Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕಲ್ಲಂಗಡಿ ಬೀಜ ಯಾವುದೇ ಕಾರಣಕ್ಕೆ ಬಿಸಾಡಬೇಡಿ: ಇದರಲ್ಲಿದೆ ಅಂಥ ಅಮೃತ ಗುಣ
ಬೇಸಿಗೆ ಬಂದಿದೆ, ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ ಕಂಡ ತಕ್ಷಣ ಅದನ್ನು ಮನೆಗೆ ತರದೆ ಹಾಗೇ ಬರಲು ಮನಸ್ಸಾಗಲ್ಲ, ಉರಿ ಬಿಸಿಲಿನಲ್ಲಿ ಕಲ್ಲಂಗಡಿ ತಿನ್ನಲು ತುಂಬಾನೇ ಖುಷಿಯಾಗುವುದು ಅಲ್ವಾ?
ಆದರೆ ನಾವು ಕಲ್ಲಂಗಡಿ ತಂದಾಗ ಅದನ್ನು ತಿನ್ನುವುದಕ್ಕಿಂತ ಅರ್ಧಕರ್ಧ ಕಲ್ಲಂಗಡಿ ವೇಸ್ಟ್ ಮಾಡುತ್ತೇವೆ, ಅದರ ಸಿಪ್ಪೆ, ಬೀಜ ಎಲ್ಲಾ ಬಿಸಾಡುತ್ತೇವೆ, ಆದರೆ ಕಲ್ಲಂಗಡಿಲ್ಲಿ ಬಿಸಾಡುವುದಕ್ಕೆ ಏನೂ ಇಲ್ಲ, ಬಹುತೇಕ ಪೋಷಕಾಂಶಗಳ ಅದರ ಸಿಪ್ಪೆಯಲ್ಲಿದೆ, ಇನ್ನು ಕಲ್ಲಂಗಡಿ ಬೀಜ ಇದೆಯಲ್ಲಾ ಅದು ಅಮೃತಕ್ಕೆ ಸಮ.

ಈ ಕಲ್ಲಂಗಡಿ ಬೀಜ ಹೇಗೆ ಬಳಸಬೇಕು ಎಂದು ನೋಡೋಣ:
ಕಲ್ಲಂಗಡಿ ಬೀಜ ಸಂಗ್ರಹಿಸಿ ಅದನ್ನು ನೆರಳಿನಲ್ಲಿ ಒಣಗಿಸಿ
ನಂತರ ಅದರ ಒಳಗಡೆ ಇರುವ ತಿರುಳು ತಿನ್ನಿ
ಕಲ್ಲಂಗಡಿ ಬೀಜದ ಗುಣಗಳು
ಕಲ್ಲಂಗಡಿ ಬೀಜದಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕೀಲು ನೋವು,ಭುಜದ ನೋವು, ಕುತ್ತಿಗೆ ನೋವು ಈ ಬಗೆಯ ನೋವು ಕಡಿಮೆಯಾಗುವುದು.
ಕೆಲವರಿಗೆ ಮೂಳೆ ದುರ್ಬಲವಾಗಿ ನಡೆಯುವಾಗ ಶಬ್ದ ಬರುತ್ತದೆ ಅಂಥವರು ಇದನ್ನು ತಿನ್ನಬಹುದು
ಈ ಕ್ಯಾಲ್ಸಿಯಂ ಸಪ್ಲಿಮೆಂಟ್ ತಿನ್ನುವ ಬದಲಿಗೆ ಇಂಥ ಕ್ಯಾಲ್ಸಿಯಂ ಇರುವ ಆಹಾರ ತಿಂದರೆ ಒಳ್ಳೆಯದು
ಮಕ್ಕಳ ಆರೋಗ್ಯಕ್ಕೆ ಅವರ ಬೆಳವಣಿಗೆಗೆ ಅವಶ್ಯಕವಾದ ಪೋಷಕಾಂಶ ಕೂಡ ನೀಡುತ್ತದೆ.
ಕಲ್ಲಂಗಡಿ ಬೀಜದಲ್ಲಿ ಮೆಗ್ನಿಷ್ಯಿಯಂ ಇದೆ: ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ನರಗಳ ಆರೋಗ್ಯಕ್ಕೂ ಒಳ್ಳೆಯದು
ಫೋಲೆಟ್ ಇದೆ: ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಖಿನ್ನತೆ ತಡೆಗಟ್ಟಲು ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು
ಇದರಲ್ಲಿರುವ ಪ್ರೊಟೀನ್ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಸತುವಿನಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ಅಮೈನೋ ಆಮ್ಲ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇದನ್ನು ಸ್ವಲ್ಪ ರೋಸ್ಟ್ ಮಾಡಿ ಸ್ವಲ್ಪ ಉಪ್ಪು,ಖಾರ ಉದುರಿಸಿದರೆ ರುಚಿಯಾದ ಸ್ನ್ಯಾಕ್ಸ್, ಇದನ್ನು ದಿನಾ ಒಂದು ಚಮಚ ತಿಂದರೆ ಆರೋಗ್ಯಕ್ಕೆ ಅಷ್ಟೊಂದು ಗುಣಗಳಿವೆ.
ಕಲ್ಲಂಗಡಿ ಸಿಪ್ಪೆಯಲ್ಲಿಯೂ ಅಷ್ಟೊಂದು ಗುಣಗಳಿವೆ, ಅದರ ಹಸಿರು ಭಾಗ ತೆಗೆದು ಒಳಗಡೆ ಬರುವ ಬಿಳಿ ತಿರುಳು ಮೊಸರು ಜೊತೆ ಹಾಕಿ ಸವಿಯಬಹುದು
ಪಲ್ಯ ಮಾಡಬಹುದು
ಸಿಪ್ಪೆ ಸಹಿತ ಒಣಗಿಸಿ ಸ್ನ್ಯಾಕ್ಸ್ ಮಾಡಿ ಸವಿಯಬಹುದು.
ಕಲ್ಲಂಗಡಿ ಸಿಪ್ಪೆಯಲ್ಲಿರುವ ಗುಣಗಳು
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಮೊಡವೆ ಈ ಬಗೆಯ ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿ
ತೂಕ ಇಳಿಕೆಗೆ ಸಹಕಾರಿ
ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
