Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸೌಂದರ್ಯದ ರಕ್ಷಣಾ ಕವಚ ಲೋಳೆಸರ

ತ್ವಚೆ ಪೋಷಣೆ ಮಾಡುತ್ತಾ ಸೌಂದರ್ಯ ಹೆಚ್ಚಿಸುವಲ್ಲಿ ಲೋಳೆಸರ ಹೇಗೆ ಸಹಕಾರಿಯಾಗಿದೆ ಎಂದು ತಿಳಿಯೋಣ ಬನ್ನಿ.
ಸಲಹೆ: ಲೋಳೆಸರ ಬಳಸುವ ಮುನ್ನ ಮುಖದಲ್ಲಿರುವ ಕ್ರೀಮ್, ಅಲಂಕಾರಗಳನ್ನು ತಣ್ಣೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು.
1. ಸೂಕ್ತವಾದ ತ್ವಚೆ: ಲೋಳೆಸರ ಎಲ್ಲಾ ರೀತಿಯ ತ್ವಚೆಗೂ ಬಳಸಲು ಸೂಕ್ತವಾಗಿದೆ. ಲೋಳೆಸರ ಬಳಿಸಿದರೆ ಬೆವರಿನ ದುರ್ಗಂಧ ಮಾಯವಾಗಿ, ತ್ವಚೆಯನ್ನು ತಂಪಾಗಿ ಇಡುತ್ತದೆ. ಲೋಳೆಸರಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆದರೆ ಸನ್ ಬರ್ನ್ ಕಡಿಮೆಯಾಗುತ್ತದೆ. ಬಿಸಿಲಿಗೆ ಹೋಗಿ ಬಂದಾಗ ಈ ರೀತಿ ಮಾಡಿದರೆ ಮುಖ ಕಪ್ಪಾಗುವುದಿಲ್ಲ.
2. ತ್ವಚೆ ಕೋಮಲತೆ : ಇದನ್ನು ಹಚ್ಚುವಾಗ ವೃತ್ತಾಕಾವಾಗಿ ಹಚ್ಚುವುದರಿಂದ ರಕ್ತಚಲನೆಗೂ ಸಹಕಾರಿಯಾಗುತ್ತದೆ. ಇದನ್ನು ಹಚ್ಚುತ್ತಿದ್ದರೆ ಬೇಗನೆ ಮುಪ್ಪಾಗುವುದನ್ನು ತಡೆಯುತ್ತದೆ. ಅಲ್ಲದೆ ಇದನ್ನು ಮುಖಕ್ಕೆ ಹಚ್ಚಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ ಮುಖದ ಕಾಂತಿ ಹೆಚ್ಚಿಸುತ್ತದೆ.
3. ಮೊಡವೆ: ಲೋಳೆಸರದ ಒಂದು ಕಡ್ಡಿಯನ್ನು ತೆಗೆದುಕೊಂಡು ನೀರಿನಲ್ಲಿ ಬೇಯಿಸಬೇಕು, ನಂತರ ಲೋಳೆಸರವನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಮಿಶ್ರ ಮಾಡಿ ಮೊಡವೆಗೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮೊಡವೆ ಮತ್ತು ಅದರ ಕಲೆಗಳು ಕಡಿಮೆಯಾಗುತ್ತದೆ.
4. ಮುಖದಲ್ಲಿ ಗುಳ್ಳೆಗಳಾದರೆ: ಲೋಳೆಸರ ಮತ್ತು ಸೌತೆಕಾಯಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಮೊಸರಿನ ಜೊತೆ ಮಿಶ್ರ ಮಾಡಿ ಹಚ್ಚಿದರೆ ಗುಳ್ಳೆಗಳು ಕಡಿಮೆಯಾಗುವುದು. ಅಲ್ಲದೆ ಕಲೆಗಳು ಬೀಳುವುದಿಲ್ಲ.
5. ಚರ್ಮದ ರಕ್ಷಣೆ: ಲೋಳೆಸರವನ್ನು ಹೊಟ್ಟೆಗೆ ಸೇವಿಸುವುದರಿಂದ ಮಲಬದ್ದತೆ ನಿವಾರಣೆ,ಜ್ವರದಿಂದ ಮುಕ್ತಿ, ಜಠರದ ಹುಣ್ಣುಗಳ ನಿವಾರಣೆ ಸಾಧ್ಯ. ಚರ್ಮ ರೋಗ, ಉರಿ, ತುರಿಕೆ, ಗಾಯದ ಕಲೆಗಳನ್ನು ಗುಣಪಡಿಸುತ್ತದೆ.
6. ಕೂದಲು: ಲೋಳೆಸರವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುವುದು. ಅಲ್ಲದೆ ಕೂದಲು ಮೃದುವಾಗುವುದು.



Click it and Unblock the Notifications











