Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಸೌಂದರ್ಯದ ರಕ್ಷಣಾ ಕವಚ ಲೋಳೆಸರ

ತ್ವಚೆ ಪೋಷಣೆ ಮಾಡುತ್ತಾ ಸೌಂದರ್ಯ ಹೆಚ್ಚಿಸುವಲ್ಲಿ ಲೋಳೆಸರ ಹೇಗೆ ಸಹಕಾರಿಯಾಗಿದೆ ಎಂದು ತಿಳಿಯೋಣ ಬನ್ನಿ.
ಸಲಹೆ: ಲೋಳೆಸರ ಬಳಸುವ ಮುನ್ನ ಮುಖದಲ್ಲಿರುವ ಕ್ರೀಮ್, ಅಲಂಕಾರಗಳನ್ನು ತಣ್ಣೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು.
1. ಸೂಕ್ತವಾದ ತ್ವಚೆ: ಲೋಳೆಸರ ಎಲ್ಲಾ ರೀತಿಯ ತ್ವಚೆಗೂ ಬಳಸಲು ಸೂಕ್ತವಾಗಿದೆ. ಲೋಳೆಸರ ಬಳಿಸಿದರೆ ಬೆವರಿನ ದುರ್ಗಂಧ ಮಾಯವಾಗಿ, ತ್ವಚೆಯನ್ನು ತಂಪಾಗಿ ಇಡುತ್ತದೆ. ಲೋಳೆಸರಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆದರೆ ಸನ್ ಬರ್ನ್ ಕಡಿಮೆಯಾಗುತ್ತದೆ. ಬಿಸಿಲಿಗೆ ಹೋಗಿ ಬಂದಾಗ ಈ ರೀತಿ ಮಾಡಿದರೆ ಮುಖ ಕಪ್ಪಾಗುವುದಿಲ್ಲ.
2. ತ್ವಚೆ ಕೋಮಲತೆ : ಇದನ್ನು ಹಚ್ಚುವಾಗ ವೃತ್ತಾಕಾವಾಗಿ ಹಚ್ಚುವುದರಿಂದ ರಕ್ತಚಲನೆಗೂ ಸಹಕಾರಿಯಾಗುತ್ತದೆ. ಇದನ್ನು ಹಚ್ಚುತ್ತಿದ್ದರೆ ಬೇಗನೆ ಮುಪ್ಪಾಗುವುದನ್ನು ತಡೆಯುತ್ತದೆ. ಅಲ್ಲದೆ ಇದನ್ನು ಮುಖಕ್ಕೆ ಹಚ್ಚಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ ಮುಖದ ಕಾಂತಿ ಹೆಚ್ಚಿಸುತ್ತದೆ.
3. ಮೊಡವೆ: ಲೋಳೆಸರದ ಒಂದು ಕಡ್ಡಿಯನ್ನು ತೆಗೆದುಕೊಂಡು ನೀರಿನಲ್ಲಿ ಬೇಯಿಸಬೇಕು, ನಂತರ ಲೋಳೆಸರವನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಮಿಶ್ರ ಮಾಡಿ ಮೊಡವೆಗೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮೊಡವೆ ಮತ್ತು ಅದರ ಕಲೆಗಳು ಕಡಿಮೆಯಾಗುತ್ತದೆ.
4. ಮುಖದಲ್ಲಿ ಗುಳ್ಳೆಗಳಾದರೆ: ಲೋಳೆಸರ ಮತ್ತು ಸೌತೆಕಾಯಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಮೊಸರಿನ ಜೊತೆ ಮಿಶ್ರ ಮಾಡಿ ಹಚ್ಚಿದರೆ ಗುಳ್ಳೆಗಳು ಕಡಿಮೆಯಾಗುವುದು. ಅಲ್ಲದೆ ಕಲೆಗಳು ಬೀಳುವುದಿಲ್ಲ.
5. ಚರ್ಮದ ರಕ್ಷಣೆ: ಲೋಳೆಸರವನ್ನು ಹೊಟ್ಟೆಗೆ ಸೇವಿಸುವುದರಿಂದ ಮಲಬದ್ದತೆ ನಿವಾರಣೆ,ಜ್ವರದಿಂದ ಮುಕ್ತಿ, ಜಠರದ ಹುಣ್ಣುಗಳ ನಿವಾರಣೆ ಸಾಧ್ಯ. ಚರ್ಮ ರೋಗ, ಉರಿ, ತುರಿಕೆ, ಗಾಯದ ಕಲೆಗಳನ್ನು ಗುಣಪಡಿಸುತ್ತದೆ.
6. ಕೂದಲು: ಲೋಳೆಸರವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುವುದು. ಅಲ್ಲದೆ ಕೂದಲು ಮೃದುವಾಗುವುದು.



Click it and Unblock the Notifications