Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ಪ್ರವಾಹದ ಭೀತಿ: ಪ್ರವಾಹದ ಮುನ್ನ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿವು
ಕರ್ನಾಟಕದ ಹಲವು ಕಡೆ ಮಳೆಯ ಅಬ್ಬರ ಜೋರಾಗಿ ಇದೆ. ಪ್ರಾರಂಭದಲ್ಲಿ ಮುಂಗಾರಿನ ಅಭಾವ ಉಂಟಾಗಿತ್ತು, ಆದರೆ ಇದೀಗ ಹಲವು ಕಡೆ ಮಳೆ ಅತಿಯಾಗಿ ಸುರಿಯುತ್ತಿದ್ದು ಪ್ರವಾಹದ ಭೀತಿ ಉಂಟಾಗಿದೆ. ನಿಸರ್ಗದ ಆಟದ ಮುಂದೆ ಮನುಷ್ಯ ಏನೂ ಮಾಡಲು ಸಾಧ್ಯವಿಲ್ಲ. ಹಾಗಂತ ಕೈ ಚೆಲ್ಲಿ ಕೂರುವುದೂ ಸರಿಯಲ್ಲ, ಈ ಸಮಯದಲ್ಲಿಆದಷ್ಟು ನಮ್ಮ ಸುರಕ್ಷತೆ ಕಡೆ ಗಮನಹರಿಸಬೇಕು. ಪ್ರವಾಹದ ಅಪಾಯವಿದೆ ಎಂದಾದಾಗ ಈ ಬಗೆಯ ಮುನ್ನೆಚ್ಚರಿಕೆವಹಿಸಿದರೆ ಹೆಚ್ಚಿನ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದು:

ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ, ಅಷ್ಟು ಮಾಡಿದರೂ ಮನೆಯೊಳಗೆ ಬರುವ ಪರಿಸ್ಥಿತಿ ಎದುರಾದರೆ ಈ ಬಗೆಯ ಮುನ್ನೆಚ್ಚರಿಕೆ ವಹಿಸಿ:
ಬೆಲೆಬಾಳುವ ವಸ್ತುಗಳನ್ನು ಸುರಕ್ಷತೆ ಕಡೆಗೆ ಸಾಗಿಸಿ: ಪ್ರವಾಹ ಬರುವಾಗ ಹೆಚ್ಚಿನ ಸಮಯ ಸಿಗುವುದಿಲ್ಲ, ನೋಡು ನೋಡುತ್ತಿದ್ದಂತೆ ನೀರು ತುಂಬಿಕೊಳ್ಳುತ್ತದೆ, ಆದರೆ ಈ ಹಿಂದೆ ನೀರು ಬಂದಿದ್ದರೆ ಈ ಬಾರಿ ರಿಸ್ಕ್ ತೆಗೆದುಕೊಳ್ಳಬೇಡಿ. ಬೆಲೆಬಾಳುವ ವಸ್ತುಗಳನ್ನು ಮೇಲಿನ ಫ್ಲೋರ್ಗೆ ಅಥವಾ ನಿಮಗೆ ಸುರಕ್ಷತೆ ಅನಿಸುವ ಕಡೆಗೆ ಮೊದಲೇ ಸಾಗಿಸಿ.
* ವಿದ್ಯುತ್ ಸಂಪರ್ಕ ಮೊದಲು ತೆಗೆಯಿರಿ: ಮಳೆ ನೀರು ಅಧಿಕವಾಗುತ್ತಿದೆ ಎಂದಾಗ ವಿದ್ಯುತ್ ಸಂಪರ್ಕ ಮೊದಲು ತೆಗೆಯಬೇಕು, ಇಲ್ಲದಿದ್ದರೆ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯವಿದೆ, ಆದ್ದರಿಂದ ಮೊದಲಿಗೆ ವಿದ್ಯುತ್ ಸಂಪರ್ಕವನ್ನು ಮೊದಲು ತೆಗೆಯಬೇಕು.
ಮಳೆ ಹೆಚ್ಚಾಗುತ್ತಿದ್ದರೂ ಮನೆಯಲ್ಲಿಯೇ ಇರುವ ರಿಸ್ಕ್ ತೆಗೆದುಕೊಳ್ಳಬೇಡಿ: ಕೆಲವರು ಮಳೆ ನೀರು ಹೆಚ್ಚಾಗುತ್ತಿದ್ದರೂ ಮನೆ ಬಿಟ್ಟು ಹೊರಗಡೆ ಬರಲು ನಿರಾಕರಿಸುತ್ತಾರೆ. ಆದರೆ ಆ ತಪ್ಪನ್ನು ಮಾಡುವುದರಿಂದ ನೀವು ತೊಂದರೆಗೆ ಸಿಲುಕಿಕೊಳ್ಳುವುದು ಮಾತ್ರವಲ್ಲ, ನಿಮ್ಮನ್ನು ರಕ್ಷಿಸಲು ಜನರು ಪರದಾಡಬೇಕಾದ ಪರಿಸ್ಥಿತಿ ಉಂಟಾಗುವುದು.
ಸಾಹಸ ಬೇಡ: ನೀರು ತುಂಬಿ ಹರಿಯುತ್ತಿರುವ ಕಡೆ ವಾಹನ ಚಲಾಯಿಸುವುದು ಅಥವಾ ನಡೆದುಕೊಂಡು ಹೋಗಲು ಪ್ರಯತ್ನಿಸುವುದು ಮುಂತಾದ ಅಪಾಯವನ್ನು ತೆಗೆದುಕೊಳ್ಳಬೇಡಿ.
ಪ್ರವಾಹದ ನಂತರ ಏನು ಮಾಡಬೇಕು?
* ಮನೆಯಲ್ಲಿ ಏನೆಲ್ಲಾ ಹಾನಿಯಾಗಿದೆ ಎಂಬುವುದನ್ನು ಪರೀಕ್ಷಿಸಬೇಕು.
* ಮನೆಯೊಳಗಡೆ ಕತ್ತಲೆಯಿದ್ದರೆ ಬೆಂಕಿಕಡ್ಡಿ ಗೀರುವುದು, ಕ್ಯಾಂಡಲ್ ಅಥವಾ ದೀಪ ಹಚ್ಚುವುದು ಮಾಡಬೇಡಿ, ಟಾರ್ಚ್ ಲೈಟ್ ಹಾಕಿ ಪರೀಕ್ಷಿಸಿ.
* ಎಲೆಕ್ಟ್ರಿಷಿಯನ್ ಅನುಮತಿ ಪಡೆಯದೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಹಾಕಬೇಡಿ.
* ಹಾಳಾದ ವಸ್ತುಗಳಿಗೆ ಇನ್ಶ್ಯೂರೆನ್ಸ್ ಇದ್ದರೆ ಕ್ಲೈಮ್ ಮಾಡಿ.
* ಮನೆಯನ್ನು ಸ್ವಚ್ಛ ಮಾಡುವಾಗ ಮಾಸ್ಕ್ ಧರಿಸಿ. ಮನೆಯನ್ನು ಸ್ವಚ್ಛಗೊಳಿಸಲು ಪ್ರೊಫೆಷನಲ್ ಹೆಲ್ಪ್ ಪಡೆಯಿರಿ.
ಈ ಸಲಹೆ ಪಾಲಿಸಿ
* ಮಕ್ಕಳನ್ನು ಪ್ರವಾಹದ ನೀರಿನಲ್ಲಿ ಆಡಲು ಬಿಡಬೇಡಿ
* ಪ್ರವಾಹದ ನೀರನ್ನು ಮುಟ್ಟಿದರೆ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ
* ಗಾಯವಾಗಿದ್ದರೆ ಅದಕ್ಕೆ ಮಳೆನೀರು ತಾಗದಂತೆ ಜಾಗ್ರತೆವಹಿಸಿ.
* ರಭಸವಾಗಿ ಹರಿಯುವ ನೀರಿನ ಸಮೀಪ ಹೋಗಬೇಡಿ, ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
