Just In
- 18 min ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 2 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 10 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 11 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Movies "ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಗುರುಗಳ ಬಣ್ಣ ಹಳದಿಯಾಗಿದೆಯೇ? ಇಲ್ಲಿದೆ ನೋಡಿ ಟಿಪ್ಸ್
ಉಗುರುಗಳ ಆರೈಕೆ ಎಂದರೆ ಬಣ್ಣ ಹಚ್ಚುವುದು ಎಂದೇ ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ಉಗುರುಗಳು ಅರೆಪಾರದರ್ಶಕ ಬಿಳಿ ಬಣ್ಣಕ್ಕಿದ್ದಷ್ಟೂ ಆರೋಗ್ಯಕರ ಎಂದು ತಿಳಿಯಬಹುದು. ಒಂದು ವೇಳೆ ಇವು ಹಳದಿ, ಕಪ್ಪಗಾಗುವುದು ಅಥವಾ ಕಪ್ಪು ಅಥವಾ ಬಿಳಿಯ ಕಲೆಗಳು ಮೂಡುವುದು, ಹೊಗೆ ತುಂಬಿದಂತೆ ಕಾಣುವುದು ಮೊದಲಾದ ಸೂಚನೆಗಳ ಮೂಲಕ ಉಗುರುಗಳ ಅನಾರೋಗ್ಯವನ್ನು ಪ್ರಕಟಿಸುತ್ತವೆ.
ಕೆಲವೊಮ್ಮೆ ಉಗುರಿಗೆ ಹಚ್ಚುವ ಬಣ್ಣದಲ್ಲಿರುವ ರಾಸಾಯನಿಕ ಅಥವಾ ಇದನ್ನು ನಿವಾರಿಸಲು ಬಳಸುವ ದ್ರಾವಣದಲ್ಲಿರುವ ಅಸಿಟೋನ್ ಉಗುರಿನ ಬಣ್ಣವನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಉಗುರಿನ ಬಣ್ಣದಲ್ಲಿ ಏರುಪೇರು-ಇದು ಹಲವು ರೋಗಗಳ ಲಕ್ಷಣ!
ಕೆಲವೊಮ್ಮೆ ಶಿಲೀಂಧ್ರದ ಸೋಂಕು, ಉಗುರುಗಳನ್ನು ಕಚ್ಚುವ ಅಥವಾ ಸರಿಯಾಗಿ ಕೈ ತೊಳೆದುಕೊಳ್ಳದ ಕಾರಣ ಆಹಾರಕಣಗಳು ಕೊಳೆತು ಬ್ಯಾಕ್ಟೀರಿಯಾದ ಸೋಂಕು ಮೊದಲಾದವು ಉಗುರುಗಳ ಬಣ್ಣವನ್ನೂ ಆರೋಗ್ಯವನ್ನೂ ಕೆಡಿಸುತ್ತವೆ. ಈ ತೊಂದರೆಗಳಿಗೆ ಕೆಲವು ನೈಸರ್ಗಿಕ ಉಪಾಯಗಳಿವೆ. ಬನ್ನಿ, ಇವುಗಳಲ್ಲಿ ಪ್ರಮುಖವಾದುದನ್ನು ನೋಡೋಣ.... ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?
ಲಿಂಬೆ
ಮತ್ತು
ಅಡುಗೆ
ಸೋಡಾ
ಲಿಂಬೆ
ಒಂದು
ಉತ್ತಮ
ಬಿಳಿಚುಕಾರಕವಾಗಿದೆ.
ಇದರ
ಬ್ಯಾಕ್ಟೀರಿಯಾ
ನಿವಾರಕ
ಮತ್ತು
ನಂಜಿನಿವಾರಕ
ಗುಣ
ಒಂದು
ವೇಳೆ
ಸೋಂಕಿನಿಂದ
ಹಳದಿ
ಬಣ್ಣ
ಬಂದಿದ್ದರೆ
ಇದನ್ನು
ನಿವಾರಿಸಲು
ನೆರವಾಗುತ್ತದೆ.
ಅಡುಗೆ
ಸೋಡಾದಲ್ಲಿ
ಸತ್ತ
ಜೀವಕೋಶಗಳನ್ನು
ಕರಗಿಸಿ
ನಿವಾರಿಸುವ
ಗುಣವಿದೆ.
ಉಗುರಿನ ಸಂದಿಯಲ್ಲಿ ಸತ್ತ ಜೀವಕೋಶಗಳು ಸಾಂದ್ರೀಕೃತಕೊಂಡು ಸೋಂಕಿಗೆ ಕಾರಣವಾಗಿದ್ದರೆ ಇದನ್ನು ನಿವಾರಿಸಲು ಸಮರ್ಥವಾಗಿದೆ. ಈ ಎರಡೂ ಸಾಮಾಗ್ರಿಗಳನ್ನು ಬೆರೆಸಿ ತೆಳುವಾಗಿ ಉಗುರುಗಳ ಮೇಲೆ ಮತ್ತು ಸಂಧುಗಳಲ್ಲಿ ಹಚ್ಚಿ.
ಇದರ
ಬಳಕೆಯ
ವಿಧಾನ
ಹೀಗಿದೆ
*
ಒಂದು
ಪಾತ್ರೆಯಲ್ಲಿ
ಲಿಂಬೆರಸವನ್ನು
ಅರ್ಧದಷ್ಟು
ಹಾಕಿ.
ಇದಕ್ಕೆ
ಕೊಂಚವೇ
ಅಡುಗೆ
ಸೋಡಾ
ಹಾಕಿ.
ಇದು
ದಪ್ಪನೆಯ
ಲೇಪನವಾಗುವಷ್ಟು
ಬೆರೆಸಿ.
*
ಈ
ಲೇಪನವನ್ನು
ಉಗುರುಗಳ
ಮೇಲೆ
ಮತ್ತು
ಸಂಧುಗಳಲ್ಲಿ
ಹಚ್ಚಿ.
*
ಸುಮಾರು
ಹತ್ತರಿಂದ
ಹದಿನೈದು
ನಿಮಿಷ
ಹಾಗೇ
ಒಣಗಲು
ಬಿಡಿ
*
ಬಳಿಕ
ಉಗುರುಬೆಚ್ಚನೆಯ
ನೀರಿನಿಂದ
ತೊಳೆದುಕೊಳ್ಳಿ.
*
ನಂತರ
ನಿಮ್ಮ
ನಿತ್ಯದ
ತೇವಕಾರಕ
(ಮಾಯಿಶ್ಚರೈಸರ್)
ದ್ರಾವಣವನ್ನು
ಕೈಗಳಿಗೆ
ಮತ್ತು
ಉಗುರುಗಳಿಗೆ
ಹಚ್ಚಿ.
ಈ
ವಿಧಾನವನ್ನು
ದಿನಕ್ಕೆ
ಎರಡು
ಬಾರಿ
ಅನುಸರಿಸಿ.
ನಿಮ್ಮ
ಉಗುರುಗಳು
ಸೂಕ್ತ
ಬಣ್ಣ
ಪಡೆಯುವವರೆಗೂ
ಈ
ವಿಧಾನ
ಮುಂದುವರೆಸಿ.
ಹಲ್ಲುಜ್ಜುವ
ಪೇಸ್ಟ್
*ನಮ್ಮ
ನಿತ್ಯದ
ಹಲ್ಲುಜ್ಜುವ
ಪೇಸ್ಟ್
ನಲ್ಲಿ
ಹೈಡ್ರೋಜನ್
ಪೆರಾಕ್ಸೈಡ್
ಎಂಬ
ರಾಸಾಯನಿಕವಿದೆ.
ಇದು
ಹಲ್ಲುಗಳಿಗೆ
ಬಿಳುಪು
ನೀಡಲು
ಬಳಕೆಯಾಗುತ್ತದೆ.
ಈ
ರಾಸಾಯನಿಕ
ಉಗುರುಗಳ
ಬಿಳುಪಿಗೂ
ಬಳಸಬಹುದು.
ಆದರೆ
ಟೂಥ್
ಪೇಸ್ಟ್ನ
ಪೆಟ್ಟಿಗೆಯ
ಮೇಲೆ
ಇದರ
ಪ್ರಮಾಣವನ್ನು
ತಿಳಿದುಕೊಳ್ಳಿ.
*ಒಂದು
ವೇಳೆ
ಇದರ
ಪ್ರಮಾಣ
3%ಕ್ಕೂ
ಹೆಚ್ಚಿದ್ದರೆ
ಉಗುರುಗಳಿಗೆ
ಇದು
ಸೂಕ್ತವಲ್ಲ.
ನಮ್ಮನ್ನು
ಅಚ್ಚರಿಯ
ಕೂಪಕ್ಕೆ
ತಳ್ಳುವ
ಹಲ್ಲುಜ್ಜುವ
ಪೇಸ್ಟ್!
ಬಳಕೆಯ
ವಿಧಾನ
*ನಿಮ್ಮ
ನೆಚ್ಚಿನ
ಟೂಥ್
ಪೇಸ್ಟ್
ಅನ್ನು
ತೆಳುವಾಗಿ
ನಿಮ್ಮ
ಉಗುರುಗಳಿಗೆ
ಹಚ್ಚಿ
ಸುಮಾರು
ಹತ್ತರಿಂದ
ಹದಿನೈದು
ನಿಮಿಷ
ಒಣಗಲು
ಬಿಡಿ
*ಉಗುರಿನ
ಬ್ರಶ್
ಅಥವಾ
ಸೌಮ್ಯವಾದ
ಟೂಥ್
ಬ್ರಶ್
ಬಳಸಿ
ನಯವಾಗಿ
ಉಜ್ಜಿ.
*ಬಳಿಕ ಉಗುರುಬೆಚ್ಚನೆಯ ನೀರು ತುಂಬಿರುವ ಪಾತ್ರೆಯೊಂದರಲ್ಲಿ ಬೆರಳುಗಳನ್ನು ಮುಳುಗಿಸಿ ಈ ಪೇಸ್ಟ್ಅನ್ನು ಒರೆಸುತ್ತಾ ನಿವಾರಿಸಿ. ಬಳಿಕ ಒಣ ಟವೆಲ್ನಿಂದ ಒರೆಸಿಕೊಳ್ಳಿ.
*ಈ ವಿಧಾನವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಅನುಸರಿಸಿ.