Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
ನೈಸರ್ಗಿಕ ಸುಂದರಿಯಲ್ಲ ಎಂಬ ಚಿಂತೆ ಇನ್ಯಾಕೆ?

ಸಕ್ಕರೆ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು: ಸಕ್ಕರೆ ಅಧಿಕ ತಿಂದರೆ ಮುಖದಲ್ಲಿ ನೆರಿಗೆಗಳು ಬೇಗನೆ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಸಕ್ಕರೆ ತ್ವಚೆಯಲ್ಲಿರುವ ಕೊಲಾಜಿನ್ (collagen) ಅಂಶ ಕಮ್ಮಿ ಮಾಡಿ ಅಕಾಲಿಕ ಮುಪ್ಪು ಬರುವಂತೆ ಮಾಡುತ್ತದೆ.
ಕೂದಲಿನ ಆರೈಕೆ: ರಾತ್ರಿ ಮಲಗುವಾಗ ಕೂದಲನ್ನು ಬಾಚಿ ಸಡಿಲವಾಗಿ ಎತ್ತಿದ ಜುಟ್ಟು ಅಥವಾ ಜಡೆ ಹಾಕಿದರೆ ಕೂದಲು ಸಿಕ್ಕಾಗಿ ಹಾಳಾಗುವುದು ತಪ್ಪುತ್ತದೆ.
ಕಣ್ಣಿನ ರೆಪ್ಪೆ: ಆಕರ್ಷಕ ಕಣ್ಣಿನ ರೆಪ್ಪೆಗಳು ಮುಖದ ಸೌಂದರ್ಯ ಹೆಚ್ಚಿಸುವುದು.ಕಣ್ಣಿನ ರೆಪ್ಪೆಗೆ ಹರಳೆಣ್ಣೆಯನ್ನು ಉಜ್ಜಿದರೆ ಆಕರ್ಷಕವಾಗಿ ಬೆಳೆಯುತ್ತದೆ. ಅಲ್ಲದೆ ಮೇಕಪ್ ಮಾಡುವಾಗ ಗುಣಮಟ್ಟದ ಸಾಧನಗಳನ್ನೇ ಕಣ್ಣಿಗೆ ಬಳಸಬೇಕು.
ಕೈ ಮತ್ತು ಕಾಲುಗಳಿಗೆ ಸ್ಪಾ: ಮುಖಕ್ಕೆ ಒಳ್ಳೆಣ್ಣೆಯಿಂದ ಮಸಾಜ್ ಮಾಡುವಾಗ ರೀತಿ ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಬೇಕು. ಇಲ್ಲದಿದ್ದರೆ ಕೈ, ಕಾಲುಗಳಲ್ಲಿ ಬೇಗನೆ ನೆರಿಗೆ ಉಂಟಾಗುವುದು.
ಒತ್ತಡ ಕಡಿಮೆ ಮಾಡಲು ಮಸಾಜ್ : ಅಧಿಕ ಒತ್ತಡವಿದ್ದರೆ ಅದು ಮುಖದಲ್ಲಿ ಕಾಣಿಸಿ ಮುಖದ ಆಕರ್ಷಣೆ ಕಡಿಮೆಯಾಗುವುದು. ಇದಕ್ಕೆಲ್ಲಾ ಪರಿಹಾರವನ್ನು ಮಸಾಜ್ ಮಾಡಿಸುವುದರಿಂದ ಪಡೆಯಬಹುದು.
ವಿಟಮಿನ್ಗಳು:ವಿಟಮಿನ್ ಸಿ ಸೂರ್ಯನ ಕಿರಣಗಳಿಂದ ತ್ವಚೆ ಬಾಡದಿರುವಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಇತರ ವಿಟಮಿನ್ ಇರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ದೇಹದ ಮತ್ತು ತ್ವಚೆ ಆರೋಗ್ಯ ಹೆಚ್ಚಾಗುವುದು.
ಹಣ್ಣುಗಳ ಬಳಕೆ: ಕುರುಕಲು ತಿಂಡಿಗಳ ಬದಲು ಹಣ್ಣುಗಳನ್ನು ತಿನ್ನುವ ಅಭ್ಯಾಸ ೊಳ್ಳೆಯದು. ಒಣ ಹಣ್ಣುಗಳು ಮತ್ತು ನಟ್ಸ್ ಅನ್ನು ಪ್ರತಿ ದಿನ ಸೇವಿಸಿದರೆ ತ್ವಚೆಯಲ್ಲಿ ಹೊಳಪು ಬರಲಾರಂಭಿಸುತ್ತದೆ.
ಈ ಮೇಲಿನ ವಿಧಾನಗಳನ್ನು ಪಾಲಿಸಿಕೊಂಡು ಬಂದರೆ ನೈಸರ್ಗಿಕ ತ್ವಚೆ ಕಾಂತಿ ಪಡೆಯಬಹುದು.



Click it and Unblock the Notifications











