Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು?
ತುಳಸಿಯಿಂದ ಮಾಯವಾಗುವುದು ಮೊಡವೆ! ಹೇಗೆ ಇಲ್ಲಿ ನೋಡಿ
ತುಳಸಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಮಹೋನ್ನತ ಸ್ಥಾನವಿದೆ. ಪೂಜ್ಯನೀಯ ಭಾವವಿರುದ ಈ ತುಳಸಿಯನ್ನು ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಸ್ಯವೆಂದು ಪರಿಗಣಿಸಲಾಗುತ್ತದೆ. ಅನೇಕ ರೋಗಗಳಲ್ಲಿ ತುಳಸಿಯನ್ನು ಔಷಧಿಯಾಗಿ ಬಳಸುವುದರ ಜೊತೆಗೆ, ತುಳಸಿ ಎಲೆಗಳನ್ನು ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗುತ್ತದೆ. ಇಂತಹ ತುಳಸಿ ನಿಮ್ಮ ಸೌಂದರ್ಯಕ್ಕೆ ಎಂತಹ ಮ್ಯಾಜಿಕ್ ಮಾಡುತ್ತೆ ಗೊತ್ತಾ? ಈ ಸ್ಟೋರಿ ಓದಿ.

ತುಳಸಿಯಲ್ಲಿರುವ ಪೋಷಕಾಂಶಗಳು:
ತುಳಸಿ ಎಲೆಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಮುಖ್ಯವಾಗಿ ವಿಟಮಿನ್ ಸಿ, ಕ್ಯಾಲ್ಸಿಯಂ, ಸತು ಮತ್ತು ಕಬ್ಬಿಣ ಇತ್ಯಾದಿಗಳನ್ನು ಹೊಂದಿರುತ್ತದೆ. ಇದರೊಂದಿಗೆ ಸಿಟ್ರಿಕ್, ಟಾರ್ಟಾರಿಕ್ ಮತ್ತು ಮಾಲಿಕ್ ಆಮ್ಲವು ತುಳಸಿಯಲ್ಲಿ ಕಂಡುಬರುತ್ತದೆ. ಇವೆಲ್ಲವೂ ನಿಮ್ಮ ಕೂದಲು ಹಾಗೂ ತ್ವಚೆ ರಕ್ಷಣೆಗೆ ಸಹಾಯ ಮಾಡುವಂತಹ ಅಂಶಗಳಾಗಿವೆ.

ಚರ್ಮದ ಆರೈಕೆಗಾಗಿ ತುಳಸಿ :
ತುಳಸಿ ಗುಳ್ಳೆಗಳು ಮತ್ತು ಮೊಡವೆಗಳ ಮೇಲೆ ಸಹ ಕಾರ್ಯನಿರ್ವಹಿಸುತ್ತದೆ. ವಿಷ ಮತ್ತು ಕಲ್ಮಶಗಳನ್ನು ತೆಗೆದುಹಾಕಿ ರಕ್ತವನ್ನು ಸ್ವಚ್ಛಗೊಳಿಸುವಲ್ಲಿ ತುಳಸಿ ಕೆಲಸ ಮಾಡುತ್ತದೆ. ಇದು ಮೊಡವೆಗಳನ್ನು ಕಡಿಮೆ ಮಾಡುವ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಕ್ಕಾಗಿ, ತುಳಸಿ ಎಲೆಗಳ ಪೇಸ್ಟ್ ತಯಾರಿಸಿ, ಅದಕ್ಕೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ, 10 ನಿಮಿಷಗಳ ಕಾಲ ಬಿಟ್ಟು, ಸರಳ ನೀರಿನಿಂದ ತೊಳೆಯಿರಿ.

ತುಳಸಿಯ ಇತರ ಪ್ರಯೋಜನಗಳು:
- ಉಸಿರಾಟದ ಸಮಸ್ಯೆಗಳಿಗೆ, ತುಳಸಿ ಎಲೆಗಳನ್ನು ಕಪ್ಪು ಉಪ್ಪಿನೊಂದಿಗೆ ಸೇರಿಸಿ ಬಾಯಿಯಲ್ಲಿ ಇಟ್ಟುಕೊಳ್ಳುವುದು ಪರಿಹಾರವನ್ನು ನೀಡುತ್ತದೆ.
- ತುಳಸಿಯ ಹಸಿರು ಎಲೆಗಳನ್ನು ಬೆಂಕಿಯಲ್ಲಿ ಸುಟ್ಟು ಉಪ್ಪಿನೊಂದಿಗೆ ತಿನ್ನಿರಿ, ಇದು ಕೆಮ್ಮು ಮತ್ತು ಗಂಟಲು ಗುಣಪಡಿಸುತ್ತದೆ.
- ತುಳಸಿ ಎಲೆಗಳೊಂದಿಗೆ 4 ಹುರಿದ ಲವಂಗವನ್ನು ಅಗಿಯುವುದರಿಂದ ಕೆಮ್ಮು ಗುಣವಾಗುತ್ತದೆ.
- ಎಳೆ ತುಳಸಿ ಎಲೆಗಳನ್ನು ಅಗಿಯುವುದರಿಂದ ಕೆಮ್ಮು ಮತ್ತು ವಾಕರಿಕೆ ನಿವಾರಣೆಯಾಗುತ್ತದೆ.
- ಕೆಮ್ಮು ಮತ್ತು ಶೀತ ಇರುವಾಗ ತುಳಸಿ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದು ಜೊತೆಗೆ ಅದಕ್ಕೆ ಶುಂಠಿ ಮತ್ತು ಕರಿಮೆಣಸು ಸೇರಿಸಿದರೆ ತಕ್ಷಣದ ಪ್ರಯೋಜನಗಳನ್ನು ನೀಡುತ್ತದೆ.
- 10-12 ತುಳಸಿ ಎಲೆಗಳು ಮತ್ತು 8-10 ಕರಿಮೆಣಸಿನಿಂದ ಮಾಡಿದ ಚಹಾವು ಕೆಮ್ಮು, ಶೀತ, ಜ್ವರವನ್ನು ಗುಣಪಡಿಸುವುದು.
- ಸುಮಾರು ಒಂದೂವರೆ ಟೀಸ್ಪೂನ್ ಕರಿಮೆಣಸಿನೊಂದಿಗೆ ಕಪ್ಪು ತುಳಸಿಯನ್ನು ಕಾಯಿಸಿ, ಕಷಾಯವನ್ನು ಮಾಡಿ ಕುಡಿಯುವ ಮೂಲಕ ಕೆಮ್ಮು ಸಂಪೂರ್ಣವಾಗಿ ಕಡಿಮೆಯಾಗುವುದು.
- 5 ಗ್ರಾಂ ಜೇನುತುಪ್ಪದೊಂದಿಗೆ 10 ಗ್ರಾಂ ತುಳಸಿ ರಸವನ್ನು ಸೇವಿಸುವುದರಿಂದ, ಆಸ್ತಮಾ ಮತ್ತು ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಬಹುದು.



Click it and Unblock the Notifications