Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾದಗಳಲ್ಲಿ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಪಾದಗಳ ಆರೈಕೆ ಸರಿಯಾಗಿ ಮಾಡದಿದ್ದರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಹೀಗೆ ನಾನಾ ಕಾರಣಗಳಿಂದ ಪಾದಗಳಲ್ಲಿ ಸಮಸ್ಯೆ ಕಂಡು ಬರುತ್ತದೆ. ಅದರಲ್ಲೂ ಈ ಕೆಳಗಿನ ಸಮಸ್ಯೆಗಳು ಕಂಡು ಬಂದರೆ ಪರಿಹಾರವೇನು ಎಂದು ನೋಡೋಣ ಬನ್ನಿ.
1. ಪಾದಗಳಲ್ಲಿ ಬಿರುಕು: ಪಾದಗಳಲ್ಲಿ ಬಿರುಕು ಉಂಟಾದರೆ ರಕ್ತ ಬರಬಹುದು ಮತ್ತು ಕಾಲು ತುಂಬಾ ನೋವಾಗುತ್ತದೆ. ಈ ರೀತಿಯ ಬಿರುಕು ಉಂಟಾದರೆ ಕಾಲುಗಳನ್ನು ಚೆನ್ನಾಗಿ ತೊಳೆದು ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ತುಂಬಾ ದೂಳಿನಲ್ಲಿ ಓಡಾಡಬಾರದು ಮತ್ತು ಕಾಲಿಗೆ ಸಾಕ್ಸ್ ಹಾಕಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.
2. ಬೆರಳುಗಳ ನಡುವಿನ ಚರ್ಮ ಕೊಳೆಯುವುದು: ತುಂಬಾ ಹೊತ್ತು ನೀರಿನಲ್ಲಿ ನಿಂತು ಕೆಲಸ ಮಾಡುವವರಿಗೆ ಮತ್ತು ತುಂಬಾ ಬೆವರುವವರಲ್ಲಿ ಎರಡು ಬೆರಳುಗಳ ಮಧ್ಯೆ ಚರ್ಮವು ಕೊಳೆಯಲಾರಂಭಿಸುತ್ತದೆ. ಈ ರೀತಿ ಸಮಸ್ಯೆ ಇದ್ದರೆ ಹೊರಗಡೆ ಹೋಗಿ ಬಂದ ತಕ್ಷಣ ಕಾಲುಗಳನ್ನು ತೊಳೆದು ಬೆರಳುಗಳ ಮಧ್ಯೆ ಕೂಡ ಟವಲ್ ನಿಂದ ಉಜ್ಜಿ ಮುಲಾಮ್ ಅಥವಾ ಎಣ್ಣೆ ಹಚ್ಚಿ ಬೆರಳುಗಳು ಒಂದಕ್ಕೊಂದು ಅಂಟದಿರಲು ಮಧ್ಯೆದಲ್ಲಿ ಹತ್ತಿಯನ್ನು ಉಂಡೆ ಮಾಡಿ ಇಡಬೇಕು. ಈ ರೀತಿ ಮಾಡಿದರೆ ಈ ರೀತಿಯ ಸಮಸ್ಯೆ ಬೇಗನೆ ಗುಣಮುಖವಾಗುತ್ತದೆ.
3. ಒಣ ತ್ವಚೆ: ತ್ವಚೆಯಲ್ಲಿ ಸ್ವಲ್ಪವೂ ಎಣ್ಣೆ ಪಸೆ ಇಲ್ಲದಿದ್ದರೆ ತ್ವಚೆ ಮತ್ತು ಪಾದ ತುಂಬಾ ಒಣಗುವುದು. ಪಾದ ಒಣಗಿದರೆ ಬಿರುಕಿನ ಸಮಸ್ಯೆಗಳು ಕಂಡು ಬರುತ್ತದೆ. ಆದ್ದರಿಂದ ಪಾದಗಳಿಗೆ ಎಣ್ಣೆಯಿಂದ ಮಸಾಜ್ ಮಾಡಿದರೆ ಒಳ್ಳೆಯದು. ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಸ್ನಾನ ಮಾಡಿದರೆ ತ್ವಚೆ ಎಣ್ಣೆಯಂಶವನ್ನು ಹೀರಿಕೊಂಡು ತ್ವಚೆ ಒಣಗುವ ಸಮಸ್ಯೆ ಕಡಿಮೆಯಾಗುವುದು.
4. ಚಪ್ಪಲಿ ಕಚ್ಚಿ ಗಾಯ: ಹೊಸ ಚಪ್ಪಲಿ ತಂದಾಗ ಕೆಲವೊಂದು ಚಪ್ಪಲಿಗಳು ಅಥವಾ ಶೂ ಕಾಲಿಗೆ ಕಚ್ಚುತ್ತದೆ. ಅದರಲ್ಲೂ ತುದಿ ಸ್ವಲ್ಪ ಚೂಪಾಗಿರುವ ಶೂ ತಂದರೆ ಮೊದಲ ಒಂದು ವಾರಗಳ ಕಾಲ 3 ಗಂಟೆಯವರೆಗೆ ಮಾತ್ರ ಈ ಶೂ ಬಳಸಿ. ದಿನಾ ಪೂರ್ತಿ ಬಳಸಿದರೆ ಶೂ ಕಚ್ಚಿ ಗಾಯವಾಗುವುದು. ಒಂದು ವಾರದಲ್ಲಿ ಶೂ ಕಾಲಿಗೆ ಸರಿಯಾಗಿರುತ್ತದೆ. ಆಗ ದಿನಪೂರ್ತಿ ಬಳಸಿದರೂ ಎನೂ ಆಗುವುದಿಲ್ಲ.
5. ಬೆರಳುಗಳಲ್ಲಿ ಕೊಳೆ ತುಂಬುವುದು: ದಿನಾ ಶೂ ಹಾಕುವವರು ಉಗುರಗಳ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಇಲ್ಲದಿದ್ದರೆ ಉಗುರುಗಳಲ್ಲಿ ಕೊಳೆ ತುಂಬಿಕೊಂಡು ಆ ಉಗುರು ಹಾಳಾಗುತ್ತದೆ. ಆದ್ದರಿಂದ ಉಗುರುಗಳಲ್ಲಿ ಕೊಳೆ ನಿಲ್ಲದಿರಲು ದಿನ ಬ್ರೆಷ್ ಹಾಕಿ ಉಜ್ಜಬೇಕು. ಉಗುರನ್ನು ನೀಟಾಗಿ ಕತ್ತರಿಸಬೇಕು.
ಸಲಹೆ: ಶೂಗಳಿಗೆ ಸ್ವಲ್ಪ ಅಡುಗೆ ಸೋಡಾ ಚಿಮುಕಿಸಿ ಒಣಗಿಸಿ ನಂತರ ಹಾಕಿದರೆ ಶೂ ಕೆಟ್ಟ ವಾಸನೆ ಬೀರುವುದಿಲ್ಲ.



Click it and Unblock the Notifications