Latest Updates
-
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು!
ಈ 5 ಆಯುರ್ವೇದ ಗಿಡಮೂಲಿಕೆಗಳಿಂದ ಮೊಡವೆ ಕಲೆಗಳಿಗೆ ಹೇಳಿ ಗುಡ್ ಬೈ!
ಬೇಸಿಗೆಯಲ್ಲಿ ಸೂರ್ಯನ ಬೆಳಕಿನಿಂದಾಗಿ, ಚರ್ಮದ ಟೋನ್ ಹಾಳಾಗುವುದು. ಏಕೆಂದರೆ, ಸೂರ್ಯನ ಶಾಖವು ಮೆಲನಿನ್ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಚರ್ಮದ ಬಣ್ಣವು ಕಪ್ಪಾಗಲು, ಮೊಡವೆ ಹಾಗೂ ಅದರ ಕಲೆಗಳು ಹೆಚ್ಚಾಗಲು ಕಾರಣವಾಗುವುದು.
ಆದ್ದರಿಂದ ಬೇಸಿಗೆಯಲ್ಲಿ ನಿಮ್ಮ ತ್ವಚೆಯನ್ನು ತಾಜಾವಾಗಿಡಲು ಬಯಸಿದರೆ, ಆಹಾರದ ಜೊತೆಗೆ, ನಿಮ್ಮ ಸೌಂದರ್ಯದ ದಿನಚರಿಯಲ್ಲಿ ಕೆಲವು ವಿಶೇಷ ವಿಷಯಗಳನ್ನು ಸೇರಿಸಿ . ಈ ಗಿಡಮೂಲಿಕೆಗಳನ್ನು ಯಾವಾಗಲೂ ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ, ಇದರಿಂದ ಅಗತ್ಯವಿದ್ದಾಗ ಅವುಗಳನ್ನು ಬಳಸಬಹುದು. ಅಷ್ಟೇ ಅಲ್ಲ, ಈ ವಸ್ತುಗಳನ್ನು ಮುಖಕ್ಕೆ ಹಚ್ಚುವುದರ ಜೊತೆಗೆ ಸೇವಿಸಬಹುದು. ಅವುಗಳಾವುವು ಇಲ್ಲಿ ನೋಡೋಣ.

ಶ್ರೀಗಂಧ:
ಬೇಸಿಗೆಯಲ್ಲಿ ಸನ್ ಸ್ಟ್ರೋಕ್ ನಿಂದ ಪರಿಹಾರ ಪಡೆಯಲು ಶ್ರೀಗಂಧವನ್ನು ಹಲವು ರೀತಿಯಲ್ಲಿ ಬಳಸಬಹುದು. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬಹುದು. ಇದಲ್ಲದೇ ಬೇಸಿಗೆಯಲ್ಲಿ ಶ್ರೀಗಂಧದ ಪುಡಿಯನ್ನು ಫೇಸ್ ಪ್ಯಾಕ್ ಆಗಿ ಬಳಸಬಹುದು. ಚರ್ಮವು ಎಣ್ಣೆಯುಕ್ತವಾಗಿದ್ದರೆ, ಶ್ರೀಗಂಧದ ಪುಡಿಯಲ್ಲಿ ರೋಸ್ ವಾಟರ್ ಅನ್ನು ಬೆರೆಸಿ ಮುಖಕ್ಕೆ ಹಚ್ಚಿ. ತ್ವಚೆ ಒಣಗಿದ್ದರೆ ಹಸಿ ಹಾಲಿನೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು. ಇದರಿಂದ ಮೊಡವೆ ಹಾಗೂ ಅದರ ಕಲೆಗಳು ನಿವಾರಣೆಯಾಗುವುದು.

ಬೇಲ್ ರಸ:
ಬೇಸಿಗೆಯಲ್ಲಿ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಮೊಡವೆ ಅಥವಾ ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಾವು ಸೇವಿಸುವ ವಸ್ತುಗಳಿಂದಾಗಿ ಹೊಟ್ಟೆಯಲ್ಲಿ ಶಾಖವು ಹೆಚ್ಚಾಗುತ್ತದೆ. ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಇದೂ ಒಂದು ಪ್ರಮುಖ ಕಾರಣ . ಅಂತಹ ಪರಿಸ್ಥಿತಿಯಲ್ಲಿ, ಬೇಲ್ ಹಣ್ಣಿನ ರಸವು ಹೊಟ್ಟೆ ಮತ್ತು ಕರುಳಿನ ಶಾಖವನ್ನು ಶಾಂತಗೊಳಿಸುತ್ತದೆ. ಬೇಕಿದ್ದರೆ ತಿನ್ನಬಹುದು ಅಥವಾ ಜ್ಯೂಸ್ ಮಾಡಿ ಕುಡಿಯಬಹುದು.

ಅಲೋವೆರಾ ಎಲೆ:
ಅಲೋವೆರಾ ಬಿಸಿಲಿನ ಬೇಗೆಯನ್ನು ತಂಪಾಗಿಸಲು ಮತ್ತು ಹಿತವಾಗಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಇದು ಚರ್ಮವನ್ನು ತೇವಗೊಳಿಸಲು ಸಹಕಾರಿ. ಬೇಸಿಗೆಯಲ್ಲಿ, ಅಲೋವೆರಾವನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಬೇಸಿಗೆಯಲ್ಲಿ, ಸೂರ್ಯನ ಸಂಪರ್ಕಕ್ಕೆ ಬಂದ ನಂತರ ಚರ್ಮವು ಮಾತ್ರವಲ್ಲದೇ, ಕೂದಲು ಕೂಡ ಒಣಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಮತ್ತು ಹೇರ್ ಪ್ಯಾಕ್ ಆಗಿ ಬಳಸಬಹುದು.

ಬೇವಿನ ಎಲೆ:
ಬೇವಿನ ಎಲೆಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಇವು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತಾರೆ. ಮೊಡವೆ ಮುಕ್ತ ಮುಖ ಮತ್ತು ದೋಷರಹಿತ ತ್ವಚೆ ಪಡೆಯಲು ಇದನ್ನು ಬಳಸಬಹುದು. ಅದೇ ಸಮಯದಲ್ಲಿ, ಕೆಲವರು ಇದರ ಎಲೆಗಳನ್ನು ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಆದಾಗ್ಯೂ, ನೀವು ಅದರ ವಾಸನೆಯನ್ನು ಇಷ್ಟಪಡದಿದ್ದರೆ, ಒಣ ಎಲೆಗಳನ್ನು ಪುಡಿ ಮಾಡುವ ಮೂಲಕ ಸಹ ಬಳಸಬಹುದು.

ಮಂಜಿಷ್ಠ:
ಮಂಜಿಷ್ಠವು ಆಯುರ್ವೇದ ಮೂಲಿಕೆಯಾಗಿದ್ದು, ಅದರ ತಂಪಾಗಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜನರು ಕಷಾಯ ಮಾಡಿ ಕುಡಿಯುತ್ತಾರೆ. ಇದಲ್ಲದೇ ಮಂಜಿಷ್ಠದ ಪುಡಿಯಲ್ಲಿ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಬಹುದು. ಇದರಿಂದ ಸುಕ್ಕುಗಳ ಸಮಸ್ಯೆಯೂ ದೂರವಾಗುತ್ತದೆ. ನೀವು ಮಾರುಕಟ್ಟೆಯಲ್ಲಿ ಮಂಜಿಷ್ಠ ಪುಡಿಯನ್ನು ಸುಲಭವಾಗಿ ಪಡೆಯಬಹುದು.



Click it and Unblock the Notifications