Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಭಾದ್ರಪದ ಮಾಸದಲ್ಲಿ ಮೊಸರು ಸೇರಿದಂತೆ ಈ 4 ಆಹಾರಗಳನ್ನು ಸೇವಿಸಬಾರದು
ಕನ್ನಡ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಪ್ರಾರಂಭವಾಗಲಿದೆ. ಇದು ಕನ್ನಡ ಮಾಸದ ಆರನೇ ತಿಂಗಳು. ಈ ತಿಂಗಳಿನಲ್ಲಿ ಗಣೇಶ ಚತುರ್ಥಿ ಬರುತ್ತದೆ. ಅಲ್ಲದೆ ತಿಂಗಳು ಪೂಜಾ ಕಾರ್ಯಗಳನ್ನು ಮಾಡಿದರೆ ತುಂಬಾನೇ ಒಳ್ಳೆಯದು, ಆದರೆ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ.
ಅದಲ್ಲದೆ ಈ ತಿಂಗಳಿನಲ್ಲಿ ಮೊಸರು ತಿನ್ನಬಾರದೆಂದು ಕೂಡ ಹೇಳಲಾಗುವುದು. ಭಾದ್ರಪದ ಮಾಸದಲ್ಲಿ ಏಕೆ ಮೊಸರು ತಿನ್ನಬಾರದು? ಆಯುರ್ವೇದ ಈ ಕುರಿತು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಭಾದ್ರಪದ ಮಾಸದಲ್ಲಿ ಮೊಸರು ತಿನ್ನಬಾರದು ಏಕೆ?
ಭಾದ್ರಪದ ಮಾಸವೆಂದರೆ ಮಳೆಯ ಸಮಯ. ಈ ಸಮಯದಲ್ಲಿ ಕಾಯಿಲೆಗಳು ಅಧಿಕ, ಅಲ್ಲದೆ ಈ ಸೀಸನ್ನಲ್ಲಿ ಅಧಿಕ ಬ್ಯಾಕ್ಟಿರಿಯಾ ಚಟುವಟಿಕೆಗಳಿರುತ್ತದೆ. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟಿರಿಯಾ ಅಲ್ಲದೆ ಹಾನಿಕಾರಕ ಬ್ಯಾಕ್ಟಿರಿಯಾ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದ ಕರುಳಿಗೆ ಹಾನಿಯುಂಟಾಗುವುದು. ಇದರಿಂದಾಗಿ ಈ ಸಮಯದಲ್ಲಿ ಮಜ್ಜಿಗೆ, ಮೊಸರು ತಿನ್ನಬಾರದೆಂದು ಹೇಳಲಾಗುವುದು.
ಆರೋಗ್ಯಕ್ಕೆ ಒಳ್ಳೆಯದಲ್ಲ
ಮೊಸರಿನಲ್ಲಿರುವ ಬ್ಯಾಕ್ಟಿರಿಯಾ ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ ಈ ಬ್ಯಾಕ್ಟಿರಿಯಾ ಅಧಿಕವಾದಾಗ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಸರನ್ನು ಸೇವಿಸಿದರೆ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವುದು. ಮೊಸರನ್ನು ಈ ಸಮಯದಲ್ಲಿ ತಿನ್ನುವುದರಿಂದ ಗಂಟಲು ನೋವು , ಶೀತ ಈ ಬಗೆಯ ಸಮಸ್ಯೆ ಉಂಟಾಗುವುದು.
ಈ ಆಹಾರಗಳನ್ನು ತಿನ್ನಬಾರದೆಂದು ಹೇಳಲಾಗುವುದು
ಬೆಲ್ಲ: ಭಾದ್ರಪದ ಮಾಸದಲ್ಲಿ ಬೆಲ್ಲ ತಿನ್ನಬಾರದು, ಈ ಸಮಯದಲ್ಲಿ ಬೆಲ್ಲ ತಿನ್ನುವುದರಿಂದ ಹೊಟ್ಟೆ ಸಂಬಂಧಿತ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು.
ಎಳ್ಳು ತಿನ್ನಬಾರದು
ಎಳ್ಳು ಕೂಡ ಈ ಸಮಯದಲ್ಲಿ ತಿನ್ನಬಾರದು ಎಂದು ಹೇಳಲಾಗುವುದು, ಎಳ್ಳನ್ನು ನೈವೇದ್ಯಕ್ಕೆ ಕೂಡ ಈ ತಿಂಗಳಿನಲ್ಲಿ ಬಳಸುವುದಿಲ್ಲ.
* ಬೇರೆಯವರು ದಾನ ಮಾಡಿದ ಅಕ್ಕಿಯನ್ನು ಸೇವಿಸಬಾರದು: ಭಾದ್ರಪದ ಮಾಸದಲ್ಲಿ ಬೇರೆಯವರು ದಾನ ಮಾಡಿದ ಅಕ್ಕಿಯನ್ನು ತಿನ್ನಬಾರದು, ಇದರಿಂದ ದಾರಿದ್ರ್ಯ ಹೆಚ್ಚಾಗುವುದು ಎಂದು ಹೇಳಲಾಗುವುದು.
* ಭಾದ್ರಪದ ಮಾಸದಲ್ಲಿ ತೆಂಗಿನೆಣ್ಣೆ ಅಡುಗೆಗೆ ಬಳಸಬಾರದು ಎಂದು ಹೇಳಲಾಗುವುದು.
ಭಾದ್ರಪದ ಮಾಸದ ಭಾನುವಾರ ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು
ಈ ದಿನ ಕೂದಲನ್ನು ಕತ್ತರಿಸಬಾರದು ಎಂದು ಹೇಳಲಾಗುವುದು. ಭಾದ್ರಪದ ಭಾನುವಾರ ಉಪ್ಪು ಬಳಸಬಾರದು, ಕಾಲಿಗೆ ಶೂ ಧರಿಸಬಾರದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











