Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಸಿಕ್ಕು ಕೂದಲಿನ ಸಮಸ್ಯೆಗೆ ಬಾದಾಮಿ ಎಣ್ಣೆ, ಮೊಸರು, ಜೇನಿನ ಲೇಪನ
ಸಿಕ್ಕುಸಿಕ್ಕಾದ ಕೂದಲನ್ನು ಬಿಡಿಸುವುದು ಒಂದು ಕಷ್ಟಕರವಾದ ಕೆಲಸ. ಬಾಚಣಿಗೆಯಿಂದ ಒತ್ತಡ ಹೇರಿದಷ್ಟೂ ಕೂದಲು ಮಧ್ಯೆ ತುಂಡಾಗುವ ಸಂಭವವೇ ಹೆಚ್ಚು. ಕೂದಲು ಎಳೆದಾಗ ಆಗುವ ನೋವು, ತುಂಡಾದ ಕೂದಲು ಕಂಡಾಗ ಆಗುವ ಬೇಸರ, ಬುಡದಲ್ಲಿ ದಪ್ಪಗಿದ್ದರೂ ತುದಿಯಲ್ಲಿ ಹಾವಿನ ಬಾಲದಂತಾಗಿರುವ ಕೇಶವನ್ನು ಕಂಡಾಗ ಯಾರಿಗೂ ಕೇಶಶೃಂಗಾರ ಮಾಡಿಕೊಳ್ಳುವ ಉತ್ಸಾಹವೇ ಉಳಿದಿರುವುದಿಲ್ಲ. ಸತ್ತು ಹೋಗಲಿ ಎಂದು ಬೈದು ಮಾಮೂಲಿಯಂತೆ ಜುಟ್ಟುಕಟ್ಟಿಕೊಳ್ಳುವುದು ಅಥವಾ ಮಡಚಿದ ಜಡೆ ಕಟ್ಟಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ.
ಇದಕ್ಕೆ ಕಾರಣವನ್ನು ಕೆದಕಿದರೆ ನಾವೇ ನಮ್ಮ ಕೈಯಾರೆ ಇದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಕೂದಲಿಗೆ ಸರಿಯಾದ ಆರೈಕೆ ಮಾಡದಿರುವ ಕಾರಣ ಕೂದಲ ಬುಡಗಳು ಎದ್ದು ಬರುತ್ತವೆ. ಇದರಿಂದ ಕೂದಲಿಗೆ ಅಗತ್ಯವಾದ ಆರ್ದ್ರತೆ ದೊರಕದೇ ಕೂದಲ ಬುಡ ತೆಳುವಾಗುತ್ತಾ ಹೋಗುತ್ತದೆ. ನಮ್ಮ ಜೀವನಶೈಲಿಯೂ ಇದಕ್ಕೆ ಹೆಚ್ಚೂ ಕಡಿಮೆ ಕಾರಣವಾಗಿದೆ. ಪರಿಣಾಮವಾಗಿ ಪ್ರತಿ ಕೂದಲೂ ಏಕಪ್ರಕಾರವಾಗಿ ದಪ್ಪನಾಗಿರುವುದಿಲ್ಲ, ಬುಡದಲ್ಲಿ ತೆಳುವಾಗಿದ್ದು ಮಧ್ಯೆ ಎಲ್ಲೋ ಕೊಂಚ ದಪ್ಪನಾಗಿರುವುದು ತುದಿಯಲ್ಲಿ ಮತ್ತೆ ಸಪೂರವಾಗಿರುವುದು ಕಾಣಬರುತ್ತದೆ.

ಈ ಅಸಮಾನತೆಯ ಕಾರಣ ಸಪೂರವಾಗಿರುವ ಕೂದಲಿನ ಭಾಗ ಪಕ್ಕದ ಕೂದಲಿನ ದಪ್ಪನಾದ ಭಾಗಕ್ಕೆ ಬಳ್ಳಿಯಂತೆ ಸುತ್ತಲು ಸಾಧ್ಯವಾಗುತ್ತದೆ. ಎಲ್ಲಾ ಕೂದಲುಗಳು ಒಟ್ಟಾರೆಯಾಗಿ ಹೀಗೆ ಸುತ್ತಿಕೊಳ್ಳುವ ಕಾರಣ ಕೂದಲು ಸಿಕ್ಕುಸಿಕ್ಕಾಗುತ್ತದೆ. ಈ ಸಿಕ್ಕನ್ನು ಬಿಡಿಸಲು ಹಲವು ಶಾಂಪೂ, ಸೀರಂ, ಕಂಡೀಶನರುಗಳು ಲಭ್ಯವಿವೆಯಾದರೂ ಇವುಗಳಲ್ಲಿರುವ ರಾಸಾಯನಿಕಗಳು ನಿಧಾನವಾಗಿ ಕೂದಲಿಗೆ ಘಾಸಿಯುಂಟುಮಾಡಬಹುದು. ಗುಂಗುರು ಕೂದಲಿರುವವರು ತಲೆಬಾಚುವಾಗ ಮಾಡುವ ತಪ್ಪುಗಳು
ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಕೆಲವು ನೈಸರ್ಗಿಕ ಘಟಕಾಂಶಗಳಿವೆ. ಇವುಗಳ ಸಮರ್ಪಕ ಬಳಕೆಯಿಂದ ಕೂದಲಿಗೆ ಉತ್ತಮ ಪೋಷಣೆ ನೀಡುವ ಜೊತೆಗೇ ಸಿಕ್ಕುಸಿಕ್ಕಾಗಿರುವ ಕೂದಲನ್ನು ಸುಲಭವಾಗಿ ಬಿಡಿಸಿ ಕೂದಲು ತುಂಡಾಗುವುದನ್ನು ತಪ್ಪಿಸಬಹುದು. ಇಂದು ಈ ಪೋಷಣೆಯನ್ನು ನೀಡುವ ಲೇಪನವನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂಬುದನ್ನು ಕಲಿಯೋಣ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಮೂರೇ ಸಾಮಾಗ್ರಿಗಳು.
ಅವೆಂದರೆ ಮೊಸರು, ಜೇನು ಮತ್ತು ಬಾದಾಮಿ ಎಣ್ಣೆ. ಈ ಮೂರೂ ಸಾಮಾಗ್ರಿಗಳು ಪ್ರತ್ಯೇಕವಾಗಿ ಚರ್ಮ ಮತ್ತು ಕೂದಲಿಗೆ ಉತ್ತಮ ಪೋಷಣೆ ನೀಡುತ್ತಿದ್ದು ಮೂರನ್ನೂ ಬೆರೆಸಿ ಬಳಸಿದಾಗ ಕೂದಲಿಗೆ ಅತ್ಯುತ್ತಮವಾದ ಕಂಡೀಶನಿಂಗ್ ದೊರಕುತ್ತದೆ. ಸಿಕ್ಕಾಗಿದ್ದ ಕೂದಲು ಬಿಡಿಬಿಡಿಯಾಗಲು ಸಾಧ್ಯವಾಗುತ್ತದೆ. ಕೂದಲ ಬುಡಕ್ಕೂ ಉತ್ತಮ ಪೋಷಣೆ ದೊರೆತು ಕೂದಲ ಬುಡ ದೃಢವಾಗುತ್ತದೆ.
ಅಗತ್ಯವಿರುವ ಸಾಮಾಗ್ರಿಗಳು
*ಎರಡು ದೊಡ್ಡ ಚಮಚ ಬಾದಾಮಿ ಎಣ್ಣೆ
*ಅರ್ಧ ಕಪ್ ಮೊಸರು
*ಕಾಲು ಕಪ್ ಜೇನು. ಕೂದಲಿನ ಆರೈಕೆ ಕೂಡ ಕೋಮಲತೆಯಿಂದ ಕೂಡಿರಲಿ
ತಯಾರಿಸುವ ವಿಧಾನ
*ಎಲ್ಲಾ ಸಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಕಲಕಿ ಲೇಪನ ತಯಾರಿಸಿ
*ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡ ಕೂದಲಿಗೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮಾಡುತ್ತಲೇ ಇರಿ.
*ಬಳಿಕ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.
*ಸ್ನಾನದ ತಕ್ಷಣವೇ ತಲೆ ಒರೆಸಿಕೊಳ್ಳಲು ಹೋಗಬೇಡಿ, ನೀರೆಲ್ಲಾ ತಾನಾಗಿ ಇಳಿಯುವವರೆಗೆ ಕಾದು ಬಳಿಕ ದಪ್ಪ ಟವೆಲ್ ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ.
*ಬಳಿಕ ದೊಡ್ಡ ಹಲ್ಲುಗಳ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ, ಸಿಕ್ಕಾಗಿದ್ದ ಕೂದಲ್ಲೆಲ್ಲಾ ಸುಲಭವಾಗಿ ಬಿಡಿಸಿಕೊಂಡು ಕೂದಲು ನಯವಾಗಿರುವುದು ಗಮನಕ್ಕೆ ಬರುತ್ತದೆ.
ಈ ವಿಧಾನದಲ್ಲಿ ನಯವಾದ ಕೂದಲು ಕನಿಷ್ಠ ಒಂದು ತಿಂಗಳಾದರೂ ಹಾಗೇ ಇರುತ್ತದೆ. ಆದ್ದರಿಂದ ಕನಿಷ್ಠ ಒಂದು ತಿಂಗಳವರೆಗೆ ಈ ವಿಧಾನವನ್ನು ಮತ್ತೆ ಅನುಸರಿಸಬಾರದು. ಆದರೆ ನಿಯಮಿತ ಆರೈಕೆಯನ್ನೂ ಬಿಡಬಾರದು.



Click it and Unblock the Notifications

