Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಗೃಹಿಣಿಯರೇ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಮಹಿಳೆಯರಿಗೆ ಬೆಳಗ್ಗೆ ಎದ್ದ ತಕ್ಷಣ ನೂರಾರು ಕೆಲಸಗಳಿರುತ್ತೆ. ಕೆಲಸಕ್ಕೆ ಹೋಗುವವರಾದರೆ ಹೊರಡೋ ತರಾತುರಿ. ಗೃಹಿಣಿಯಾದರೆ ಗಂಡ-ಮಕ್ಕಳನ್ನು ರೆಡಿ ಮಾಡಿ ಕಳುಹಿಸೋದೆ ದೊಡ್ಡ ತಲೆನೋವು. ಇದರ ಮಧ್ಯೆ ತ್ವಚೆಯ ಆರೈಕೆಗೆ ಸಮಯವೇ ಸಿಗೋದಿಲ್ಲ.

ಆದರೆ ಎಷ್ಟೇ ಕೆಲಸಗಳಿದ್ದರೂ ಕೂಡ ಅದರ ಮಧ್ಯೆ ತ್ವಚೆಯ ಆರೈಕೆ ತುಂಬಾನೇ ಮುಖ್ಯವಾಗುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ತಣ್ಣಿರಿನಿಂದ ಮುಖ ತೊಳೆದು ಫೇಸ್ವಾಷ್ ಮಾಡಿ ಮುಖದ ಮೇಲಿರೋ ಎಣ್ಣೆಯ ಅಂಶ, ಡೆಡ್ ಸ್ಕಿನ್, ಪೋರ್ಸ್, ಕೊಳಕುಗಳನ್ನು ತೊಲಗಿಸಿ. ಆನಂತರ ನಿಮ್ಮ ಮನೆಯಲ್ಲೇ ಲಭ್ಯವಾಗೋ ಈ ಮೂರು ವಸ್ತುಗಳನ್ನು ಬಳಸಿ ಹೊಳೆಯುವ, ಕಾಂತಿಯುತವಾದ ತ್ವಚೆ ನಿಮ್ಮದಾಗಿಸಿ.
ನಿತ್ಯವು ಈ ಮೂರು ವಸ್ತುಗಳನ್ನು ಮುಖಕ್ಕೆ ಹಚ್ಚುವುದರಿಂದ ಆರೋಗ್ಯಕರ ತ್ವಚೆ ನಿಮ್ಮದಾಗುತ್ತದೆ.
1.ಹಾಲಿನ ಮಸಾಜ್
ಬೆಳಗ್ಗೆ ಎದ್ದ ತಕ್ಷಣ ಮುಖ ಸ್ವಚ್ಛಗೊಳಿಸಿ ತಣ್ಣಗಿನ ಹಾಲಿನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಕೆಲ ಹೊತ್ತು ಹೊತ್ತು ಹಾಗೇ ಇಟ್ಟು ನಂತರ ತಣ್ಣಿರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖದ ಚರ್ಮ ಮೃದು ಮತ್ತು ಕೋಮಲವಾಗುತ್ತದೆ. ಇದಿಷ್ಟೇ ಅಲ್ಲ, ಹಾಲಿನ ಮಸಾಜ್ ಮಾಡುವುದರಿಂದ ಕಪ್ಪು ಕಲೆಗಳನ್ನು ತೊಲಗಿಸಲು ಕೂಡ ಸಹಾಯ ಮಾಡುತ್ತದೆ.
2. ಜೇನುತುಪ್ಪ
ಬೆಳಗ್ಗಿನ ಜಾವ ಜೇನುತುಪ್ಪದ ಮೂಲಕ ಮುಖಕ್ಕೆ ಸರಿಯಾಗಿ ಹದಿನೈದು ನಿಮಿಷ ಮಸಾಜ್ ಮಾಡಿ ನಂತರ ಹದಾ ಬಿಸಿನೀರಿನಿಂದ ಮುಖ ತೊಳೆಯಿರಿ. ಆನಂತರ ಒಂದು ತುಂಡು ಲಿಂಬೆಹನ್ಣನ್ನು ತೆಗೆದುಕೊಂಡು ಮುಖದ ತುಂಬಾ ಹಚ್ಚಿರಿ. ಆನಂತರ ಅದನ್ನು ಒಣಗಲು ಬಿಡಿ. ಜೇನುತುಪ್ಪವು ನಿಮ್ಮ ಮುಖದ ಬೇಡವಾದ ಕೂದಲನ್ನು ತೊಲಗಿಸುತ್ತದೆ. ಮತ್ತು ಚರ್ಮದ ಬಣ್ಣವನ್ನು ವೃದ್ಧಿಸುತ್ತದೆ.
3. ಸ್ಟ್ರಾಬೆರಿ ಹಣ್ಣು
ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕರ ಲಾಭಗಳಿದೆ. ಇದು ಚರ್ಮದ ಸುಕ್ಕು ಮತ್ತು ಕಣ್ಣಿನ ಸುತ್ತ ಇರುವ ಕಲೆಯನ್ನು ತೊಲಗಿಸುತ್ತದೆ. ಸ್ಟ್ರಾಬೆರಿಯನ್ನು ಹಾಗೇ ತಿನ್ನಲು ಜನ ಇಷ್ಟವಾಗುವುದಿಲ್ಲ. ಹೀಗಾಗಿ ಜ್ಯೂಸ್ ಅಥವಾ ಫ್ರೂಟ್ ಸಲಾಡ್ ಮುಖಾಂತರ ಸೇವಿಸಬಹುದು.
ಲಿಂಬೆಹಣ್ಣಿನಿಂದ ಅನೇಕ ಆರೋಗ್ಯಕರ ಲಾಭಗಳಿದೆ ಅನ್ನೋದು ನಮಗೆ ಗೊತ್ತಿದೆ. ಅದರ ಬದಲಿಗೆ ಟೊಮೆಟೋ ಹಣ್ಣಿನ ಜ್ಯೂಸ್ ಕೂಡ ನೀವು ಮುಖಕ್ಕೆ ಹಚ್ಚಬಹುದು. ಇದರಿಂದ ನಿಮ್ಮ ಚರ್ಮ ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಆದರೆ ಸಿಟ್ರಿಕ್ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚುವಾಗ ಹುಷಾರಾಗಿರಿ. ಯಾಕೆಂದರೆ ಕೆಲವು ಜನರ ಚರ್ಮಕ್ಕೆ ಇದು ಸೂಕ್ತವಲ್ಲ ಉರಿ, ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆ.
ನೋಡಿದ್ರಲ್ಲ ಮನೆಯಲ್ಲ ಸಿಗುವ ವಸ್ತುಗಳಿಂದ ನಮ್ಮ ಅಂದವನ್ನು ಹೇಗೆ ಹೆಚ್ಚಿಸಬಹುದು ಅನ್ನೊದನ್ನ. ಯಾವುದೇ ವಸ್ತುವಾಗಲಿ ಬಳಸುವಾಗ ಜಾಗರೂಕತೆಯಿಂದರಿ ನಿಮ್ಮ ಚರ್ಮಕ್ಕೆ ಸೂಕ್ತ ಎನಿಸಿದರೆ ಮಾತ್ರ ಅದರ ಬಳಕೆಯನ್ನು ಮುಂದುವರಿಸಿ.



Click it and Unblock the Notifications


