Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಸಿಕ್ಕು ಕೂದಲಿನ ಸಮಸ್ಯೆಗೆ ಬಾದಾಮಿ ಎಣ್ಣೆ, ಮೊಸರು, ಜೇನಿನ ಲೇಪನ
ಸಿಕ್ಕುಸಿಕ್ಕಾದ ಕೂದಲನ್ನು ಬಿಡಿಸುವುದು ಒಂದು ಕಷ್ಟಕರವಾದ ಕೆಲಸ. ಬಾಚಣಿಗೆಯಿಂದ ಒತ್ತಡ ಹೇರಿದಷ್ಟೂ ಕೂದಲು ಮಧ್ಯೆ ತುಂಡಾಗುವ ಸಂಭವವೇ ಹೆಚ್ಚು. ಕೂದಲು ಎಳೆದಾಗ ಆಗುವ ನೋವು, ತುಂಡಾದ ಕೂದಲು ಕಂಡಾಗ ಆಗುವ ಬೇಸರ, ಬುಡದಲ್ಲಿ ದಪ್ಪಗಿದ್ದರೂ ತುದಿಯಲ್ಲಿ ಹಾವಿನ ಬಾಲದಂತಾಗಿರುವ ಕೇಶವನ್ನು ಕಂಡಾಗ ಯಾರಿಗೂ ಕೇಶಶೃಂಗಾರ ಮಾಡಿಕೊಳ್ಳುವ ಉತ್ಸಾಹವೇ ಉಳಿದಿರುವುದಿಲ್ಲ. ಸತ್ತು ಹೋಗಲಿ ಎಂದು ಬೈದು ಮಾಮೂಲಿಯಂತೆ ಜುಟ್ಟುಕಟ್ಟಿಕೊಳ್ಳುವುದು ಅಥವಾ ಮಡಚಿದ ಜಡೆ ಕಟ್ಟಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ.
ಇದಕ್ಕೆ ಕಾರಣವನ್ನು ಕೆದಕಿದರೆ ನಾವೇ ನಮ್ಮ ಕೈಯಾರೆ ಇದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಕೂದಲಿಗೆ ಸರಿಯಾದ ಆರೈಕೆ ಮಾಡದಿರುವ ಕಾರಣ ಕೂದಲ ಬುಡಗಳು ಎದ್ದು ಬರುತ್ತವೆ. ಇದರಿಂದ ಕೂದಲಿಗೆ ಅಗತ್ಯವಾದ ಆರ್ದ್ರತೆ ದೊರಕದೇ ಕೂದಲ ಬುಡ ತೆಳುವಾಗುತ್ತಾ ಹೋಗುತ್ತದೆ. ನಮ್ಮ ಜೀವನಶೈಲಿಯೂ ಇದಕ್ಕೆ ಹೆಚ್ಚೂ ಕಡಿಮೆ ಕಾರಣವಾಗಿದೆ. ಪರಿಣಾಮವಾಗಿ ಪ್ರತಿ ಕೂದಲೂ ಏಕಪ್ರಕಾರವಾಗಿ ದಪ್ಪನಾಗಿರುವುದಿಲ್ಲ, ಬುಡದಲ್ಲಿ ತೆಳುವಾಗಿದ್ದು ಮಧ್ಯೆ ಎಲ್ಲೋ ಕೊಂಚ ದಪ್ಪನಾಗಿರುವುದು ತುದಿಯಲ್ಲಿ ಮತ್ತೆ ಸಪೂರವಾಗಿರುವುದು ಕಾಣಬರುತ್ತದೆ.

ಈ ಅಸಮಾನತೆಯ ಕಾರಣ ಸಪೂರವಾಗಿರುವ ಕೂದಲಿನ ಭಾಗ ಪಕ್ಕದ ಕೂದಲಿನ ದಪ್ಪನಾದ ಭಾಗಕ್ಕೆ ಬಳ್ಳಿಯಂತೆ ಸುತ್ತಲು ಸಾಧ್ಯವಾಗುತ್ತದೆ. ಎಲ್ಲಾ ಕೂದಲುಗಳು ಒಟ್ಟಾರೆಯಾಗಿ ಹೀಗೆ ಸುತ್ತಿಕೊಳ್ಳುವ ಕಾರಣ ಕೂದಲು ಸಿಕ್ಕುಸಿಕ್ಕಾಗುತ್ತದೆ. ಈ ಸಿಕ್ಕನ್ನು ಬಿಡಿಸಲು ಹಲವು ಶಾಂಪೂ, ಸೀರಂ, ಕಂಡೀಶನರುಗಳು ಲಭ್ಯವಿವೆಯಾದರೂ ಇವುಗಳಲ್ಲಿರುವ ರಾಸಾಯನಿಕಗಳು ನಿಧಾನವಾಗಿ ಕೂದಲಿಗೆ ಘಾಸಿಯುಂಟುಮಾಡಬಹುದು. ಗುಂಗುರು ಕೂದಲಿರುವವರು ತಲೆಬಾಚುವಾಗ ಮಾಡುವ ತಪ್ಪುಗಳು
ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಕೆಲವು ನೈಸರ್ಗಿಕ ಘಟಕಾಂಶಗಳಿವೆ. ಇವುಗಳ ಸಮರ್ಪಕ ಬಳಕೆಯಿಂದ ಕೂದಲಿಗೆ ಉತ್ತಮ ಪೋಷಣೆ ನೀಡುವ ಜೊತೆಗೇ ಸಿಕ್ಕುಸಿಕ್ಕಾಗಿರುವ ಕೂದಲನ್ನು ಸುಲಭವಾಗಿ ಬಿಡಿಸಿ ಕೂದಲು ತುಂಡಾಗುವುದನ್ನು ತಪ್ಪಿಸಬಹುದು. ಇಂದು ಈ ಪೋಷಣೆಯನ್ನು ನೀಡುವ ಲೇಪನವನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂಬುದನ್ನು ಕಲಿಯೋಣ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಮೂರೇ ಸಾಮಾಗ್ರಿಗಳು.
ಅವೆಂದರೆ ಮೊಸರು, ಜೇನು ಮತ್ತು ಬಾದಾಮಿ ಎಣ್ಣೆ. ಈ ಮೂರೂ ಸಾಮಾಗ್ರಿಗಳು ಪ್ರತ್ಯೇಕವಾಗಿ ಚರ್ಮ ಮತ್ತು ಕೂದಲಿಗೆ ಉತ್ತಮ ಪೋಷಣೆ ನೀಡುತ್ತಿದ್ದು ಮೂರನ್ನೂ ಬೆರೆಸಿ ಬಳಸಿದಾಗ ಕೂದಲಿಗೆ ಅತ್ಯುತ್ತಮವಾದ ಕಂಡೀಶನಿಂಗ್ ದೊರಕುತ್ತದೆ. ಸಿಕ್ಕಾಗಿದ್ದ ಕೂದಲು ಬಿಡಿಬಿಡಿಯಾಗಲು ಸಾಧ್ಯವಾಗುತ್ತದೆ. ಕೂದಲ ಬುಡಕ್ಕೂ ಉತ್ತಮ ಪೋಷಣೆ ದೊರೆತು ಕೂದಲ ಬುಡ ದೃಢವಾಗುತ್ತದೆ.
ಅಗತ್ಯವಿರುವ ಸಾಮಾಗ್ರಿಗಳು
*ಎರಡು ದೊಡ್ಡ ಚಮಚ ಬಾದಾಮಿ ಎಣ್ಣೆ
*ಅರ್ಧ ಕಪ್ ಮೊಸರು
*ಕಾಲು ಕಪ್ ಜೇನು. ಕೂದಲಿನ ಆರೈಕೆ ಕೂಡ ಕೋಮಲತೆಯಿಂದ ಕೂಡಿರಲಿ
ತಯಾರಿಸುವ ವಿಧಾನ
*ಎಲ್ಲಾ ಸಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಕಲಕಿ ಲೇಪನ ತಯಾರಿಸಿ
*ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡ ಕೂದಲಿಗೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮಾಡುತ್ತಲೇ ಇರಿ.
*ಬಳಿಕ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.
*ಸ್ನಾನದ ತಕ್ಷಣವೇ ತಲೆ ಒರೆಸಿಕೊಳ್ಳಲು ಹೋಗಬೇಡಿ, ನೀರೆಲ್ಲಾ ತಾನಾಗಿ ಇಳಿಯುವವರೆಗೆ ಕಾದು ಬಳಿಕ ದಪ್ಪ ಟವೆಲ್ ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ.
*ಬಳಿಕ ದೊಡ್ಡ ಹಲ್ಲುಗಳ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ, ಸಿಕ್ಕಾಗಿದ್ದ ಕೂದಲ್ಲೆಲ್ಲಾ ಸುಲಭವಾಗಿ ಬಿಡಿಸಿಕೊಂಡು ಕೂದಲು ನಯವಾಗಿರುವುದು ಗಮನಕ್ಕೆ ಬರುತ್ತದೆ.
ಈ ವಿಧಾನದಲ್ಲಿ ನಯವಾದ ಕೂದಲು ಕನಿಷ್ಠ ಒಂದು ತಿಂಗಳಾದರೂ ಹಾಗೇ ಇರುತ್ತದೆ. ಆದ್ದರಿಂದ ಕನಿಷ್ಠ ಒಂದು ತಿಂಗಳವರೆಗೆ ಈ ವಿಧಾನವನ್ನು ಮತ್ತೆ ಅನುಸರಿಸಬಾರದು. ಆದರೆ ನಿಯಮಿತ ಆರೈಕೆಯನ್ನೂ ಬಿಡಬಾರದು.



Click it and Unblock the Notifications

