Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಲ್ಲಂಗಡಿ ಬೀಜ ಯಾವುದೇ ಕಾರಣಕ್ಕೆ ಬಿಸಾಡಬೇಡಿ: ಇದರಲ್ಲಿದೆ ಅಂಥ ಅಮೃತ ಗುಣ
ಬೇಸಿಗೆ ಬಂದಿದೆ, ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ ಕಂಡ ತಕ್ಷಣ ಅದನ್ನು ಮನೆಗೆ ತರದೆ ಹಾಗೇ ಬರಲು ಮನಸ್ಸಾಗಲ್ಲ, ಉರಿ ಬಿಸಿಲಿನಲ್ಲಿ ಕಲ್ಲಂಗಡಿ ತಿನ್ನಲು ತುಂಬಾನೇ ಖುಷಿಯಾಗುವುದು ಅಲ್ವಾ?
ಆದರೆ ನಾವು ಕಲ್ಲಂಗಡಿ ತಂದಾಗ ಅದನ್ನು ತಿನ್ನುವುದಕ್ಕಿಂತ ಅರ್ಧಕರ್ಧ ಕಲ್ಲಂಗಡಿ ವೇಸ್ಟ್ ಮಾಡುತ್ತೇವೆ, ಅದರ ಸಿಪ್ಪೆ, ಬೀಜ ಎಲ್ಲಾ ಬಿಸಾಡುತ್ತೇವೆ, ಆದರೆ ಕಲ್ಲಂಗಡಿಲ್ಲಿ ಬಿಸಾಡುವುದಕ್ಕೆ ಏನೂ ಇಲ್ಲ, ಬಹುತೇಕ ಪೋಷಕಾಂಶಗಳ ಅದರ ಸಿಪ್ಪೆಯಲ್ಲಿದೆ, ಇನ್ನು ಕಲ್ಲಂಗಡಿ ಬೀಜ ಇದೆಯಲ್ಲಾ ಅದು ಅಮೃತಕ್ಕೆ ಸಮ.

ಈ ಕಲ್ಲಂಗಡಿ ಬೀಜ ಹೇಗೆ ಬಳಸಬೇಕು ಎಂದು ನೋಡೋಣ:
ಕಲ್ಲಂಗಡಿ ಬೀಜ ಸಂಗ್ರಹಿಸಿ ಅದನ್ನು ನೆರಳಿನಲ್ಲಿ ಒಣಗಿಸಿ
ನಂತರ ಅದರ ಒಳಗಡೆ ಇರುವ ತಿರುಳು ತಿನ್ನಿ
ಕಲ್ಲಂಗಡಿ ಬೀಜದ ಗುಣಗಳು
ಕಲ್ಲಂಗಡಿ ಬೀಜದಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕೀಲು ನೋವು,ಭುಜದ ನೋವು, ಕುತ್ತಿಗೆ ನೋವು ಈ ಬಗೆಯ ನೋವು ಕಡಿಮೆಯಾಗುವುದು.
ಕೆಲವರಿಗೆ ಮೂಳೆ ದುರ್ಬಲವಾಗಿ ನಡೆಯುವಾಗ ಶಬ್ದ ಬರುತ್ತದೆ ಅಂಥವರು ಇದನ್ನು ತಿನ್ನಬಹುದು
ಈ ಕ್ಯಾಲ್ಸಿಯಂ ಸಪ್ಲಿಮೆಂಟ್ ತಿನ್ನುವ ಬದಲಿಗೆ ಇಂಥ ಕ್ಯಾಲ್ಸಿಯಂ ಇರುವ ಆಹಾರ ತಿಂದರೆ ಒಳ್ಳೆಯದು
ಮಕ್ಕಳ ಆರೋಗ್ಯಕ್ಕೆ ಅವರ ಬೆಳವಣಿಗೆಗೆ ಅವಶ್ಯಕವಾದ ಪೋಷಕಾಂಶ ಕೂಡ ನೀಡುತ್ತದೆ.
ಕಲ್ಲಂಗಡಿ ಬೀಜದಲ್ಲಿ ಮೆಗ್ನಿಷ್ಯಿಯಂ ಇದೆ: ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ನರಗಳ ಆರೋಗ್ಯಕ್ಕೂ ಒಳ್ಳೆಯದು
ಫೋಲೆಟ್ ಇದೆ: ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಖಿನ್ನತೆ ತಡೆಗಟ್ಟಲು ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು
ಇದರಲ್ಲಿರುವ ಪ್ರೊಟೀನ್ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಸತುವಿನಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ಅಮೈನೋ ಆಮ್ಲ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇದನ್ನು ಸ್ವಲ್ಪ ರೋಸ್ಟ್ ಮಾಡಿ ಸ್ವಲ್ಪ ಉಪ್ಪು,ಖಾರ ಉದುರಿಸಿದರೆ ರುಚಿಯಾದ ಸ್ನ್ಯಾಕ್ಸ್, ಇದನ್ನು ದಿನಾ ಒಂದು ಚಮಚ ತಿಂದರೆ ಆರೋಗ್ಯಕ್ಕೆ ಅಷ್ಟೊಂದು ಗುಣಗಳಿವೆ.
ಕಲ್ಲಂಗಡಿ ಸಿಪ್ಪೆಯಲ್ಲಿಯೂ ಅಷ್ಟೊಂದು ಗುಣಗಳಿವೆ, ಅದರ ಹಸಿರು ಭಾಗ ತೆಗೆದು ಒಳಗಡೆ ಬರುವ ಬಿಳಿ ತಿರುಳು ಮೊಸರು ಜೊತೆ ಹಾಕಿ ಸವಿಯಬಹುದು
ಪಲ್ಯ ಮಾಡಬಹುದು
ಸಿಪ್ಪೆ ಸಹಿತ ಒಣಗಿಸಿ ಸ್ನ್ಯಾಕ್ಸ್ ಮಾಡಿ ಸವಿಯಬಹುದು.
ಕಲ್ಲಂಗಡಿ ಸಿಪ್ಪೆಯಲ್ಲಿರುವ ಗುಣಗಳು
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಮೊಡವೆ ಈ ಬಗೆಯ ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿ
ತೂಕ ಇಳಿಕೆಗೆ ಸಹಕಾರಿ
ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









