದಿಸಿ, ಬಳಿಕ ಜರಡಿ ಹಿಡಿದು ಶೋದಿಸಿಕೊಳ್ಳಿ. ನಂತರ ಇದರ ನೀರನ್ನು ಕುಡಿಯಿರಿ, ತಕ್ಷಣ ಅತಿಸಾರ ಕಡಿಮೆಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications