Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತಾ? ಇದರ ಹಿಂದಿನ ಸತ್ಯವೇನು?
ಇತ್ತೀಚಿಗೆ ಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವ ಸಮಸ್ಯೆ ಹೆಚ್ಚಾಗುತ್ತಿದೆ. ದೈನಂದಿನ ಜೀವನ ಕ್ರಮ ಇದಕ್ಕೆ ಕಾರಣ ಎಂಬುದು ತಿಳಿದಿರುವ ವಿಚಾರವಾಗಿದೆ. ಒತ್ತಡ, ಆಹಾರ, ನೀರು ಕುಡಿಯದಿರುವುದು ಹೀಗೆ ಹತ್ತಾರು ಕಾರಣಗಳಿಂದ ಈ ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಈ ಕುರಿತು ಅರಿವಿಗೆ ಬಂದರೆ ಚಿಕಿತ್ಸೆಯೂ ಸುಲಭವಾಗುತ್ತದೆ.
ಇನ್ನು ಕಿಡ್ನಿ ಸ್ಟೋನ್ ಆದಾಗ ವಿಪರೀತ ನೋವು, ಮೂತ್ರ ವಿಸರ್ಜನೆಗೆ ಅಡಚಣೆಯಂತಹ ಸಮಸ್ಯೆ ಎದುತಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದೆಯೇ ಇದಕ್ಕೆ ಚಿಕಿತ್ಸೆ ಇದೆ. ಆದರೆ ಕೆಲವರು ಕಿಡ್ನಿ ಸ್ಟೋನ್ಗೆ ನಾಟಿ ಔಷಧಿ, ಆಯುರ್ವೇದದ ಮೊರೆ ಹೋಗಿ ಗುಣಮುಖರಾದ ಉದಾಹರಣೆಗಳೂ ಸಹ ನಮ್ಮ ನಡುವೆ ಇರಬಹುದು.

ಇನ್ನೊಂದು ಕಡೆ ಬಿಯರ್ ಸೇವಿಸಿದರೆ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತದೆ. ಮುಂದೆ ಭವಿಷ್ಯದಲ್ಲಿ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ ಎಂಬ ಮಾತು ನಾವು ಕೇಳುತ್ತಲೇ ಇರುತ್ತೇವೆ. ಕಿಟ್ನಿ ಸ್ಟೋನ್ ಆದವರು ಬಿಯರ್ ಕುಡಿಯಲು ಆರಂಭಿಸಿರುತ್ತಾರೆ. ಹಾಗಾದ್ರೆ ಕಿಡ್ನಿ ಸ್ಟೋನ್ಗೆ ಈ ಬಿಯರ್ ಔಷಧಿಯೇ? ಇದರ ನಿಜಾಂಶವೇನು? ಬಿಯರ್ ಕುಡಿಯುವುದರಿಂದ ಲಾಭವಿದ್ಯಾ? ಎಂಬೆಲ್ಲಾ ಪ್ರಶ್ನೆಗೆ ನಾವಿಂದು ಉತ್ತರ ಕಂಡುಕೊಳ್ಳೋಣ.
ಬಿಯರ್ ಕುಡಿಯುವುದು ಕಿಡ್ನಿ ಸ್ಟೋನ್ಗೆ ಔಷಧಿಯಲ್ಲ
ಬಿಯರ್ ಸೇವನೆಯಿಂದ ಕಿಡ್ನಿ ಸ್ಟೋನ್ ಮೂತ್ರದಲ್ಲಿ ಹೊರಬರುತ್ತದೆ. ಜೊತೆಗೆ ಇದರಿಂದ ಕಿಡ್ನಿಯಲ್ಲಿ ಕಲ್ಲುಗಳ ರಚನೆ ಉಂಟಾಗುವುದಿಲ್ಲ ಎನ್ನುತ್ತಾರೆ. ಆದರೆ ಇದು ಅಕ್ಷರಶಃ ಸುಳ್ಳು. ಕಿಡ್ನಿ ಸ್ಟೋನ್ ಇದ್ದವರು ಬಿಯರ್ ಕುಡಿದರೆ ಪರಿಣಾಮ ಮತ್ತಷ್ಟು ಹದಗೆಡುತ್ತದೆ. ಕಿಡ್ನಿ ಸ್ಟೋನ್ ಇದ್ದವರಿಗೆ ಮೂತ್ರ ವಿಸರ್ಜನೆ ಮಾಡುವಾಗ ವಿಪರೀತ ನೋವು ಉಂಟಾಗುತ್ತದೆ. ಅದೆ ರೀತಿ ಬಿಯರ್ ಕುಡಿದಾಗ ವಿಪರೀತ ಮೂತ್ರ ಉಂಟಾಗುತ್ತದೆ. ಪದೇ ಪದೇ ಮೂತ್ರ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಾದಾಗ ಕಿಡ್ನಿ ಸ್ಟೋನ್ನ ನೋವು ಮತ್ತಷ್ಟು ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ.
ಇನ್ನೊಂದು ಕಡೆ ಕಲ್ಲು ರಚನೆಯಾಗಲು ಕಾರಣವಾಗಿರುವ ಆಕ್ಸಲೇಟ್ಗಳ ರಚನೆಗೆ ಈ ಬಿಯರ್ ಕಾರಣವಾಗುತ್ತದೆ. ಹೀಗಾಗಿ ಬಿಯರ್ನಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತದೆ ಎಂಬುದು ಶುದ್ಧ ಸುಳ್ಳಾಗಿದೆ. ಅಲ್ಲದೆ ಬಿಯರ್ನಲ್ಲೂ ಆಲ್ಕೋಹಾಲಿಕ್ ಕಂಟೆಂಟ್ ಇರುತ್ತದೆ, ಇದು ಯಕೃತ್ತಿನ ಹಾನಿಗೆ ಕಾರಣವಾಗಿತ್ತದೆ. ಅಲ್ಲದೆ ದೇಹದಲ್ಲಿ ನಿರ್ಜಲೀಕರಣಕ್ಕೆ ಬಿಯರ್ ಕಾರಣವಾಗುತ್ತದೆ. ಹೀಗಾಗಿ ಬಿಯರ್ ಕುಡಿದ ಮರುದಿನ ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಇನ್ನು ಬಿಯರ್ನಲ್ಲಿ ಸೋಡಾದ ಅಂಶ ಸಹ ಇರುತ್ತದೆ.
ಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣವೇನು?
ಸಾಮಾನ್ಯವಾಗಿ 20ರಿಂದ 50 ವರ್ಷದವರಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಎದುರಾಗುತ್ತದೆ. ವಿವಿಧ ಪ್ರಕಾರಗಳಲ್ಲಿನ ಕಲ್ಲುಗಳ ಬೆಳವಣಿಗೆ ಮೂತ್ರ ಪಿಂಡದ ಹಾನಿಗೆ ಕಾರಣವಾಗಿದೆ. ಈ ಕಲ್ಲುಗಳು ರಾಸಾಯನಿಕಯುಕ್ತ ಅಂಶಗಳಿಂದ ಕೂಡಿರುತ್ತದೆ. ಒಂದು ವೇಳೆ ಬೆಳೆದು ದೊಡ್ಡದಾದರೆ ಶಸ್ತ್ರ ಚಿಕಿತ್ಸೆಯ ಅನಿವಾರ್ಯತೆ ಎದುರಾಗುತ್ತದೆ. ಅಧ್ಯಯನಗಳ ಪ್ರಕಾರ ಮಹಿಳೆಯರಿಗಿಂತ ಪುರುಷದಲ್ಲಿ ಈ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಕಡಿಮೆ ನೀರು ಕುಡಿಯುವುದು ಹಾಗೂ ನಿರ್ಜಲೀಕರಣ ಈ ಕಿಡ್ನಿ ಸ್ಟೋನ್ಗೆ ಪ್ರಮುಖ ಕಾರಣವಾಗಿದೆ. ದೇಹದಿಂದ ನೀರು ಹೊರಹೋಗದಿದ್ದರೆ ಕಿಡ್ನಿಯಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅನಗತ್ಯ ಅಂಶಗಳು ಉಳಿದುಬಿಡುತ್ತವೆ. ಹಾಗೆ ದೇಹದ ಅಧಿಕ ಬೊಜ್ಜು ಸಹ ಕಿಡ್ನಿಯ ಕಲ್ಲಿಗೆ ಕಾರಣವಾಗುತ್ತದೆ. ಅಲ್ಲದೆ ಹೆಚ್ಚು ಉಪ್ಪು, ಪ್ರೋಟೀನ್ ಆಹಾರ ಸಹ ಕಿಡ್ನಿ ಸ್ಟೋನ್ಗೆ ಕಾರಣ ಎಂದು ತಿಳಿದುಬಂದಿದೆ. ಕ್ಯಾಲ್ಸಿಯಂ ಮಾತ್ರೆಗಳು ಹಾಗೂ ಔಷಧಿಗಳು ಸಹ ಮೂತ್ರಪಿಂಡದ ಕಲ್ಲಿಗೆ ಕಾರಣವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications