Just In
- 3 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಸರಳ ಟಿಪ್ಸ್
ಹೆಚ್ಚಿನವರಿಗೆ ಇಂದಿನ ದಿನಗಳಲ್ಲಿ ಹಠಾತ್ ಆಗಿ ಸೌಂದರ್ಯ ಹಾಗೂ ಮುಖದ ಕಾಂತಿ ಬೇಕಿರುವುದು. ಇದಕ್ಕಾಗಿ ಅವರು ಹಲವಾರು ರೀತಿಯಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸಿಕೊಂಡು ತಾವು ಕೂಡ ಆ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಿರುವ ಬಾಲಿವುಡ್ ನಟಿಯೋ ಅಥವಾ ರೂಪದರ್ಶಿಯಂತೆಯೋ ಕಾಣಿಸಿಕೊಳ್ಳಬೇಕು ಎಂದು ಬಯಸುವರು. ಆದರೆ ಇದೆಲ್ಲವೂ ಹಾಗೆ ಸಾಧ್ಯವಿಲ್ಲ.
ಆದರೆ ಕೆಲವೊಂದು ವಿಧಾನಗಳನ್ನು ಬಳಸಿಕೊಂಡರೆ ಆಗ ಅದರಿಂದ ತ್ವಚೆಯ ಸೌಂದರ್ಯ ಹೆಚ್ಚಿಸಲು ಸಾಧ್ಯವಿದೆ. ಇಂತಹ ಕೆಲವೊಂದು ವಿಧಾನಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ಮುಂದೆ ನಿಮ್ಮ ತ್ವಚೆಯು ಕಾಂತಿಯುತವಾಗುವಂತೆ ಮಾಡಿಕೊಳ್ಳಿ.
ಹಸಿರೆಲೆ ತರಕಾರಿ ಹೆಚ್ಚಾಗಿ ಸೇವಿಸಿ
ನಿಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದರೆ ಆಗ ಮನೆ ತುಂಬಾ ಜನರು ತುಂಬಿದ್ದರೆ ಖಂಡಿತವಾಗಿಯೂ ನಿಮ್ಮ ನಿಸ್ತೇಜ ಹಾಗೂ ಬಾಡಿದ ಚರ್ಮವನ್ನು ನೋಡಿಯೇ ಇರುವರು. ಯಾಕೆಂದರೆ ನಿಮ್ಮ ತ್ವಚೆಯು ಕಾಂತಿಯನ್ನು ಕಳೆದುಕೊಂಡಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ನೀವು ಈ ಬಗ್ಗೆ ಚಿಂತೆ ಮಾಡಬಾರದು. ನಾವು ನಿಮಗೆ ಇಲ್ಲಿ ಕೆಲವು ವಿಧಾನಗಳನ್ನು ತಿಳಿಸುತ್ತೇವೆ. ಅದನ್ನು ಪಾಲಿಸಿಕೊಂಡು ಹೋದರೆ ನೀವು ಕಾಂತಿಯುತವಾದ ಚರ್ಮ ಪಡೆಯಬಹುದು. ಹಸಿರೆಲೆ ತರಕಾರಿ ಹೆಚ್ಚಾಗಿ ಸೇವಿಸಿ.
ಪೋಷಣೆ ನೀಡಿ..
ನೀವು ತಡರಾತ್ರಿ 2 ಗಂಟೆಗೆ ಮನೆಗೆ ಬಂದರೂ ಮುಖದಲ್ಲಿರುವ ಮೇಕಪ್ ತೆಗೆಯದೆ ಮಲಗಲು ಹೋಗಬೇಡಿ. ನಾವು ನಿದ್ರೆಗೆ ಜಾರಿದಂತೆ ಮೆದುಳು ಚರ್ಮಕ್ಕೆ ಪುನರುಜ್ಜೀವನಗೊಳಿಸುವ ಸಂಕೇತ ನೀಡುವುದು. ಆದರೆ ನಿಮ್ಮ ಮುಖದ ಮೇಲೆ ಹಲವಾರು ಮೇಕಪ್ ಇರುವುದು. ಇದರಿಂದಾಗಿ ನೀವು ಮೇಕಪ್ ತೆಗೆದ ಬಳಿಕ ರಾತ್ರಿ ಬಳಸಿಕೊಳ್ಳುವ ಕ್ರೀಮ್ ಹಚ್ಚಿಕೊಳ್ಳಿ. ಇದರಿಂದ ಚರ್ಮವು ಒಳ್ಳೆಯ ರೀತಿಯ ಪುನರುಜ್ಜೀನವಗೊಳ್ಳುವುದು.
ತೇವಾಂಶ ನೀಡಿ
ಚರ್ಮಕ್ಕೆ ತೇವಾಂಶ ನೀಡುವುದು ಕೂಡ ಅತೀ ಅಗತ್ಯ ಆಗಿರುವುದು. ನಿಮ್ಮ ದೇಹ ಹಾಗೂ ಚರ್ಮವು ಆರೋಗ್ಯವಾಗಿ ಇರಬೇಕೆಂದರೆ ಆಗ ನೀವು ಶುದ್ಧವಾಗಿರುವಂತಹ ನೀರಿನ ಸೇವನೆ ಮಾಡಬೇಕು.
ಒಳ್ಳೆಯ ಮೊಶ್ಚಿರೈಸರ್
ಒಣ ಹಾಗೂ ಸಾಮಾನ್ಯ ಚರ್ಮಕ್ಕೆ ಬಾದಾಮಿ ಎಣ್ಣೆ ಬಳಸಿಕೊಳ್ಳಿ, ಎಣ್ಣೆಯಂಶ ವಿರುವಂತಹ ಚರ್ಮಕ್ಕೆ ಮಗುವಿನ ಎಣ್ಣೆ ಬಳಸಿಕೊಳ್ಳಿ. ಇದು ಎಲ್ಲಾ ಹವಾಮಾನದಲ್ಲಿ ಚರ್ಮಕ್ಕೆ ಒಳ್ಳೆಯ ಮೊಶ್ಚಿರೈಸರ್ ನೀಡುವುದು. ಸ್ವಲ್ಪ ಪ್ರಮಾಣದಲ್ಲಿ ನೀವು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಎಣ್ಣೆಯುಕ್ತ ಚರ್ಮಕ್ಕೆ ಹಚ್ಚಿಕೊಂಡ ಒಂದು ಗಂಟೆ ಬಳಿಕ ಒರೆಸಿಕೊಳ್ಳಿ. ಒಣ ಹಾಗೂ ಸಾಮಾನ್ಯ ಚರ್ಮ ಇರುವಂತಹವರು ದೀರ್ಘ ಸಮಯ ಬಾದಾಮಿ ಎಣ್ಣೆಯನ್ನು ಮುಖದ ಮೇಲೆ ಇಟ್ಟುಕೊಳ್ಳಬಹುದು.
ಸ್ನಾನ ಮಾಡುವುದು ನಿಮ್ಮಿಷ್ಟದಂತೆ
ಲಘುವಾಗಿರುವ ಸೋಪ್ ಮತ್ತು ಅದರ ಮೇಲೆ ಸಾರಭೂತ ತೈಲ ಹಾಕಿಕೊಂಡು ಮೊಶ್ಚಿರೈಸ್ ಮಾಡಿದರೆ ಆಗ ಅದು ದೇಹಕ್ಕೆ ಹೆಚ್ಚಿನ ಮೊಶ್ಚಿರೈಸ್ ನೀಡುವುದು. ಶುದ್ಧ ಪೆಟ್ರೋಲಿಯಂ ಜೆಲ್ಲಿ, ಗ್ಲಿಸರಿನ್, ಖನಿಜದ ತೈಲ ಮೊಶ್ಚಿರೈಸ್ ನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವುದು ಮತ್ತು ಚಳಿಗಾಲದಲ್ಲಿ ಚರ್ಮವು ಒಣಗುವುದನ್ನು ಇದು ತಪ್ಪಿಸುವುದು.