ಆಯುರ್ವೇದ ಪ್ರಕಾರ ಮಳೆಗಾಲದಲ್ಲಿ ಈ 11 ಆಹಾರಗಳನ್ನು ಮಿಸ್‌ ಮಾಡಲೇಬಾರದು

ಮಳೆಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆಮಾಡಬೇಕು, ಅದರಲ್ಲೂ ಆಯುರ್ವೇದ ಪ್ರಕಾರ ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕು, ಈ ಆಹಾರಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ವಾತ, ಕಫ ಸಮಸ್ಯೆ ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಮಿಸ್‌ ಮಾಡದೆ ಸೇರಿಸಿ:

ayurveda tips for monsoon

1. ಶುಂಠಿ
ಶುಂಠಿ ಮಳೆಗಾಲದಲ್ಲಿ ನಿಮ್ಮ ಆಹಾರಕ್ರಮದಲ್ಲಿ ತಪ್ಪದೆ ಸೇರಿಸಿ. ಇದರಿಂದ ದೇಹದಲ್ಲಿ ಮೈ ಉಷ್ಣತೆ ಕಾಪಾಡಲು ಸಹಕಾರಿ. ಅಲ್ಲದೆ ಶುಂಠಿಯನ್ನು ಬಳಸುವುದರಿಂದ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.

2. ಬೆಳ್ಳುಳ್ಳಿ
ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದು, ಬೆಳ್ಳುಳ್ಳಿ ತಿನ್ನುವುದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು. ಆದ್ದರಿಂದ ನೀವು ಪ್ರತಿನಿತ್ಯ ಮಾಡುವ ಸೂಪ್‌, ಸಾರಿನಲ್ಲಿ ಬೆಳ್ಳುಳ್ಳಿ ತಪ್ಪದೆ ಬಳಸಿ.

3. ಪುದೀನಾ
ಬಿಸಿ ಟೀಗೆ ಪುದೀನಾ (ಬ್ಲ್ಯಾಕ್ ಟೀ) ಹಾಕಿ ಕುಡಿದರೆ ತುಂಬಾನೇ ಹಿತ ಅನಿಸುವುದು ಮಾತ್ರವಲ್ಲ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿ ತಡೆಗಟ್ಟಲು ಸಹಕಾರಿಯಾಗಿದೆ.

4. ಹೆಸರು ಬೇಳೆ
ಇದರಲ್ಲಿ ಪ್ರೊಟೀನ್‌, ವಿಟಮಿನ್, ಖನಿಜಾಂಶ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಹೆಸರುಕಾಳು, ಹೆಸರು ಬೇಳೆ ಇವುಗಳನ್ನು ಬಳಸುವುದು ತುಂಬಾ ಒಳ್ಳೆಯದು.

5. ಜೇನು
ಜೇನನ್ನು ಮಳೆಗಾಲದಲ್ಲಿ ಪ್ರತಿದಿನ ಬಳಸಿ. ಬೆಳಗ್ಗೆ ಬಿಸಿ ನೀರಿಗೆ ಜೇನು ಹಾಕಿ ಕುಡಿಯಿರಿ, ಮಕ್ಕಳಿಗೂ ಕೊಡುವುದು ಒಳ್ಳೆಯದು, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

6. ಜೋಳ
ಜೋಳದಲ್ಲಿ ಕೂಡ ನಾರಿನಂಶ, ಕಬ್ಬಿಣದಂಶ, ವಿಟಮಿನ್ಸ್‌ ಇರುವುದರಿಂದ ಮಳೆಗಾಲದಲ್ಲಿ ಜೋಳವನ್ನು ಬಳಸಿ.

7. ಸೋರೆಕಾಯಿ
ಸೋರೆಕಾಯಿ ಕೂಡ ಮಳೆಗಾಲಕ್ಕೆ ಅತ್ಯಂತ ಸೂಕ್ತವಾದ ಆಹಾರವಾಗಿದೆ. ಇದರಿಂದ ಸೂಪ್ ಮಾಡಿ ಕುಡಿಯುವುದರಿಂದ ಮೈ ತೂಕ ನಿಯಂತ್ರಿಸಲು ಕೂಡ ಸಹಕಾರಿ.

8. ಅರಿಶಿಣ
ಅರಿಶಿಣವನ್ನು ಮಳೆಗಾಲದಲ್ಲಿ ತಪ್ಪದೆ ಬಳಸಿ. ಗಂಟಲು ನೋವು, ಫ್ಲೂ, ಕೆಮ್ಮು, ಶೀತ ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ ಅರಿಶಿಣ ಪರಿಣಾಮಕಾರಿ.

9. ಕೆಂಪಕ್ಕಿ
ಕೆಂಪಕ್ಕಿಯ ಅನ್ನ ಮಧುಮೇಹಿಗಳಿಗೂ ಒಳ್ಳೆಯದು. ಇದರಲ್ಲಿ B6
ಮತ್ತು ಕಬ್ಬಿಣದಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

10. ಕಲ್ಲುಪ್ಪು
ನೀವು ಅಡುಗೆ ಮಾಡುವಾಗ ಪುಡಿ ಉಪ್ಪಿನ ಬದಲಿಗೆ ಕಲ್ಲುಪ್ಪು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಒಳ್ಳೆಯದು.

11. ಹಾಗಲಕಾಯಿ
ಮಳೆಗಾಲದಲ್ಲಿ ತಪ್ಪದೆ ತಿನ್ನುವ ಆಹಾರಗಳಲ್ಲಿ ಹಾಗಾಲಕಾಯಿ ಕೂಡ ಒಂದು. ಇದರಲ್ಲಿ ವಿಟಮಿನ್ ಸಿ ಅಧಿಕವಿದೆ, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

11 Foods To Eat In Monsoon As Per Ayurveda In Kannada

These foods you never miss in monsoon as per Ayurveda read on
Story first published: Saturday, July 1, 2023, 21:34 [IST]
X
Desktop Bottom Promotion