Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಮಹಾಶಿವರಾತ್ರಿಯಂದು 60 ವರ್ಷಗಳ ಬಳಿಕ ಉಂಟಾಗಿದೆ ಇಂಥ ವಿಶೇಷ ಯೋಗ: ಈ 3 ರಾಶಿಗಳಲ್ಲಿ ಹೆಚ್ಚಾಗಲಿದೆ ಶ್ರೀಮಂತಿಕೆ
ಈ ಮಹಾಶಿವರಾತ್ರಿಗೆ ನೀವು ಸಲ್ಲಿಸಿದ ಭಕ್ತಿಯ ಪೂಜಾ ಫಲದಿಂದ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗಲಿ.... ಜ್ಯೋತಿಷ್ಯವು ಕೂಡ ಈ ಮಹಾಶಿವರಾತ್ರಿ ಬಳಿಕ ಅನೇಕ ರಾಶಿಗಳ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಏಕೆಂದರೆ ಈ ಬಾರಿ ಶಿವರಾತ್ರಿ ಇನ್ನಷ್ಟು ವಿಶೇಷವಾಗಿದೆ, ತುಂಬಾ ವಿಶೇಷ ಯೋಗಗಳು ಶಿವರಾತರಿಯಂದು ಉಂಟಾಗಿದೆ.

60 ವರ್ಷಗಳ ಬಳಿಕ ಅಪರೂಪದ ಯೋಗ ಉಂಟಾಗಿದೆ
ಇಂಥ ವಿಶೇಷ ಯೋಗ 1965ರಂದು ಉಂಟಾಗಿತ್ತು, ಅದಾದ ಬಳಿಕ ಅಂಥ ವಿಶೇಷ ಯೋಗ ಏರ್ಪಟ್ಟಿರುವುದು ಇದೇ ವರ್ಷ.
ಕುಂಭ ರಾಶಿಯಲ್ಲಿ ಇದೆ ತ್ರಿಗ್ರಹ ಯೋಗ
ಕುಂಭ ರಾಶಿಯಲ್ಲಿ ಸೂರ್ಯ, ಬುಧ, ಶನಿಗಳ ಸಂಯೋಗವಾಗಿದೆ.
ಅಲ್ಲದೆ ಮೀನ ರಾಶಿಯಲ್ಲಿ ಶುಕ್ರ ಮತ್ತು ರಾಹು ಸಂಯೋಗವಿದೆ
ಮಹಾಶಿವರಾತ್ರಿಗೆ ಶುಕ್ರನು ತನ್ನ ಉನ್ನತ್ಥ ರಾಶಿಯಾದ ಮೀನ ರಾಶಿಯಲ್ಲಿ ಇರಲಿದೆ, ರಾಹು ಕೂಡ ಇದೇ ರಾಶಿಯಲ್ಲಿ ಇರಲಿದೆ.
ಕುಂಭ ರಾಶಿಯಲ್ಲಿ ಸೂರ್ಯ ಶನಿ ಅಂದರೆ ತಂದೆ ಮಗನ ಸಂಯೋಗವಿದೆ
ಮೀನ ರಾಶಿಯಲ್ಲಿ ಗುರು-ಶಿಷ್ಯರ ಅಂದರೆ ಶುಕ್ರ- ರಾಹುಗಳ ಸಂಯೋಗವಿದೆ.
ಶಿವರಾತ್ರಿಯಂದು ಈ ಪ್ರಹರ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು
ಮೊದಲ ಪ್ರಹರ ಪೂಜೆ ಸಮಯ: ಸಂಜೆ 06:19ರಿಂದ ರಾತ್ರಿ 09:26ರವರೆಗೆ ಇದೆ
ಎರಡನೇ ಪ್ರಹರ ಪೂಜೆ ಸಮಯ: ರಾತ್ರಿ 09:26ರಿಂದ ಮಧ್ಯರಾತ್ರಿ 12:34ರವರೆಗೆ ಇದೆ.
3ನೇ ಪ್ರಹರ ಪೂಜೆ ಸಮಯ: ಫೆಬ್ರವರಿ 26 ಮಧ್ಯರಾತ್ರಿ 12:34ರಿಂದ ಮುಂಜಾನೆ 03:41ರವರೆಗೆ ಇದೆ
4ನೇ ಪ್ರಹರ ಪೂಜೆ: ಫೆಬ್ರವರು 27 ಮುಂಜಾನೆ 03:41ರಿಂದ ಬೆಳಗ್ಗೆ 06:48ರವರೆಗೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಶಿವರಾತ್ರಿ ಯೋಗವು ಧನ ಲಾಭ ತಂದಿದೆ. ನೀವು ನಿಮ್ಮ ಬದುಕಿನಲ್ಲಿ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಪ್ರಮುಖ ಯೋಜನೆ ನಿಮಗೆ ಆರ್ಥಿಕ ಲಾಭ ತರಲಿದೆ, ಆರ್ಥಿಕ ಸಮಸ್ಯೆವಿದ್ದರೆ ಅದೆಲ್ಲಾ ದೂರಾಗಲಿದೆ. ವ್ಯಾಪಾರಿಗಳು ತಮ್ಮ ನಿರೀಕ್ಷೆಗೆ ಮೀರಿದ ಆರ್ಥಿಕ ಲಾಭ ಪಡೆಯಬಹುದು.
ಧನು ರಾಶಿ
ಈ ಶಿವರಾತ್ರಿಯ ಬಳಿಕ ಧನು ರಾಶಿಯವರು ತಮ್ಮ ಬದುಕಿನಲ್ಲಿ ಅತ್ಯುತ್ತಮವಾದ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಈಗ ಏನಾದರೂ ಆರ್ಥಿಕ ಸಮಸ್ಯೆ, ಕೆಲಸದಲ್ಲಿ ಅಡೆತಡೆ ಎದುರಿಸುತ್ತಿದ್ದರೆ ಅವೆಲ್ಲಾ ದೂರಾಗಲಿದೆ, ಪರಶಿವನ ವಿಶೇಷ ಕೃಪೆ ನಿಮ್ಮ
ಮೇಲೆ ಇರುವುದರಿಂದ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ದೊರೆಯಲಿದೆ, ಹಣಕಾಸಿನ ಸ್ಥಿತಿಯಲ್ಲಿ ಅಭಿವೃದ್ಧಿ ಕಂಡು ಬರುವುದು.
ಮೀನ ರಾಶಿ
ಮೀನ ರಾಶಿಯವರಿಗೆ ಕೂಡ ಈ ವಿಶೇಷ ಯೋಗದಿಂದಾಗಿ ಧನ ಲಾಭ ಪಡೆಯುತ್ತೀರಿ, ಈ ಶಿವರಾತ್ರಿ ಬಳಿಕ ನಿಮ್ಮ ವೃತ್ತಿ ಬದುಕಿನಲ್ಲಿ ಬದಲಾವಣೆ ಕಾಣಬಹುದು, ಬಡ್ತಿ ನಿರೀಕ್ಷೆಯಲ್ಲಿದ್ದರೆ ಬಡ್ತಿ ಸಿಗಲಿದೆ, ಕೆಲಸ ಬದಲಾವಣೆಗೆ ಕೂಡ ಈ ಸಮಯ ಉತ್ತಮವಾಗಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications