Latest Updates
-
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ
ಕಲ್ಲಂಗಡಿ ಬೀಜ ಯಾವುದೇ ಕಾರಣಕ್ಕೆ ಬಿಸಾಡಬೇಡಿ: ಇದರಲ್ಲಿದೆ ಅಂಥ ಅಮೃತ ಗುಣ
ಬೇಸಿಗೆ ಬಂದಿದೆ, ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ ಕಂಡ ತಕ್ಷಣ ಅದನ್ನು ಮನೆಗೆ ತರದೆ ಹಾಗೇ ಬರಲು ಮನಸ್ಸಾಗಲ್ಲ, ಉರಿ ಬಿಸಿಲಿನಲ್ಲಿ ಕಲ್ಲಂಗಡಿ ತಿನ್ನಲು ತುಂಬಾನೇ ಖುಷಿಯಾಗುವುದು ಅಲ್ವಾ?
ಆದರೆ ನಾವು ಕಲ್ಲಂಗಡಿ ತಂದಾಗ ಅದನ್ನು ತಿನ್ನುವುದಕ್ಕಿಂತ ಅರ್ಧಕರ್ಧ ಕಲ್ಲಂಗಡಿ ವೇಸ್ಟ್ ಮಾಡುತ್ತೇವೆ, ಅದರ ಸಿಪ್ಪೆ, ಬೀಜ ಎಲ್ಲಾ ಬಿಸಾಡುತ್ತೇವೆ, ಆದರೆ ಕಲ್ಲಂಗಡಿಲ್ಲಿ ಬಿಸಾಡುವುದಕ್ಕೆ ಏನೂ ಇಲ್ಲ, ಬಹುತೇಕ ಪೋಷಕಾಂಶಗಳ ಅದರ ಸಿಪ್ಪೆಯಲ್ಲಿದೆ, ಇನ್ನು ಕಲ್ಲಂಗಡಿ ಬೀಜ ಇದೆಯಲ್ಲಾ ಅದು ಅಮೃತಕ್ಕೆ ಸಮ.

ಈ ಕಲ್ಲಂಗಡಿ ಬೀಜ ಹೇಗೆ ಬಳಸಬೇಕು ಎಂದು ನೋಡೋಣ:
ಕಲ್ಲಂಗಡಿ ಬೀಜ ಸಂಗ್ರಹಿಸಿ ಅದನ್ನು ನೆರಳಿನಲ್ಲಿ ಒಣಗಿಸಿ
ನಂತರ ಅದರ ಒಳಗಡೆ ಇರುವ ತಿರುಳು ತಿನ್ನಿ
ಕಲ್ಲಂಗಡಿ ಬೀಜದ ಗುಣಗಳು
ಕಲ್ಲಂಗಡಿ ಬೀಜದಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕೀಲು ನೋವು,ಭುಜದ ನೋವು, ಕುತ್ತಿಗೆ ನೋವು ಈ ಬಗೆಯ ನೋವು ಕಡಿಮೆಯಾಗುವುದು.
ಕೆಲವರಿಗೆ ಮೂಳೆ ದುರ್ಬಲವಾಗಿ ನಡೆಯುವಾಗ ಶಬ್ದ ಬರುತ್ತದೆ ಅಂಥವರು ಇದನ್ನು ತಿನ್ನಬಹುದು
ಈ ಕ್ಯಾಲ್ಸಿಯಂ ಸಪ್ಲಿಮೆಂಟ್ ತಿನ್ನುವ ಬದಲಿಗೆ ಇಂಥ ಕ್ಯಾಲ್ಸಿಯಂ ಇರುವ ಆಹಾರ ತಿಂದರೆ ಒಳ್ಳೆಯದು
ಮಕ್ಕಳ ಆರೋಗ್ಯಕ್ಕೆ ಅವರ ಬೆಳವಣಿಗೆಗೆ ಅವಶ್ಯಕವಾದ ಪೋಷಕಾಂಶ ಕೂಡ ನೀಡುತ್ತದೆ.
ಕಲ್ಲಂಗಡಿ ಬೀಜದಲ್ಲಿ ಮೆಗ್ನಿಷ್ಯಿಯಂ ಇದೆ: ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ನರಗಳ ಆರೋಗ್ಯಕ್ಕೂ ಒಳ್ಳೆಯದು
ಫೋಲೆಟ್ ಇದೆ: ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಖಿನ್ನತೆ ತಡೆಗಟ್ಟಲು ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು
ಇದರಲ್ಲಿರುವ ಪ್ರೊಟೀನ್ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಸತುವಿನಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ಅಮೈನೋ ಆಮ್ಲ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇದನ್ನು ಸ್ವಲ್ಪ ರೋಸ್ಟ್ ಮಾಡಿ ಸ್ವಲ್ಪ ಉಪ್ಪು,ಖಾರ ಉದುರಿಸಿದರೆ ರುಚಿಯಾದ ಸ್ನ್ಯಾಕ್ಸ್, ಇದನ್ನು ದಿನಾ ಒಂದು ಚಮಚ ತಿಂದರೆ ಆರೋಗ್ಯಕ್ಕೆ ಅಷ್ಟೊಂದು ಗುಣಗಳಿವೆ.
ಕಲ್ಲಂಗಡಿ ಸಿಪ್ಪೆಯಲ್ಲಿಯೂ ಅಷ್ಟೊಂದು ಗುಣಗಳಿವೆ, ಅದರ ಹಸಿರು ಭಾಗ ತೆಗೆದು ಒಳಗಡೆ ಬರುವ ಬಿಳಿ ತಿರುಳು ಮೊಸರು ಜೊತೆ ಹಾಕಿ ಸವಿಯಬಹುದು
ಪಲ್ಯ ಮಾಡಬಹುದು
ಸಿಪ್ಪೆ ಸಹಿತ ಒಣಗಿಸಿ ಸ್ನ್ಯಾಕ್ಸ್ ಮಾಡಿ ಸವಿಯಬಹುದು.
ಕಲ್ಲಂಗಡಿ ಸಿಪ್ಪೆಯಲ್ಲಿರುವ ಗುಣಗಳು
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಮೊಡವೆ ಈ ಬಗೆಯ ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿ
ತೂಕ ಇಳಿಕೆಗೆ ಸಹಕಾರಿ
ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











