Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಲ್ಲಾ ಬಗೆಯ ಕೂದಲಿನ ಸಮಸ್ಯೆಗೆ ಮನೆಮದ್ದು
ಪ್ರತಿಯೊಬ್ಬರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಅದು ಕೂದಲು ಉದುರುವುದು. ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನ ಮತ್ತು ಹವ್ಯಾಸಗಳಿಂದ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವುದು, ಕೂದಲ ತುಂಡಾಗುವುದು, ಒರಟು ಅಥವಾ ಒಣ ಕೂದಲು ಇತ್ಯಾದಿ ಬರಬಹುದು. ನಿಮ್ಮ ಕೂದಲು ಬಲ ಮತ್ತು ಹೊಳಪು ನೀಡಲು ಅದರ ಆರೈಕೆ ಮಾಡುವುದು ತುಂಬಾ ಮುಖ್ಯ. ಕೂದಲು ನಷ್ಟವಾಗುವುದು ಕೂದಲಿನ ಪ್ರಮುಖ ಸಮಸ್ಯೆ.
ಕೂದಲು ನಷ್ಟವಾಗಲು ಪ್ರಮುಖ ಕಾರಣವೆಂದರೆ ತಲೆಹೊಟ್ಟು, ಒಣ ಕೂದಲು, ಕೂದಲನ್ನು ಗಡಸು ನೀರಿನಿಂದ ತೊಳೆಯುವುದು ಮತ್ತು ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು. ಕೂದಲು ಉದುರುವಿಕೆಯನ್ನು ತಡೆಯಲು ಹಲವಾರು ರಾಸಾಯನಿಕ ಶಾಂಪೂ ಮತ್ತು ಸೀರಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ರಾಸಾಯನಿಕ ಚಿಕಿತ್ಸೆ ಅತ್ಯಂತ ತ್ವರಿತ ಮತ್ತು ಸ್ವಲ್ಪ ಸಮಯದವರೆಗೆ ಮಾತ್ರ. ಈ ರಾಸಾಯನಿಕಗಳಿಂದ ಅಡ್ಡ ಪರಿಣಾಮಗಳಾಗಬಹುದು ಮತ್ತು ಕೂದಲಿಗೆ ಇದು ಹಾನಿಕಾರಕವಾಗಬಹುದು.

ಬಿಸಿ ಎಣ್ಣೆಯ ಮಸಾಜ್
ಕೂದಲು ಉದುರುವುದನ್ನು ತಡೆಯಲು ಇರುವ ಅತ್ಯುತ್ತಮ ವಿಧಾನವೆಂದರೆ ಬಿಸಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದು. ಬಿಸಿ ಎಣ್ಣೆಯ ಮಸಾಜ್ ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುತ್ತದೆ. ಇದು ಹಾನಿಗೊಳಗಾದ ಕೂದಲನ್ನು ತೆಗೆಯುತ್ತದೆ ಮತ್ತು ಕೂದಲಿಗೆ ಬೇಕಿರುವ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಬಿಸಿ ಎಣ್ಣೆಯ ಮಸಾಜ್ ನಿಂದ ಕೂದಲು ಬಲವಾಗುತ್ತದೆ ಮತ್ತು ಇದು ಉದುರುವಿಕೆಯನ್ನು ತಡೆಯುತ್ತದೆ. ವಾರದಲ್ಲಿ ಒಂದು ದಿನವಾದರೂ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಮಾಡಬೇಕು.
ತೆಂಗಿನಕಾಯಿ ಸಾರ
ತೆಂಗಿನಕಾಯಿ ತುಂಬಾ ಆರೋಗ್ಯಕಾರಿ. ಇದರಲ್ಲಿ ಹಲವಾರು ರೀತಿಯ ಲಾಭಗಳಿವೆ. ಇದು ಕೂದಲಿಗೆ ಪೋಷಕಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆ ಮತ್ತು ತೆಂಗಿನ ಕಾಯಿ ಹಾಲು ಕೂದಲು ಉದುರುವಿಕೆಗೆ ಒಳ್ಳೆಯ ಚಿಕಿತ್ಸೆ. ಇದು ಕೂದಲಿಗೆ ಪೋಷಕಾಂಶ ಒದಗಿಸುವುದರೊಂದಿಗೆ ಅದನ್ನು ನಯ ಮತ್ತು ಬಲವಾಗಿಸುತ್ತದೆ. ತೆಂಗಿನಕಾಯಿ ಕೂದಲು ಉದುರುವ ಸಮಸ್ಯೆಗೆ ನೈಸರ್ಗಿಕ ಪರಿಹಾರ.
ಅಲೋವೆರಾ
ಕೂದಲಿನ ನೈಸರ್ಗಿಕ ಚಿಕಿತ್ಸೆಗೆ ಅಲೋವೆರಾ ತುಂಬಾ ಉಪಯುಕ್ತ. ಇದನ್ನು ನಿಮ್ಮ ತೋಟದಲ್ಲಿ ಸುಲಭವಾಗಿ ಬೆಳೆಸಬಹುದು. ಅಲೋವೆರಾವನ್ನು ಪೇಸ್ಟ್ ಅಥವಾ ಒಣ ಪೌಡರ್ ರೂಪದಲ್ಲಿ ಬಳಸಬಹುದು. ಕೂದಲಿಗೆ ಪೇಸ್ಟ್ ನ್ನು ಹಚ್ಚಿ ಸುಮಾರು 15-30 ನಿಮಿಷ ತನಕ ಬಿಡಿ. ಅಲೋವೆರಾ ಕೂದಲಿನ ಅಂಗಾಂಶಗಳನ್ನು ಬಲಪಡಿಸಿ ಅದು ಬೆಳೆಯಲು ನೆರವಾಗುತ್ತದೆ. ಕೂದಲಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಲೋವೆರಾವನ್ನು ವಾರಕ್ಕೆ ಎರಡು ಸಲ ಬಳಸಬಹುದು. ಕೂದಲಿನ ಉದುರುವಿಕೆಗೆ ತಡೆಯಲು ಅಲೋವೆರಾ ನೈಸರ್ಗಿಕ ವಿಧಾನ



Click it and Unblock the Notifications