Just In
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 15 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 16 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News Neha Murder Case: ವೈಯಕ್ತಿಕ ಕಾರಣಕ್ಕೆ ವಿದ್ಯಾರ್ಥಿನಿ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಹದ ತೂಕ ಇಳಿಸಿಕೊಳ್ಳಬೇಕೇ? ಅಡುಗೆಯಲ್ಲಿ ಹರಳೆಣ್ಣೆ ಬಳಸಿ ಸಾಕು!
ರಿಸಿನಸ್ ಕಮ್ಯೂನಿಸ್ ಎಂಬ ಸಸ್ಯ ಪ್ರಬೇಧಕ್ಕೆ ಸೇರಿದ ಸಸ್ಯದ ಕಾಯಿಗಳ ಬೀಜಗಳನ್ನು ಚೆನ್ನಾಗಿ ಒಣಗಿಸಿ ಹಿಂಡಿ ತೆಗೆದ ಎಣ್ಣೆಯೇ ಹರಳೆಣ್ಣೆ. ಸುಮಾರು ಜೇನಿನಷ್ಟು ಸ್ನಿಗ಼್ಧವಾಗಿರುವ ಈ ಎಣ್ಣೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಹಿಂದಿನ ಕಾಲದಲ್ಲಿ ಚಕ್ರಗಳಿಗೆ ಜಾರುಕವಾಗಿ, ದೀಪ ಹಚ್ಚಲು ಮೊದಲಾದ ಕಾರ್ಯಗಳಿಗೆ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಈ ಎಣ್ಣೆಯ ಬಳಕೆಯನ್ನು ಇಂದು ದಿನಬಳಕೆಯ ಹಲವಾರು ವಸ್ತುಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ. ಸೋಪು, ಔಷಧಿಗಳು ಹಾಗೂ ಸೌಂದರ್ಯ ಪ್ರಸಾದನಗಳಲ್ಲಿ ಹರಳೆಣ್ಣೆ ಹೆಚ್ಚಾಗಿ ಬಳಸಲ್ಪಡುತ್ತಿದೆ.
ತನ್ನ
ಅದ್ಭುತ
ಗುಣಗಳಿಂದ
ಹರಳೆಣ್ಣೆ
ತೂಕ
ಇಳಿಸಲೂ
ನೆರವಾಗುತ್ತದೆ.
ಇದರಲ್ಲಿ
ವಿಟಮಿನ್
ಇ,
ಖನಿಜಳು
ಹಾಗೂ
ಪ್ರೋಟೀನುಗಳು
ಸಮೃದ್ಧವಾಗಿವೆ.
ಅಲ್ಲದೇ
ಈ
ಎಣ್ಣೆಯಲ್ಲಿ
ಉರಿಯೂತ
ನಿವಾರಕ,
ಬ್ಯಾಕ್ಟೀರಿಯಾ
ನಿವಾರಕ
ಗುಣಗಳೂ
ಇವೆ.
ಈ
ಗುಣಗಳಿಂದಾಗಿಯೇ
ಹರಳೆಣ್ಣೆ
ಔಷಧಿಗಳಲ್ಲಿ
ಸ್ಥಾನ
ಪಡೆದಿದೆ.
ತೂಕ
ಇಳಿಸುವ
ಸಲುವಾಗಿ
ಹಿಂದಿನ
ಕಾಲದ
ನೆಚ್ಚಿನ
ಎಣ್ಣೆಯ
ಬಳಕೆ
ಇಂದು
ಹೆಚ್ಚುತ್ತಿದೆ
ಹಾಗೂ
ಹರಳೆಣ್ಣೆ
ಉಪಯೋಗಿಸಿ
ತಯಾರಿಸುವ
ಖಾದ್ಯಗಳಲ್ಲೂ
ಈಗ
ಹೆಚ್ಚಳವಾಗಿದೆ.
ಹರಳೆಣ್ಣೆ
ಒಂದು
ಅದ್ಭುತ
ವಿರೇಚಕವಾಗಿದ್ದು
ಈ
ಗುಣವೇ
ತೂಕ
ಇಳಿಕೆಗೆ
ಬಳಕೆಯಾಗಿದೆ.
ದೇಹದ
ಕಲ್ಮಶಗಳನ್ನು
ಹೊರಹಾಕಲು
ಕೊಬ್ಬನ್ನು
ಬಳಸಿಕೊಳ್ಳುವುದೇ
ತೂಕ
ಇಳಿಕೆಯ
ಗುಟ್ಟು.
ಹರಳೆಣ್ಣೆಯ ಈ ಗುಣದಿಂದಾಗಿಯೇ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಒಂದು ಪ್ರಾಮಾಣಿತ ಪರಿಗಣನೆಯ ಪ್ರಕಾರ ದಿನಕ್ಕೆ ಎರಡು ಔನ್ಸ್ (ಸುಮಾರು 59.14 ಮಿ.ಲೀ) ನಷ್ಟು ಹರಳೆಣ್ಣೆಯನ್ನು ಗರಿಷ್ಟ ಸೇವಿಸುವ ಮೂಲಕ ತೂಕ ಇಳಿಕೆಯನ್ನು ಸಾಧ್ಯವಾಗಿಸಬಹುದು. ಆದರೆ ಇದಕ್ಕೂ ಹೆಚ್ಚಾದರೆ ಮಾತ್ರ ಆರೋಗ್ಯಕ್ಕೆ ತಿರುಗುಬಾಣವಾಗಿ ಪರಿಣಮಿಸಬಹುದು. ಆದ್ದರಿಂದ ಇದರ ಅರ್ಧದಷ್ಟು ಪ್ರಮಾಣವನ್ನು ಮಾತ್ರವೇ ಸೇವಿಸಿದರೆ ಸಾಕಾಗುತ್ತದೆ. ಬನ್ನಿ, ಹರಳೆಣ್ಣೆಯ ಇತರ ಆರೋಗ್ಯಕರ ಗುಣಗಳ ಬಗ್ಗೆ ಅರಿಯೋಣ:
ಕಲ್ಮಶಗಳ
ನಿವಾರಣೆ
ಹರಳೆಣ್ಣೆಯ
ಸೇವನೆಯಿಂದ
ದೇಹದಲ್ಲಿರುವ
ಕಲ್ಮಶಗಳು
ನಿವಾರಣೆಯಾಗುತ್ತವೆ.
ಈ
ಮೂಲಕ
ದೇಹ
ಸ್ವಚ್ಛಗೊಳ್ಳುತ್ತದೆ
ಹಾಗೂ
ಈ
ಮೂಲಕ
ಎದುರಾಬಹುದಾಗಿದ್ದ
ತೊಂದರೆಗಳಿಂದ
ಮುಕ್ತಿ
ದೊರಕುತ್ತದೆ.
ಹರಳೆಣ್ಣೆ
ಕರುಳುಗಳಿಗೆ
ತಲುಪಿದ
ಬಳಿಕ
ದೇಹದ
ಪ್ರಮುಖ
ಅಂಗಗಳಿಗೇ
ಪ್ರಚೋದನೆ
ದೊರಕುತ್ತದೆ
ಹಾಗೂ
ಕಲ್ಮಶಗಳನ್ನು
ನಿವಾರಿಸಲು
ನೆರವಾಗುತ್ತದೆ.
ಕೊಬ್ಬನ್ನು
ಕರಗಿಸುತ್ತದೆ
ಹರಳೆಣ್ಣೆಯನ್ನು
ಸೇವಿಸುವ
ಹೊರತಾಗಿ
ಹರಳೆಣ್ಣೆಯನ್ನು
ಚರ್ಮದ
ಮೇಲೆ
ನೇರವಾಗಿ
ಹಚ್ಚಿಕೊಳ್ಳಬಹುದು.
ಇದರಿಂದಲೂ
ತೂಕ
ಇಳಿಕೆಗೆ
ನೆರವಾಗುತ್ತದೆ.
ಚರ್ಮಕ್ಕೆ
ಹಚ್ಚಿದಾಗ
ಈ
ಎಣ್ಣೆ
ನಿಧಾನವಾಗಿ
ಚರ್ಮದಾಳಕ್ಕೆ
ಇಳಿದು
ಕೊಬ್ಬನ್ನು
ಕರಗಿಸಲು
ಪ್ರಚೋದನೆ
ನೀಡುತ್ತದೆ.
ಸೂಕ್ಷ್ಮಜೀವಿ
ನಿವಾರಕ
ತೂಕ
ಇಳಿಸಲು
ಹರಳೆಣ್ಣೆಯನ್ನು
ಸೇವಿಸುವ
ಮೂಲಕ
ಇದರ
ಸೂಕ್ಷ್ಮಜೀವಿನಿವಾರಕ
ಗುಣ
ದೇಹವನ್ನು
ಆವರಿಸುವ
ಶಿಲೀಂಧ್ರಗಳ
ಸೋಂಕಿನಿಂದ
ರಕ್ಷಿಸುತ್ತದೆ.
ಇದರ
ಬ್ಯಾಕ್ತೀರಿಯಾ
ನಿವಾರಕ
ಗುಣ
ದೇಹದ
ನೋವನ್ನು
ಕಡಿಮೆಮಾಡುತ್ತದೆ
ಹಾಗೂ
ಚರ್ಮದ
ತುರಿಕೆಯನ್ನೂ
ನಿವಾರಿಸುತ್ತದೆ.
ಕಟ್ಟಿಕೊಂಡಿದ್ದ
ನಾಳಗಳನ್ನು
ತೆರೆಯುತ್ತದೆ
ಒಂದು
ವೇಳೆ
ದುಗ್ಧಗ್ರಂಥಿಗಳ
ನಾಳಗಳು
ಕಟ್ಟಿಕೊಂಡಿದ್ದು
ಚರ್ಮದ
ಮೇಲೆ
ಚಿಕ್ಕ
ಗಂಟುಗಳಂತೆ
ಮೂಡಿದ್ದರೆ
ಈ
ಭಾಗದ
ಮೇಲೆ
ಹರಳೆಣ್ಣೆಯನ್ನು
ಹಚ್ಚಿಕೊಳ್ಳುವ
ಮೂಲಕ
ಇದನ್ನು
ಕಡಿಮೆ
ಮಾಡುತ್ತದೆ.
ದುಗ್ಧಗ್ರಂಥಿಗಳ
ನಾಳಗಳು
ಕಟ್ಟಿಕೊಂಡಿದ್ದರೆ
ದೇಹದಲ್ಲಿ
ನೀರು
ಸಹಾ
ಹೆಚ್ಚು
ತುಂಬಿಕೊಂಡು
ತೂಕ
ಏರಿಸಲು
ಕಾರಣವಾಗುತ್ತದೆ.
ಈ
ನಾಳಗಳು
ತೆರೆದುಕೊಳ್ಳುವ
ಮೂಲಕ
ದೇಹದ
ತೂಕ
ಇಳಿಯಲು
ನೆರವಾಗುತ್ತದೆ.
ಅಲ್ಲದೇ
ಹರಳೆಣ್ಣೆ
ಚರ್ಮಕ್ಕೆ
ಅಗತ್ಯವಾದ
ಆರ್ದ್ರತೆ
ಹಾಗೂ
ಬೆಚ್ಚಗಿನ
ಅನುಭವವನ್ನು
ನೀಡುತ್ತದೆ.
ಆರೋಗ್ಯಕರ
ತ್ವಚೆ
ಹರಳೆಣ್ಣೆಯ
ಬಳಕೆಯಿಂದ
ತೂಕ
ಇಳಿಸಲು
ನೆರವಾಗುವ
ಜೊತೆಗೇ
ತ್ವಚೆಯ
ಆರೋಗ್ಯವೂ
ಉತ್ತಮಗೊಳ್ಳುತ್ತದೆ.
ಇದು
ಗಾಢವಾದ
ದ್ರವವಾಗಿದ್ದರೂ
ಇದರ
ಆಣ್ವಿಕ
ತೂಕ
(molecular
weight)
ಕಡಿಮೆ
ಇರುವ
ಕಾರಣ
ಇದು
ಚರ್ಮದಾಳಕ್ಕೆ
ಇಳಿಯುವ
ಕ್ಷಮತೆ
ಹೊಂದಿದೆ.
ಇದು
ಚರ್ಮದ
ಆಳದಿಂದ
ಹಾಗೂ
ಕೂದಲ
ಬುಡದಿಂದ
ಆರೈಕೆ
ನೀಡುವ
ಮೂಲಕ
ಚರ್ಮದ
ಸೆಳೆತ
ಹೆಚ್ಚಿಸಲು
ಹಾಗೂ
ಕೂದಲು
ಸೊಂಪಾಗಿ
ಬೆಳೆಯಲು
ನೆರವಾಗುವ
ಮೂಲಕ
ತ್ವಚೆ
ಮೃದು
ಹಾಗೂ
ಆರೋಗ್ಯಕರವಾಗಿರಲು
ನೆರವಾಗುತ್ತದೆ.
ಮೂಳೆ
ಸಂಧುಗಳ
ಕ್ಷಮತೆ
ಹೆಚ್ಚಿಸುತ್ತದೆ
ತೂಕ
ಇಳಿಕೆಯ
ಹೊರತಾಗಿ
ಹರಳೆಣ್ಣೆಯ
ಬಳಕೆಯಿಂದ
ಸಂಧಿವಾತ
ಹಾಗೂ
ಮೂಳೆಗಳ
ನೋವು
ಸಹಾ
ಕಡಿಮೆಯಾಗುತ್ತದೆ.
ಇದರಲ್ಲಿ
ಹೆಚ್ಚಿನ
ಪ್ರಮಾಣದ
ನೋವನ್ನು
ಗುಣಪಡಿಸುವ
ಪೋಷಕಾಂಶಗಳಿದ್ದು
ವಿಶೇಷವಾಗಿ
ಸಂಧಿವಾತಕ್ಕೆ
ಉತ್ತಮ
ಪರಿಹಾರ
ದೊರಕಿಸುತ್ತದೆ.
ನಿಮ್ಮ
ನಿತ್ಯದ
ಆಹಾರದಲ್ಲಿ
ಕೊಂಚ
ಹರಳೆಣ್ಣೆಯನ್ನು
ಬೆರೆಸಿ
ಸೇವಿಸುವ
ಮೂಲಕ
ತೂಕದಲ್ಲಿ
ಇಳಿಕೆಯಾಗುವುದು
ಮಾತ್ರವಲ್ಲ
ಆರೋಗ್ಯ
ಸಹಾ
ಉತ್ತಮಗೊಳ್ಳುತ್ತದೆ.
ಆದರೆ
ಹರಳೆಣ್ಣೆಯನ್ನು
ನೈಸರ್ಗಿಕ
ರೂಪದಲ್ಲಿದ್ದಾಗ
ಮಾತ್ರವೇ
ಸೇವಿಸಬೇಕು.
ತಲೆಗೆ
ಹಚ್ಚುವ
ಹರಳೆಣ್ಣೆಯಲ್ಲಿ
ಸುಗಂಧ
ಸೇರಿಸಿರಲಾಗುತ್ತದೆ.
ಈ
ಎಣ್ಣೆ
ಸೇವಿಸಲು
ಉತ್ತಮವಲ್ಲ.
ಅಲ್ಲದೇ
ಹರಳೆಣ್ಣೆಯನ್ನು
ಹಾಗೇ
ಸೇವಿಸಿದರೆ
ಇದರ
ವಿರೇಚಕ
ಗುಣ
ಜೀರ್ಣಕ್ರಿಯೆಯನ್ನು
ಕೊಂಚ
ಹೆಚ್ಚೇ
ಬಾಧಿಸಬಹುದು.
ಆದ್ದರಿಂದ
ನಿಮ್ಮ
ನೆಚ್ಚಿನ
ಜ್ಯೂಸ್
ನೊಂದಿಗೆ
ಬೆರೆಸಿ
ಕುಡಿಯುವುದು
ಉತ್ತಮ.