ವಿಶ್ವ ಮಧುಮೇಹ ದಿನಾಚರಣೆ ವಿಶೇಷ ಶಿಬಿರ

By Mahesh

B'lore: Camp to be held for Type 1 diabetic kids
ಬೆಂಗಳೂರು, ನ.11: ನ.14ರ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಮಣಿಪಾಲ್ ಆಸ್ಪತ್ರೆ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ Type 1 ಡಯಾಬಿಸ್ ನಿಂದ ಬಳಲುತ್ತಿರುವ ಮಕ್ಕಳಿಗೆ ಪರೀಕ್ಷೆ ನಡೆಸಲಾಗುವುದು. ಮಧುಮೇಹ ಕುರಿತು ಜನ ಜಾಗೃತಿ ಮೂಡಿಸುವುದು ಈ ಶಿಬಿರದ ಮೂಲ ಉದ್ದೇಶ ಎಂದು ಹಿರಿಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ಮಧುಮೇಹ ಕುರಿತು ತಜ್ಞ ವೈದ್ಯರಿಂದ ಉಪನ್ಯಾಸದ ನಂತರ, ಮಧುಮೇಹಿ ಮಕ್ಕಳ ರಕ್ತ ಪರೀಕ್ಷೆ ನಡೆಸಲಾಗುವುದು. ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಇನ್ಸುಲಿನ್ ವಿತರಿಸಲಾಗುವುದು. ರೋಗಿಗಳ ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ವಿಚಾರಿಸಿ ನಂತರ ಇನ್ಸುಲಿನ್ ನೀಡಲಾಗುವುದು. ರೋಗವುಳ್ಳ ಮಕ್ಕಳ ಪೋಷಕರು ಆದಾಯ ಪ್ರಮಾಣ ಪತ್ರ ಪ್ರತಿಯನ್ನು ತರಬೇಕು ಹಾಗೂ ಶಿಬಿರದ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಿಗೆ ತೋರಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಟೈಪ್ 1 ಡಯಾಬಿಟಿಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದರೂ, ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಟೈಪ್ 1 ಡಯಾಬಿಟಿಸ್ ನಲ್ಲಿ ಪ್ಯಾಂಕ್ರಿಯಸ್ ಗ್ರಂಥಿ ಇನ್ಸುಲಿನ್ ಹಾರ್ಮೊನ್ ಅನ್ನು ಉತ್ಪಾದಿಸುವುದಿಲ್ಲ, ಅಲ್ಲದೆ ಇನ್ಸುಲಿನ್ ಇಲ್ಲದೆ ಬದುಕುಳಿಯುವುದೂ ಕಷ್ಟ.

ಶಿಬಿರದ ವಿವರ:
ಸ್ಥಳ: ಮಣಿಪಾಲ್ ಆಸ್ಪತ್ರೆ, ಎಚ್ ಎ ಎಲ್ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು.
ದಿನಾಂಕ/ದಿನ: ನವೆಂಬರ್ 14, ಭಾನುವಾರ.
ಸಮಯ: ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:00 ಗಂಟೆ

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Diabetes Camp | Type 1 Diabetes | Children | Manipal Hospital | Bangalore | World Diabetes day | ಮಧುಮೇಹ| ಮಕ್ಕಳು| ಮಣಿಪಾಲ್ ಆಸ್ಪತ್ರೆ|

To create awareness among the children and their parents, Manipal Hospital in Bangalore will conduct a special camp for children with Type 1 diabetes on the occasion of World Diabetes day on Sunday, Nov 14.
X
Desktop Bottom Promotion