Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಸಿಕ್ಕು ಕೂದಲಿನ ಸಮಸ್ಯೆಗೆ ಬಾದಾಮಿ ಎಣ್ಣೆ, ಮೊಸರು, ಜೇನಿನ ಲೇಪನ
ಸಿಕ್ಕುಸಿಕ್ಕಾದ ಕೂದಲನ್ನು ಬಿಡಿಸುವುದು ಒಂದು ಕಷ್ಟಕರವಾದ ಕೆಲಸ. ಬಾಚಣಿಗೆಯಿಂದ ಒತ್ತಡ ಹೇರಿದಷ್ಟೂ ಕೂದಲು ಮಧ್ಯೆ ತುಂಡಾಗುವ ಸಂಭವವೇ ಹೆಚ್ಚು. ಕೂದಲು ಎಳೆದಾಗ ಆಗುವ ನೋವು, ತುಂಡಾದ ಕೂದಲು ಕಂಡಾಗ ಆಗುವ ಬೇಸರ, ಬುಡದಲ್ಲಿ ದಪ್ಪಗಿದ್ದರೂ ತುದಿಯಲ್ಲಿ ಹಾವಿನ ಬಾಲದಂತಾಗಿರುವ ಕೇಶವನ್ನು ಕಂಡಾಗ ಯಾರಿಗೂ ಕೇಶಶೃಂಗಾರ ಮಾಡಿಕೊಳ್ಳುವ ಉತ್ಸಾಹವೇ ಉಳಿದಿರುವುದಿಲ್ಲ. ಸತ್ತು ಹೋಗಲಿ ಎಂದು ಬೈದು ಮಾಮೂಲಿಯಂತೆ ಜುಟ್ಟುಕಟ್ಟಿಕೊಳ್ಳುವುದು ಅಥವಾ ಮಡಚಿದ ಜಡೆ ಕಟ್ಟಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ.
ಇದಕ್ಕೆ ಕಾರಣವನ್ನು ಕೆದಕಿದರೆ ನಾವೇ ನಮ್ಮ ಕೈಯಾರೆ ಇದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಕೂದಲಿಗೆ ಸರಿಯಾದ ಆರೈಕೆ ಮಾಡದಿರುವ ಕಾರಣ ಕೂದಲ ಬುಡಗಳು ಎದ್ದು ಬರುತ್ತವೆ. ಇದರಿಂದ ಕೂದಲಿಗೆ ಅಗತ್ಯವಾದ ಆರ್ದ್ರತೆ ದೊರಕದೇ ಕೂದಲ ಬುಡ ತೆಳುವಾಗುತ್ತಾ ಹೋಗುತ್ತದೆ. ನಮ್ಮ ಜೀವನಶೈಲಿಯೂ ಇದಕ್ಕೆ ಹೆಚ್ಚೂ ಕಡಿಮೆ ಕಾರಣವಾಗಿದೆ. ಪರಿಣಾಮವಾಗಿ ಪ್ರತಿ ಕೂದಲೂ ಏಕಪ್ರಕಾರವಾಗಿ ದಪ್ಪನಾಗಿರುವುದಿಲ್ಲ, ಬುಡದಲ್ಲಿ ತೆಳುವಾಗಿದ್ದು ಮಧ್ಯೆ ಎಲ್ಲೋ ಕೊಂಚ ದಪ್ಪನಾಗಿರುವುದು ತುದಿಯಲ್ಲಿ ಮತ್ತೆ ಸಪೂರವಾಗಿರುವುದು ಕಾಣಬರುತ್ತದೆ.

ಈ ಅಸಮಾನತೆಯ ಕಾರಣ ಸಪೂರವಾಗಿರುವ ಕೂದಲಿನ ಭಾಗ ಪಕ್ಕದ ಕೂದಲಿನ ದಪ್ಪನಾದ ಭಾಗಕ್ಕೆ ಬಳ್ಳಿಯಂತೆ ಸುತ್ತಲು ಸಾಧ್ಯವಾಗುತ್ತದೆ. ಎಲ್ಲಾ ಕೂದಲುಗಳು ಒಟ್ಟಾರೆಯಾಗಿ ಹೀಗೆ ಸುತ್ತಿಕೊಳ್ಳುವ ಕಾರಣ ಕೂದಲು ಸಿಕ್ಕುಸಿಕ್ಕಾಗುತ್ತದೆ. ಈ ಸಿಕ್ಕನ್ನು ಬಿಡಿಸಲು ಹಲವು ಶಾಂಪೂ, ಸೀರಂ, ಕಂಡೀಶನರುಗಳು ಲಭ್ಯವಿವೆಯಾದರೂ ಇವುಗಳಲ್ಲಿರುವ ರಾಸಾಯನಿಕಗಳು ನಿಧಾನವಾಗಿ ಕೂದಲಿಗೆ ಘಾಸಿಯುಂಟುಮಾಡಬಹುದು. ಗುಂಗುರು ಕೂದಲಿರುವವರು ತಲೆಬಾಚುವಾಗ ಮಾಡುವ ತಪ್ಪುಗಳು
ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಕೆಲವು ನೈಸರ್ಗಿಕ ಘಟಕಾಂಶಗಳಿವೆ. ಇವುಗಳ ಸಮರ್ಪಕ ಬಳಕೆಯಿಂದ ಕೂದಲಿಗೆ ಉತ್ತಮ ಪೋಷಣೆ ನೀಡುವ ಜೊತೆಗೇ ಸಿಕ್ಕುಸಿಕ್ಕಾಗಿರುವ ಕೂದಲನ್ನು ಸುಲಭವಾಗಿ ಬಿಡಿಸಿ ಕೂದಲು ತುಂಡಾಗುವುದನ್ನು ತಪ್ಪಿಸಬಹುದು. ಇಂದು ಈ ಪೋಷಣೆಯನ್ನು ನೀಡುವ ಲೇಪನವನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂಬುದನ್ನು ಕಲಿಯೋಣ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಮೂರೇ ಸಾಮಾಗ್ರಿಗಳು.
ಅವೆಂದರೆ ಮೊಸರು, ಜೇನು ಮತ್ತು ಬಾದಾಮಿ ಎಣ್ಣೆ. ಈ ಮೂರೂ ಸಾಮಾಗ್ರಿಗಳು ಪ್ರತ್ಯೇಕವಾಗಿ ಚರ್ಮ ಮತ್ತು ಕೂದಲಿಗೆ ಉತ್ತಮ ಪೋಷಣೆ ನೀಡುತ್ತಿದ್ದು ಮೂರನ್ನೂ ಬೆರೆಸಿ ಬಳಸಿದಾಗ ಕೂದಲಿಗೆ ಅತ್ಯುತ್ತಮವಾದ ಕಂಡೀಶನಿಂಗ್ ದೊರಕುತ್ತದೆ. ಸಿಕ್ಕಾಗಿದ್ದ ಕೂದಲು ಬಿಡಿಬಿಡಿಯಾಗಲು ಸಾಧ್ಯವಾಗುತ್ತದೆ. ಕೂದಲ ಬುಡಕ್ಕೂ ಉತ್ತಮ ಪೋಷಣೆ ದೊರೆತು ಕೂದಲ ಬುಡ ದೃಢವಾಗುತ್ತದೆ.
ಅಗತ್ಯವಿರುವ ಸಾಮಾಗ್ರಿಗಳು
*ಎರಡು ದೊಡ್ಡ ಚಮಚ ಬಾದಾಮಿ ಎಣ್ಣೆ
*ಅರ್ಧ ಕಪ್ ಮೊಸರು
*ಕಾಲು ಕಪ್ ಜೇನು. ಕೂದಲಿನ ಆರೈಕೆ ಕೂಡ ಕೋಮಲತೆಯಿಂದ ಕೂಡಿರಲಿ
ತಯಾರಿಸುವ ವಿಧಾನ
*ಎಲ್ಲಾ ಸಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಕಲಕಿ ಲೇಪನ ತಯಾರಿಸಿ
*ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡ ಕೂದಲಿಗೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮಾಡುತ್ತಲೇ ಇರಿ.
*ಬಳಿಕ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.
*ಸ್ನಾನದ ತಕ್ಷಣವೇ ತಲೆ ಒರೆಸಿಕೊಳ್ಳಲು ಹೋಗಬೇಡಿ, ನೀರೆಲ್ಲಾ ತಾನಾಗಿ ಇಳಿಯುವವರೆಗೆ ಕಾದು ಬಳಿಕ ದಪ್ಪ ಟವೆಲ್ ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ.
*ಬಳಿಕ ದೊಡ್ಡ ಹಲ್ಲುಗಳ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ, ಸಿಕ್ಕಾಗಿದ್ದ ಕೂದಲ್ಲೆಲ್ಲಾ ಸುಲಭವಾಗಿ ಬಿಡಿಸಿಕೊಂಡು ಕೂದಲು ನಯವಾಗಿರುವುದು ಗಮನಕ್ಕೆ ಬರುತ್ತದೆ.
ಈ ವಿಧಾನದಲ್ಲಿ ನಯವಾದ ಕೂದಲು ಕನಿಷ್ಠ ಒಂದು ತಿಂಗಳಾದರೂ ಹಾಗೇ ಇರುತ್ತದೆ. ಆದ್ದರಿಂದ ಕನಿಷ್ಠ ಒಂದು ತಿಂಗಳವರೆಗೆ ಈ ವಿಧಾನವನ್ನು ಮತ್ತೆ ಅನುಸರಿಸಬಾರದು. ಆದರೆ ನಿಯಮಿತ ಆರೈಕೆಯನ್ನೂ ಬಿಡಬಾರದು.



Click it and Unblock the Notifications


